ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವಂತೆ ನಾವಿಬ್ಬರು ನಮಗಿಬ್ಬರು ಎಂಬು ಮುದ್ದಾದ ಸಂಸಾರವಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಸ್ವಲ್ಪ ಹೊಲ ಗದ್ದೆಯಲ್ಲೇ ಮಳೆಯಾಧಾರಿತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗಳು ಹತ್ತನೇ ತರಗತಿಯಲ್ಲಿ ಇಂಗ್ಲೀಶ್, ಗಣಿತದಲ್ಲಿ ಫೇಲ್ ಆಗಿ ಮುಂದೆ ಓದಲಾರೆ ಎಂದಾಗ ಮಗಳನ್ನು ಬಲವಂತ ಮಾಡದೇ, ಮನೆಯಲ್ಲೇ ಹಾಡು ಹಸೆ, ಆಡುಗೆ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಕಲಿಸಿ ವಯಸ್ಸು 18 ಆಗುತ್ತಿದ್ದಂತೆಯೇ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹೆಂಡತಿಯ ಕೋರಿಕೆಯ ಮೇರೆಗೆ ಇರುವ ಒಬ್ಬಳೇ ಮಗಳ ಮದುವೆಯನ್ನು ಹತ್ತಿರದ ಪಟ್ಟಣದಲ್ಲಿ ತನ್ನ ಶಕ್ತಿ ಮೀರಿ ಸ್ವಲ್ಪ ಸಾಲವನ್ನೂ ಮಾಡಿ ಅದ್ದೂರಿಯಿಂದ ಮಾಡಿದ್ದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಮಗಳ ಮದುಗೆಂದು ಮಾಡಿದ್ದ ಸಾಲವನ್ನು ತೀರಿಸಲು ಸಲುವಾಗಿ ತನ್ನ ಹೊಲವಲ್ಲದೇ ಅಕ್ಕ ಪಕ್ಕದ ತೋಟದಲ್ಲೂ ಅಡಿಕೆ, ಕಾಯಿ ಕೀಳಲು ಹೋಗುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಿದ್ದ. ಇನ್ನು ರಮೇಶನ ಹೆಂಡತಿಯೂ ಸಹಾ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರಿತು ಸುಮ್ಮನೇ ಮನೆಯಲ್ಲಿ ಕೂರದೇ, ಹತ್ತಿರದ ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸಮಾಡುತ್ತಿದ್ದಳು.

ತಾವು ಪಡುತ್ತಿರುವ ಕಷ್ಟವನ್ನು ತಮ್ಮ ಮಗ ಮಹೇಶನಿಗೆ ಬರಬಾರದೆಂದು ಬಾಲ್ಯದಿಂದಲೂ ಆತನಿಗೆ ಸಾಧ್ಯವಾದಷ್ಟೂ ಸೌಲಭ್ಯಗಳನ್ನು ನೀಡಿ ತಮ್ಮೂರಿನಲೇ ಇದ್ದ ಶಾಲೆಯಲ್ಲಿ ಓದಿಸುತ್ತಿದ್ದ. ಆರ್ಥಿಕವಾಗಿ ಬಡವರಾಗಿದ್ದರೂ, ಬೌದ್ಧಿಕವಾಗಿ ಶ್ರೀಮಂತರಾಗಿದ್ದ ಕಾರಣ ಮಹೇಶ ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿಯೇ ಇದ್ದು ಓಹೋ ಎನ್ನಲಾಗದಿದ್ದರೂ, ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆಯುತ್ತಿದ್ದ. ಅದೇ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಆಸ್ತಕ್ತಿಯಿಂದ ಭಾಗವಹಿಸಿ ನಾಲ್ಕಾರು ಬಹುಮಾನಗಳನ್ನು ಗಳಿಸಿದ್ದ ಕಾರಣ ತನ್ನ ಶಾಲೆಯ ಶಿಕ್ಷಕವೃಂದದವರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.

ಹೀಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರತಿ ಬಾರಿ ಪಟ್ಟಣಗಳಿಗೆ ಹೋದಾಗಲೂ ಅಲ್ಲಿನ ಹೈಸ್ಕೂಲು ಹುಡುಗ ಹುಡುಗಿಯರು ಧರಿಸುತ್ತಿದ್ದ ಬಟ್ಟೆ ಬರೆಗಳು, ಕೈಯ್ಯಲ್ಲಿ ಹಿಡಿದಿರುತ್ತಿದ್ದ ಮೊಬೈಲ್ಲುಗಳು, ಶಾಲೆ ಬಿಟ್ಟ ನಂತರ ಶಾಲೆಯ ಪಕ್ಕದಲ್ಲೇ ಇರುತ್ತಿದ್ದ ಅಂಗಡಿ ಮತ್ತು ಹೋಟೇಲ್ಲುಗಳಲ್ಲಿ ತಮಗೆ ಬೇಕಾದದ್ದನ್ನು ತಿನ್ನುತ್ತಾ ಐಸ್ ಕ್ರೀಮ್ ಮೆಲ್ಲುತ್ತಾ ಹರಟುತ್ತಿದ್ದದ್ದು ಮಹೇಶನಿಗೆ ಅಚ್ಚರಿ ಮೂಡಿಸುತಿದ್ದದ್ದಲ್ಲದೇ, ತಾನೂ ಸಹಾ ಹೀಗೆ ಇಂತಹ ಪ್ರತಿಷ್ಠಿತ ಕಾಲೇಜಿನಲ್ಲೇ ಓದುತ್ತಾ ಐಶಾರಾಮ್ಯವಾದ ಜೀವನವನ್ನು ನಡೆಸಬೇಕು ಎಂದು ಕನಸು ಕಾಣುತ್ತಿದ್ದ.

ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರ ಬಂದಾಗ, ರಮೇಶ ದಂಪತಿಗಳು ತಮ್ಮ ಮಗನನ್ನು ಮತ್ತಷ್ಟು ಕಾಳಜಿಯಿಂದ ನೋಡಿ ಕೊಳ್ಳತೊಡಗಿದ್ದಲ್ಲದೇ ತಡರಾತ್ರಿಯಲ್ಲೂ ಅವನ ಓದಿಗೆ ಯಾವುದೇ ತೊಂದರೆಯಾಗದಂತೆ ಟೀ ಕಾಫೀ ಮಾಡಿಕೊಡುತ್ತಾ ಪರೀಕ್ಷೆಯ ದಿನ ರಮೇಶನೇ ತನ್ನದೇ ಟಿವಿಎಸ್-50 ಯಲ್ಲಿ ಮಹೇಶನನ್ನು ಕೂರಿಸಿಕೊಂಡು ಪರೀಕ್ಷೆಗೆ ಬಿಟ್ಟು ಬಂದಿದ್ದ. ಪರೀಕ್ಷೇಗಳೆಲ್ಲವೂ ಮುಗಿದು ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಮಗ ಮಹೇಶನಿಗಿಂತಲೂ ಅಪ್ಪಾ ರಮೇಶನಿಗೆ ಆತಂಕ ಹೆಚ್ಚಾಗಿತ್ತು.ಇತ್ತೀಚಿನ ದಿನಗಳಲ್ಲಿ ಫಲಿತಾಂಶವೆಲ್ಲವೂ ಬೆರಳ ತುದಿಯಲ್ಲಿ ಮೊಬೈಲ್ ಮುಖಾಂತರವೇ ನೋಡಬಹುದಾಗಿದ್ದರೂ, ರಮೇಶನ ಬಳಿ ಸಾಧಾರಣವಾದ ಮೊಬೈಲ್ ಇದ್ದ ಕಾರಣ, ಫಲಿತಾಂಶವನ್ನು ಶಾಲೆಯಲ್ಲೇ ನೋಡಲು ನಿರ್ಧರಿಸಿ ಆ ದಿನ ಬೆಳ್ಳಂಬೆಳಿಗ್ಗೆಯೇ ಅಪ್ಪಾ ಮಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ವಿಶೇಷವಾಗಿ ದೇವರಿಗೆ ಕೈ ಮುಗಿದು ಮಡದಿ ಕೊಟ್ಟ ತಿಂಡಿಯನ್ನು ತಿನ್ನುವಾಗಲೂ ಫಲಿತಾಂಶದ ದುಗುಡವೇ ಹೆಚ್ಚಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