ಜೇಮ್ಸ್ ಬಾಂಡ್ ಚಿತ್ರಗಳ ತಾಜಾ ಹೀರೋ ಡೇನಿಯಲ್ ಕ್ರೆಗ್ ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿದ್ದೆಂದರೆ, ತಾನು ನಟ ನೆಯಿಂದ ಗಳಿಸಿದ ಸಿರಿ ಸಂಪತ್ತನ್ನು ಪೂರ್ತಿಯಾಗಿ ತನ್ನ ಸಾವಿನ ನಂತರ ಮಕ್ಕಳಿಗೆ ಬರೆಯುವುದಿಲ್ಲವಂತೆ! ಉಳಿದದ್ದನ್ನು ಧರ್ಮದ ಹೆಸರಲ್ಲಿ ದಾನ ಮಾಡುತ್ತಾನಂತೆ!
ಈತನಿಗೆ ಪ್ರತಿ ಚಿತ್ರದಲ್ಲೂ ಕೋಟ್ಯಂತರ ಡಾಲರ್ ಸಂಭಾವನೆ ಸಿಗುತ್ತದೆ. ಮಕ್ಕಳಿಗೆ ಅಪ್ಪ ಮಾಡಿಟ್ಟ ಆಸ್ತಿಗಿಂತ ಖುದ್ದು ತಾವಾಗಿ ದುಡಿದು ಗಳಿಸುವುದೇ ಶ್ರೇಷ್ಠ ಎಂದು ಗೊತ್ತಾಗಬೇಕು. 29ರ ಮಗ ಹಾಗೂ 2 ವರ್ಷದ ಮಗಳು ಈತನ ಮಕ್ಕಳು.ಇದೇ ತರಹ ಕೆಲವು ವರ್ಷಗಳ ಹಿಂದೆ ಆ್ಯಂಡ್ರೂ ಕಾರ್ನೆಗಿ ತನ್ನ ಆಸ್ತಿಯಲ್ಲಿನ ಸುಮಾರು 11 ಮಿಲಿಯನ್ ಡಾಲರ್ ಹಣವನ್ನು `ಕಾರ್ನೆಗಿ ಫೌಂಡೇಶನ್’ ರೂಪಿಸಿ ದಾನ ಮಾಡಿದ.
ತಂದೆಯ ಆಸ್ತಿ ಮಕ್ಕಳಿಗೆ ಹೋಗಬೇಕು ಎಂಬುದು ಅನಿವಾರ್ಯವೇನಲ್ಲ. ಇಂದಿನ ಕಾನೂನು ಸಹ ಇದನ್ನೇ ಸಾರುತ್ತದೆ, ನಮ್ಮ ಸಮಾಜ ಇದನ್ನೇ ಬಯಸುತ್ತದೆ. ಮಕ್ಕಳು ಹುಟ್ಟಿದಾಗಿನಿಂದ ಏನೊಂದೂ ಕಷ್ಟಪಡದೆ, ತಂದೆಯ ಆಸ್ತಿ ಹಣ ಕರಗಿಸ ತೊಡಗುತ್ತಾರೆ. ಸಮಾಜದಲ್ಲಿನ ಕೆಟ್ಟು ಹೋದ ಯುವಜನತೆ ಇವರೇ ಆಗಿರುತ್ತಾರೆ. ಬಾಲ್ಯದಿಂದ ಮನಸೋ ಇಚ್ಛೆ ಖರ್ಚು ಮಾಡಲು ಮನೆಯಲ್ಲಿ ಹಣ ಸಿಗುತ್ತಿರುವಾಗ, ಇವರು ಚಿಂತಿಸಬೇಕೇಕೆ?
