ನಮ್ಮ ಪಚನತಂತ್ರ ಸರಿಯಾಗಿ ಕೆಲಸ ಮಾಡದಿದ್ದರೆ, ಅಜೀರ್ಣದ ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗಿ ಈ ಅಜೀರ್ಣ ಸಮಸ್ಯೆ ಕಾಡಲು ಹಲವು ರೋಗಗಳು, ಜೀವನಶೈಲಿಗೆ ಸಂಬಂಧಿಸಿದ ಪ್ರಕ್ರಿಯೆಗಳೇ ಕಾರಣ. ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳ ಲಕ್ಷಣಗಳು ಈ ತರಹ ಇರುತ್ತವೆ.

ಹೊಟ್ಟೆ ಉಬ್ಬರ, ಗ್ಯಾಸ್‌, ಮಲಬದ್ಧತೆ, ಡಯೇರಿಯಾ, ವಾಂತಿ, ಎದೆಯಲ್ಲಿ ಉರಿ ಇತ್ಯಾದಿ. ಪಚನತಂತ್ರಕ್ಕೆ ಪೂರಕ ಆಹಾರ

ಸಿಪ್ಪೆ ಸಹಿತ ಬಳಸಬೇಕಾದ ತರಕಾರಿ : ತರಕಾರಿಗಳಲ್ಲಿ ನಾರಿನಂಶ ಹೇರಳವಾಗಿ ತುಂಬಿರುತ್ತದೆ, ಇದು ಪಚನಕ್ಕೆ ಬಲು ಮಹತ್ವಪೂರ್ಣ. ನಾರಿನಂಶ ಮಲಬದ್ಧತೆಯ ನಿವಾರಣೆಗೆ ರಾಮಬಾಣ. ತರಕಾರಿಗಳ ಸಿಪ್ಪೆಗಳಲ್ಲಿ ನಾರಿನಂಶ ಹೇರಳವಾಗಿರುವುದರಿಂದ, ನಾವು ತರಕಾರಿಯ ಪೂರ್ತಿ ಭಾಗ ಸೇವಿಸಬೇಕು. ಆಲೂ, ಸೋರೆ, ಕ್ಯಾರೆಟ್‌, ಸೌತೆ…… ಇತ್ಯಾದಿ ಯಾವುದೇ ತರಕಾರಿ ಇರಲಿ, ಅದರ ಸಿಪ್ಪೆ ಹೆರೆದು ಎಸೆಯದೆ ಇಡಿಯಾಗಿ ಅಡುಗೆಗೆ ಬಳಸಿ.

ಹಣ್ಣು : ಹಾಗೆಯೇ ಹಣ್ಣುಗಳಲ್ಲಿಯೂ ಫೈಬರ್‌ ಧಾರಾಳ ಅಡಗಿದೆ. ಇದರಲ್ಲಿ ವಿಟಮಿನ್ಸ್, ಮಿನರಲ್ಸ್ ಸಹ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಉದಾ: ವಿಟಮಿನ್‌|, ಪೊಟ್ಯಾಶಿಯಂ ಇತ್ಯಾದಿ. ಹೀಗಾಗಿ ಸೇಬು, ಕಿತ್ತಳೆಹಣ್ಣು, ಬಾಳೆಹಣ್ಣು ಪಚನಕ್ರಿಯೆಗೆ ಸಹಕಾರಿ.

ಇಡಿಯಾದ ಧಾನ್ಯಸಹಿತ ಆಹಾರ ಸೇವನೆ : ಇಡಿಯಾದ ಧಾನ್ಯ ಸಹಿತ ಸಾಲ್ಯುಬ್‌ ಇನ್‌ ಸಾಲ್ಯುಬ್‌ ಫೈಬರ್‌ನ ಮೂಲಸ್ರೋತ. ಸಾಲ್ಯುಬ್‌ ಫೈಬರ್‌ ದೊಡ್ಡ ಕರುಳಿನಲ್ಲಿ ಜೆಲ್‌ನಂಥ ಪದಾರ್ಥ ಉಂಟು ಮಾಡುತ್ತದೆ, ಇದರಿಂದ ಹೊಟ್ಟೆ ತುಂಬಿರುವಂತೆ ತೃಪ್ತಿ ಇರುತ್ತದೆ. ಇದರಿಂದಾಗಿ ದೇಹದಲ್ಲಿ ಆಂತರಿಕವಾಗಿ ಗ್ಲೂಕೋಸ್‌ ಕ್ರಮೇಣ ವಿಲೀನಗೊಳ್ಳುತ್ತಿರುತ್ತದೆ. ಇನ್‌ಸಾಲ್ಯುಬ್‌ ಫೈಬರ್ ಮಲಬದ್ಧತೆಯಿಂದ ಪಾರಾಗಲು ನೆರವಾಗುತ್ತದೆ.

