ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ದೇಶದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.  ನಟನನ್ನು ಕಂಡರೆ ಸಾಕು ಅಭಿಮಾನಿಗಳು ಸೆಲ್ಫಿಗಳಿಗಾಗಿ ಅಂಗಲಾಚುತ್ತಾರೆ. ಇದು ಸಾಮಾನ್ಯ ವಿಚಾರವಾಗಿದ್ದರೂ, ತಾನೇ ಜನರತ್ತ ಕೈ ಬೀಸುತ್ತಿದ್ದರೂ, ಯಾರೂ ತನ್ನನ್ನು ಗಮನಿಸದ ಸ್ಥಳವೂ ಇತ್ತು. ಈ ಅನುಭವ ತನ್ನ ಅಹಂಕಾರವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿತು ಎಂದು ತಲೈವಾ ರಜನೀಕಾಂತ್​ ಹೇಳಿದ್ದಾರೆ.

ರಜನಿಕಾಂತ್ ಅವರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45ನೇ ವರ್ಷಾಚರಣೆ ಮತ್ತು ಶ್ರೀ ಶ್ರೀ ರವಿಶಂಕರ್ ಅವರ 70ನೇ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.

ಆಶ್ರಮದ ಪ್ರವಾಸ ಕೈಗೊಳ್ಳಲು ಬಯಸುತ್ತೀರಾ ಎಂದು ಆಧ್ಯಾತ್ಮಿಕ ನಾಯಕರು ಕೇಳಿದರು. ಆದರೆ, ಅತ್ಯಂತ ಜನಪ್ರಿಯ ನಟನಾಗಿರುವುದರಿಂದ ನನ್ನನ್ನು ಭೇಟಿ ಮಾಡಲು ಅಥವಾ ಹಸ್ತಾಕ್ಷರ ಪಡೆಯಲು ಸುತ್ತಲೂ ಜನಸಮೂಹ ಸೇರುವ ಸಂದರ್ಭಗಳನ್ನು ತಪ್ಪಿಸಲು ಬಯಸಿದ್ದೆ ಎಂದು ಹೇಳಿದ್ದಾರೆ ತಲೈವಾ.

‘ಗುರುದೇವ್ ನನ್ನನ್ನು ಅವರೊಂದಿಗೆ ಬರುವಂತೆ ಹೇಳಿದರು. ಅದು ಅವರಿಗೆ ತುಂಬಾ ತೊಂದರೆ ಕೊಡುತ್ತದೆ ಎಂದು ನಾನು ಅವರಿಗೆ ಹೇಳಿದೆ. ಆದರೆ ಅವರು, ‘ತೊಂದರೆ ಇಲ್ಲ, ತೊಂದರೆ ಇಲ್ಲ, ಬನ್ನಿ’ ಎಂದು ಹೇಳಿದರು… ಸ್ವಾಭಾವಿಕವಾಗಿ ಜನರು ಅಲ್ಲಿರುತ್ತಾರೆ, ನನ್ನನ್ನು ಗುರುತಿಸುತ್ತಾರೆ, ನನ್ನ ಹೆಸರು ಕೂಗುತ್ತಾರೆ, ಫೋಟೋ ಕೇಳುತ್ತಾರೆ ಎಂದು ನಾನು ಭಾವಿಸಿದ್ದೆ ಎಂದು ರಜನಿಕಾಂತ್ ಹೇಳಿದರು.

‘ಸಾವಿರಾರು ಜನರು ಅಲ್ಲಿದ್ದರು. ಫೋಟೊಗಳು ಮತ್ತು ಆಟೋಗ್ರಾಫ್‌ಗಳನ್ನು ಮರೆತುಬಿಡಿ; ಒಬ್ಬ ವ್ಯಕ್ತಿಯೂ ನನ್ನತ್ತ ನೋಡಲಿಲ್ಲ ಅಥವಾ ಮಾತನಾಡಲಿಲ್ಲ. ನಾನು ಕೈ ಬೀಸುತ್ತಿದ್ದೆ, ಆದರೆ ಯಾರೂ ನನ್ನತ್ತ ನೋಡಲಿಲ್ಲ…. ನಾನು ಅನೇಕ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿದ್ದೇನೆ, ಆದರೆ ಈ ಘಟನೆ ನನ್ನ ಅಹಂಕಾರವನ್ನು ಛಿದ್ರಗೊಳಿಸಿತು’ ಎಂದರು.

‘ಯಾವುದೇ ತೊಂದರೆ ಇರುವುದಿಲ್ಲ’ ಎಂದು ರವಿಶಂಕರ್ ಭರವಸೆ ನೀಡಿದ್ದರೂ, ಮಾನಸಿಕವಾಗಿ, ಭಾವನಾತ್ಮಕವಾಗಿ ಏನೋ ನನ್ನ ಮೇಲೆ ಪರಿಣಾಮ ಬೀರಿತು. ಸುತ್ತಮುತ್ತಲಿನ ಶಾಂತ ವಾತಾವರಣದ ಹೊರತಾಗಿಯೂ, ನನ್ನ ಮನಸ್ಸು ಗೊಂದಲ ಅನುಭವಿಸಿತು. ಆಧ್ಯಾತ್ಮಿಕ ಶಕ್ತಿಯು ತುಂಬಾ ಪ್ರಬಲ, ಅದು ನನ್ನ ಆಲೋಚನೆಗಳು ಮತ್ತು ಭಾವನೆಗಳ ಮೇಲೆ ಆಳವಾಗಿ ಪರಿಣಾಮ ಬೀರಿದೆ ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