ಮಕ್ಕಳಿಗೆ ಪಿತ್ರಾರ್ಜಿತಾಗಿ ಮನೆ, ಮನೆತನದಿಂದ ಉತ್ತಮ ಶಿಕ್ಷಣ, ಕಲಿಕೆ, ಸಂಸ್ಕಾರ, ಬುದ್ಧಿ, ಕೌಶಲ್ಯ, ಸೂಕ್ತ ಮಾರ್ಗದರ್ಶನ ಕೊಡುವುದೇ ಸರಿ. ಅದು ಬಿಟ್ಟು ಸದಾ ಹಣದ ಬಂಡಲ್ ಅವರ ಮುಂದೆ ಸುರಿಯಬಾರದು. ಆದರೆ ತಾಯಿ ತಂದೆಯರು ತಮ್ಮ ಪ್ರತಿಷ್ಠೆಯ ಸಲುವಾಗಿ ಮೊದಲಿನಿಂದಲೂ ಇದನ್ನೇ ಅಭ್ಯಾಸ ಮಾಡಿಸಿಬಿಡುತ್ತಾರೆ. ತಾಯಿ ತಂದೆ ಮಕ್ಕಳಿಗೆ ಆಸ್ತಿ ಬರೆಯುವ ಬದಲು ಧರ್ಮದ ಹೆಸರಲ್ಲಿ ದಾನ ಮಾಡಿದವರಂತೆ ಎಂಬುದನ್ನು ಕೇಳಿಲಿಕ್ಕೇನೋ ಚೆನ್ನಾಗಿರುತ್ತದೆ, ಆದರೆ ಯೋಗ್ಯತೆ ಇಲ್ಲದ ಮಕ್ಕಳು ಅದೇ ಲೈಫ್ ಸ್ಟೈಲ್ ಮುಂದುವರಿಸಲು ಸಾಧ್ಯವೇ? ಇಲ್ಲಿ ಏಳುವ ಪ್ರಶ್ನೆ, ದಾನವಾಗಿ ಪಡೆಯುವ ದೊಡ್ಡ ಮೊತ್ತದ ಹಣವನ್ನು ಆ ದಾನಿ ಗಳಿಸಿದ್ದು ಹೇಗೆ? ಅವರಿಗೂ ಅದು ಪಿತ್ರಾರ್ಜಿತವೋ ಅಲ್ಲವೋ? ಎಲ್ಲರೂ ಕ್ರೆಗ್ ಆಗಲು ಸಾಧ್ಯವಿಲ್ಲ.
ಸಾಮಾಜಿಕ ಸಂಘ ಸಂಸ್ಥೆಗಳಿಗೆ ದಾನವಾಗಿ ಆಸ್ತಿ ಹಂಚಿ ಹೋಯಿತು ಎಂಬುದನ್ನು ಕೇಳಲೇನೋ ಚೆನ್ನಾಗಿರುತ್ತದೆ. ಅತಿ ಶ್ರೀಮಂತನೊಬ್ಬ ಸತ್ತ ನಂತರ, ಅವನ ಹಣವನ್ನು ಹೀಗೆ ವಿಲೇವಾರಿ ಮಾಡುವವರಿಗೆ ಆ ಆಸ್ತಿಯ ಮೇಲೆ ಆಸಕ್ತಿ ಇದ್ದೀತೇ? ಹೀಗೆ ಹಂಚುವವರು ಸಹ ಯಾವ ಪರಿಶ್ರಮ ಪಟ್ಟಿರುವುದಿಲ್ಲ. ಯಾರದೋ ಹಣವನ್ನು ಯಾರಿಗೋ ಹಂಚಲು ಕಷ್ಟವೇನು? ತಾನು ಗಳಿಸದೆ ಯಾರದೋ ಹಣವನ್ನು ಹೀಗೆ ಹಂಚಲು ಅಂಥವರಿಗೆ ಒಂದು ಅವಕಾಶ ಸಿಗುತ್ತದೆ. ಆತ ದಾನಿ ಎನಿಸುತ್ತಾನೆಯೇ?
ಭಾರತದಲ್ಲಿ ಇತ್ತೀಚೆಗಷ್ಟೆ ರಮೇಶ್ ಚೌಹಾನ್ ತಮ್ಮ ಬಿಸ್ಲೆರಿ ಕಂಪನಿಯನ್ನು ಮಾರಿದರು. ಏಕೆಂದರೆ ಅವರ ಒಬ್ಬಳೇ ಮಗಳಿಗೆ ಆ ಬಿಸ್ ನೆಸ್ ಮುಂದುವರಿಸುವಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ವೃದ್ಧರಾದ ಅವರು ಒಬ್ಬರೇ ಆ ಬಿಸ್ಲೆರಿ ಸಾಮ್ರಾಜ್ಯದ ಹೊರೆ ಹೊರಲು ಸಾಧ್ಯವಾಗಲಿಲ್ಲ.
ಕೆಲವು ವರ್ಷಗಳ ಹಿಂದೆ ಬಿಡ್ಲಾ ಪರಿವಾರದ ಒಬ್ಬ ಮಗನ 20 ಸಾವಿರ ಕೋಟಿಗೂ ಮೀರಿದ ಹಣ ಆತನ ಕೈಗೆ ಸಿಕ್ಕಿಬಿತ್ತು. ಆತನಿಗೆ ಸ್ವಂತ ಮಕ್ಕಳಿರಲಿಲ್ಲ. ತನ್ನ ತಮ್ಮ ತಂಗಿಯರ ಮಕ್ಕಳಿಗೆ ಅದನ್ನು ಹಂಚಲು ಆತನಿಗೆ ಮನಸ್ಸಿರಲಿಲ್ಲ. ಹೀಗೆ ಆ ಹಣ ಅನಾಯಾಸವಾಗಿ ಪಾಲಾಯ್ತು. ಇದೂ ದಾನವೇ! ಆದರೆ ಪಡೆದಾತ ಎಷ್ಟರ ಮಟ್ಟಿಗೆ ಅದರ ನೈತಿಕ ಹಕ್ಕು ಹೊರಬಲ್ಲ?