ಫೈಬರ್‌ ಪಚನಕ್ರಿಯೆಗೆ ನೆರವಾಗುವ ಗುಡ್‌ ಬ್ಯಾಕ್ಟೀರಿಯಾ ನೀಡಿ ಪೋಷಿಸುತ್ತದೆ.

ಧಾರಾಳ ದ್ರವಾಹಾರ ಸೇವನೆ ಮಾಡಿ : ನಮ್ಮ ಚರ್ಮವನ್ನು ಸದಾ ನಳನಳಿಸುವಂತೆ ಇರಿಸಲು ಇಮ್ಯೂನಿಟಿ, ಶಕ್ತಿ ವರ್ಧಿಸಲು ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಪಚನಕ್ರಿಯೆ ಸಲೀಸಾಗಲು ನೀರೇ ಆಧಾರ. ಯಾವ ರೀತಿ ನಮ್ಮ ಪಚನತಂತ್ರದಲ್ಲಿ ಬ್ಯಾಕ್ಟೀರಿಯಾ ಇರಬೇಕಾದುದು ಅನಿವಾರ್ಯವೇ, ಅದೇ ರೀತಿ ಆಗಾಗ ದ್ರವಾಹಾರ ಸೇವನೆ ಅತ್ಯಗತ್ಯ.

ಶುಂಠಿ : ಇದು ಪಚನಕ್ರಿಯೆಯ ಎಲ್ಲಾ ಸಮಸ್ಯೆಗಳಿಂದ ಅಂದ್ರೆ ಹೊಟ್ಟೆ ಉಬ್ಬರ, ತೊಳೆಸುವಿಕೆ ಇತ್ಯಾದಿಗಳಿಂದ ಮುಕ್ತಿ ನೀಡುತ್ತದೆ. ಹಸಿ ಶುಂಠಿ ಲಭಿಸದಿದ್ದಾಗ ಒಣಶುಂಠಿ ಬಳಸುವುದು ಲೇಸು. ಈ ಮಸಾಲೆ ನಮ್ಮ ಆಹಾರಕ್ಕೆ ಉತ್ತಮ ಮಸಾಲೆಗಳಲ್ಲಿ ಒಂದು, ಹೆಚ್ಚಿನ ರುಚಿ ನೀಡುತ್ತದೆ. ಇದರ ಬಳಕೆ ಟೀ ತಯಾರಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸದಾ ಉತ್ತಮ ಗುಣಮಟ್ಟದ ರಸಭರಿತ ತಾಜಾ ಹಸಿಶುಂಠಿಯನ್ನೇ ಬಳಸಿರಿ.

ಅರಿಶಿನ : ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ ಅರಿಶಿನ ಆ್ಯಂಟಿ ಇನ್‌ಫ್ಲಮೇಟರಿಯ ಭಂಡಾರ. ಇದು ಆ್ಯಂಟಿ ಕ್ಯಾನ್ಸರ್‌ ಸಹ ಹೌದು. ಇದರಲ್ಲಿ ಕರ್ಕ್ಯುಮಿನ್‌ ಪಚನತಂತ್ರದ ಒಳಭಾಗವನ್ನು ಸುರಕ್ಷಿತವಾಗಿಡುತ್ತದೆ, ಉತ್ತಮ ಬ್ಯಾಕ್ಟೀರಿಯಾ ವೃದ್ಧಿಸಲು ಅನುಕೂಲ ಮಾಡುತ್ತದೆ. ಬೊವೆಲ್ ‌ರೋಗ, ಕೊಲೆಸ್ಟ್ರಾಲ್ ನಿಯಂತ್ರಣ, ಕೊಲೊರೆಕ್ಟ್‌ ಕ್ಯಾನ್ಸರ್‌ ನಿವಾರಣೆಗೆ ಬಲು ಹಿತಕಾರಿ.

ಯೋಗರ್ಟ್‌ : ಇದರಲ್ಲಿ ಅಧಿಕ ಪ್ರೊಬಯೋಟಿಕ್ಸ್ ತುಂಬಿರುತ್ತದೆ. ಇದು ಲೈವ್ ‌ಬ್ಯಾಕ್ಟೀರಿಯಾ, ಯೀಸ್ಟ್ ಗಳಿಗೆ ಅತಿ ಪೂರಕ. ನಮ್ಮ ಪಚನತಂತ್ರಕ್ಕೆ ಬಲು ಲಾಭಕಾರಿ.

