ಚಿನಕುರುಳಿಯ ಮಾತಿನ ಮೋಡಿ!

ಆಕೆಗೆ ಬಾಲ್ಯದಿಂದಲೇ ಚಟಪಟನೆ ಮಾತನಾಡಿ, ಸುತ್ತಲಿನ ವಾತಾವರಣವನ್ನು ಚಕಿತಗೊಳಿಸುವ ವರ ಸಿದ್ಧಿಸಿತ್ತು. ಜೊತೆಗೆ ಹಾಡಿನ ಹುಚ್ಚು ಕೂಡ ಇತ್ತು. ತನ್ನ ಮಾತಿನ ಚಮತ್ಕಾರದಿಂದಲೇ ಮೋಡಿ ಮಾಡುತ್ತಾ ಮೀಡಿಯಾಗೆ ಕಾಲಿಟ್ಟರು, ಅವರೇ ರಶ್ಮಿ!

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಶ್ಮಿ, ತಮ್ಮ ಚಟುವಟಿಕೆಗಳನ್ನೆಲ್ಲ ಬಸವನಗುಡಿಯಿಂದಲೇ ಶುರು ಹಚ್ಚಿಕೊಂಡರು.

ವಾಣಿಜ್ಯೋದ್ಯಮದಲ್ಲಿ ಪದವೀಧರೆಯಾದ ಈಕೆ ಎಪಿಎಸ್‌ ಕಾಲೇಜಿನಲ್ಲಿ ಕಲಿತರು.

ತಮ್ಮ ಅಪೂರ್ವ ಬಗೆಯ ಮಾತುಗಳಿಂದ ಮೀಡಿಯಾಗೆ ಎಂಟ್ರಿ ಪಡೆದ ರಶ್ಮಿ, ಮೊದಲು ಉದಯ, ನಂತರ ಈ. ಟಿವಿ ವಾಹಿನಿಗಳಲ್ಲಿ ಆ್ಯಂಕರ್‌ ಆಗಿ ಕನ್ನಡಿಗರಿಗೆ ಪರಿಚಿತರಾದರು, ನಂತರ ರೇಡಿಯೋ ಜಾಕಿಯಾಗಿ ಜುಲೈ 2006ರಲ್ಲಿ  FM ರೇಡಿಯೋ ಸೇರಿದ ರಶ್ಮಿ ಮಾತಿನ ಮಳೆ ಸುರಿಸುವ ಮೂಲಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾರೆ.