ಎಷ್ಟೋ ಶ್ರೀಮಂತ ಕುಟುಂಬಗಳಲ್ಲಿ ಪಿತ್ರಾರ್ಜಿತ ಆಸ್ತಿಯ ಕುರಿತಾಗಿನ ವಿವಾದ ಎಷ್ಟೋ ದಶಕಗಳ ಕಾಲ ನಡೆಯುತ್ತಿರುತ್ತದೆ. ಎಷ್ಟೋ ಸಲ ಈ ಇಡೀ ಆಸ್ತಿ, ಕಾನೂನಿನ ಹೋರಾಟದಲ್ಲೇ ಲಾಯರ್ ಗಳ ಪಾಲಾಗಿ ಹೋಗುತ್ತದೆ. ಇಲ್ಲಿನ ವಿಡಂಬನೆ ಎಂದರೆ, ಯಾರು ದಾನದ ವಕಾಲತ್ತು ವಹಿಸುತ್ತಾರೋ, ಅವರು ಉಚಿತವಾಗಿ ತಮಗೆ ಸಿಕ್ಕಿದ ಈ ಹಣದ ಸದ್ವಿನಿಯೋಗ ಎಷ್ಟರ ಮಟ್ಟಿಗೆ ಮಾಡುತ್ತಾರೆ ಎಂಬುದು.
ವಾರಸುದಾರರಿಲ್ಲದ ಶ್ರೀಮಂತರು ತಮ್ಮ ಇಡೀ ಆಸ್ತಿಯನ್ನು ಕಣ್ಣುಮುಚ್ಚಿ ಶಾಲಾ, ಕಾಲೇಜು, ಆಸ್ಪತ್ರೆ, ಮಂದಿರ, ಮಸೀದಿ, ಚರ್ಚುಗಳಿಗೆ ದಾನವಾಗಿ ಏಕೆ ಕೊಟ್ಟುಬಿಡಬಾರದು ಎಂಬುದು ತಲೆಬಾಲವಿಲ್ಲದ ವಾದ. ಇವೆಲ್ಲ ಖಂಡಿತಾ ದಂಧೆಗಳೇ ಸರಿ. ಇವುಗಳ ಪ್ರಬಂಧಕರು ಖಂಡಿತಾ ಆದರ್ಶ ಗುಣಗಳ ಗಣಿಗಳೇನಲ್ಲ. ದಾನವಾಗಿ ಸಿಕ್ಕ ಈ ಬಿಟ್ಟಿ ಹಣವನ್ನು ತಮ್ಮ ಸ್ವಾರ್ಥಕ್ಕೆ ಎಷ್ಟು ಕಬಳಿಸಬಹುದು ಎಂದು ಹುನ್ನಾರ ಹೂಡುತ್ತಿರುತ್ತಾರೆ.
ಹೀಗಾಗಿ ಪ್ರಾಚೀನ ಕಾಲದಿಂದ ಸಾಗಿಬರುತ್ತಿರುವ, ತಾಯಿ ತಂದೆಯ ಆಸ್ತಿ ಅವರ ಮಕ್ಕಳಿಗೇ ಎಂಬ ಪದ್ಧತಿಯೇ ಸರಿ. ದಾನ ಮಾಡಲೇಬೇಕು ಎಂಬ ಬೀಜವನ್ನು ಜನತೆಯ ಮನದಲ್ಲಿ ಬಿತ್ತಿದವರು ಧರ್ಮದ ಗುತ್ತಿಗೆದಾರರು! ಏಕೆಂದರೆ ಧರ್ಮ ನಿಂತಿರುವುದೇ ದಾನದಿಂದ ಸಿಗುವ ಹಣದಿಂದ, ದಾನ ನೀಡಿದ ಪುಣ್ಯದ ಫಲದಿಂದ ಸ್ವರ್ಗಕ್ಕೆ ಟಿಕೆಟ್ ಸಿಗುತ್ತದಂತೆ….. ಹೀಗಾಗಿ ಧರ್ಮದ ಗುತ್ತಿಗೆದಾರರು ಇಂಥ ಶ್ರೀಮಂತರಿಗೆ, ಎಲ್ಲಾ ಆಸ್ತಿ ಮಕ್ಕಳಿಗೆ ಕೊಟ್ಟು ಬಿಡಬೇಡಿ ಎಂದು ಬಿಟ್ಟಿ ಸಲಹೆ, ಉಪದೇಶ ನೀಡುತ್ತಿರುತ್ತಾರೆ. ಕಳೆದ ಕೆಲವು ದಶಕಗಳಿಂದ ಸರ್ಕಾರ ಸಹ ಎಸ್ಟೇಟ್ ಡ್ಯೂಟಿ ಹೆಸರಲ್ಲಿ ಇವರಿಬ್ಬರ ನಡುವೆ ಜಿಗಿದು ಬಂತು. ಈ ಫಾರ್ಮುಲಾ ಸಂಪೂರ್ಣ ಯಶಸ್ವಿ ಆಗಲಿಲ್ಲ. ಕ್ರಮೇಣ ಎಲ್ಲಾ ದೇಶಗಳ ಸರ್ಕಾರಗಳೂ ಈ ಎಸ್ಟೇಟ್ ಡ್ಯೂಟಿ ಕಡಿಮೆ ಮಾಡಿದವು.
