ಸಾಮಾನ್ಯವಾಗಿ ಜನರು ತಮ್ಮ ದೇಹ ಹಾಗೂ ಆಸುಪಾಸಿನ ಪರಿಸದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಕೀಟನಾಶಕಗಳ ಸಂಪರ್ಕಕ್ಕೆ ಬರುವವರು ಬಂಜೆತನ ಅಂದರೆ ಮಕ್ಕಳಾಗದೇ ಇರುವ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಎನ್ನುವುದು ತಿಳಿದುಬಂದಿದೆ. ಆದರೆ ಕೀಟನಾಶಕಗಳಿಂದ ದೂರ ಇರುವವರು ಕೂಡ ಬಂಜೆತನಕ್ಕೆ ತುತ್ತಾಗಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ಅಸುರಕ್ಷಿತ ಆಹಾರ. ಏಕೆಂದರೆ ನಮ್ಮ ಆಹಾರದಲ್ಲಿ ಸೇರ್ಪಡೆಗೊಂಡಿರುವ ಹಣ್ಣು ತರಕಾರಿಗಳ ಮುಖಾಂತರ ನಾವು ಯೂರಿಯಾ ಸೇವನೆ ಮಾಡುತ್ತಿದ್ದೇವೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಗೆ ಬಗೆ ಬಗೆಯ ಹಣ್ಣು ತರಕಾರಿಗಳು ಅತ್ಯವಶ್ಯ. ಏಕೆಂದರೆ ಅವುಗಳಲ್ಲಿ ಖನಿಜಾಂಶಗಳು ಹೇರಳವಾಗಿರುತ್ತವೆ. ಹಲವು ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಯಾವ ಮಹಿಳೆಯರು ಕೀಟನಾಶಕಗಳ ಅಂಶ ಇರುವ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡುತ್ತಾರೊ, ಅವರು ಗರ್ಭಿಣಿಯರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ಗರ್ಭಿಣಿಯರಾದರೆ ಗರ್ಭಾವಸ್ಥೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಅಂದಹಾಗೆ ಹಣ್ಣು ತರಕಾರಿಗಳನ್ನು ಇಲಿ ಹಾಗೂ ಬೇರೆ ಕೆಲವು ಉಪದ್ರವಿ ಜೀವಿಗಳಿಂದ ರಕ್ಷಿಸಲು ಕೀಟನಾಶಕ ಸಿಂಪರಣೆ ಮಾಡಲಾಗುತ್ತದೆ. ಈ ಕೀಟನಾಶಕಗಳು ಎರಡು ಪ್ರಕಾರದ್ದಾಗಿರುತ್ತವೆ. ಮೊದಲನೆಯ ರಾಸಾಯನಿಕ ಕೀಟನಾಶಕಗಳನ್ನು ಕೃತಕವಾಗಿ ತಯಾರಿಸಲಾಗುತ್ತದೆ. ಜೈವಿಕ ಕೀಟನಾಶಕಗಳನ್ನು ನೈಸರ್ಗಿಕ ಸಾಮಗ್ರಿಯಿಂದ ಉತ್ಪಾದಿಸಲಾಗುತ್ತದೆ.

ರಾಸಾಯನಿಕಗಳ ನೇರ ಸಂಪರ್ಕಕ್ಕೆ ಬರುವವರು ಅದರ ಹಾನಿಕಾರಕ ಪರಿಣಾಮಗಳಿಗೆ ತುತ್ತಾಗುತ್ತಾರೆ. ಈ ಉದ್ಯಮಗಳಲ್ಲಿ ಕೆಲಸ ಮಾಡುವವರು ಇಲ್ಲಿ ಅವನ್ನು ತಮ್ಮ ಹೊಲಗಳಲ್ಲಿ ಸಿಂಪರಣೆ ಮಾಡುವ ರೈತರು ಇದರ ಹಾನಿಗೆ ತುತ್ತಾಗುತ್ತಾರೆ. ನೇರ ಸಂಪರ್ಕಕ್ಕೆ ಬರದೇ ಇದ್ದರು ಕೂಡ ಅದರ ಮಾರಕ ಪರಿಣಾಮಗಳಿಗೆ ತುತ್ತಾಗುತ್ತಾರೆ. ಅವರು ಯಾರೆಂದರೆ ಅವನ್ನು ಬಳಸುವ ಬಳಕೆದಾರರು.

