ಪ್ರೆಗ್ನೆನ್ಸಿಯಿಂದ ಲ್ಯಾಕ್ಟೇಶನ್‌ವರೆಗಿನ ಸ್ಥಿತಿವರೆಗೂ ತಾಯಿ ಅನೇಕ ದೈಹಿಕ ಹಾರ್ಮೋನ್‌ ಬದಲಾವಣೆಗಳನ್ನು ಹೊಂದುತ್ತಾಳೆ.

ಇಂಥ ಸಂದರ್ಭದಲ್ಲಿ ಆ ದೇಹಕ್ಕೆ ಎಲ್ಲಾ ಅತ್ಯಗತ್ಯ ಪೋಷಕಾಂಶಗಳು ದೊರಕದಿದ್ದರೆ, ಅವಳ ಆರೋಗ್ಯ ಹದಗೆಟ್ಟೀತು. ಸ್ತ್ರೀರೋಗ ಪ್ರಸೂತಿ ತಜ್ಞರು ಈ ಕುರಿತು ನೀಡುವ ಸಲಹೆಗಳು :

ಗರ್ಭವತಿ ಆದಾಗ ಈ ಸ್ಥಿತಿಯಲ್ಲಿ ಆಕೆ ತನ್ನ ಆರೋಗ್ಯದ ಜೊತೆ ಜೊತೆಗೆ ತನ್ನ ಗರ್ಭಸ್ಥ ಶಿಶುವಿನ ಬಗ್ಗೆಯೂ ಚಿಂತಿತಳಾಗುತ್ತಾಳೆ. ಹಾಗಾಗಿ ಅವಳ ಆಹಾರದಲ್ಲಿ ಈ ಅಂಶಗಳು ಇರಲೇಬೇಕು :

Red-Meat

ಫಾಲಿಕ್‌ ಆ್ಯಸಿಡ್‌ : ಎಷ್ಟು ಸಾಧ್ಯವೋ ವಿಟಮಿನ್ಸ್‌ ನಿಮ್ಮ ಆಹಾರದಲ್ಲಿ ಇರಲೇಬೇಕು. ಇದಕ್ಕಾಗಿ ಹಸಿರು ಎಲೆಗಳ ತರಕಾರಿ ಅಂದ್ರೆ ಎಲೆಕೋಸು, ವಿವಿಧ ಸೊಪ್ಪು (ಮುಖ್ಯ ಸಬ್ಬಸಿಗೆ ಸೊಪ್ಪು), ಬೀನ್ಸ್, ಇಡೀ ಕಾಳು, ಹಾಲು, ನಚ್ಸ್ ಹೆಚ್ಚು ಸೇವಿಸಿ. ಎಷ್ಟೋ ಸಲ ಆ ದೇಹಕ್ಕೆ ಇದರ ಪ್ರಮಾಣದ ಎಷ್ಟು ಅಗತ್ಯವಿದೆಯೋ ಅದು ಸಿಗದೆ ಅಪೂರ್ಣ ಎನಿಸುತ್ತದೆ, ಹೀಗಾಗಿ ಫಾಲಿಕ್‌ ಆ್ಯಸಿಡ್‌ ಮಾತ್ರೆ ಸೇವಿಸಬೇಕಾಗುತ್ತದೆ. ಮುಖ್ಯ 3-6ನೇ ತಿಂಗಳಲ್ಲಿ ಸೇವಿಸಿ.

ಕ್ಯಾಲ್ಶಿಯಂ : ಇದೊಂದು ಅಪೂರ್ವ ಖನಿಜ, ಇದರಿಂದಾಗಿ ಮಗುವಿನ ಹಲ್ಲುಮೂಳೆ ಗಟ್ಟಿ ಆಗುತ್ತದೆ. ಗರ್ಭವತಿ ಇದನ್ನು ಧಾರಾಳ ಸೇವಿಸದಿದ್ದರೆ ಮಗುವಿಗೆ ಇದರ ಕೊರತೆ ಕಾಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಹಸಿರು ತಾಜಾ ತರಕಾರಿ (ಸಲಾಡ್‌ ರೂಪದಲ್ಲಿ), ಸೋಯಾ, ಟೋಫು, ನಟ್ಸ್ ಸೇವಿಸಬೇಕು.

ಲಿಕ್ವಿಡ್‌ : ದೇಹದಲ್ಲಿ ಎಂದೂ ನೀರಿನ ಕೊರತೆ ಕಾಡದಂತೆ ಎಚ್ಚರವಹಿಸಿ. ಇದಕ್ಕಾಗಿ ಧಾರಾಳ ಕಾದಾರಿದ ನೀರು, ಎಳನೀರು, ನೀರಿನಂಶ ಹೆಚ್ಚಿದ ಕಲ್ಲಂಗಡಿ, ಮೂಸಂಬಿ, ಕಿತ್ತಳೆಹಣ್ಣು, ಸೌತೇಕಾಯಿ, ಬೂದುಗುಂಬಳ ಇತ್ಯಾದಿ ಸೇವಿಸಿ.

