ಒಮ್ಮೆ ರಾಜ ತನ್ನ ಸಭೆಯ ಎಲ್ಲ ಗಂಡಂದಿರ ಕುರಿತಾಗಿ ವಿಚಾರಿಸುತ್ತಿದ್ದ.
“ಈ ಸಭೆಯಲ್ಲಿ ಹಾಜರಿರುವ ಎಲ್ಲಾ ಗಂಡಂದಿರೂ, ಹೆಂಡತಿಗೆ ಹೆದರುವವರಾದರೆ ಎಡಗಡೆ ಸಾಲಿನಲ್ಲಿ ನಿಂತುಕೊಳ್ಳಿ. ಯಾರು ಹೆಂಡತಿಗೆ ಹೆದರುವುದಿಲ್ಲವೋ ಅವರು ಬಲಗಡೆ ಸಾಲಿನಲ್ಲಿ ನಿಂತುಕೊಳ್ಳಿ!”
ಅಲ್ಲಿದ್ದ ಎಲ್ಲಾ ಗಂಡಸರೂ ಎಡಗಡೆಯ ಸಾಲಿನಲ್ಲಿ ಹೋಗಿ ನಿಂತರು. ಒಬ್ಬ ಮಾತ್ರ ಹಾಗೇ ಕುಳಿತಿದ್ದ.
ರಾಜ : ಶಭಾಷ್! ನೀನು ಒಬ್ಬನಾದರೂ ನಮ್ಮ ರಾಜ್ಯದಲ್ಲಿ ಹೆಂಡತಿಗೆ ಹೆದರದ ಗಂಡನಿದ್ದೀಯಲ್ಲ… ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು. ಈ ಕುರಿತು ಇಲ್ಲಿ ಎಡ ಸಾಲಿನಲ್ಲಿ ನಿಂತಿರುವವರಿಗೆ ಒಂದಿಷ್ಟು ಕಿವಿಮಾತು ವಿವರಿಸು.
ಪ್ರಜೆ : ಸ್ವಾಮಿ, ಅದು ಹಾಗಲ್ಲ. ನಾನು ನನ್ನ ಹೆಂಡತಿಗೆ ಹೆದರಿ ಇಲ್ಲೇ ಕುಳಿತಿದ್ದೇನೆ. ಅವಳನ್ನು ಕೇಳದೆ ಏನೂ ಮಾಡಲಾರೆ. ಈಗ ಇಲ್ಲಿಂದ ಎದ್ದು ಎಡ ಸಾಲಿನಲ್ಲಿ ನಿಲ್ಲಬೇಕೋ ಬೇಡವೋ ಎಂದು ಅವಳನ್ನೇ ಕೇಳಬೇಕು. ಇಷ್ಟು ಹೊತ್ತಿನಲ್ಲಿ ಅವಳು ಗಾಢ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುತ್ತಾಳೆ. ಎಬ್ಬಿಸಿದರೆ ನನ್ನ ಕಥೆ ಮುಗಿಯಿತು…. ಏನು ಮಾಡಲಿ ಅಂತ ಯೋಚಿಸುತ್ತಿದ್ದೇನೆ….
ಕೇಳುತ್ತಿದ್ದ ರಾಜ ಹಾಗೇ ಮೂರ್ಛೆ ಹೋದನಂತೆ!
ವಿವಾಹಿತ : ನಮ್ಮಂಥ ಮದುವೆಯಾದ ಗಂಡಂದಿರ ಗೋಳು ಯಾರಿಗೂ ಬೇಡಪ್ಪ.
ಅವಿವಾಹಿತ : ಯಾಕಪ್ಪ? ನಿನಗೆ ಅಂಥ ಕಷ್ಟ ಬಂದಿರುವುದಾದರೂ ಏನು?
