ವಿಮಾನ ದುರಂತದಲ್ಲಿ ಒಬ್ಬ ವ್ಯಕ್ತಿ ಸಾವಿನಿಂದ ಬಚಾವ್‌ ಆಗಿದ್ದಾರೆ. 242 ಪ್ರಯಾಣಿಕರ ಪೈಕಿ ಸಾವಿಗೆ ಸವಾಲ್ ಹಾಕಿದ್ದಾರೆ. ಅವರೆಂದರೆ, 11A ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಸಾವಿನ ಕದ ತಟ್ಟಿ ಬಂದ ರಮೇಶ್‌‌ ವಿಶ್ವಾಸ್‌ ಕುಮಾರ್‌. ಭೀಕರ ದುರಂತದಿಂದ ಪವಾಡದಂತೆ ಪಾರಾದ ಪ್ರಯಾಣಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ರಮೇಶ್ ಸೀಟ್‌‌ ನಂಬರ್ 11Aನಲ್ಲಿ ಕುಳಿತಿದ್ದ ಪ್ರಯಾಣಿಕ ಬದುಕಿದ್ದೇ ರೋಚಕ ಎನ್ನಲಾಗಿದೆ.

ಪೊಲೀಸ್ ಆಯುಕ್ತ GS ಮಲಿಕ್ ನೀಡಿದ ಮಾಹಿತಿ ಪ್ರಕಾರ, ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ. ವಿಮಾನವು ವಸತಿ ಪ್ರದೇಶದಲ್ಲಿ ಪತನಗೊಂಡ ಕಾರಣ ಕೆಲವು ಸ್ಥಳೀಯರೂ ಜೀವ ಕಳೆದುಕೊಂಡಿದ್ದಾರೆ. ಆದಾಗ್ಯೂ ಒಬ್ಬ ವ್ಯಕ್ತಿ ಬದುಕುಳಿದಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