ಗರ್ಭಾವಸ್ಥೆ ಶೇ.30ರಷ್ಟು ಕಡಿಮೆ

ಜಗತ್ತಿನಾದ್ಯಂತ ಸಂಶೋಧಕರು ಕೀಟನಾಶಕಗಳ ಪ್ರಭಾವ ಕಂಡುಕೊಳ್ಳಲು ಹಲವು ಬಗೆಯ ಸಂಶೋಧನೆಗಳನ್ನು ಮಾಡಿದರು. ಕೀಟನಾಶಕಗಳ ಅಂಶವಿರುವ ಹಣ್ಣು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಶೇ.30ರಷ್ಟು ಕಡಿಮೆಯಾಗುತ್ತದೆ. ಇದರ ಹೊರತಾಗಿ ಶೇ.40ರಷ್ಟು ಪ್ರಕರಣಗಳು ಹೇಗಿದ್ದವು ಎಂದರೆ, ಅವರಲ್ಲಿ ರಾಸಾಯನಿಕಗಳ ಕಾರಣದಿಂದ ಗರ್ಭಪಾತದ ಸ್ಥಿತಿ ಉಂಟಾಯಿತು.

ಪುರುಷರಿಗೂ ತೊಂದರೆ

ಕ್ರಿಮಿನಾಶಕಗಳ ಕಾರಣದಿಂದ ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕೂಡ ಕುಸಿಯುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯ ಉಂಟಾಗುವ ಪ್ರಮಾಣ ಕೆಲವು ವರ್ಷಗಳಿಂದ ಹೆಚ್ಚುತ್ತಲೇ ಹೊರಟಿದೆ. ಹಲವು ಸಂಶೋಧನೆಗಳ ಪ್ರಕಾರ, 40ಕ್ಕೂ ಹೆಚ್ಚಿನ ವಯೋಮಾನದ ಶೇ.55ರಷ್ಟು ಪುರುಷರು ಗುಪ್ತಾಂಗದ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಕಾರಣ ಕ್ರಿಮಿನಾಶಕಗಳು ಎಂದು ಸಾಬೀತಾಗಿದೆ.

ಅಂದಹಾಗೆ, ಈ ಕ್ರಿಮಿನಾಶಕಗಳಲ್ಲಿರುವ ರಾಸಾಯನಿಕವೊಂದು ಅಸಿಟೈಲ್ ‌ಕೊಲಿನ್‌ ಆ್ಯಸ್ಟ್ರೇಸ್‌ ನ ನಿರ್ಮಾಣಕ್ಕೆ  ತಡೆ ಹಿಡಿಯುತ್ತದೆ. ಅದು ಒಂದು ಕಿಣ್ವ ಅಂದರೆ ಎಂಜೈಮ್ ಆಗಿದ್ದು ಅದು ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕವಾಗಿ ಕೆಲಸ ಮಾಡುವ ನ್ಯೂರೊ ಟ್ರಾನ್ಸ್ ಮೀಟರ್‌ ಗಳ ಜೊತೆಗೆ ಆ ಆವೇಗಗಳ ಕಾರ್ಯ ನಿರ್ವಹಿಸುತ್ತದೆ. ಅದೇ ಗುಪ್ತಾಂಗ ಒತ್ತಡವನ್ನುಂಟು ಮಾಡುತ್ತದೆ.

ರಾಸಾಯನಿಕ ಕೀಟನಾಶಕಗಳು ಪುರುಷರ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ಹುಡುಗಿಯರಲ್ಲಿ ಅವಧಿಗೆ ಮುನ್ನ ಮುಟ್ಟಾಗುವುದು, ಗರ್ಭಪಾತ ಮತ್ತು ಮೃತ ಮಗುವಿಗೆ ಜನ್ಮ ನೀಡುವುದು ಹಾಗೂ ಬೇರೆ ಕೆಲವು ದುಷ್ಪರಿಣಾಮಗಳೂ ಕಂಡುಬರುತ್ತವೆ.