ಅಸಂತೃಪ್ತ ಕೊಬ್ಬು : ಈ ತರಹದ ಕೊಬ್ಬು ದೇಹಕ್ಕೆ ಬೇಕಾದ ವಿಟಮಿನ್ಸ್ ನ್ನು ವಿಲೀನಗೊಳಿಸುವಲ್ಲಿ ನೆರವಾಗುತ್ತದೆ. ಇದರ ಜೊತೆ ಫೈಬರ್‌ ಆಹಾರ ಪಚನಗೊಳ್ಳಲು ಸುಲಭ ಮಾಡುತ್ತದೆ. ಸಸ್ಯಮೂಲ ಎಣ್ಣೆ, ಉದಾ: ಹಿಪ್ಪೆ ಎಣ್ಣೆ ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ನ ಉತ್ತಮ ಸ್ರೋತ. ಆದರೆ ಈ ಕೊಬ್ಬಿನ ಪ್ರಮಾಣವನ್ನು ಸದಾ ಸೂಕ್ತ ರೀತಿಯಲ್ಲೇ ಬಳಸಿಕೊಳ್ಳಬೇಕು. ಒಬ್ಬ ವಯಸ್ಕ ವ್ಯಕ್ತಿಗೆ ಪ್ರತಿದಿನದ ಆಹಾರದಲ್ಲಿ 2 ಸಾವಿರ ಕ್ಯಾಲೋರಿಯ ಅಗತ್ಯವಿರುತ್ತದೆ. ಇದರಲ್ಲಿ ಕೊಬ್ಬಿನ ಪ್ರಮಾಣ 77 ಗ್ರಾಂಗಿಂತ ಹೆಚ್ಚಿರಬಾರದು.

ಏನನ್ನು ಸೇವಿಸಬಾರದು?

ಕೆಲವು ಆಹಾರ, ಪೇಯ ಪದಾರ್ಥಗಳ ಕಾರಣ ಹೊಟ್ಟೆ ಉಬ್ಬರ, ಎದೆಯಲ್ಲಿ ಉರಿ, ಡಯೇರಿಯಾದಂಥ ರೋಗ ಬರುತ್ತದೆ. ಉದಾಹರಣೆಗಾಗಿ ಜಿಡ್ಡು/ ಕೊಬ್ಬು ತುಂಬಿದ ಆಹಾರ : ಆದಷ್ಟೂ ಹುರಿದ, ಕರಿದ, ಅಧಿಕ ಮಸಾಲೆ ಭರಿತ ಆಹಾರ ಸೇವನೆ ಮಾಡದಿರಿ. ಏಕೆಂದರೆ ಇದು ನಿಮ್ಮ ಪಚನಕ್ರಿಯೆಗೆ ಹಲವು ಸಮಸ್ಯೆ ತಂದೊಡ್ಡುತ್ತದೆ. ಇಂಥ ಆಹಾರ ಜೀರ್ಣವಾಗಲು ಅಧಿಕ ಸಮಯ ಹಿಡಿಯುತ್ತದೆ. ಈ ಕಾರಣ ಮಲಬದ್ಧತೆ, ಡಯೇರಿಯಾ, ಹೊಟ್ಟೆ ಉಬ್ಬರ ಮುಂತಾದವು ಬರುತ್ತವ.

ಮಸಾಲೆಯುಕ್ತ ಆಹಾರ : ಅಧಿಕ ಮಸಾಲೆ ತುಂಬಿದ ಆಹಾರ ಸೇವನೆಯಿಂದ ಹೊಟ್ಟೆಯಲ್ಲಿ ನೋವು, ಉರಿ, ಮಲ ವಿಸರ್ಜನೆಯಲ್ಲಿ ಅಡಚಣೆ ಇತ್ಯಾದಿ ಹಿಂಸೆ ಆಗಬಹುದು.

ಪ್ರೋಸೆಸ್ಡ್ ಫುಡ್‌ : ನಿಮಗೆ ಅಜೀರ್ಣದ ಸಮಸ್ಯೆ ಇದ್ದರೆ, ಪ್ರೋಸೆಸ್ಡ್ ಆಹಾರ ಪದಾರ್ಥ ಸೇವಿಸಲೇಬೇಡಿ. ಈ ತರಹದ ಆಹಾರದಲ್ಲಿ ಫೈಬರ್‌ ಅತಿ ಕನಿಷ್ಠ, ಕೃತಕ ಸಕ್ಕರೆ, ಬಣ್ಣ, ಉಪ್ಪು, ಪ್ರಿಸರ್ವೇಟಿವ್ಸ್ ಧಾರಾಳ ತುಂಬಿರುತ್ತವೆ. ಹೀಗಾಗಿ ಇದು ನಿಮ್ಮ ಅಜೀರ್ಣದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಇಂಥ ಆಹಾರ ಜೀರ್ಣವಾಗಲು ದೇಹದ ಆಂತರಿಕ ಭಾಗ ಹೆಚ್ಚು ಕಷ್ಟಪಡಬೇಕು, ಅದರಿಂದ ಮಲಬದ್ಧತೆ ತಪ್ಪಿದ್ದಲ್ಲ.

