ರಾಘವೇಂದ್ರ ಅಡಿಗ ಎಚ್ಚೆನ್.

ತಮಿಳುನಾಡಿನಲ್ಲಿ ದಳಪತಿ ವಿಜಯ್ ಸರ್ಕಾರ ರಚಿಸಲು ರೆಡಿಯಾಗಿರುವಾಗಲೇ ಕರ್ನಾಟಕದ ದುನಿಯಾ ವಿಜಯ್ ತಮ್ಮ ರಾಜಕೀಯ ಎಂಟ್ರಿ ಕುರಿತು ಮಾತನಾಡಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು.. ದಳಪತಿ ವಿಜಯ್ ಅವರು ಟಿವಿಕೆ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಗೆಲುವಿನ ಬಗ್ಗೆ ಹಾಗೂ ರಾಜಕೀಯ ಎಂಟ್ರಿ ಬಗ್ಗೆ ವಿಜಯ್ ಮಾತನಾಡಿದ್ದಾರೆ. ‘ನನ್ನ ಹೆಸರೂ ವಿಜಯ್, ಅವರ ಹೆಸರೂ ವಿಜಯ್. ಈ ಕಾರಣಕ್ಕೆ ಖುಷಿ ಇದೆ. ತಮಿಳುನಾಡಿನಲ್ಲಿ ಆದ ಬದಲಾವಣೆ ಎಲ್ಲ ಕಡೆಗಳಲ್ಲೂ ಆಗಬೇಕು’ ಎಂದರು. ಇದನ್ನೂ ಓದಿ: LSG vs Mi: ರೋಹಿತ್ ಶರ್ಮಾಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ ನೀತಾ ಅಂಬಾನಿ..! ರಾಜಕೀಯ ಎಂಟ್ರಿ ಯಾವಾಗ ಎಂದು ಕೇಳಿದಾಗ ವಿಜಯ್ ಉತ್ತರಿಸಿದ್ದಾರೆ. ‘ಜೆಂಜಿಗಳು ಇದಕ್ಕೆ ಕಾರಣ. ಅವರು ಮನಸ್ಸು ಮಾಡಿದರೆ ಬದಲಾವಣೆ ತರುತ್ತಾರೆ’ ಎಂದರು. ರಾಜಕೀಯಕ್ಕೆ ಬರೋದಕ್ಕೆ ಈಗಲೇ ಆಲೋಚಿಸಿಲ್ಲ ಎಂದಿರೋ ಅವರು, ಟೈಮ್ ಬರಲಿ ಹೇಳುತ್ತೇನೆ ಎಂದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