- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಪ್ರೊ. ಎಲ್ ವಿ ಶಾಂತಕುಮಾರಿ ಹಾಗೂ ಶತಾವಧಾನಿ ಡಾ. ಆರ್ ಗಣೇಶ್‍ಅವರಿಗೆ ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಅಶೋಕ ಹಾರನಹಳ್ಳಿಯವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಪ್ರೊ. ಎಲ್ ವಿ ಶಾಂತಕುಮಾರಿಯವರ ಎ ಲಿಟರರಿ ಲುಮಿನರಿ: ಕ್ರಿಟಿಕಲ್ ಅಪ್ರಿಸಿಯೇಷನ್ಸ್ ಆಫ್ ಎಸ್ ಎಲ್ ಭೈರಪ್ಪಾಸ್ ನಾವೆಲ್ಸ್ ಕೃತಿಯನ್ನೂ ಬಿಡುಗಡೆ ಮಾಡಲಾಯಿತು. ಹಾಗೂ ಶ್ರೀ ಶಶಿಕಿರಣ ಬಿ ಎನ್ ಅವರು ಅಭಿನಂದನಾ ಭಾಷಣ ಮಾಡಿದರು.

ಅನಕೃ ಪ್ರತಿಷ್ಠಾನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಕೃ ವಿಶ್ವಸ್ಥರಲ್ಲಿ ಒಬ್ಬರಾದ ಶ್ರೀ ಬಿ ವಿ ರಾಜಾರಾಂ, ಅನಕೃ ಅವರ ಮಗ ಶ್ರೀ ಗೌತಮ್‌ ಹಾಗೂ ಅನಕೃ ಕುಟುಂಬದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯನ್ನು ಅಲಂಕರಿಸಿದ್ದ ಎಲ್ಲರನ್ನೂ ಪರಿಚಯಿಸಿ ಸ್ವಾಗತಿಸಿ ಮಾತನಾಡಿದ ಶ್ರೀ ಬಿ ವಿ ರಾಜಾರಾಂ ಅವರು ನವೆಂಬರ್‌ ತಿಂಗಳ ಪುಸ್ತಕ ಜಾತ್ರೆಯಲ್ಲಿ ಅನಕೃ ಅವರನ್ನು ನೆನಪಿಸುತ್ತಿರುವುದು ಸಂತೋಷ ತಂದಿದೆ.  ನಮ್ಮ ಪೀಳಿಗೆಯವರಿಗೆ ಅನಕೃ ಪರಿಚಯವಿದ್ದರೂ, ಇಂದಿನ ಯುವ ಪೀಳಿಗೆಗೆ ಅವರನ್ನು ಪರಿಚಯಿಸುವ ಅಗತ್ಯವಿದೆ. ಪ್ರೊ. ಎಲ್ ವಿ ಶಾಂತಕುಮಾರಿಯವರು ಕನ್ನಡವನ್ನು ಇಂಗ್ಲಿಷ್‌ ಮೂಲಕ ಎಲ್ಲರಿಗೂ ತಲಪಿಸಿದವರು, ಕನ್ನಡದ ಚಿಂತನೆಯನ್ನು ಇಂಗ್ಲಿಷಿಗೆ ಅನುವಾದಿಸಿದವರು ಎಂದು ಹೇಳಿದರು. ಡಾ. ಆರ್ ಗಣೇಶ್‌ ಅವರನ್ನು ಪುರುಷ ಸರಸ್ವತಿ ಎನ್ನುವ ಅಭಿದಾನದಿಂದ ಕರೆಯಬಹುದು ಎಂದೂ ಬಣ್ಣಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದ ಶ್ರೀ ಬಿ ಎನ್ ‌ಶಶಿಕಿರಣ್‌ ಅವರು ಅಭಿನಂದನಾ ಮಾತುಗಳನ್ನಾಡುತ್ತ, ಪ್ರೊ. ಶಾಂತಕುಮಾರಿಯವರು ಸಹಜ ಮಾತೃವಾತ್ಸಲ್ಯದವರಾಗಿದ್ದು, ಆರ್ ಗಣೇಶ್‌ ಅವರಿಗೆ ತಾಯಿ ಸ್ಥಾನದಲ್ಲಿರುವವರು. ಇಂದು ತಾಯಿ, ಮಗನಿಗೆ ಒಂದೇ ಪ್ರಶಸ್ತಿ ದೊರಕಿದಂತಿದೆ. ಡಾ. ಆರ್‌ ಗಣೇಶ್‌ ಹಾಗೂ ಎಲ್ ವಿ ಶಾಂತಕುಮಾರಿ ಇವರಿಬ್ಬರೂ ತಾವು ಸಂತೋಷಪಟ್ಟು ಇತರರಿಗೂ ಸಂತೋಷವನ್ನು ಹಂಚುವುದರಲ್ಲಿ ಸಂತೋಷ ಕಾಣುವವರು. ಹಾಗೂ ಸರಳ ಜೀವನದ ಎಲ್ಲರಿಗೂ ಸುಲಭರು. ಶಾಂತಕುಮಾರಿ ಅವರು ಹೆಚ್ಚು ಪ್ರವಾಸ ಮಾಡದಿದ್ದರೂ ಮನೆಯ ಮುಂದಿನ ಹೊಂಗೆಯ ಮರ ಚಿಗುರುವುದನ್ನೇ ನೋಡಿ ಸಂತಸಪಡುತ್ತಾರೆ. ಆರ್‌ ಗಣೇಶ್‌ ಅವರು ಮರಗಿಡದ ವೈವಿಧ್ಯವನ್ನು ಗುರುತಿಸಿ, ಬೇರೆಯವರಿಗೆ ಹೇಳಿ ಸಂತೋಷಪಡುತ್ತಾರೆ. ತಮ್ಮ ಮಾತು, ಕೃತಿ ಎರಡರ ನಡುವೆ ಬಿರುಕಿಲ್ಲದೇ ಕೃತಿಯಂತೆ, ಮಾತಿನಂತೆ ಬದುಕುವ, ಮನೆಗೆ ಬಂದವರಿಗೆ ಅಡುಗೆ ಮಾಡಿಬಡಿಸಿ ಸಂತೋಷಪಡುವ ಸರಳ ಸಜ್ಜನರು. ಇವರ ಜೀವನ ಪ್ರೀತಿ, ಜೀವನೋತ್ಸಾಹ ಅನುಕರಣೀಯ.

ನೋಡಿದರೂ ಮನಸ್ಸು ಮುದಗೊಳ್ಳುವಂತಿರುವ 40ಕ್ಕೂ ಹೆಚ್ಚು ಕೃತಿ ಬರೆದ ಶಾಂತಕುಮಾರಿ ಅವರ ಸತ್ವ ಸೌಮ್ಯವಾದದ್ದು, ಪರಿಣಾಮಕಾರಿಯಾದದ್ದು. ತಂದೆ ಪುಸ್ತಕದ ಹುಚ್ಚನ್ನು ಹಚ್ಚಿಸಿದ್ದು, ಜೀವನದ ಸಂಧ್ಯೆಯಲ್ಲೂ ಅದು ಅವರ ಕೈ ಹಿಡಿದಿದೆ. ಮೊದಲು ಫಾರ್ಮಲ್‌ ಶಿಕ್ಷಣ ಹೆಚ್ಚಿರದಿದ್ದರೂ ಮಕ್ಕಳು ದೊಡ್ಡವರಾದ ಬಳಿಕ ಕುಟುಂಬದ ಹೊಣೆ ಹೊತ್ತುಕೊಂಡೇ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದು ಪ್ರೊಫೆಸರ್‌ ಆದ ಅವರು ವ್ಯಾಪ್ತಿಯುಳ್ಳ ಅನುವಾದಕರು. ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರ ಯಾವ ಕೆಲಸಕ್ಕೂ ಯಾರ ಪ್ರೇರಣೆಯನ್ನೂ ಬಯಸದೇ ಸ್ವ-ಪ್ರೇರಣೆಯಿಂದ ಬರೆದರು. ವಿಮರ್ಶೆಯಲ್ಲಿ ಔದಾರ್ಯವನ್ನು ಕಾಪಿಟ್ಟುಕೊಂಡ ಇವರು ಮಾಸ್ತಿಯವರನ್ನು ಹೋಲುತ್ತಾರೆ. ಎಲ್ಲೂ ಜಡ್ಜಮೆಂಟಲ್‌ ಆಗಿ ಕಾಣುವುದಿಲ್ಲ. ಮನೆಕೆಲಸದ ನಡುವೆಯೂ ಯಾವುದೇ ಕೆಲಸವನ್ನು ಅರ್ಧಮಾಡದೇ ಪೂರ್ಣಗೊಳಿಸುವ ಇವರು ಬರೆಯುವ ವಿಮರ್ಶೆಯಲ್ಲಿ ಅಬ್ಬರ ಅತಿ ಕಾಣುವುದಿಲ್ಲ. ಮೂಲಕೃತಿಯ ಆಶಯವನ್ನೇ ಬರೆಯುತ್ತಾರೆ. ಭೈರಪ್ಪನವರ ಕೃತಿಯ ವಿಮರ್ಶೆಯಲ್ಲೂ ಜೈ ಜೈ ಎನ್ನದೇ ಮೂಲ ಆಶಯವನ್ನಷ್ಟೇ ಬರೆದವರು ಶಾಂತಕುಮಾರಿಯವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಶಾಂತಕುಮಾರಿಯವರದ್ದು ಎಲ್ಲ ವಿಷಯದಲ್ಲೂ ಅಂಗೀಕಾರ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