ವಿವಾಹಿತ : ಮದುವೆಗೆ ಮೊದಲು ಮನೆಯವರೆಲ್ಲ ಒಂದೇ ಸಮ ಬೈತಿದ್ದರು, `ಅಯ್ಯೋ ಹಾಳಾದವನೆ…. ನಮ್ಮ ಮಾತಂತೂ ಕೇಳೋಲ್ಲ ಬರ್ತಾಳೆ ಇರು ನಿನ್ನ ಹೆಂಡತಿ… ನಿನಗೆ ಬುದ್ಧಿ ಕಲಿಸಿ ಸರಿ ದಾರಿಗೆ ತರ್ತಾಳೆ!’
ಅವಿವಾಹಿತ : ಮತ್ತೆ… ಈಗ ಏನಂತಿದ್ದಾರೆ?
ವಿವಾಹಿತ : ಹಿಂದೇನೇ ವಾಸಿ, ನಮ್ಮ ಮಾತು ಸ್ವಲ್ಪವಾದ್ರೂ ಕೇಳ್ತಿದ್ದ. ಈಗಂತೂ ಕೇವಲ ಹೆಂಡತಿ ಗುಲಾಮ ಆಗಿದ್ದಾನೆ, ಅವಳು ಕೂತ್ಕೋ ಅಂದ್ರೆ ಕೂತ್ಕೋತಾನೆ, ನಿಂತ್ಕೋ ಅಂದ್ರೆ ನಿಂತ್ಕೋತಾನೆ! ಅಂತ ಇರ್ತಾರೆ.
ಸದಾ ಹಗಲೂರಾತ್ರಿ ಕ್ಯಾಶ್ ಎಣಿಸುತ್ತಾ, ಲೆಕ್ಕಾಚಾರ ಹಾಕುತ್ತಿದ್ದ ಜುಗ್ಗ ಗಂಡನಿಗೆ ಬುದ್ಧಿ ಕಲಿಸಲು ಹೆಂಡತಿ ನಿರ್ಧರಿಸಿದಳು. ಬ್ಯಾಂಕ್ ನೌಕರಿಯಲ್ಲಿದ್ದ ಕ್ಯಾಶಿಯರ್ ಗಂಡನಿಗೆ ಆ ಭಾಷೆಯೇ ಸರಿ ಎಂದು ಭಾವಿಸಿದಳು.
ಆ ರಾತ್ರಿ ಹೆಂಡತಿಯನ್ನು ಪ್ರೀತಿಯಿಂದ ಟಚ್ ಮಾಡಲು ಬಂದ ಗಂಡನಿಗೆ ಕೂಡಲೇ ಅವಳು ರೇಗಿದಳು, “ನೋಡ್ರಿ, ಈ ತಿಂಗಳ ನಿಮ್ಮ 4 ಟ್ರಾನ್ಸಾಕ್ಷನ್ಸ್ ಪೂರ್ತಿ ಆಗಿದೆ. ಇದೇನಾದರೂ ಮುಂದುವರಿದರೆ ಪ್ರತಿ ಟ್ರಾನ್ಸಾಕ್ಷನ್ ಗೂ 1000/ ರೂ. ದಂಡ ಕಟ್ಟಬೇಕು!”
ಗಂಡ ತೆಪ್ಪಗೆ ಗೊರಕೆಗೆ ಶರಣಾದ.
ಮಹೇಶ : ನಿನಗೆ ಗೊತ್ತೇ, ಈ ವಿಶ್ವದಲ್ಲಿ ಕೇವಲ 2 ಬಗೆಯ ನೆಟ್ ವರ್ಕ್ ಮಾತ್ರವೇ ಬಲು ಬೇಗ ಡೇಟಾ ಟ್ರಾನ್ಸ್ ಫರ್ ಮಾಡಬಲ್ಲ.
ಸುರೇಶ : ಹೌದಾ? ಅದು ಯಾವುದು ಅಂತೀಯಾ?
ಮಹೇಶ : ಇಮೇಲ್ ಮತ್ತು ಫೀಮೇಲ್!
