ಕೆಲಸದ ಒತ್ತಡದಲ್ಲಿ ಪರ್ಸ್, ಮೊಬೈಲ್, ಕನ್ನಡಕ, ಮತ್ತಿನ್ನೇನೋ ಚಿಕ್ಕಪುಟ್ಟ ವಸ್ತುಗಳನ್ನು ಜನರು ಮರೆತು ಹೋಗುವುದು ಸಾಮಾನ್ಯ. ಆದರೆ, ಪ್ರವಾಸದ ತರಾತುರಿಯಲ್ಲಿ ಕೇಂದ್ರ ಕೃಷಿ ಸಚಿವ ತಮ್ಮ ಹೆಂಡತಿಯನ್ನೇ ಮರೆತು ಹೋಗಿದ್ದಾರೆ.!
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರವಾಸದ ಗಡಿಬಿಡಿಯಲ್ಲಿ ತಮ್ಮ ಪತ್ನಿ ಸಾಧನಾ ಸಿಂಗ್ ಅವರನ್ನೇ ಬಿಟ್ಟು ವಿಮಾನ ಹತ್ತಲು ಮುಂದಾಗಿದ್ದರು. ಹೌದು, ಶಿವರಾಜ್ ಸಿಂಗ್ ಚೌಹಾಣ್ ಅವರು ಜುನಾಗಢದಲ್ಲಿರುವ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಗ ಪತ್ನಿಯನ್ನು ಅಲ್ಲೇ ಬಿಟ್ಟು ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದರು.
ರಾತ್ರಿ 8 ಗಂಟೆಗೆ ವಿಮಾನವಿದ್ದುದರಿಂದ ಅದೇ ಗಡಿಬಿಡಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಕೋಟ್ ಕಡೆ ಹೋಗಿದ್ದರು. ಅದಾದ ಸ್ಪಲ್ಪ ಸಮಯದ ಬಳಿಕ ಪತ್ನಿ ಬಗ್ಗೆ ನೆನಪಿಸಿಕೊಂಡ ಅವರು, ಕೂಡಲೇ 22 ವಾಹನಗಳ ಬೆಂಗಾವಲು ಪಡೆಯೊಂದಿಗೆ ಜುನಾಗಢದ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಹಿಂತಿರುಗಿದ್ದಾರೆ. ಆಗ ಅವರ ಪತ್ನಿ ಸಾಧನಾ ಕಾಯುವ ಕೋಣೆಯಲ್ಲಿ ಕುಳಿತಿದ್ದರಂತೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