ಮೊದ ಮೊದಲು ಬೆಳಗಿನ `ಸುಪ್ರಭಾತ’ ಕಾರ್ಯಕ್ರಮದಿಂದ ತಮ್ಮನ್ನು ಶ್ರೋತೃಗಳಿಗೆ ಪರಿಚಯಿಸಿಕೊಂಡ ರಶ್ಮಿ ನಂತರ ಮಧ್ಯಾಹ್ನದ `ಬ್ರಾಡ್‌ ಕಾಸ್ಟ್ ಬಂಡಿ’ ಮೂಲಕ ಜನಮಾನಸದಲ್ಲಿ ಗಟ್ಟಿಯಾಗಿ ಉಳಿದುಕೊಂಡರು.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಓಡಾಡಿ, ತಂತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಶ್ರೋತೃಗಳನ್ನು ನೇರವಾಗಿ ಮಾತನಾಡಿಸುತ್ತಾ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ, ಅವರಿಗೆ ಬೇಕುಬೇಕಾದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಾ ರಶ್ಮಿ ಕೇಳುಗರ ಮನದಲ್ಲಿ ಬಲವಾಗಿ ಬೇರೂರಿದರು. ಸದಾ ಸ್ಟುಡಿಯೋಗೆ ಅಂಟಿಕೊಂಡು ಇನ್‌ ಹೌಸ್‌ ನಿರೂಪಕಿ ಆಗದೆ, ಹೊರಗಿನ ಜನರೊಂದಿಗೆ ಮನೆಮಗಳಂತೆ ಸಹಜವಾಗಿ ಬೆರೆತು, ಅವರೊಂದಿಗೆ ಮಾತಿನ ಮಳೆಗರೆದು, ನಕ್ಕುನಗಿಸಿ, ಹಲವು ರಸಪ್ರಶ್ನೆಗಳನ್ನು ಕೇಳುತ್ತಾ, ವಿವಿಧ ವಿನೋದಾವಳಿಯ ಹಾಸ್ಯ ಚಟಾಕಿ ಹಾರಿಸುತ್ತಾ…. ಮಾತಿನ ಮೂಲಕ ಮಳೆಯನ್ನೇ ಸುರಿಸುವರು ಈ ಮಾತಿನಮಲ್ಲಿ. ಹಾಗಾಗಿಯೇ `ಬ್ರಾಡ್‌ ಕಾಸ್ಟ್ ಬಂಡಿ’ ಕಾರ್ಯಕ್ರಮ ವಹಿಸುವವರಿಗೆ ಅನ್ವರ್ಥಕವಾಗಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬಂಡಿಯಂತೆ ಸಾಗುತ್ತಾ ರೋಡ್‌ ಶೋ ಕವರ್‌ ಮಾಡುತ್ತಿತ್ತು. ಹೀಗೆ ಅವರ ಕಾರ್ಯಕ್ರಮಗಳ ಪಟ್ಟಿ ಮುಂದುವರಿಯುತ್ತಾ, `ರಾಪಿಡ್‌ ಅಡ್ಡ, ಭಾರಿ ಬಿಂದಾಸ್‌’ ಇತ್ಯಾದಿಗಳೊಂದಿಗೆ ಆಕೆ ಹೆಚ್ಚಿನ ಜನಪ್ರಿಯತೆ ಪಡೆದರು. ಸಹಜವಾಗಿಯೇ ಈ ಚಿನಕುರುಳಿಯಂಥ ಮಾತುಗಳು ಈಕೆಗೆ `ರಾಪಿಡ್‌ ರಶ್ಮಿ’ ಎಂದು ಹೆಸರು ತಂದುಕೊಟ್ಟವು.

