ಸುಶಿಕ್ಷಿತರಿರಬಹುದು, ಅನಕ್ಷರಸ್ಥರಾಗಿರಬಹುದು, ರಾಜಕಾರಣಿ ಇರಬಹುದು ಅಥವಾ ಉನ್ನತ ಅಧಿಕಾರಿ ಹೀಗೆ ಪ್ರತಿಯೊಬ್ಬರು ಅದೃಷ್ಟ, ಜ್ಯೋತಿಷ್ಯ, ಜಾತಕದ ಸುಳಿಗೆ ಸಿಲುಕಿ ಕರ್ತವ್ಯ ಪ್ರಧಾನ ಧೋರಣೆಯನ್ನು ಮಣ್ಣುಪಾಲು ಮಾಡುವಲ್ಲಿ ನಿರತರಾಗಿದ್ದಾರೆ. ಧರ್ಮಪುರಾಣ ಮತ್ತು ಗ್ರಂಥಗಳ ಆಶ್ರಯದಲ್ಲಿ ಅದೃಷ್ಟ ಮತ್ತು ಜ್ಯೋತಿಷ್ಯದ ಅಂಗಡಿಗಳು ಹೇಗೆ ವ್ಯಾಪಾರದಲ್ಲಿ ನಿರತವಾಗಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಕೆಲವು ಭಾರತೀಯ ವಿದ್ವಾಂಸರು ಜ್ಯೋತಿಷ್ಯವನ್ನು ವಿಜ್ಞಾನವೆಂದು ಭಾವಿಸುತ್ತಾರೆ ಹಾಗೂ ಇದನ್ನು ಸಾವಿರಾರು ವರ್ಷ ಪುರಾತನ ಎಂದು ಹೇಳುತ್ತಾರೆ. ಬ್ರಹ್ಮ ಜ್ಞಾನ ದೇವತೆ. ಈ ವಿದ್ಯೆ ಅಲ್ಲಿಂದಲೇ ಆರಂಭವಾಯಿತು. ಅದು ಭಾಸ್ಕರಾಚಾರ್ಯರನ್ನು ಕೂಡ ತಲುಪಿತು. ಭಾರತೀಯ ಜ್ಯೋತಿಷ್ಯ ತ್ರಿಕಾಲದರ್ಶಿಯಾಗಿದೆ. ಅದು ಭೂತ, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಹೇಳಬಲ್ಲರು.

ಟಿ.ವಿ. ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಹಾಗೂ ದಿನಪತ್ರಿಕೆಗಳಲ್ಲಿ ಬಹಳ ವರ್ಷಗಳಿಂದ ಪ್ರಕಟವಾಗುತ್ತಿರುವ `ರಾಶಿ ಫಲ,' `ಇಂದಿನ ಭವಿಷ್ಯ'ದಂತಹ ಕಾಲಂಗಳು ಬರುತ್ತಿವೆ. ಲಕ್ಷಾಂತರ ಸುಶಿಕ್ಷಿತ, ಅನಕ್ಷರಸ್ಥ, ಬಡವರು, ಶ್ರೀಮಂತರು, ಹಳ್ಳಿಯವರು ಹೀಗೆ ಎಲ್ಲರೂ ಜ್ಯೋತಿಷಿಗಳ ಆಸುಪಾಸು ತಿರುಗುತ್ತಿರುತ್ತಾರೆ.

ರಾಜಕಾರಣಿಗಳಿಂದ ಹಿಡಿದು ಸರ್ಕಾರಿ ನೌಕರರ ತನಕ ಬಹುತೇಕ ಜನರು ಹಲವು ಬಗೆಯ ಹರಳುಗಳ ಉಂಗುರಗಳನ್ನು ಧರಿಸಿರುವುದು ಕಂಡುಬರುತ್ತದೆ. ಅವರು ಕೂಡ  ತಾವು ಎಲ್ಲಿಗೆ ಹೋಗಬೇಕಾದರೂ ಜ್ಯೋತಿಷಿಗಳ ಸಲಹೆ ಕೇಳುತ್ತಾರೆ.

ಅಷ್ಟೇ ಅಲ್ಲ, ಜ್ಯೋತಿಷಿಯೊಬ್ಬನ ಪ್ರವೇಶ ಮಗು ಹುಟ್ಟಿದ ದಿನದಿಂದಲೇ ಶುರುವಾಗುತ್ತದೆ. ಆಗ ಮಗುವಿನ ಜಾತಕ ಬರೆಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಜಾತಕ ಬರೆಯುವ ಜ್ಯೋತಿಷಿಗಳ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚು.

ಕೆ.ಎನ್‌. ರಾವ್‌ಎಂಬ ಜ್ಯೋತಿಷಿಗಳಿದ್ದಾರೆ. ಅವರು ಜ್ಯೋತಿಷಿಗಳು ಹೇಳುವ ಬಹುತೇಕ ವಿಷಯವನ್ನು ಒಪ್ಪಲು ಹೋಗುವುದಿಲ್ಲ. `ಕಾಲಯೋಗ'ವನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ಆದರೆ ಜ್ಯೋತಿಷ್ಯ ಶಿಕ್ಷಣದ ಪರವಾಗಿದ್ದಾರೆ. ಭಾಜಪಾ ಮುಖಂಡರೊಬ್ಬರು ಜ್ಯೋತಿಷ್ಯ ವಿಷಯವನ್ನು ವಿಶ್ವವಿದ್ಯಾಲಯದಲ್ಲಿ ಅಳವಡಿಸಬೇಕೆಂಬುದರ ಕಟ್ಟಾ ಸಮರ್ಥಕರು. ವೈದಿಕ ಕಾಲದಿಂದ ಮುಂದುವರಿದುಕೊಂಡು ಬರುತ್ತಿರುವ ವಿದ್ಯೆ ಎಂದು ಹೇಳುತ್ತಾರೆ.

ಭಾರತದ 4-5 ವಿಶ್ವವಿದ್ಯಾಲಯಗಳು ಜ್ಯೋತಿಷ್ಯ ಶಿಕ್ಷಣವನ್ನು ಬಿ.ಎ. ಹಾಗೂ ಎಂ.ಎ. ತನಕ ಕೊಡಲು ಸಿದ್ಧವಾಗಿದ್ದವು. ಎಂದೂ ಕೂಡ ಹೇಳಲಾಗುತ್ತದೆ. ಪ್ರಸಿದ್ಧ ವಿಜ್ಞಾನಿ ಡಾ. ಯಶಪಾಲ್‌ಅವರು ಹೇಳುವುದೇನೆಂದರೆ, ಟೈಮ್ ಪಾಸ್‌ಮಾಡಲು ಜ್ಯೋತಿಷ್ಯ ಶಿಕ್ಷಣ ಹಾನಿಕಾರಕವೇನೂ ಅಲ್ಲ. ಏಕೆಂದರೆ ಇದರಿಂದ ಜನರ ಅಭಿರುಚಿ ಸ್ಪಷ್ಟವಾಗಿ ಬಿಂಬಿಸಲ್ಪಡುತ್ತದೆ.

ಪ್ರಸಿದ್ಧ ವಿಜ್ಞಾನಿ ಡಾ. ರಾಜೇಶ್‌ಕೋಚರ್‌ಹಾಗೂ ಡಾ. ಎನ್‌. ಕುಮಾರ್‌ಅವರು ಜ್ಯೋತಿಷ್ಯವನ್ನು ವಿಜ್ಞಾನವೆಂದು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಜ್ಯೋತಿಷ್ಯದ ಕುರಿತಂತೆ ಜನರ ಅಭಿರುಚಿಯ ಕಾರಣದಿಂದ ಇದರಲ್ಲಿ ವ್ಯಾಪಾರೀಕರಣ ಬಂದಿದೆ. ಮಾರುಕಟ್ಟೆಯಲ್ಲಿ ಗಿಳಿ ಹಾಗೂ ಎತ್ತು ಕೂಡ ಮಾನವನ ಅದೃಷ್ಟದ ಬಗ್ಗೆ ಹೇಳುತ್ತಿವೆ.

ಶತಶತಮಾನಗಳಿಂದ ನಮ್ಮ ಧರ್ಮಗುರುಗಳು ಹಾಗೂ ನಮ್ಮ ಶಾಸ್ತ್ರಜ್ಞರು ಹೇಳುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಜೀವನ ಅದೃಷ್ಟದ ಜೊತೆಗೆ ಥಳುಕು ಹಾಕಿಕೊಂಡಿದೆ. ಬಡವನಾಗಿದ್ದರೆ ಅದು ಅವನ ಅದೃಷ್ಟ, ಶ್ರೀಮಂತನಾಗಿದ್ದರೆ ಅದು ಅವನ ಅದೃಷ್ಟ ಎಂದು ತಿಳಿಯಬೇಕು ಎನ್ನುತ್ತಾರೆ ಅವರು. ನಾವು ಈಗಲೂ ಜಾತಕಗಳನ್ನು ಹಿಡಿದುಕೊಂಡು ಜ್ಯೋತಿಷಿಗಳ ಬಳಿ ಹೋಗುತ್ತೇವೆ.  ಅವರ ಬಳಿ ನಾವು ಹೋಗುವ ಮುಖ್ಯ ಕಾರಣ ನಮ್ಮ ಅದೃಷ್ಟದಲ್ಲಿ ಏನಿದೆ ಎಂದು ತಿಳಿಯಲು, ನನಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತಾ? ನನ್ನ ವ್ಯಾಪಾರ ಪ್ರಗತಿ ಕಾಣುತ್ತಾ? ನಾನು ಚುನಾವಣೆಯಲ್ಲಿ ಗೆಲ್ಲಬಹುದಾ? ಮತ್ತೆ ಕೆಲವು ಜನರು ತಮ್ಮ ಹಸ್ತರೇಖೆಗಳನ್ನು ತೋರಿಸಿ ತಮ್ಮ ಅದೃಷ್ಟ ತಿಳಿದುಕೊಳ್ಳಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೆರ್ರೊ ಕಾರ್ಡ್‌ಗಳ ಮುಖಾಂತರ ಭವಿಷ್ಯ ಹೇಳಾಗುತ್ತಿದೆ. ದೆಹಲಿಯಲ್ಲಿ ಜ್ಯೋತಿಷಿಗಳು, ಮಾಂತ್ರಿಕರು ಹಾಗೂ ಹಲವು ಚತುರರು ಒಂದೇ ಕಡೆ ಸೇರಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಯಾವುದೇ ನಗರದಲ್ಲೂ ಇಲ್ಲ. ಅವರು ಎಲ್ಲರ ಭವಿಷ್ಯ ಹೇಳಿ ಹಣ ವಸೂಲು ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಕೆಲವು ರಾಜಕಾರಣಿಗಳು ಯಜ್ಞ ಕೂಡ ಮಾಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