ಸಂತಾನ ಒಳ್ಳೆಯವರಿರಲಿ, ಕೆಟ್ಟವರೇ ಇರಲಿ, ಶ್ರೀಮಂತ ತಾಯಿ ತಂದೆಯರ ಆಸ್ತಿ ಅವರ ಕೈಗೆ ಬರುವುದೇ ಇದಕ್ಕಿರುವ ಒಂದು ಪರಿಹಾರ!
ಹುಡುಗಿಯರ ಪಾಲಿಗೆ ಆಪತ್ತಾಗಿರುವ ಶೆಲ್ಟರ್ ಹೋಮ್ಸ್
ಮುರಿದ ಮನೆಗಳ ಅಥವಾ ತಮ್ಮ ಮನೆಗಳಲ್ಲೇ ಶೋಷಿಸಲ್ಪಟ್ಟ ಹೆಣ್ಣುಮಕ್ಕಳು ಎದುರಿಸುವ ದೊಡ್ಡ ಸಮಸ್ಯೆ ಎಂದರೆ, ಮುಂದೆ ತಾವು ಹೋಗಿ ಎಲ್ಲಿ ವಾಸಿಸುವುದು? ದೇಶವಿಡೀ ಧಾರಾಳವಾಗಿ ಶೆಲ್ಟರ್ ಹೋಮ್ಸ್ ಏನೋ ಇವೆ, ಆದರೆ ಅಂಥ ಕಡೆ ಈ ಅನಾಥ ಹೆಣ್ಣುಮಕ್ಕಳ ಸ್ಥಿತಿ ಅತಿ ಶೋಚನೀಯ ಆಗಿರುತ್ತದೆ. ಈ ಹುಡುಗಿಯರು ಬಂದಿರುವುದೇ ಜವಾಬ್ದಾರಿ, ಶಿಸ್ತು, ಸಭ್ಯತೆಗಳ ಜೀವನ ಶೈಲಿ ಇಲ್ಲವೇ ಇಲ್ಲ ಎಂಬಂಥ ಮನೆಗಳಿಂದ. ಹೀಗಾಗಿ ಅನಿವಾರ್ಯವಾಗಿ ಇವರನ್ನು ಇಂಥ ಅಬಲಾಶ್ರಮಗಳಿಗೆ ತಳ್ಳಿಬಿಡುತ್ತಾರೆ.
ಅಪ್ರಾಪ್ತ ವಯಸ್ಸಿನ ಅಪರಾಧಿ ಹೆಣ್ಣುಮಕ್ಕಳನ್ನೂ ಸಹ ಇಂಥ ಹೋಮ್ಸ್ ಗೆ ರವಾನಿಸಲಾಗುತ್ತದೆ. ಒಂದು ವಿಧದಲ್ಲಿ ಇವು ನರಕಸದೃಶ ಜೈಲೇ ಸರಿ! ಆ ಹುಡುಗಿ ಅಪರಾಧ ಮಾಡಿರಲಿ ಬಿಡಲಿ ಅವರನ್ನು ಇಲ್ಲಿ ಕೀಳಾಗಿ ಕಾಣುತ್ತಾರೆ.
ಧರ್ಮದ ಹೆಸರಿನಲ್ಲಿ ಪ್ರತಿ ವರ್ಷ ಸಾವಿರಾರು ಘಂಟೆಗಳನ್ನು ವ್ಯರ್ಥ ಮಾಡಿಸುವ ಈ ಸಮಾಜ, ಅದರ ಬದಲು ಒಂದಷ್ಟು ವಾಲೆಂಟಿಯರ್ಸ್ ಗೆ ತರಬೇತಿ ನೀಡಿ, ಇಂಥ ಹೋಮ್ಸ್ ಗೆ ಹೋಗಿ, ಈ ಹೆಣ್ಣುಮಕ್ಕಳಿಗೆ ಒಂದಿಷ್ಟು ಸಾಂತ್ವನ, ಧೈರ್ಯ ತುಂಬುವ ಮಾತೇಕೆ ಕಲಿಸಬಾರದು?