ಬೆಳ್ಳಿ ತೆರೆಯ ಬಂಗಾರದ ಹಾಡುಗಳನ್ನು ಪ್ರಸಾರ ಮಾಡುವ FM 92.7 ಸದಾ, `ಅಂದಿಗೂ ಹಿಟ್‌ ಎಂದೆಂದಿಗೂ ಹಿಟ್‌’  ಗೀತೆಗಳನ್ನಷ್ಟೇ ಕೇಳಿಸುತ್ತದೆ. ತನ್ನ ಚಾಕಚಕ್ಯತೆಯಿಂದ ಕಾರ್ಯಕ್ರಮಗಳನ್ನು ಅಮೋಘವಾಗಿ ನಿರೂಪಿಸುವ ರಾಪಿಡ್‌ ರಶ್ಮಿ, ಈಗ ಪ್ರತಿದಿನ ಮಧ್ಯಾಹ್ನ 1 ಗಂಟೆಯ `ರೆಟ್ರೋ ಸವಾರಿ’ ಕಾರ್ಯಕ್ರಮದ ಮೂಲಕ ಕೇಳುಗರ ಮನಗೆದ್ದಿದ್ದಾರೆ. ರಾಪಿಡ್‌ ರಶ್ಮಿ ಇಲ್ಲದೆ ರೆಟ್ರೋ ಸವಾರಿ ಇಲ್ಲ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಹೀಗೆ ಸೆಲೆಬ್ರಿಟಿ ಎನಿಸಿದ ರಶ್ಮಿ, ಯಾವುದೇ ಜನಪ್ರಿಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಅತಿ ಅನಿವಾರ್ಯ ಎನ್ನುವಂತಾಗಿಬಿಟ್ಟರು. ಕಲರ್ಸ್‌ ಕನ್ನಡ ವಾಹಿನಿ `ಡ್ಯಾನ್ಸಿಂಗ್‌ ಸ್ಟಾರ್ಸ್‌’ ಕಾರ್ಯಕ್ರಮ ಏರ್ಪಡಿಸಿದ್ದಾಗ, ಈಕೆಯ ಜನಪ್ರಿಯತೆ ಸತತ 8 ವಾರ ರಶ್ಮಿ ಅಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಸೃಜನ್ ಲೋಕೇಶ್‌ರ `ಮಜಾ ಟಾಕೀಸ್‌’ನಲ್ಲೂ ಸೆಲೆಬ್ರಿಟಿಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಾರ್ವಜನಿಕರ ಹಿತಾಸಕ್ತಿಗಾಗಿ ಬ್ರೆಸ್ಟ್ ಕ್ಯಾನ್ಸರ್‌ ಅವೇರ್‌ನೆಸ್‌ ಕ್ರಿಯೇಟ್‌ ಮಾಡಲು ರಾಷ್ಟ್ರೀಯ ಖ್ಯಾತಿವೆತ್ತ ಮಿಲಿಂದ್‌ ಸೋಮನ್‌ ಕಂಠೀರವ ಸ್ಟೇಡಿಯಂನಲ್ಲಿ 10 ಕಿ.ಮೀ. ಓಟದ `ಪಿಂಕಥಾನ್‌’ ಏರ್ಪಡಿಸಿದ್ದಾಗ, ರಾಪಿಡ್‌ ರಶ್ಮಿ ಅದಕ್ಕೆ ಮುಖ್ಯ ಮ್ಯಾಸ್ಕಾಟ್‌ ಆಗಿ, ಇಡೀ ಕಾರ್ಯಕ್ರಮದ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಅದನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

