– ರಾಘವೇಂದ್ರ ಅಡಿಗ ಎಚ್ಚೆನ್.
‘ಹಿಟ್: ದಿ ಥರ್ಡ್ ಕೇಸ್’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಚಿತ್ರದ ನಿರ್ಮಾಣದಲ್ಲಿ ಸಂಬಂಧ ಹೊಂದಿರುವ ಪ್ರದೇಶವಾದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ನಟ ನಾನಿ ತೀವ್ರ ದುಃಖದ ಜೊತೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೇ 1ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಬಹುನಿರೀಕ್ಷಿತ ಚಿತ್ರದ ಪ್ರಚಾರವನ್ನಿಂದು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಿತು. ನಾನಿ ಮಾತನಾಡಿ, ಆ ಘಟನೆ ಇಡೀ ತಂಡದ ಮೇಲೆ ಬೀರಿದ ಭಾವನಾತ್ಮಕ ಪರಿಣಾಮವನ್ನು ವಿವರಿಸಿದರು.
26 ಜನರ ಪ್ರಾಣವನ್ನು ಬಲಿ ತೆಗೆದುಕೊಂಡ ಈ ಉಗ್ರರ ದಾಳಿ, ಹಿಟ್ 3 ತಂಡ ಸುಮಾರು ಮೂರು ವಾರಗಳ ಕಾಲ ಪಹಲ್ಗಾಮ್ನಲ್ಲಿ ಚಿತ್ರೀಕರಣ ನಡೆಸಿದ ಕೆಲವೇ ತಿಂಗಳುಗಳ ಅಂತರದಲ್ಲಿ ಸಂಭವಿಸಿದೆ. ಅಲ್ಲಿನ ತಮ್ಮ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ನಾನಿ, ಸ್ಥಳೀಯರ ಆತ್ಮಿಯತೆ ಮತ್ತು ಪ್ರದೇಶದ ಪ್ರಶಾಂತ ಸೌಂದರ್ಯದ ಬಗ್ಗೆ ಮಾತನಾಡಿದರು.
“ಅದು ಆ ಸ್ಥಳದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆಯೆಂದು ನಾನು ಭಾವಿಸುತ್ತೇನೆ. ಇತ್ತೀಚೆಗೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಅದು ಹೃದಯವಿದ್ರಾವಕ ಘಟನೆ. ಅದು ನಿಜವಾಗಿಯೂ ನಮ್ಮೆಲ್ಲರ ಮೇಲೆ ಭಾರಿ ಪರಿಣಾಮ ಬೀರಿದೆ” ಎಂದು ತಿಳಿಸಿದರು.
ಚಿತ್ರೀಕರಣದ ಸಮಯದಲ್ಲಿ ಆ ಪ್ರದೇಶವು ಎಷ್ಟು ಶಾಂತಿಯುತ ಮತ್ತು ಸ್ವಾಗತಾರ್ಹವಾಗಿತ್ತು ಎಂಬ ಕಾರಣದಿಂದಾಗಿ, ಇತ್ತೀಚಿನ ದುರ್ಘಟನೆ ತಮ್ಮನ್ನು ಹೇಗೆ ಕಾಡುತ್ತಿದೆ ಎಂಬುದನ್ನು ನಟ ವಿವರಿಸಿದರು. ನಾವೆಲ್ಲರೂ ನೋವಿನಲ್ಲಿದ್ದೇವೆ. ಅದು ನಮ್ಮನ್ನು ಕಾಡುತ್ತಿದೆ. ನಾವು ಎಷ್ಟು ದುರ್ಬಲರು ಎಂಬುದನ್ನು ನಮಗೆ ನೆನಪಿಸುತ್ತಿದೆ ಎಂದು ಹೇಳಿದರು.
