– ರಾಘವೇಂದ್ರ ಅಡಿಗ ಎಚ್ಚೆನ್.
ಎರಡು ದಶಕದಿಂದ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾ ರಂಗದಲ್ಲಿ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದ ನಿರ್ದೇಶಕ ಅರ್ಜುನ್ ಡೋಣೂರ್
ಈಗ ಮಕ್ಕಳ ಚಿತ್ರವೊಂದನ್ನು ನಿರ್ಮಾಣ ನಿರ್ದೇಶನ ಮಾಡುವ ಮೂಲಕ ಸ್ವತಂತ್ರ ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.ಈ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಶ್ರೀ ರೇಣುಕಾಂಭ ಡಿಜಿಟಲ್ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿದೆ. ಲಹರಿ ಸಂಸ್ಥೆಯ ಸಂಸ್ಥಾಪಕರಾದ ಲಹರಿ ವೇಲು ಅವರು “ಲಕ್ಶ್ಯ” ಸಿನಿಮಾದ ಆಡಿಯೋ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
“ಲಕ್ಶ್ಯ” ಎನ್ನುವ ಮಕ್ಕಳ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ ತೊಂಬತ್ತರ ದಶಕದಲ್ಲಿ ನಡೆದೊಂದು ಕಥೆಯಾಗಿದ್ದು ಇದಕ್ಕೆ ಸಮೀಪವಾಗಿರುವ ಘಟನೆಯೊಂದರ ಪ್ರೇರಣೆಯಿಂದ ಚಿತ್ರ ತಯಾರಾಗಿದೆ. ಮಕ್ಕಳು ತಮ್ಮ ಲಕ್ಶ್ಯ ಎಂದರೆ ಗುರಿಯ ಸಾಧನೆಗಾಗಿ ಹೇಗೆಲ್ಲಾ ಸಂಘ್ರ್ಷ, ಹೋರಾಟ, ಶ್ರಮ ವಹಿಸುತ್ತಾರೆ ಎನ್ನುವುದು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
“ಲಕ್ಷ್ಯ” ಸಿನಿಮಾ ಇದೇ ಜುಲೈ ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆ ಇದ್ದು ಚಿತ್ರವನ್ನು ಒಟ್ಟೂ ೩೦ ದಿನ ಬಾಗಲಕೊಟೆಯ ಸುತ್ತಮುತ್ತ ವಿವಿಧ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗಿದೆ. ಕರಕಲ್ ಮಟ್ಟಿ, ಕಲಾದಿಗಿ, ಕೂಡಲಸಂಗಮ, ಮೊದಲಾದೆಡೆಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಆರವ್ ರಿಷಿಕ್ ಅವರ ಸಂಗೀತದಲ್ಲಿ ಸಿನಿಮಾದಲ್ಲಿ ಮುರು ಹಾಡುಗಳಿದೆ. ಜಾತ್ರೆ ಕುರಿತಂತೆ ಒಂದು ಹಾಡಿದ್ದರೆ ಇನ್ನೊಂದು ಹೋಳಿ ಹಬ್ಬದ ಹಾಡು ಮತ್ತು ತತ್ವಪದವಿದೆ. ಅವುಗಳೆಲ್ಲವೂ ಲಹರಿ ಸಂಸ್ಥೆಯಡಿಯಲ್ಲಿ ಬರುವ ಎಂಆರ್ ಟಿ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ. ಹಾಡುಗಳ ಸಾಹಿತ್ಯವನ್ನು ದೊಡ್ಡರಂಗೇಗೌಡ, ಶಂಕರ್ ಪಾಗೋಜಿ ಹಾಗೂ ಶಿವಾನಂದ ಭೂಷಿ ಅವರುಗಳು ಬರೆದಿದ್ದಾರೆ. ಅನಿರುದ್ಧ ಶಾಸ್ತ್ರಿ, ಮಧ್ವೇಶ್ ಬರದ್ವಾಜ್, ಚೇತನ್ ನಾಯಕ್ ಹಾಡಿಗೆ ಹಿನ್ನೆಲೆ ಗಾಯಕರಾಗಿದ್ದಾರೆ.
ಚಿತ್ರದಲ್ಲಿ ರಿತೇಶ್ ಹಿರೇಮಠ್ ಹಾಗೂ ನಿಧಿ ತೇಜಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡೋಣೂರ್ (ಚಿತ್ರವನ್ನು ನಿರ್ಮಾಣ ಮಾಡಿದ್ದು ಚಿತ್ರಕ್ಕೆ ಎಂ.ಡಿ. ಹಳ್ಳಿಕಟ್ಟಿಯವರ ಛಾಯಾಗ್ರಹಣ ಇದೆ.