ಈ ಹೋಮ್ಸ್ ನ ಮ್ಯಾನೇಜ್ ಮೆಂಟ್ ಕೆಲವು ಅಪರಾಧಿಗಳ ಕುಕೃತ್ಯದಿಂದ ರೋಸಿ ಹೋಗಿದ್ದರೂ, ಅದನ್ನೇ ಅಸ್ತ್ರವಾಗಿಸಿಕೊಂಡು ಮುಗ್ಧ ಹುಡುಗಿಯರನ್ನೂ ಶೋಷಿಸುತ್ತವೆ. ಇನ್ನೂ ಕೆಲವು ಮತ್ತಷ್ಟು ಮುಂದೆ ಹೋಗಿ, ಈ ಹುಡುಗಿಯರನ್ನು ಮಾರುಕಟ್ಟೆಗೆ ಮಾರಾಟ ಮಾಡುತ್ತವೆ. ದಕ್ಷಿಣ ದೆಹಲಿಯ ಇಂಥದೇ ಒಂದು ಪ್ರೈವೇಟ್ ಹೋಮ್ ನ ಹುಡುಗಿಯೊಬ್ಬಳು ತನ್ನ ದುದೆರ್ಶೆಯ ಕುರಿತು ವಿರಿಸುತ್ತಾ, ಪೊಲೀಸರ ರಕ್ಷಣೆ ಕೋರಿ ಹತ್ತಿರದ ಮಹರೋಲಿ ಠಾಣೆಯಲ್ಲಿ ದೂರು ನೀಡಿದವಳಂತೆ. ಮನೆಯಲ್ಲಿ ಅಶಾಂತಿಗೊಳಪಟ್ಟ ಈ ಹುಡುಗಿ, ಇಂಥ ಕಡೆ ಬಂದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿಹೋಗಿದೆ.
ಇಂಥ ಪ್ರಕರಣಗಳು ಸದಾ ಪೇಚಿಗೆ ಸಿಲುಕುತ್ತವೆ. ಇಲ್ಲಿನ ನಿಜ ಪರಿಸ್ಥಿತಿ ಏನು ಎಂಬುದನ್ನು ತಿಳಿಯುವುದೂ ಕಷ್ಟ. ಮುಗ್ಧ ಹುಡುಗಿಯರ ಅತಿ ಭಯ, ಇವರಿಗೆ ವರದಾನವಾಗಿ ತಮ್ಮ ಸ್ವಾರ್ಥ ಸಾಧನೆಗೆ ದಾರಿಯಾಗ್ತುತದೆ. ಎಷ್ಟೋ ಸಲ ಇಂಥ ಹುಡುಗಿಯರು ಅತಿ ಧೈರ್ಯವಹಿಸಿ, ಜಗಳವಾಡಿ, ಮನೆ ಬಿಟ್ಟವರಾದ್ದರಿಂದ, ಇಂಥ ಹುನ್ನಾರ ನಡೆಸುವವರೊಂದಿಗೆ ಮಸ್ತಿಯಲ್ಲಿ ಶಾಮೀಲಾಗುತ್ತಾರೆ. ಹೀಗಾಗಿ ಎರಡೂ ಬಗೆಯ ಗುಣದವರು ಇಲ್ಲಿ ಸಿಕ್ಕಿಬೀಳುತ್ತಾರೆ.
ಎಷ್ಟೋ NGO ಗಳು ಈ ಹೋಮ್ಸ್ ನಡೆಸುತ್ತವೆ. ಇದರ ನಿರ್ವಹಣೆಗೆ ಬೇಕಾದ ಹಣಕಾಸು ಸುಲಭವಾಗಿ ಸಿಗದು. ಈ ಹುಡುಗಿಯರು ಯಾವುದೇ ಉತ್ಪಾದನೆಯ ಕೆಲಸಕಾರ್ಯ ಮಾಡರು, ಶಿಸ್ತುಬದ್ಧವಾಗಿ ನಡೆದುಕೊಳ್ಳಲೂ ತಯಾರಿರುವುದಿಲ್ಲ. ಅವರು ಎಂಥ ಗುಣದವರೇ ಆದರೂ ಹೀಗೆ ಮಾಡುತ್ತಾರೆ. ಇಂಥ ಹೋಮ್ ಇರುವುದೇ, ತಮಗೆ ಉಚಿತವಾಗಿ ಎಲ್ಲವನ್ನೂ ನೀಡಲಿಕ್ಕೆ ಎಂದು ಭಾವಿಸುತ್ತಾರೆ. ಇಂಥವರ ಏಳಿಗೆ ಆಗುವುದಾದರೂ ಹೇಗೆ? ವಾಲೆಂಟಿಯರ್ಸ್ ತಾವಾಗಿ ಮುಂದೆ ಬಂದು ಅನಗತ್ಯವಾಗಿ ಧರ್ಮದ ಹೆಸರಲ್ಲಿ ದಾನ ಎಂದು ಖರ್ಚು ಮಾಡದೆ, ಆ ಹಣವನ್ನು ಇವರಿಗಾಗಿ ವಿನಿಯೋಗಿಸಿ ತಮ್ಮ ಸಮಯ, ಶ್ರಮ ಬಳಸಿದರಾದರೆ ಎಷ್ಟೋ ಸುಧಾರಣೆ ಆದೀತು.