ಕಿರಣ್‌ ಮುಜುಮ್ ದಾರ್‌, ಅಶ್ವಿನಿ ನಾಚಪ್ಪ, ರಾವತ್‌ ಅಬ್ರಹಾಂ, ಪ್ರಿಯಾಂಕಾ ಉಪೇಂದ್ರ ಮುಂತಾದ ಪ್ರಮುಖ ಸೆಲೆಬ್ರಿಟಿಗಳು ಇದಕ್ಕೆ ಹಾಜರಿದ್ದರು.

ರಶ್ಮಿಯ ಜನಪ್ರಿಯತೆ ಮುಂದುವರಿದಂತೆ ಆಕೆ ಮುಂದೆ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಂತಸ ನೀಡಿದರು. ಪಯಣ, ಗಾನ ಬಜಾನಾ, ಕಾಳಿ ಇತ್ಯಾದಿ ಚಿತ್ರಗಳಲ್ಲಿ ಲಾ ಆಗಿಯೇ ಕಾಣಿಸಿಕೊಂಡ ರಶ್ಮಿ ಸಿನಿಮಾಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡರು. ಮುಂದೆ, ನಿರ್ದೇಶಕ ಪೀಣ್ಯ ನಾಗರಾಜ್‌ ಇವರನ್ನು ಸಂಪರ್ಕಿಸಿ ತಮ್ಮ `ನಮಕ್‌ ಹರಾಮ್’ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಆರಿಸಿದರು. ಗೋಲ್ಡನ್‌ ಸ್ಟಾರ್‌ ಗಣೇಶ್‌ ತಮ್ಮ ಮಹೇಶ್‌ ಈ ಚಿತ್ರದ ನಾಯಕ. ಇದೀಗ `-4′ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ರಶ್ಮಿಗಾಗಿ ಇನ್ನೂ ಹಲವಾರು ಚಿತ್ರಗಳು ಕಾದಿವೆ. ಅದರಲ್ಲಿ ಪಕ್ಕಾ ಚೂಸಿ ಆಗಿರುವ ರಶ್ಮಿ, ಒಳ್ಳೆಯ ಸ್ಕ್ರಿಪ್ಟ್ ಇದ್ದಾಗ ಮಾತ್ರ ಒಪ್ಪಿಕೊಳ್ಳುತ್ತಾರಂತೆ.