ಚಿತ್ರೀಕರಣದ ಸಮಯದಲ್ಲಿ ಆ ಪ್ರದೇಶವು ಎಷ್ಟು ಶಾಂತಿಯುತ ಮತ್ತು ಸ್ವಾಗತಾರ್ಹವಾಗಿತ್ತು ಎಂಬ ಕಾರಣದಿಂದಾಗಿ, ಇತ್ತೀಚಿನ ದುರ್ಘಟನೆ ತಮ್ಮನ್ನು ಹೇಗೆ ಕಾಡುತ್ತಿದೆ ಎಂಬುದನ್ನು ನಟ ವಿವರಿಸಿದರು. ನಾವೆಲ್ಲರೂ ನೋವಿನಲ್ಲಿದ್ದೇವೆ. ಅದು ನಮ್ಮನ್ನು ಕಾಡುತ್ತಿದೆ. ನಾವು ಎಷ್ಟು ದುರ್ಬಲರು ಎಂಬುದನ್ನು ನಮಗೆ ನೆನಪಿಸುತ್ತಿದೆ ಎಂದು ಹೇಳಿದರು.
ಅಂತಹ ಹಿಂಸಾಚಾರಕ್ಕೆ ಗಂಭೀರ ಕ್ರಮ ಮತ್ತು ಒಗ್ಗಟ್ಟಿನ ಪ್ರತಿಕ್ರಿಯೆಯ ಅಗತ್ಯದ ಬಗ್ಗೆ ನಟ ಒತ್ತಿ ಮಾತನಾಡಿದರು. “ಈ ಕಾಡು ಶಕ್ತಿಗಳು ಇನ್ನೂ ತಾವಾಗಿಯೇ ಹೊರಬರುತ್ತಿವೆ. ಹಾಗಾಗಿ, ಕೆಲ ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸ್ವಲ್ಪ ಭರವಸೆ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆಂಬುದು ನಮಗೆ ತಿಳಿಯುವುದಿಲ್ಲ ಎಂದು ತಿಳಿಸಿದರು.
ಪಹಲ್ಗಾಮ್ನಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾ, “ನಾವು ಅಲ್ಲಿ ಚಿತ್ರೀಕರಣ ನಡೆಸಿದರಿಂದ, ದುರಂತ ಸಂಭವಿಸಿದ ದಿನದಿಂದಲೂ ಅದು ನನ್ನನ್ನು ಇನ್ನಷ್ಟು ಕಾಡುತ್ತಿದೆ. ನಾವು 18 ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಸ್ಥಳೀಯರಿಂದ ನಮಗೆ ದೊರೆತ ಬೆಂಬಲ ಅಪಾರ. ಪ್ರತಿದಿನ ಬೆಳಗ್ಗೆ ಎಚ್ಚರಗೊಂಡು ಪಹಲ್ಗಾಮ್ ಅನ್ನು ನೋಡಿ, “ಎಂತಹ ಸುಂದರ ಸ್ಥಳ” ಎಂದು ಹೇಳುತ್ತಿದ್ದೆ” ಅಂತಾ ಈ ವೇಳೆ ನೆನಪಿಸಿಕೊಂಡರು.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಅನೇಕ ಪ್ರವಾಸಿಗರೊಂದಿಗಿನ ಸಂತೋಷದಾಯಕ ಮಾತುಕತೆಗಳನ್ನು ನಟ ನೆನಪಿಸಿಕೊಂಡರು. “ರಜೆಯನ್ನು ಆನಂದಿಸಲು ಬಯಸಿದ ಆ ಸಂತೋಷದ ಮುಖಗಳು ನನಗೆ ನೆನಪಿವೆ. ಆದರೆ ಈಗ, ಏನಾಯಿತು ಎಂನುದನ್ನು ಕೇಳುತ್ತಿದ್ದೇವೆ. ಅದನ್ನು ಪದಗಳಲ್ಲಿ ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ಇದು ವಿನಾಶಕಾರಿ. ಇದು ಒಂದು ಭಯಾನಕ ಘಟನೆ. ದೇವರಲ್ಲಿ ಪ್ರಾರ್ಥಿಸುತ್ತೇನೆ, ಇದು ಮರುಕಳಿಸಬಾರದು ಎಂದು ಭಾವಿಸುತ್ತೇನೆ” ಎಂದು ಹೇಳಿದರು.