ಟೀಚರ್ : ಕನ್ನಡವನ್ನು ನಮ್ಮ ಮಾತೃಭಾಷೆ ಅಂತೀವಿ. ಅದನ್ನೇಕೆ ನಾವು ಪಿತೃಭಾಷೆ ಅನ್ನಬಾರದು?
ಗುಂಡ : ಯಾವ ಮನೆಯಲ್ಲಿ ತಾನೇ ಅಮ್ಮಂದಿರು ಅಪ್ಪಂದಿರನ್ನು ಮಾತನಾಡಲಿಕ್ಕೆ ಬಿಟ್ಟಿದ್ದಾರೆ…. ಹೇಳಿ ಟೀಚರ್!
ಆಗ ಬಿಕ್ಕಳಿಸಲು ಆರಂಭಿಸಿದ ಟೀಚರ್, ಕ್ಲಾಸ್ ಮುಗಿದರೂ ಅವಳು ನಿಲ್ಲಿಸಲೇ ಇಲ್ಲವಂತೆ! ಗುಂಡ ಶಾಲೆಯಿಂದ ಮನೆಗೆ ಬಂದವನೇ ರೊಂಯ್ಯನೇ ತನ್ನ ಬ್ಯಾಗನ್ನು ಬದಿಗೆಸೆದು, ಶೂ ಸಾಕ್ಸ್ ಕಳಚಿ ಮಂಚದಡಿ ದೂಡಿದ. ಕೋಪದಲ್ಲಿ ಅವನು ಊಟ ಬೇಡ ಅಂದ.
ಗುಂಡ : ಅಮ್ಮ, ಸರಿಯಾಗಿ ಹೇಳು. ನನ್ನ ಹೆಸರು ಜಿ. ಗುಂಡ ತಾನೇ?
ಅಮ್ಮ : ಹೌದು ಕಣೋ, ಅದರಲ್ಲಿ ನಿನಗೇನು ಡೌಟು?
ಗುಂಡ : ಮತ್ತೆ ನಮ್ಮ ಟೀಚರ್ ಯಾವಾಗಲೂ ನನ್ನನ್ನು ಪೆದ್ದಗುಂಡಾ ಅಂತಾನೇ ಇರ್ತಾರೆ……
ಪತ್ನಿ : ರೀ….. ಬೇಗ ಏಳ್ರಿ! ಆಗಿನಿಂದ ಎಬ್ಬಿಸ್ತಾ ಇದ್ದೀನಿ….. ಚಾ ಮಾಡಬೇಕಿದೆ ನಂಗೆ.
ಪತಿ : ಅಯ್ಯೋ ಮಾರಾಯ್ತಿ! ಚಾ ಮಾಡಬೇಕಿದ್ದರೆ ನೀ ಧಾರಾಳ ಮಾಡು. ಅದಕ್ಕೆ ನನ್ನನ್ನು ಯಾಕೆ ಎಬ್ಬಿಸಬೇಕು? ನಾನೇನು ನಿನ್ನ ಚಾ ಪಾತ್ರೆಯಲ್ಲಿ ಮಲಗಿದ್ದೀನೇನು?
ಪತ್ನಿ : ಪಕ್ಕದ ಮನೆಯರು ಆಗಿನಿಂದ ಸದಾ ಜಗಳ ಆಡ್ತಿದ್ದಾರೆ. ತುಸು ಏನು ಎತ್ತ ಅಂತ ಹೋಗಿ ವಿಚಾರಿಸಬಾರದೇ?
ಪತಿ : ಅಯ್ಯೋ…. ನಾನು ಬೆಳಗ್ಗೆಯಿಂದ 2-2 ಸಲ ಹೋಗಿ ವಿಚಾರಿಸಿದೆ…. ನಾನು ಅಲ್ಲಿಗೆ ಹೋಗಿದ್ದನ್ನೇ ದೊಡ್ಡದು ಮಾಡಿ ಜಗಳ ಆಡ್ತಿದ್ದಾರೆ…. ಇದೆಂಥ ಕಥೆ?