ಕಳೆದ ನವೆಂಬರ್‌ನಲ್ಲಿ ಗೃಹಶೋಭಾ ತನ್ನ ಓದುಗರಿಗಾಗಿ `ಐಟಿಸಿ ಆಶೀರ್ವಾದ್‌ ಮೇರಾ ವಾದಾ ಈವೆಂಟ್‌’ನ ಈ ವರ್ಷದ ಕೊನೆಯ ಕಾರ್ಯಕ್ರಮವನ್ನು ವಿಜಯನಗರದ ಕ್ಲಬ್‌ನಲ್ಲಿ ಏರ್ಪಡಿಸಿದ್ದಾಗ, ಅಲ್ಲಿಗೆ ಆಗಮಿಸಿದ್ದ ರಾಪಿಡ್‌ ರಶ್ಮಿ, 350ಕ್ಕೂ ಹೆಚ್ಚು ಮಂದಿಯಿದ್ದ  ಮಹಿಳಾ ಸಭಿಕರೊಂದಿಗೆ ಅತ್ಯಂತ ಆತ್ಮೀಯತೆಯಿಂದ ಸ್ಪಂದಿಸುತ್ತಾ, ಅವರನ್ನು ತಮ್ಮ ಚಿನಕುರುಳಿ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದರು. ಸಭಿಕರನ್ನು ಹಲವು ರಸಮಯ ಪ್ರಶ್ನೋತ್ತರಗಳಿಂದ ರಂಜಿಸಿ, ಅವರಿಗೆ ಬಹುಮಾನ ಹಂಚಿದರು. ಒಟ್ಟಾರೆ ರಾಪಿಡ್‌ ರಶ್ಮಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ಬಂದಿತ್ತು.

ಯಾವುದೇ ಹೊಸ ಕಾರ್ಯಕ್ರಮದ ಲಾಂಚ್‌, ಶೋಗಳಲ್ಲಿ ರೆಡ್‌ ಕಾರ್ಪೆಟ್‌ ವೆಲ್ ‌ಕಮ್ ಇರುವೆಡೆ ಸಹಜವಾಗಿ ಮುಂದಿರುವ ರಶ್ಮಿಗೆ ಗೃಹಶೋಭಾ ಓದುಗರೆಲ್ಲರ ಪರವಾಗಿ `ಆಲ್ ದಿ ಬೆಸ್ಟ್!’ ಅವರ ಎಲ್ಲಾ ಕನಸುಗಳೂ ನನಸಾಗಲಿ, FM 92.7ನ್ನು ತಮ್ಮ ಮಾತುಗಳಿಂದ ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸೋಣ.

ರಾಪಿಡ್‌ ರಶ್ಮಿಯನ್ನು ಸಂಪರ್ಕಿಸಲು : ಫೋನ್‌ – 080 -39890927. ವಾಟ್ಸ್ ಆ್ಯಪ್‌ : 7815027927

ಸಿಯಾಚಿನ್ ಸೈನಿಕರೊಂದಿಗಿನ ಸ್ವಾತಂತ್ರ್ಯ ಸಂಭ್ರಮ

ಬಿಗ್‌ ಕಾಫಿ’ ಕಾರ್ಯಕ್ರಮದ ಮೂಲಕ ಪಟ್‌ ಪಟ್‌ ಪಟಾಕಿ ಶೃತಿ FM 92.7 ರಿಂದ ಎಲ್ಲ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. 2008ರಲ್ಲಿ FM ಗೆ ಅಡಿಯಿಟ್ಟ ಶೃತಿ, ಇದಕ್ಕೂ ಮುಂಚೆ ಲಾ ಆಗಿ ಅನುಭವ ಹೊಂದಿದ್ದಾರೆ. ಡಾಕ್ಟರ್ ಲವ್, ಬೊಂಬಾಟ್‌ ಭಾಮಾ, ಫಿಲ್ಟರ್‌ ಕಾಫಿ, ಅರ್ಲಿ ಮಾರ್ನಿಂಗ್‌… ಈ ರೀತಿ ಶೃತಿ ನಡೆಸಿಕೊಡುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕೊನೆಯೇ ಇಲ್ಲ.