ಇಲ್ಲಿನ ವಿಡಂಬನೆ ಎಂದರೆ, ಧರ್ಮದ ಕೆಲಸ ಅಂದ್ರೆ ಪಿಕ್ನಿಕ್ ಸಮಾನ. ಆದರೆ ಇಂಥ ಹೋಮ್ಸ್ ಗಾಗಿ ಕೆಲಸ ಮಾಡೋದು ಅಂದ್ರೆ ಕೆಸರಲ್ಲಿ ಕಾಲಿಟ್ಟಂತೆ. ಸಹಜವಾಗಿಯೇ ವಾಲೆಂಟಿಯರ್ಸ್ ನ ಇಂಥ ಕರ್ತವ್ಯ ಥ್ಯಾಂಕ್ ಲೆಸ್ ಆಗಿಬಿಡುತ್ತದೆ, ಅವರ ಈ ಕೆಲಸಕ್ಕೆ ಬದಲಾಗಿ ಯಾರೂ ಬೆನ್ನು ತಟ್ಟುವವರು ಇರುವುದಿಲ್ಲ. ಆದರೆ ಧರ್ಮದ ಕೆಲಸದಲ್ಲಿ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಾದರೂ ಎಲ್ಲ ಸರಿಹೋದೀತೆಂಬ ಆಶಾಭಾವನೆ ಇರುತ್ತದೆ. ಈ ಹೋಮ್ಸ್ ನ ಸಂಚಾಲಕರು ಧರ್ಮದ ಗುತ್ತಿಗೆದಾರರಂತೆ ಮಾತು ಬೆಳೆಸುವ, ಪ್ರಚಾರ ಮಾಡುವವರಲ್ಲ.
ಧರ್ಮದ ಹೆಸರಲ್ಲಿ ಹಣ, ಸಮಯ ಹಾಳು ಮಾಡುವುದು ಕೇವಲ ಮೂರ್ಖತನವೇ ಸರಿ. ಅದರ ಬದಲಿಗೆ ಇಂಥ ಶೆಲ್ಟರ್ ಹೋಮ್ಸ್, ಚಿಕ್ಕ ಮಕ್ಕಳ ಅನಾಥಾಶ್ರಮಗಳು, ವೃದ್ಧಾಶ್ರಮಗಳು….. ಎಲ್ಲಾ ಕಡೆ ಹೋಗಿ ಶ್ರಮದಾನ, ತಮ್ಮ ಕೈಲಾದ ಆರ್ಥಿಕ, ಇನ್ನಿತರ ಸಾಮಗ್ರಿಗಳ ದಾನ ಮಾಡುವುದು ಎಷ್ಟೋ ಉತ್ತಮ. ಆದರೆ ಸಾಮಾಜಿಕವಾಗಿ ಎಲ್ಲರೂ ಇದನ್ನು ತಕ್ಷಣ ಒಪ್ಪಿಕೊಳ್ಳುವವರಲ್ಲ.
ದಕ್ಷಿಣ ದೆಹಲಿಯಂಥ ಹೋಮ್ಸ್, ಅನಾಥಾಲಯಗಳು ಇಡೀ ದೇಶದ ತುಂಬಾ ಹರಡಿವೆ. ಎಲ್ಲದರ ಸ್ಥಿತಿಯೂ ಹೆಚ್ಚೂ ಕಡಿಮೆ ಒಂದೇ ಎನ್ನಬಹುದು. ಬಹಳ ಕಡೆ ಹೆಣ್ಣುಮಕ್ಕಳ ದೇಹ ದಂಧೆ ಮಾಮೂಲಿ. ಅನುಕೂಲಸ್ಥ ಪರಿವಾರದ ಹೆಂಗಸರು ತಾವಾಗಿ ಮುಂದೆ ಬಂದು ವಾಲೆಂಟಿಯರ್ ಆಗಿ ಇವುಗಳ ಹೊಣೆ ಹೊರುವವರೆಗೂ ಇದಕ್ಕೆ ಕೊನೆ ಇಲ್ಲ.