ಜ್ಯೋತಿಷಿ : ಆಹಾ… ಸ್ವಾಮಿ, ನಿಮ್ಮ ಹಸ್ತರೇಖೆ ಬಹಳ ಚೆನ್ನಾಗಿದೆ. ನನಗಂತೂ ಇದರಲ್ಲಿ ಎಲ್ಲೆಲ್ಲೂ ಹಣದ ಹೊಳೆ ಹರಿಯುತ್ತಿರುವಂತೆ ಕಂಡುಬರುತ್ತಿದೆ. ಬಲು ಬೇಗ ನೀವು ಧನವಂತರಾಗ್ತೀರಿ!
ಭಕ್ತ : ಸ್ವಾಮಿ, ದಯವಿಟ್ಟು ನನ್ನ ಜಾತಕ, ಹಸ್ತರೇಖೆಗಳಿಂದ ಬ್ಯಾಂಕಿಗೆ 1-2 ಲಕ್ಷ ಟ್ರಾನ್ಸ್ ಫರ್ ಮಾಡಿಸಿಬಿಡಿ, ನಿಮಗೂ ಧಾರಾಳ ದಕ್ಷಿಣೆ ಕೊಡ್ತೀನಿ!
ಆರ್ಮಿ ಟ್ರೇನಿಂಗ್ ಜೋರಾಗಿ ನಡೆಯುತ್ತಿತ್ತು.
ಅಧಿಕಾರಿ : ನಿನ್ನ ಕೈಯಲ್ಲಿ ಇದೇನಿದು?
ಸುರೇಶ : ಸಾರ್…. ಇದು ಬಂದೂಕು!
ಅಧಿಕಾರಿ : ಇದು ಕೇವಲ ಬಂದೂಕವಲ್ಲ…. ನಿನ್ನ ಪ್ರತಿಷ್ಠೆ, ನಮ್ಮ ದೇಶದ ಮರ್ಯಾದೆ ಪ್ರಶ್ನೆ, ನಿನ್ನ ತಾಯಿ ಸಮಾನ!
ಸುರೇಶ : ಎಸ್ ಸಾರ್…..!
ನಂತರ ಅಧಿಕಾರಿ ನಿಧಾನವಾಗಿ ಮತ್ತೊಬ್ಬ ಸೈನಿಕನತ್ತ ನಡೆದು ಬಂದ. ತಾನು ಸುರೇಶನಂತೆ ಪೆದ್ದು ಪೆದ್ದಾಗಿ ಉತ್ತರಿಸಬಾರದು ಎಂದು ಅವನು ತಯಾರಿ ನಡೆಸಿದ್ದ.
ಅಧಿಕಾರಿ : ಮಹೇಶ, ನಿನ್ನ ಕೈಯಲ್ಲಿ ಇರುವುದೇನು?
ಮಹೇಶ : ಸಾರ್… ಇದು ಸುರೇಶನ ಪ್ರತಿಷ್ಠೆ, ಅವನ ದೇಶದ ಮರ್ಯಾದೆ ಪ್ರಶ್ನೆ, ಅವನ ತಾಯಿ ಸಮಾನ!
ರಾಮು : ನಿನ್ನೆ ನಾನು ರಾಕೆಟ್ ತಯಾರಿಸಿ ಆಕಾಶದತ್ತ ಹಾರಿಸಿದೆ. ಅದು ನೇರ ಹೋಗಿ ಸೂರ್ಯನಿಗೇ ತಗುಲಿತು, ಗೊತ್ತಾ?
ರಾಜು : ಹೌದಾ….? ನಿಜವಾಗಲೂ ನೀನು ಅಂಥ ಸಮರ್ಥ ರಾಕೆಟ್ ತಯಾರಿಸಿದೆಯಾ? ಅದು ಸೂರ್ಯನಿಗೆ ತಗುಲಿತಾ? ಆಮೇಲೆ…. ಇದರ ಪರಿಣಾಮ ಏನಾಯ್ತು?
