ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಹತ್ತಿರ ಇರುವ, ಮಲ್ಲೇಶ್ವರ, ಶೇಷಾದ್ರಿಪುರ, ರೇಸ್ ಕೋರ್ಸ್ ರಸ್ತೆ, ಅಣ್ಣಮ್ಮ ದೇವಸ್ಥಾನವನ್ನು ಒಗ್ಗೂಡಿಸುವ ಪ್ರಮುಖ ವೃತ್ತವೇ ಆನಂದ್ ರಾವ್ ಸರ್ಕಲ್. ಸದಾಕಾಲವೂ ಅತ್ಯಂತ ಜನನಿಭಿಡವಾಗಿರುವ ಈ ವೃತ್ತಕ್ಕೆ ಆನಂದ ರಾವ್ ವೃತ್ತ ಎಂಬ ಹೆಸರು ಏಕಿದೆ? ಆನಂದ್ ರಾವ್ ಅಂದರೆ ಯಾರು ಎಂಬ ಎಲ್ಲಾ ಕುತೂಹಲಗಳಿಗೆ ಇದೋ ಇಲ್ಲಿದೆ ಸಂಪೂರ್ಣ ಮಾಹಿತಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 

anand_rao

ಆನಂದ ರಾವ್ ಅವರ ಪೂರ್ಣ ಹೆಸರು ತಂಜಾವೂರು ಆನಂದ ರಾವ್ ಎಂಬುದಾಗಿದ್ದು ಅವರ ಸೇವೆಗಾಗಿ ಬ್ರಿಟಿಷ್ ಸರ್ ಪದವಿಯೂ ಸಹಾ ದೊರೆತಿತ್ತು. ಅವರನ್ನು ಸರ್ ಆನಂದ ರಾವ್ ತಂಜಾವರ್ಕರ್ ಎಂದೂ ಕರೆಯಲಾಗುತ್ತದೆ. ಆನಂದ ರಾವ್ ಅವರು 1852 ರ ಮೇ 15 ರಂದು ತಿರುವನಂತಪುರಂ ಕೋಟೆಯ ಪದ್ಮ ವಿಲಾಸ್‌ನಲ್ಲಿನ ದೇಶಸ್ಥ ಬ್ರಾಹ್ಮಣ ಸಮುದಾಯದವರಾದ ತಿರುವಾಂಕೂರ್ ಮತ್ತು ಬರೋಡ ರಾಜ್ಯಗಳ ದಿವಾನರಾಗಿ ನಂತರ ಭಾರತದ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾಗಿ ಕೆಲಸ ಮಾಡಿದ ಭಾರತದ ಪ್ರಮುಖ ರಾಜನೀತಿಜ್ಞರಾದ ಸರ್ ಟಿ. ಮಾಧವ ರಾವ್ ಅವರ ಹಿರಿಯ ಮಗನಾಗಿ ಜನಿಸುತ್ತಾರೆ.

ಆನಂದರಾಯರು ತಮ್ಮ ಶಾಲಾ ಶಿಕ್ಷಣವನ್ನು ಅಂದಿನ ಮದ್ರಾಸ್ ನಲ್ಲಿ ಮಾಡಿ 1867 ರಲ್ಲಿ ಪ್ರಥಮ ದರ್ಜೆಯಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ಪೂರ್ಣಗೊಳಿಸಿದ ನಂತರ 1869 ರಲ್ಲಿ ಅವರ ಎಫ್.ಎ. ಅನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಆದಾದ ನಂತರ ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ) ಮತ್ತು ತರ್ಕಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ ಪದವಿ ಪಡೆದರು.

ಹೀಗೆ ಶಿಕ್ಷಣವನ್ನು ಮುಗಿಸಿದ ರಾಯರು ಆರಂಭದಲ್ಲಿ ಮಹಾರಾಜ ತುಕಾಜಿರಾವ್ ಹೋಳ್ಕರ್ III ರವರಿಗೆ ಬೋಧಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದ ನಂತರ 14 ನವೆಂಬರ್ 1873 ರಂದು ಮೈಸೂರು ಆಯೋಗಕ್ಕೆ ಸೇರ್ಪಡೆಗೊಳ್ಳುತ್ತಾರೆ. 7 ಜುಲೈ 1876 ರಂದು ಬೆಂಗಳೂರಿನ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಲ್ಲದೇ, 1 ಡಿಸೆಂಬರ್ 1879 ರಿಂದ ಮೈಸೂರು ಅರಮನೆ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುತ್ತಾರೆ.

ಆದಾದನಂತರ 1883 ರಿಂದ 1886 ರವರೆಗೆ ಹಾಸನ ಮತ್ತು ಕಡೂರು ಜಿಲ್ಲೆಯ ಸಹಾಯಕ ಆಯುಕ್ತರಾಗಿ ಮತ್ತು 1886 ರಿಂದ 1889 ರವರೆಗೆ ಹಾಸನ ಮತ್ತು ಮೈಸೂರಿನ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದನಂತರ ಅಂದಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಅಡಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಕಾಲ ಸೇವೆ ಸಲ್ಲಿಸಿದ ನಂತರ 1 ಏಪ್ರಿಲ್ 1909 ರಂದು ಮೈಸೂರಿನ 18ನೇ ದಿವಾನ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

shmisha_project

ರಾಯರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಇವರ ಕಾಲದಲ್ಲಿಯೇ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಮಂಜೂರು ಮಾಡಿದ್ದಲ್ಲದೇ, ಬೆಂಗಳೂರಿನಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯ ಆರಂಭಕ್ಕೆ ಕಾರಣೀಭೂತರಾದರು. ಮೈಸೂರು, ಬೆಂಗಳೂರು ಮತ್ತು ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ ಶಕ್ತಿಯನ್ನು ನೀಡುವ ಸಲುವಾಗಿ 1910ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸುವ ಸಲುವಾಗಿ ಅಲ್ಲಿ ಜಲಾಶಯವನ್ನು ನಿರ್ಮಿಸಲಾಯಿತು. ಅದೇ ವರ್ಷದಲ್ಲಿ,  ಮೈಸೂರು-ಹಾಸನ ರೈಲುಮಾರ್ಗವನ್ನು ವಿಸ್ತರಿಸಲಾಯಿತು. ಅವರ ಕಾಲದಲ್ಲಿಯೇ ಮೊದಲ ಬಾರಿಗೆ ಮೈಸೂರು ಆರ್ಥಿಕ ಸಮ್ಮೇಳನವನ್ನು ಉದ್ಘಾಟಿಸಿ ನಂತರ ಪ್ರತಿ ವರ್ಷಕ್ಕೊಮ್ಮೆ ಆಂತಹ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