ಸ್ವಾತಂತ್ರ್ಯ ಹಾಗೂ ಗುಲಾಮಗಿರಿಯಲ್ಲಿನ ವ್ಯತ್ಯಾಸ
ಹೆಂಗಸರ ಹಕ್ಕುಗಳ ವಿಷಯ ಬಂದಾಗ, ಎಲ್ಲಕ್ಕೂ ಮೊದಲು ಅಡ್ಡಿಪಡಿಸುವವರೇ ಅಮ್ಮಂದಿರು, ಅತ್ತೆಯರು, ಅಜ್ಜಿಯರು, ಮನೆತನದ ಹಿರಿಯ ಹೆಂಗಸರು. ಮಗಳಿಗೆ ಎಲ್ಲಾ ಹಕ್ಕು ಸಿಕ್ಕಿಬಿಟ್ಟರೆ ಅವಳು ಎಲ್ಲಿ ಕೆಟ್ಟು ಹೋಗುತ್ತಾಳೋ ಎಂಬುದು ಇವರ ಹೆದರಿಕೆ. ಒಂದು ಹಂತದವರೆಗೆ ಇವರ ಯೋಚನೆ ಸರಿ. ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಹೆಚ್ಚು ಜನ ಸ್ವಾತಂತ್ರ್ಯ ಬಯಸುವುದಿಲ್ಲವಂತೆ. ಏಕೆಂದರೆ ಸ್ವಾತಂತ್ರ್ಯ ಅಂದ್ರೆ ಜವಾಬ್ದಾರಿಯೂ ಇರುತ್ತದೆ. ಹೀಗಾಗಿ ಜನ ಯಾವ ಜವಾಬ್ದಾರಿ ಹೊರಲಿಕ್ಕೂ ಸಿದ್ಧರಿಲ್ಲ.
ಹಿಂದಿನ ತಲೆಮಾರು ಹಾಗೂ ಈಗಿನವರನ್ನೂ ಕೂಡಿಸಿ, ಜವಾಬ್ದಾರಿ ಎಂದ ತಕ್ಷಣ ಓಡಿಹೋಗುವವರೇ ಹೆಚ್ಚು. ಇದಕ್ಕಾಗಿ ಅವರು ತಮ್ಮ ಸ್ವಾತಂತ್ರ್ಯ, ಹಕ್ಕುಗಳನ್ನು ಕಳೆದುಕೊಳ್ಳಲಿಕ್ಕೂ ರೆಡಿ. ಇಂದಿಗೂ ಸಹ ಹುಡುಗಿಯರು ಮನೆಯ ಹಿರಿಯರು ಆರಿಸಿದ ಬಟ್ಟೆಯನ್ನೇ ಧರಿಸುತ್ತಾರೆ, ಅವರ ಆದೇಶದಂತೆ ತಮ್ಮ ಹೆಜ್ಜೆ ಇರಿಸುತ್ತಾರೆ. ಅವರ ಮಾತಿನಂತೆಯೇ ಮದುವೆ ಆಗುತ್ತಾರೆ. ಅದಾದ ಮೇಲೆ ಪತಿ, ಅತ್ತೆಮನೆಯವರು, ತವರಿನವರ ಬಳಿ ತಮ್ಮ ಸ್ವಾತಂತ್ರ್ಯ ಅಡವಿರಿಸಿ ಸುಮ್ಮನಾಗುತ್ತಾರೆ.
ಭಾರತದಲ್ಲಿ ಮಂದಿರ, ಮಸೀದಿ, ಚರ್ಚುಗಳಲ್ಲಿ ಹೆಂಗಸರ ದಂಡು ಸದಾ ನೆರೆದಿರುತ್ತದೆ. ದೇವರೊಬ್ಬನೇ ಜವಾಬ್ದಾರಿ ವಹಿಸಿಕೊಂಡು ತಮ್ಮೆಲ್ಲ ಕಷ್ಟ ಕಳೆಯುತ್ತಾನೆ ಎಂದು ನಂಬುತ್ತಾರೆ. ಅವರು ತಮ್ಮ ಕೆಲಸ ಆಗಬೇಕೆಂದರೂ ಗಂಡಸರು, ಮನೆ ಹಿರಿಯರು, ದೇವರ ಮೊರೆ ಹೋಗುತ್ತಾರೆಯೇ ವಿನಾ ತಾವೇ ಪರಿಹಾರ ಕಂಡುಕೊಳ್ಳುವುದಿಲ್ಲ.
ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುವುದರ ಅರ್ಥ ಮನೆಯವರ ಗುಲಾಮಗಿರಿ ಮಾಡುವುದು. ತಾವೇ ಗಳಿಸಿದರೂ ಅದರ ನಿರ್ವಹಣೆಯ ಗೋಜಿಗೆ ಹೋಗದೆ, ಎಲ್ಲವನ್ನೂ ಪತಿಯ ತಲೆಗೆ ಅಂಟಿಸಿ ನೆಮ್ಮದಿಯಾಗಿ ಇದ್ದುಬಿಡುವುದು. ಮಕ್ಕಳ ಎಲ್ಲಾ ಕೆಲಸ, ಮನೆ ಮಂದಿಯ ಚಾಕರಿ…. ಎಲ್ಲಾ ವಹಿಸಿಕೊಳ್ಳಲು ಮುಂದಾಗುತ್ತಾರೆ. ಇಂಥ ಕೆಲಸ ಯಾರು ಬೇಕಾದರೂ ಮಾಡಬಹುದು, ಆದರೆ ತನ್ನ ಇಚ್ಛೆಯಂತೆ ತನ್ನ ಕೆಲಸಗಳನ್ನು ತನಗೆ ಬೇಕಾದಂತೆ ಮಾಡಿಕೊಳ್ಳುವುದು ತೃಪ್ತಿದಾಯಕ. ಇನ್ನೊಂದು ಎಂದರೆ, ಮನೆಯವರು ಸ್ವಲ್ಪ ಕೋಪ ಮಾಡಿಕೊಳ್ಳದಂತೆ, ಯಾರ ಆದೇಶದ ಉಲ್ಲಂಘನೆಯೂ ಆಗದಂತೆ ಮಾಡುತ್ತವೆ ಇರುವುದು.
ಸ್ವಾತಂತ್ರ್ಯಕ್ಕೂ ಗುಲಾಮಗಿರಿಗೂ ಸ್ವಲ್ಪ ಮಾತ್ರ ವ್ಯತ್ಯಾಸ ಇದೆ. ಶ್ರೀಮಂತರ ಮನೆಯ ಗುಲಾಮ ಬಡವರ ಮನೆಯ ಮಾಲೀಕನಿಗಿಂತ ಹೆಚ್ಚು ಸುಖಿಯಾಗಿ ಇರಬಲ್ಲ, ಆದರೆ ತನ್ನಿಷ್ಟದಂತೆ ಏನೂ ಮಾಡಲಾರ. ಪತ್ನಿ, ಮಗಳು ಎಷ್ಟೇ ಕಲಿತಿರಲಿ ಅಥವಾ ಬಿಡಲಿ, ಪತಿ ಅಥವಾ ಮನೆಯ ಹಿರಿಯರ ಕಟ್ಟುಪಾಡಿಗೆ ಅಂಟಿಕೊಂಡಿದ್ದರೆ, ಅವರು ಎಂದೂ ಕ್ರಿಯಾಶೀಲರಾಗಲು ಸಾಧ್ಯವೇ ಇಲ್ಲ. ಅವರು ಎಂದೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗುವುದಿಲ್ಲ. ಮನೆಗೆ ಏನೇ ಅಪಾಯ ಬರಲಿ, ಅದನ್ನು ಎದುರಿಸಲು ಹೋಗುವುದಿಲ್ಲ.
ಗುಲಾಮಗಿರಿಯ ಹೆಂಗಸರು ಎಂದೂ ಪೂರ್ತಿಯಾಗಿ ಪ್ರೊಡಕ್ಟಿವ್ ಆಗಿರುವುದಿಲ್ಲ. ಏಕೆಂದರೆ ಅವರ ಬುದ್ಧಿಮತ್ತೆ ಬೆಳೆಯಲು ಅವಕಾಶವೇ ಸಿಗುವುದಿಲ್ಲ. ಹೆಂಗಸರಿಗೆ ಈಗ ಸಿಕ್ಕಿರುವ ಅರ್ಧಂಬರ್ಧ ಸ್ವಾತಂತ್ರ್ಯ, ಅದೂ ಸಂಚಿನಿಂದ ಕೂಡಿದ್ದೇ! ಏಕೆಂದರೆ ಅಸಲಿಗೆ ಇಂದಿಗೂ ಅವರು ಸಮಾಜದ ಕಾನೂನಿನಿಂದ ಮುಕ್ತರಲ್ಲ, ತಮಗೆ ಸಿಕ್ಕಿರುವುದನ್ನೆ ಪಾಲಿಗೆ ಬಂದ ಪಂಚಾಮೃತ ಎಂದು ಭಾವಿಸುವ ದುಸ್ಥಿತಿಯಲ್ಲಿದ್ದಾರೆ.