ರಾಮು : ಆಗೋದೇನು….? ನನಗೆ ಸರಿಯಾಗಿ ಒದೆ ಬಿತ್ತು.
ರಾಜು : ಹೌದಾ? ಬಾರಿಸಿದರು ಯಾರು?
ರಾಮು : ಪೇಪರ್ ರಾಕೆಟ್ ಸೂರ್ಯನ ಕಣ್ಣಿಗೆ ತಗುಲಿದ್ದರಿಂದ ಅವನ ತಾಯಿ ಬಂದು ನನಗೆ ಬಾರಿಸಿದರು.
ಟೀಚರ್ : `ಧೈರ್ಯಂ ಸರ್ವತ್ರ ಸಾಧನಂ!’ ಎಲ್ಲಿ ಈ ಮಾತಿಗೆ ಯಾರಾದರೂ ಸೂಕ್ತ ಉದಾ ಕೊಡಿ?
ಕಿಟ್ಟಿ : ಯಾರು ತನ್ನ ಪತ್ನಿಯ ಮುಂದೆ ನಿಜವಾಗಿಯೂ ಧೈರ್ಯ ಪ್ರದರ್ಶಿಸುತ್ತಾನೋ ಅವನನ್ನು ಮೀರಿದ ಎಂಟೆದೆ ಭಂಟನೇ ಇಲ್ಲ!
ಟೀಚರ್ ಈಗ ಬಹಳ ಗೊಂದಲದಲ್ಲಿದ್ದಾರೆ, ಕಿಟ್ಟಿಯ ಉತ್ತರಕ್ಕೆ ಶಭಾಷ್ ಎನ್ನಬೇಕೋ, ಕಪಾಳಕ್ಕೆ ಬಾರಿಸಬೇಕೋ ಅಂತ!
ರಾಮಣ್ಣ : ಅದು ಸರಿ ನಾಣಿ, ನೀನೇಕೆ ಶಾಲೆಗೆ ಹೋಗದೆ ಅಲ್ಲಿ ಇಲ್ಲಿ ಊರೂರು ಅಲೀತಿರ್ತೀಯಾ?
ನಾಣಿ : ಹೋಗಿದ್ದೆ ಸಾರ್…. ಆದರೆ ಅವರೇ ನನ್ನನ್ನು ಆ ಶಾಲೆಯಿಂದ ದೂರ ಓಡಿಸಿಬಿಟ್ಟರು.
ರಾಮಣ್ಣ : ಹೌದೇ? ಅದೇಕೆ ಆ ಶಾಲೆಯವರು ಹಾಗೆ ಮಾಡಿದರು?
ನಾಣಿ : ಇದು ಹೆಣ್ಣುಮಕ್ಕಳ ಶಾಲೆ ಬಡವ ರಾಸ್ಕಲ್, ಇಲ್ಲಿ ನಿನಗೇನೋ ಕೆಲಸ ಅಂತಾರೆ!
ಅಂದು ಸರ್ಕಾರಿ ಕಛೇರಿಯಲ್ಲಿ ಚರ್ಚೆ ನಡೆದಿತ್ತು.
ಸೋಮಯ್ಯ : ಕಳೆದ ವರ್ಷ ಗುಡ್ ಫ್ರೈಡೇಗೆ ನಮಗೆ ರಜಾ ಸಿಕ್ಕಿರಲಿಲ್ಲ ನೋಡಿ…..
ರಾಮಯ್ಯ : ಹೌದ್ರೀ ಅದು ಭಾನುವಾರ ಬಂದು ನಮ್ಮಂಥ ಸಿಬ್ಬಂದಿಗೆ ಎಷ್ಟು ಲಾಸ್ ಆಯ್ತು ನೋಡ್ರಿ!