ಹಾಲಿನ ಉತ್ಪನ್ನಗಳು : ಈ ಸಂದರ್ಭದಲ್ಲಿ ಧಾರಾಳ ಹಾಲು, ಮೊಸರು, ಮಜ್ಜಿಗೆ, ಪನೀರ್‌ ಇತ್ಯಾದಿ ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾದ ವಿಟಮಿನ್ಸ್‌, ಕ್ಯಾಲ್ಶಿಯಂ, ಪ್ರೋಟೀನ್‌ ಧಾರಾಳ ಲಭ್ಯ.

Sabut-Anaj

ನಟ್ಸ್ : ಒಮೇಗಾ-3 ಫ್ಯಾಟಿ ಆ್ಯಸಿಡ್ಸ್ ಹಾಗೂ ಇತರ ಹೆಲ್ದಿ ಫ್ಯಾಟ್ಸ್ ನ ಮೂಲ ಸ್ರೋತವಾದ್ದರಿಂದ ಮಗುವಿನ ಮೆದುಳಿನ ವಿಕಾಸದಲ್ಲಿ ಹೆಚ್ಚು ಲಾಭಕಾರಿ. ಹೀಗಾಗಿ ಬಾದಾಮಿ, ಪಿಸ್ತಾ, ಗೋಡಂಬಿ, ಅಖರೋಟ್‌ ಇತ್ಯಾದಿ ಧಾರಾಳ ಸೇವಿಸಿ.

ಹಣ್ಣು : ಆಯಾ ಋತುವಿನ ಎಲ್ಲಾ ಹಣ್ಣು ಗಳನ್ನೂ ಅಗತ್ಯ ಸೇವಿಸಿ. ಇದರಿಂದ ದೇಹಕ್ಕೆ ಅಗತ್ಯ ಹೈಡ್ರೇಶನ್‌ ಲಭ್ಯ. ತೀರಾ ಜಾಸ್ತಿ ಬೇಡ.

ಗರ್ಭಾವಸ್ಥೆ ಮತ್ತು ಕಬ್ಬಿಣಾಂಶ ಈ ಮೇಲಿನ ಎಲ್ಲಾ ಪೋಷಕಾಂಶಗಳ ಜೊತೆ ಜೊತೆಗೆ ಗರ್ಭಿಣಿ ಐರನ್‌ ಪ್ರಮಾಣ ಸೂಕ್ತವಾಗಿ ಹೊಂದಿರಬೇಕಾದುದು ಅತ್ಯಗತ್ಯ. ವಿಶೇಷವಾಗಿ ಗರ್ಭಿಣಿ ಮತ್ತು ಶಿಶುವಿನ ಆರೋಗ್ಯ ಹದಗೆಡದಿರಲು ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶವಿರುವ ಆಹಾರ ಸೇವಿಸೀಬೇಕು.

ಇದರ ಮಹತ್ವವೇನು

ದೇಹದಲ್ಲಿ ಕಬ್ಬಿಣಾಂಶದ ಪಾತ್ರ : ಐರನ್‌ ರಕ್ತದ ಹಿಮೋಗ್ಲೋಬಿನ್ನಿನ ಪ್ರಧಾನ ಅಂಶ. ಇದು ದೇಹಕ್ಕೆ ಎಲ್ಲೆಡೆ ಆಮ್ಲಜನಕ ಒದಗಿಸಿ, ಹೆಚ್ಚಿನ ಶಕ್ತಿಯನ್ನೂ ನೀಡುತ್ತದೆ. ಇಷ್ಟು ಮಾತ್ರವಲ್ಲ, ಇದು ದೇಹದ ರೋಗ ನಿರೋಧಕ (ಇಮ್ಯುನಿಟಿ) ಶಕ್ತಿಯನ್ನೂ  ಹೆಚ್ಚಿಸುತ್ತದೆ. ಇದರ ಕೊರತೆಯಿಂದ ಸದಾ ಸುಸ್ತು, ಸಂಕಟ ತಪ್ಪಿದ್ದಲ್ಲ. ಪ್ರೆಗ್ನೆನ್ಸಿ ಕಾರಣ ಕೆಳಗಿನ ಈ ರೋಗಗಳು ಕಾಡಬಹುದು.

ಹಿಮೋಗ್ಲೋಬಿನ್‌ ಮಟ್ಟ ಕುಸಿಯುವಿಕೆ : ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಐರನ್‌ ಇಲ್ಲದಿದ್ದರೆ, ಹಿಮೋಗ್ಲೋಬಿನ್‌ ಮಟ್ಟ ಕುಸಿಯುತ್ತದೆ. ಅದು ಮುಖ್ಯ ಕೆಂಪು ರಕ್ತ ಕಣಗಳಲ್ಲಿದ್ದು, ಶ್ವಾಸಕೋಶಕ್ಕೆ ಹಾಗೂ ದೇಹದ ಎಲ್ಲಾ ಅಂಗಗಳಿಗೂ ಆಮ್ಲಜನಕ ಪೂರೈಸುತ್ತದೆ.

ಆದರೆ ಐರನ್‌ ಕೊರತೆಯಾದಾಗ, ಈ ಪ್ರಕ್ರಿಯೆಯಲ್ಲಿ ಅಡ್ಡಿ ಉಂಟಾಗುತ್ತದೆ. ಆಗ ಸುಸ್ತು, ಸಂಕಟ ಹೆಚ್ಚುತ್ತದೆ.

ಫಾಲೆಟ್‌ ಪ್ರಮಾಣದ ಮೇಲೂ ಪರಿಣಾಮ : ಫಾಲೆಟ್‌ ಒಂದು ಬಗೆಯ ವಿಟಮಿನ್‌ ಆಗಿದ್ದು, ಕಬ್ಬಿಣಾಂಶದ ಆಹಾರದಿಂದ ದೇಹಕ್ಕೆ ಲಭ್ಯವಾಗುತ್ತದೆ. ಇದು ಹೊಸ ಸೆಲ್ಸ್ ಮಾತ್ರವಲ್ಲದೆ, ಹೆಲ್ದಿ ಬ್ಲಡ್‌ ಸೆಲ್ಸ್ ನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತದೆ. ಮುಖ್ಯವಾಗಿ ಪ್ರೆಗ್ನೆನ್ಸಿಯಲ್ಲಿ ಇದರ ಅಧಿಕ ಪ್ರಮಾಣದ ಅಗತ್ಯವಿದೆ, ಇದು ಕೇವಲ ಆಹಾರದಿಂದ ಮಾತ್ರ ಸಿಗುವುದಿಲ್ಲ. ಆಗ ವೈದ್ಯರ ಸಲಹೆ ಪ್ರಕಾರ ಐರನ್‌ ಸಪ್ಲಿಮೆಂಟ್ಸ್ ಆದ ಟಾನಿಕ್‌ ಸೇವಿಸಬೇಕು.

ಕಬ್ಬಿಣಾಂಶದ ಕೊರತೆಯ ಪ್ರಭಾವ : ಪ್ರೆಗ್ನೆನ್ಸಿ ಸಂದರ್ಭದಲ್ಲಿ ಬಹುತೇಕರಿಗೆ ಅನೀಮಿಯಾ (ರಕ್ತದ ಕೊರತೆ) ಎದುರಿಸಬೇಕಾಗುತ್ತದೆ. ಆದರೆ ಈ ಕೊರತೆ ಹೆಚ್ಚು ಕಾಡಿದಾಗ, ಇತರ ಸಮಸ್ಯೆಗಳು ಹೆಚ್ಚುತ್ತವೆ. ನವಮಾಸಕ್ಕೆ ಮುನ್ನ ಪ್ರಸವ, ಮಗುವಿನ ದೇಹ ತೂಕದಲ್ಲಿ ಕೊರತೆ, ಮಗುವಿನ ದೇಹ ವಿಕಾಸದಲ್ಲಿ ತಡೆ….. ಇತ್ಯಾದಿ.

ಕಬ್ಬಿಣಾಂಶದ ಕೊರತೆ ನೀಗಿಸಿ

Broccoli

ಪ್ರೆಗ್ನೆನ್ಸಿಯಲ್ಲಿ ನೀವು ಏನೇ ಸೇವಿಸಿದರೂ ಅದು ಧಾರಾಳ ಪೌಷ್ಟಿಕಾಂಶಗಳಿಂದ ತುಂಬಿರಬೇಕು. ಐರನ್‌ ರಿಚ್‌ ಫುಡ್‌ ಯಾವುದೆಂದು ತಿಳಿಯೋಣ :

ಟೂನಾ ಫಿಶ್‌ : ಇದು ರುಚಿಕರ ಮಾತ್ರವಲ್ಲ, ಪೌಷ್ಟಿಕಾಂಶಗಳ ಗಣಿ.  ಇದರಲ್ಲಿ ಕಬ್ಬಿಣಾಂಶ ಧಾರಾಳ ಅಡಗಿದೆ.

ಪಾಲಕ್‌ ಸೊಪ್ಪು : ಎಲ್ಲಾ ಬಗೆಯ ಹಸಿರು ಸೊಪ್ಪುಗಳು ಕಬ್ಬಿಣಾಂಶದ ಮಹಾ ಗಣಿ ಎಂದೇ ಹೇಳಬೇಕು. ಇದು ರಕ್ತದ ಕೊರತೆ ನೀಗಿಸುತ್ತದೆ. ಇದರಲ್ಲಿ ವಿಟಮಿನ್ಸ್ ಧಾರಾಳ ಅಡಗಿದ್ದು, ಅದು ದೇಹ ಕಬ್ಬಿಣಾಂಶವನ್ನು ವಿಲೀನಗೊಳಿಸಲು ಹೆಚ್ಚು ನೆರವಾಗುತ್ತದೆ.

ರೆಡ್‌ ಮೀಟ್‌ : ಮಾಂಸ ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಜೊತೆಗೆ ಇದರಲ್ಲಿ ಪ್ರೋಟೀನ್‌, ಝಿಂಕ್‌, ವಿಟಮಿನ್ಸ್ ‌ಸಹ ಲಭ್ಯ.  ಸಂಶೋಧನೆಗಳ ಪ್ರಕಾರ ಮಾಂಸಾಹಾರಿಗಳಲ್ಲಿ ಕಬ್ಬಿಣಾಂಶದ ಕೊರತೆ ಕಾಡದು.

ಬ್ರೋಕ್ಲಿ : ಇದರಲ್ಲಿ ಕಬ್ಬಿಣಾಂಶ ಧಾರಾಳ ಅಡಗಿದೆ. ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿರುವ ಇದು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.

ಇಡಿಯಾದ ಬೇಳೆಕಾಳು : ರಕ್ತದ ಕೊರತೆ ನೀಗಿಸಲು ಇಡಿಯಾದ ಬೇಳೆ ಕಾಳಿನ ಸೇವನೆ ಅತ್ಯಗತ್ಯ. ಇದರಲ್ಲಿ ಧಾರಾಳ ಐರನ್ ಇರುವುರಿಂದ ಪ್ರತಿನಿತ್ಯದ ಆಹಾರದಲ್ಲಿ ಇದು ಕಡ್ಡಾಯ ಬೇಕು.

ಹಾಲೂಡಿಸುವ ತಾಯಂದಿರು

Tuna

ಗರ್ಭಿಣಿಯರಿಗಿಂತ ಹೆಚ್ಚಾಗಿ ಸಣ್ಣ ಶಿಶುವಿಗೆ ಮೊಲೆಯುಣಿಸುವ ಬಾಣಂತಿಯರಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿದೆ. ಅಂಥವರಿಗೆ ಹಾಲು, ಮೊಸರು, ಬ್ರೋಕ್ಲಿ, ಧಾನ್ಯಗಳ ನುಚ್ಚು, ಪನೀರ್‌, ಬಾದಾಮಿ….. ಇತ್ಯಾದಿ ಧಾರಾಳ ಸೇವಿಸಬೇಕು. ಸಾಮಾನ್ಯವಾಗಿ ಪ್ರಸವದ ನಂತರ ತುಪ್ಪ ಹೆಚ್ಚಾದ  ಲಾಡು, ಇತರ ತಿಂಡಿಗಳನ್ನು ಸೇವಿಸುತ್ತಾರೆ. ಇದರ ಬದಲಾಗಿ ಅಂದಿನ ಕಾಲದ ಬಾಣಂತಿ ಲೇಹ್ಯ (ಗ್ರಂಧಿಗೆ ಅಂಗಡಿಗಳಲ್ಲಿ ಲಭ್ಯ) ಹಾಗೂ ಆರೋಗ್ಯಕರ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ನಡುನಡುವೆ ತಾಜಾ ಹಸಿ ತರಕಾರಿಯ ಸಲಾಡ್‌, ಹಣ್ಣು (ಜೂಸ್‌ ಬೇಡ) ಸೇವಿಸುತ್ತಿರಬೇಕು. ಹಿರಿಯರು ಈ ಸಂದರ್ಭದಲ್ಲಿ ವೀಳ್ಯದೆಲೆ ಸೇವನೆ ಮುಖ್ಯ ಎನ್ನುತ್ತಾರೆ. ಸುಣ್ಣದಲ್ಲಿನ ಕ್ಯಾಲ್ಶಿಯಂಗಾಗಿ ಇದು ಒಳ್ಳೆಯದು, ಲಘು ವ್ಯಾಯಾಮ ಕೂಡ.

– ಪಾರ್ವತಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