ರೀಫೈಂಡ್‌ ಶುಗರ್‌ : ಬಿಳಿ ರೀಫೈಂಡ್‌ ಸಕ್ಕರೆ ಇನ್‌ಫ್ಲಮೇಟರಿ ಕೆಮಿಕಲ್ಸ್ ಹೆಚ್ಚಿಸುತ್ತದೆ ಹಾಗೂ ಪಚನತಂತ್ರದಲ್ಲಿ ಡಿಸ್‌ಬಯೋಪಿಕ್‌ ಹೆಚ್ಚಲು ಕಾರಣವಾಗುತ್ತದೆ. ಇದರಿಂದಾಗಿ ಪಚನತಂತ್ರದಲ್ಲಿ ಬ್ಯಾಕ್ಟೀರಿಯಾದ ಬ್ಯಾಲೆನ್ಸ್ ತಪ್ಪುತ್ತದೆ. ಇಂಥ ಸಕ್ಕರೆ ಹಾನಿಕಾರಕ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ.

ಮದ್ಯ : ಇದರ ಸೇವನೆಯಿಂದ ಡೀಹೈಡ್ರೇಶನ್‌ ಹೆಚ್ಚುತ್ತದೆ. ಇದು ಮಲಬದ್ಧತೆ, ಹೊಟ್ಟೆ ಉಬ್ಬರಕ್ಕೆ ಮೂಲಕಾರಣ. ಇದು ಹೊಟ್ಟೆ ಮತ್ತು ಪಚನತಂತ್ರಕ್ಕೆ ಬಲು ಹಾನಿಕರ. ಲಿವರ್‌ನ್ನು ಹಾನಿಗೊಳಿಸುತ್ತಾ ಸುಡಲೂಬಹುದು. ಮದ್ಯ ಅಸಿಡಿಕ್‌ ಆಗಿದ್ದು, ಹೊಟ್ಟೆ ಕರುಳಿನ ಭಾಗಕ್ಕೆ ಅತ್ಯಧಿಕ ಹಾನಿ ಮಾಡುತ್ತದೆ.

ಕೆಫಿನ್‌ : ಇದು ಕಾಫಿ, ಟೀ, ಚಾಕಲೇಟ್‌, ಸಾಫ್ಟ್ ಡ್ರಿಂಕ್ಸ್, ಎನರ್ಜಿ ಡ್ರಿಂಕ್‌, ಬೇಕ್ಡ್ ಫುಡ್‌, ಐಸ್‌ಕ್ರೀಂಗಳಲ್ಲಿ ಧಾರಾಳ ಇರುತ್ತದೆ. ಇದು ಪಚನಕ್ರಿಯೆ ಚಲನೆಯನ್ನು ಅತಿ ವೇಗಗೊಳಿಸುತ್ತದೆ. ಇದರಿಂದ ಹೊಟ್ಟೆ ಬೇಗ ಖಾಲಿ ಆದಂತೆನಿಸುತ್ತದೆ. ಇದರಿಂದ ಹೊಟ್ಟೆನೋವು, ಡಯೇರಿಯಾದಂಥ ಸಮಸ್ಯೆಗಳು ತಪ್ಪಿದ್ದಲ್ಲ.

ಕಾರ್ಬೊನೇಟೆಡ್‌ ಪೇಯ : ಇದರಲ್ಲಿ ತುಂಬಿರುವ ಗ್ಯಾಸ್‌ ಹೊಟ್ಟೆ ಉಬ್ಬರದಂಥ ಸಮಸ್ಯೆಗೆ ಮೂಲ. ಇದರ ಪರಿಣಾಮ ಹೊಟ್ಟೆಯ ಆತಂರಿಕ ಭಾಗದ ಮೇಲೆ ಅತ್ಯಧಿಕ ಆಗುತ್ತದೆ. ಜೊತೆಗೆ ಇಂಥ ಪೇಯಗಳಲ್ಲಿ ಸಕ್ಕರೆ ಅತ್ಯಧಿಕ ಇರುತ್ತದೆ, ಅದು ಪಚನದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಎಲೆಕ್ಟ್ರೊಲೈಟ್ಸ್ ನ್ನು ನಾಶ ಮಾಡುತ್ತದೆ. ಇದರಿಂದ ದೇಹ ಡೀಹೈಡ್ರೇಟ್ ಆಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