aise-khane-se-ho-sakta-hai-banjhpan-2

ಹುಟ್ಟು ದೋಷ ಕೂಡ ಈ ರಾಸಾಯನಿಗಳು ಜೀವನವಿಡೀ ದೇಹದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಅವು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಹಲವು ರೀತಿಯಲ್ಲಿ ಹಾನಿಯನ್ನುಂಟು ಮಾಡಬಹುದು. ಕೆಲವು ರಾಸಾಯನಿಕಗಳು ಜೀವಕೋಶಗಳಿಗೆ ನೇರ ಹಾನಿಯನ್ನುಂಟು ಮಾಡುತ್ತವೆಯಾದರೆ, ಮತ್ತೆ ಕೆಲವು ಅದೆಷ್ಟು ಆಳವಾಗಿ ದುಷ್ಪರಿಣಾಮ ಉಂಟು ಮಾಡುತ್ತವೆಂದರೆ, ಡಿಎನ್‌ಎ ವ್ಯವಸ್ಥೆಯನ್ನೇ ಹಾಳುಗೆಡವಿ ಬಿಡುತ್ತವೆ. ಇದರ ಪರಿಣಾಮವೆಂಬಂತೆ ಮುಂದಿನ ಪೀಳಿಗೆ ಸಂತಾನೋತ್ಪತ್ತಿಗೆ ಸಂಬಂಧಪಟ್ಟ ಹಲವು ತೊಂದರೆ ಎದುರಿಸಬೇಕು ಅಥವಾ ಹಲವು ತೊಂದರೆಗಳೊಂದಿಗೆ ಮಗು ಜನಿಸುತ್ತದೆ.

ಡಾ. ಅನುರಾಧಾ

ನಿವಾರಣೆ ಸುಲಭವಲ್ಲ

ಹಣ್ಣು ಹಾಗೂ ತರಕಾರಿಗಳಲ್ಲಿರುವ ರಾಸಾಯನಿಕಗಳನ್ನು ಕೇವಲ ನೀರಿನಿಂದ ತೊಳೆಯುವುದರಿಂದಷ್ಟೇ ಅವು ಸಂಪೂರ್ಣವಾಗಿ ಹೊರಟು ಹೋಗುವುದಿಲ್ಲ. ಇದರ ಏಕೈಕ ಪರಿಣಾಮಕಾರಿ ವಿಧಾನವೆಂದರೆ ಜೈವಿಕವಾಗಿ ಉತ್ಪನ್ನವಾದ ಹಣ್ಣು ತರಕಾರಿಗಳನ್ನೇ ಸೇವಿಸಬೇಕು.

ಮನೆಗಳು, ಕೈತೋಟ, ಪಾರ್ಕ್‌ ಗಳು, ಶಾಲೆಗಳು, ಹೊಲಗದ್ದೆಗಳು ಇವೆಲ್ಲ ಗರ್ಭಿಣಿಯರ ಸಂಪರ್ಕಕ್ಕೆ ಬರುವಂತಹ ಸ್ಥಳಗಳು. ಇಲ್ಲೆಲ್ಲ ಕ್ರಿಮಿನಾಶಕಗಳ ಮೇಲೆ ನಿರ್ಬಂಧ ಹೇರಬೇಕು.

ಮನೆ ಹಾಗೂ ಆಫೀಸುಗಳಲ್ಲಿ ಸ್ವಚ್ಛತಾ ಪ್ರಕ್ರಿಯೆಗೆ ನೈಸರ್ಗಿಕ ಉತ್ಪನ್ನಗಳನ್ನೇ ಬಳಸಬೇಕು. ಅವು ಅಗ್ಗವಾಗಿ ದೊರೆಯುತ್ತವೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ.

ಕೃತಕ ಏರ್‌ ಫ್ರೆಶ್‌ ನರ್‌ ಗಳನ್ನು ಬಳಸಬೇಡಿ. ಅವು ಕಾಣಲು ಸುಂದರ ಹಾಗೂ ಸುವಾಸನಾಯುಕ್ತ ಅನಿಸುತ್ತವೆ. ಆದರೆ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ. ಮನೆಯನ್ನು ತಾಜಾತನದಿಂದಿಡಲು ಕಿಟಕಿಗಳನ್ನು ತೆರೆದಿಡಿ. ಮನೆಯನ್ನು ಸುಗಂಧಿತವಾಗಿಡಲು 100% ನೈಸರ್ಗಿಕ ಸುಗಂಧ ತೈಲವನ್ನೇ ಬಳಸಿ.

ಜೈವಿಕ ಉತ್ಪನ್ನಗಳನ್ನೇ ನೀವು ಸೇವಿಸಿ. ಅವು ಉನ್ನತ ಗುಣಮಟ್ಟದ ಪೋಷಕಾಂಶಗಳನ್ನು ಹೊಂದಿರುತ್ತವೆ.

ಜಂಕ್‌ ಫುಡ್‌, ಫಾಸ್ಟ್ ಫುಡ್‌, ಸ್ಯಾಚುರೇಟೆಡ್‌ ಉತ್ಪನ್ನಗಳನ್ನು ತಿರಸ್ಕರಿಸಿ. ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಅಂಶಗಳಿರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