FM ಬಂದಾಗಿನಿಂದ ಬೆಳಗಿನ 7-11ರ ಪ್ರೈಮ್ ಟೈಮ್ ನಲ್ಲಿ ಇರ `ಬಿಗ್‌ ಕಾಫಿ’ ಇದೀಗ ಎಲ್ಲರ ಮನೆಮಾತು. 80ರ ದಶಕದ ಬೆಳ್ಳಿತೆರೆಯ ಬಂಗಾರದ ಹಾಡುಗಳನ್ನು ಈ ಮೂಲಕ  ಕನ್ನಡಿಗರ ಮನೆಮನಗಳಿಗೆ ತಲುಪಿಸುವ ಅಪ್ಪಟ ಕನ್ನಡದ FM ಅಂದಿಗೆ ಮಾತ್ರವಲ್ಲ, `ಎಂದೆಂದಿಗೂ ಹಿಟ್‌’ ಆಗಿರುವ ಹಾಡುಗಳನ್ನೇ ಪ್ರಸಾರ ಮಾಡುತ್ತದೆ ಎಂಬುದೊಂದು ಹೆಗ್ಗಳಿಕೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಎಂದಿಗಿಂತಲೂ ವರ್ಣಮಯವಾಗಿಸಲು FM ಕಾಶ್ಮೀರದ ಗಡಿಯಲ್ಲಿ ಹೊಸ ಯೋಜನೆ ರೂಪಿಸಿತು. ಚೈನಾ ಬಾರ್ಡರ್‌ನ, ಭಾರತ-ಪಾಕಿಸ್ತಾನವನ್ನು ಪ್ರತ್ಯೇಕಿಸುವ ಸಿಯಾಚಿನ್‌ ಪ್ರದೇಶ ಇದೆ. ನಮ್ಮ ನಿಮ್ಮಂಥ ಸಾಮಾನ್ಯ ನಾಗರಿಕರ ರಕ್ಷಣೆಗೆಂದೇ ಈ ಗಡಿ ಕಾಯುವ ವೀರ ಯೋಧರೊಂದಿಗೆ ಅತಿ ಸಂಭ್ರಮದಿಂದ ಶೃತಿ ತನ್ನ ಸಂಗಡಿಗರೊಂದಿಗೆ ಇಲ್ಲಿಗೆ ಬಂದು ಆಗಸ್ಟ್ 14 ಮತ್ತು 15 ರಂದು ಸಿಯಾಚಿನ್‌ನಿಂದ ನೇರ ಲೈವ್ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಪ್ರದೇಶ ಹಿಮಾಲಯದ ದಟ್ಟ ಕಣಿವೆಗಳ ಮಧ್ಯೆ, ಸಮುದ್ರ ಮಟ್ಟದಿಂದ ಸುಮಾರು 22 ಸಾವಿರ ಅಡಿಗಳಿಗೂ ಹೆಚ್ಚು ಎತ್ತರದಲ್ಲಿದೆ! ವೇಲಡಖ್‌ ಪ್ರದೇಶ 11,300 ಹಾಗೂ ಕಾರ್ಗಿಲ್ ‌ಟಾಪ್‌ 18,300 ಅಡಿಗಳು ಎಂದಾಗ ಈ ಪ್ರದೇಶದ ಅಗಾಧತೆ ಊಹಿಸಿಕೊಳ್ಳಬಹುದು. ಇಲ್ಲಿನ ಉಷ್ಣಾಂಶ 600! ಮಂಜಿನ  ಕೊರೆತ, ಚಳಿಯ ತೀವ್ರತೆಯನ್ನು ಶಬ್ದಗಳಲ್ಲಿ  ವರ್ಣಿಸಲಾಗದು.  ಇಡೀ ವಿಶ್ವದಲ್ಲೇ ಇದು ಅತಿ ಎತ್ತರದ ರಣ ಕ್ಷೇತ್ರ ಎನಿಸಿದೆ. ಮತ್ತೊಂದು ಮುಖ್ಯ ವಿಷಯವೆಂದರೆ ಸಾಮಾನ್ಯ ನಾಗರಿಕರಿಗೆ ಈ ಪ್ರದೇಶದಲ್ಲಿ ಸಂಚರಿಸಲು ಅನುಮತಿ ಇಲ್ಲ. ಇಂಥ ದುರ್ಗಮ ಕ್ಷೇತ್ರವನ್ನು FM ತಂಡ ತಮ್ಮ `ಬಿಗ್‌ ಪೈಗಾಮ್’ ಅಲಿಯಾಸ್‌`ನಮ್ಮ ಧೀರರ ಬಿಗ್‌ ಸಂದೇಶ’ ಕಾರ್ಯಕ್ರಮಕ್ಕಾಗಿ, ದೇಶದ ಗಡಿಕಾಯ್ದು ನಾಗರಿಕರ ಬೆಂಗಾವಲಿಗಾಗಿ ಸದಾ ಚಳಿ, ಮಳೆ, ಗಾಳಿಗಳಿಗೆ ಎದೆಯೊಡ್ಡಿ ನಿಂತ ಧೀರ ಸೈನಿಕರೊಂದಿಗೆ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಒಂದು ವಿನೂತನ ಯೋಜನೆ ರೂಪಿಸಿ, ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಇಡೀ ದಿನ ಹಲವು ರಸಮಯ ಕಾರ್ಯಕ್ರಮವನ್ನು ರೂಪಿಸಿ, ದೇಶವಿಡೀ FMನ ಎಲ್ಲಾ ಶ್ರೋತೃಗಳೂ ಆಯಾ ಭಾಷೆಯಲ್ಲಿ ಈ ಸೈನಿಕರ ಮನದಾಳದ ಮಾತುಗಳನ್ನು ಕೇಳುವಂತೆ ಮಾಡಿತು. ಚೆನ್ನೈ, ದೆಹಲಿ, ಚಂಡೀಗಢದಿಂದ ಮೂರು ಪುರುಷರೊಂದಿಗೆ ಏಕೈಕ ಮಹಿಳಾ ಲಾ ಆಗಿ ಹೊರಟ ಕನ್ನಡತಿ ಶೃತಿ, ಸಿಯಾಚಿನ್‌ಸೈನಿಕರೊಂದಿಗೆ ಅವರ ಅನುಭವಗಳನ್ನು ತುಂಬು ಮನದಿಂದ ಹಂಚಿಕೊಂಡರು.

image4-1

ಇದಕ್ಕಾಗಿ ಶೃತಿ ಕಾರ್ಯಕ್ರಮದ ಕುರಿತು ಹಿಂದೆಯೇ ಅನೌನ್ಸ್ ಮಾಡಿದಾಗ, ಬೆಂಗಳೂರಿನ ಸಾವಿರಾರು ಶ್ರೋತೃಗಳು ಸೈನಿಕರಿಗೆ ತಮ್ಮ ತುಂಬು ಮನದ ಶುಭಾಶಯ ಕೋರಿದರು. ಅಂಧ ಹೆಣ್ಣುಮಕ್ಕಳ `ಪ್ರೇರಣಾ’ ಹಾಗೂ ಕೊಳಗೇರಿಯ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಅಶ್ವಿನಿ ಚ್ಯಾರಿಟೆಬಲ್ ಟ್ರಸ್ಟ್ ಸಂಸ್ಥೆ ವೈವಿಧ್ಯಮಯ ಗ್ರೀಟಿಂಗ್‌ ಕಾರ್ಡ್ಸ್ ಕಳುಹಿಸಿ ಕೊಟ್ಟಿದ್ದರು. ಜೊತೆಗೆ ನೂರಾರು ಮಾಜಿ ಸೈನಿಕರು ಇವರಿಗಾಗಿ ಸ್ವೀಟ್ಸ್, ಉಡುಗೊರೆಗಳನ್ನು ಕೊಟ್ಟು ಕಳುಹಿಸಿದ್ದರು. ಅಲ್ಲಿನ ಸೈನಿಕರು ಸಿಯಾಚಿನ್‌ನಂಥ ಗಿರಿಶಿಖರದ ತುದಿಯಲ್ಲಿ ತಾವು ಪಡುವ ಬವಣೆಗಳ ಕುರಿತು ಹಂಚಿಕೊಂಡರು. ಕಳೆದ 1-2 ವರ್ಷಗಳಿಂದ ಒಮ್ಮೆಯೂ ರಜೆ ಪಡೆದು ಮನೆಗೆ ಮರಳಲಾಗದೆ, ಮನೆಯವರನ್ನೆಲ್ಲ ಮತ್ತೆ ಮತ್ತೆ ನೆನೆದು ಕಂಬನಿ ಮಿಡಿದರು. ದೇಶದ ರಕ್ಷಣೆ, ತಾಯ್ನಾಡಿಗಾಗಿ ಸದಾ ಜಾಗೃತರಾಗಿದ್ದು, ಶತ್ರು ದಾಳಿ ಆಗದಂತೆ ಕಣ್ಣಿಗೆ ಎಣ್ಣೆ ಹಾಕಿಕೊಂಡು, ಸರ್ಪಗಾವಲು ಕಾಯಬೇಕಾದ ವಿಧಿ ವಿಧಾನಗಳನ್ನು ಹಂಚಿಕೊಂಡರು. ಅಂಥ ಸಾವಿರಾರು ಸೈನಿಕರು ಹಗಲಿರುಳೆನ್ನದೆ ತಾಯ್ನಾಡಿಗಾಗಿ ಹೀಗೆ ದುಡಿದಾಗ ಮಾತ್ರ ನಮ್ಮಂಥ ಜನ ಸುಖವಾಗಿರಲು ಸಾಧ್ಯ ಎಂಬುದು ಎಷ್ಟು ವಾಸ್ತವ! ಅವರೊಂದಿಗೆ FM ನಡೆಸಿದ ಕಾರ್ಯಕ್ರಮದಲ್ಲಿ ಈ ಯೋಧರು, ದೇಶಭಕ್ತಿ  ಹೆಚ್ಚಿಸುವ ಗೀತೆಗಳನ್ನು ಹೃದಯ ತುಂಬಿ ಹಾಡಿದರು. ಅವರ ಮೆಚ್ಚಿನ ಹಾಡುಗಳನ್ನು ಲೈವ್ ‌ಕಾರ್ಯಕ್ರಮದಲ್ಲಿ ಇಡೀ ದಿನ ಬಿತ್ತರಿಸಲಾಯಿತು. ಅನಿಲ್ ಕುಮಾರ್‌, ದುಂಡಯ್ಯ, ಪ್ರಶಾಂತ್‌ ಕುಮಾರ್‌ರಂಥ ಕನ್ನಡದ ಸೈನಿಕರು `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು,’ `ನಾದಮಯ… ಈ ಲೋಕವೆಲ್ಲ,’ `ಯುಗ ಯುಗಗಳೇ ಸಾಗಲಿ…’ ಮುಂತಾದ ತಮ್ಮ ನೆಚ್ಚಿನ ಗೀತೆಗಳನ್ನು ಪ್ರಸಾರ ಮಾಡುವಂತೆ ಕೋರಿದರು. ಈ ಕಾರ್ಯಕ್ರಮ ದೇಶವಿಡೀ ಅತಿ ಯಶಸ್ವಿ ಎನಿಸಿತು. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾದಂಥ ಮಹಾನಗರಗಳಲ್ಲಿ ಎಲ್ಲಾ ನಾಗರಿಕರೂ ತೀವ್ರವಾಗಿ ಲೈವ್‌ ಕಾರ್ಯಕ್ರಮದಲ್ಲಿ ಸ್ಪಂದಿಸಿದರು. ಉಪೇಂದ್ರ, ಅಮಿತಾಬ್ ಬಚ್ಚನ್‌ರಂಥ ತಾರೆಯರು ಈ ಸೈನಿಕರಿಗಾಗಿ `ಸೆಲ್ಯೂಟ್‌ ಸೆಲ್ಛಿ’ ಫೋಟೋ ಕಳುಹಿಸಿದ್ದು ವಿಶೇಷ.

ಅನ್ ಲಿಮಿಟೆಡ್ ಕಥೆ, ಲೇಖನ ಓದಲುಸಬ್ ಸ್ಕ್ರೈಬ್ ಮಾಡಿ