ಚಿಕ್ಕ ಕುಟುಂಬಗಳಲ್ಲಿ ಗಂಡಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ. ಅಲ್ಲಿ ಮಕ್ಕಳು ತಮ್ಮ ಸಮಸ್ಯೆ ತಾವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಅವರು ಅದರಲ್ಲಿ ಯಶಸ್ವಿಯಾಗದೇ ಇದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಟು ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೂ ತಲುಪುತ್ತಾರೆ.

ಸೀಮಾ ಸಿಂಗಲ್ ಪೇರೆಂಟ್‌. ತನ್ನ ಮಗಳು ಶ್ರೇಯಾ ಬಗ್ಗೆ ಅಪಾರ ಮಹತ್ವಾಕಾಂಕ್ಷೆ ಹೊಂದಿದ್ದಾಳೆ. ಮಗಳನ್ನು ಡಾಕ್ಟರ್‌ ಮಾಡಬೇಕೆನ್ನುವುದು ಅವಳ ಕನಸು. ಆದರೆ ಶ್ರೇಯಾಳಿಗೆ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಆಕೆ ಈ ವಿಷಯBನ್ನು ತನ್ನ ತಾಯಿಯ ಮುಂದೆ ಎಂದೂ ಮನಬಿಚ್ಚಿ ಹೇಳಲಿಲ್ಲ. ಅವಳು ಕ್ರಮೇಣ ಖಿನ್ನತೆಗೆ ಸಿಲುಕುತ್ತಾ ಹೋದಳು. ರೂಮಿನಲ್ಲಿ ಗಂಟೆಗಟ್ಟಲೇ ಒಬ್ಬಳೇ ಕುಳಿತುಕೊಳ್ಳುತ್ತಿದ್ದಳು.

ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ಒಬ್ಬ ಯುವಕ ಹಾಗೂ ಯುವತಿ ಮೆಟ್ರೋ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಕಾರಣ ಆ ಯುವತಿಯ ಮದುವೆ ಮುರಿದಿತ್ತು. ಅದರಿಂದಾಗಿ ಆಕೆ ಹಲವು ದಿನಗಳಿಂದ ಖಿನ್ನತೆಗೆ ತುತ್ತಾಗಿದ್ದಳು.

ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮುಖ್ಯ ಕಾರಣ ನಿರುದ್ಯೋಗ. ನೌಕರಿ ದೊರೆಯದೇ ಇರುವ ಕಾರಣದಿಂದ ಅವನು ಕಳೆದ ಅನೇಕ ತಿಂಗಳುಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ.

ಎರಡೂ ಪ್ರಕರಣಗಳಲ್ಲಿ ಕುಟುಂಬದವರಿಗೆ ಹುಡುಗ-ಹುಡುಗಿ ಖಿನ್ನತೆಗೆ ತುತ್ತಾಗಿರುವುದು ತಿಳಿದಿತ್ತು. ಇಂತಹದರಲ್ಲಿ ಕುಟುಂಬದವರ ಪಾತ್ರ ಬಹು ಮುಖ್ಯವಾಗಿರುತ್ತದೆ. ಮದುವೆ ಮುರಿಯುವುದು ಹಾಗೂ ನಿರುದ್ಯೋಗ ಸಮಸ್ಯೆ ನಮ್ಮ ಕುಟುಂಬಗಳಲ್ಲಷ್ಟೇ ಅಲ್ಲ, ಬಹಳಷ್ಟು ಕುಟುಂಬಗಳಲ್ಲಿ ಇದ್ದದ್ದೇ ಎಂದು ತಿಳಿವಳಿಕೆ ಹೇಳಬಹುದಾಗಿತ್ತು. ಆದರೆ ಕುಟುಂಬದವರು ಅವರನ್ನು ಅವರ ಪಾಡಿಗೆ ಬಿಟ್ಟುಬಿಡುತ್ತಾರೆ. ಅದರ ಪರಿಣಾಮ ಈ ರೀತಿಯಲ್ಲಿ ಪ್ರತ್ಯಕ್ಷವಾಗುತ್ತದೆ.

ಇಂತಹ ಅದೆಷ್ಟೋ ಜನ ನಮ್ಮ ನಡುವೆ ಇದ್ದು, ಅವರು ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಕುಟುಂಬದವರಿಂದ ದೂರ ಉಳಿಯುತ್ತಾರೆ. ಇಂತಹ ಸ್ಥಿತಿಯಲ್ಲಿ ತಮ್ಮ ಮಗ ಅಥವಾ ಮಗಳನ್ನು ಮನೋತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಕುಟುಂಬದವರ ಜವಾಬ್ದಾರಿಯಾಗಿರುತ್ತದೆ.

ಮಾನಸಿಕ ಅಸ್ವಸ್ಥತೆ ಗುಣಪಡಿಸಬಹುದು

ಕೇಂದ್ರ ಆರೋಗ್ಯ ಸಚಿವರು ರಾಜ್ಯಸಭೆಯಲ್ಲಿ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತಾ, ದೇಶದ ಶೇ.6ರಷ್ಟು ಜನರು ಯಾವುದಾದರೊಂದು ಮಾನಸಿಕ ಅಸಮತೋಲನಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು. 2 ಕೋಟಿ ಜನರು ಸ್ಕ್ರಿಜೊಫ್ರೆನಿಯಾ ಹಾಗೂ 5 ಕೋಟಿಯಷ್ಟು ಜನ ಖಿನ್ನತೆ, ಚಿಂತೆ ಹಾಗೂ ಒತ್ತಡಗ್ರಸ್ತರಾಗಿದ್ದಾರೆ. ಈ ಅಂಕಿಅಂಶಗಳು ಸಮಾಜ ಎಂತಹ ಸ್ಥಿತಿಯಲ್ಲಿದೆ ಎಂಬುದನ್ನು ಕೇಳಿ ಆತಂಕ ಉಂಟಾಗುತ್ತದೆ.

ನಮ್ಮ ಸಮಾಜದಲ್ಲಿ ಚಿಕ್ಕ ಕುಟುಂಬಗಳು ಹೆಚ್ಚುತ್ತಿರುವ ಕಾರಣದಿಂದ ಆ ಕುಟುಂಬದಲ್ಲಿ ಒಂಟಿತನದ ಸಮಸ್ಯೆಗಳು ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತವೆ. ತಮ್ಮ ಕುಟುಂಬದ ಯುವಕ/ ಯುವತಿಯರ ಕುರಿತಂತೆ ವೃದ್ಧರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಪ್ರತಿಯೊಂದು ವಯೋಮಾನದವರು ತಮ್ಮದೇ ಆದ ಸಮಸ್ಯೆಗಳಿಂದ ಗ್ರಸ್ತರಾಗಿದ್ದಾರೆ. ಅವರ ಸಮಸ್ಯೆಗಳು ತುಂಬಾ ಕ್ಲಿಷ್ಟಕರವಾಗಿವೆ. ಆದರೆ ಬಗೆಹರಿಸಲಾಗದಷ್ಟು ಕ್ಲಿಷ್ಟಕರವೇನೂ ಅಲ್ಲ. ಬೆಳವಣಿಗೆ ಒಂದು ನಿರಂತರ ಪ್ರಕ್ರಿಯೆ. ಅವರು ಮಕ್ಕಳೇ ಆಗಿರಬಹುದು, ವಯಸ್ಕರೇ ಆಗಿರಬಹುದು ಇಲ್ಲವೇ ವೃದ್ಧರು, ಎಲ್ಲರೂ ಈ ಹಂತವನ್ನು ದಾಟಿ ಬಂದಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