– ರಾಘವೇಂದ್ರ ಅಡಿಗ ಎಚ್ಚೆನ್.
ರಾಮಾಚಾರಿ ಕಥೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಮನೆಯ ಸಮಸ್ಯೆ ಬಗ್ಗೆ ಅರಿವಿಲ್ಲದೇ ದಾರಿ ಕಾಣದೇ ಕೂತಿದ್ದ ಚಾರು ಸಿಡಿದೆದ್ದಿದ್ದಾಳೆ. ಸಿಡಿಗುಂಡಿನಂತೆ ಸಿಡಿದೆದ್ದಿರೋ ಚಾರು ವೈಶಾಖಾ ಕುತಂತ್ರಕ್ಕೆ ತೆರೆ ಎಳಿದಿದ್ದಾಳೆ.
ಅಲ್ಲದೇ ಚಾರು ಹತ್ರಾನೇ ಚಾರು ಮೇಲೆ ಚಾಡಿ ಹೇಳ್ತಿದಾಳೆ ವೈಶಾಖಾ. ಹೌದು, ರಾಮಾಚಾರಿ ಸೀರಿಯಲ್ನಲ್ಲಿ ಹೊಸ ಅವತಾರ ತಾಳಿದ್ದಾಳೆ ಚಾರು. ಬುಡುಬುಡಿಕೆ ವೇಷದಲ್ಲಿ ವೈಶಾಖಾ ಮುಂದೆ ಪ್ರತ್ಯಕ್ಷವಾಗಿದ್ದಾಳೆ ಚಾರು. ಆದ್ರೆ, ಬುಡುಬುಡಿಕೆ ವೇಷದಲ್ಲಿ ಬಂದಿದ್ದು ಚಾರು ಅಂತ ಗೊತ್ತಾಗದೇ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾಳೆ.
ಇದೇ ಮೊದಲ ಬಾರಿಗೆ ಚಾರು ಅಂದ್ರೆ ಮೌನ ಗುಡ್ಡೆಮನೆ ಬುಡುಬುಡಿಕೆ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ನಾನು ಚಿಕ್ಕವಳ ಆಗಿದ್ದಾಗಾ, ಇದು ನನ್ನ ಫೇವರೆಟ್ ಹಾಡು. ನಿಮ್ಮದು ಯಾವುದು?
ಕಾಮೆಂಟ್ ಮಾಡಿ ಅಂತ ಬರೆದುಕೊಂಡಿದ್ದಾರೆ. ಪೋಸ್ಟ್ ನೋಡಿದ ಅಭಿಮಾನಿಗಳು ಕುಳ್ಳು ಮುನಿ ಬುಡುಬುಡಿಕೆ, ಪುಟ್ಟ ಮಗು ತರ ಕಾಣ್ತಾ ಇದ್ದೀರಾ, ವಾರೆ ವಾ ಚಾರು ಯಾವ್ ಪಾತ್ರ ಕೊಟ್ರು ತುಂಬಾ ಚೆನ್ನಾಗಿ ಅಭಿನಯ ಮಾಡ್ತೀಯಾ ಸೂಪರ್ ಅಂತೆಲ್ಲಾ ಕಾಮೆಂಟ್ಸ್ ಹಾಕಿ ಹಾಡಿ ಹೊಗಳುತ್ತಿದ್ದಾರೆ.