ಇದು ನಾವಾಗಿ ಹೇಳುತ್ತಿರುವ ಮಾತಲ್ಲ, ಕರೀನಾ ತನ್ನ ವ್ಯವಹಾರದಿಂದ ಹೀಗೆಲ್ಲ ಆಡುತ್ತಿದ್ದಾಳೆ. `ಕಾಫಿ ವಿತ್‌ ಕರಣ್‌’ ಶೋನಲ್ಲಿ ದೀಪಿಕಾಳಿಗೆ ಸಂಬಂಧಿಸಿದ ಪ್ರಶ್ನಾಳಿಗೆ ಕರೀನಾ ಬೇಕೆಂದೇ ಮುಖ ಕಿವುಚಿದ್ದಲ್ಲದೆ, ಇದರ ಹಿಂದಿನ ಸೀಸನ್‌ ನಲ್ಲಿ ಬಾಯಿಗೆ ಬಂದಂತೆ ಅವಳ ವಿರುದ್ಧ ಕೆಂಡ ಕಾರಿದ್ದಳು. ಇದರಿಂದ ಕರೀನಾಳ ಮುಖದಲ್ಲಿನ ಅಸೂಯೆ ಎಲ್ಲರಿಗೂ ಸ್ಪಷ್ಟವಾಗಿತ್ತು! ಈ ಸಂದರ್ಭದಲ್ಲಿ ಅವಳನ್ನು, ನೀನೂ ದೀಪಿಕಾ ಒಂದು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡು ಒಂದೇ ಕಡೆ ನಿಂತುಬಿಟ್ಟರೆ ಏನು ಮಾಡ್ತೀಯಾ? ಎಂದಿದ್ದಕ್ಕೆ, ಅವಳು ತನ್ನನ್ನು ತಾನೇ ಅಲ್ಲೇ ಕೊಂದುಕೊಳ್ಳುವುದಾಗಿ ಸಿಡುಕಿದಳು. ಹಾಗಾದರೆ ಈ ಮಾತಿಗೆ ಏನಮ್ಮ ಅರ್ಥ ಕರೀನಾ….? ದೀಪಿಕಾ ಕಂಡ್ರೆ ನಿನಗ್ಯಾಕೆ ಇಷ್ಟು ಅಸೂಯೆ? ಎಂದು ವರದಿಗಾರರು ಕರೀನಾಳನ್ನು ಕಿಚಾಯಿಸುತ್ತಿದ್ದಾರೆ!

Rajneeti-Nahi-Raajdharm

ರಾಜನೀತಿ ಅಲ್ಲ ರಾಜಧರ್ಮ

2010ರಲ್ಲಿ ಪ್ರಕಾಶ್‌ ರಾಜ್‌ ರ `ರಾಜನೀತಿ’ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಧೂಳೆಬ್ಬಿಸಿತ್ತು. ಸುದ್ದಿಗಾರರ ಪ್ರಕಾರ ಈಗ ಆತ ಈ ಚಿತ್ರದ ಪಾರ್ಟ್‌ ಗೆ ಅಣಿಯಾಗುತ್ತಿದ್ದಾರಂತೆ. `ರಾಜನೀತಿ-2′ ಬದಲಿಗೆ `ರಾಜಧರ್ಮ’ ಅಂತ ಹೆಸರಿಡಲಾಗಿದೆ. ಇಂದಿನ ಪ್ರಸ್ತುತ ರಾಜಕೀಯದ ಕುರಿತು ಚಿತ್ರ ಮಾಡ್ತಿದ್ದಾರಾ? ಪ್ರಸ್ತುತ ರಾಜಕೀಯದಲ್ಲಿ ಅದಕ್ಕೆ ಬೇಕಾದ ಮಸಾಲೆಗೇನೂ ಕೊರತೆ ಇಲ್ಲ. ಇಂದಿನ ಪರಿಸ್ಥಿತಿಯ ಯಥಾವತ್‌ ಚಿತ್ರಣವನ್ನು ಪರದೆಯಲ್ಲಿ ತೋರಿಸಿದಾಗ ಮಾತ್ರ, ಈ ಚಿತ್ರ ಸತ್ಯದ ಸಾಕ್ಷಾತ್ಕಾರ ಒದಗಿಸಬಲ್ಲದು.

Nikhar-Gaya-Fatima-Ka-Career

ಚಿಗುರಿಕೊಂಡ ಫಾತಿಮಾಳ ಕೆರಿಯರ್

`ದಬಂಗ್‌’ ಚಿತ್ರದ ನಂತರ ಫಾತಿಮಾ ಸನಾಳಿಗೆ ಹೇಳಿಕೊಳ್ಳುವಂಥ ಯಾವ ದೊಡ್ಡ ಹಿಟ್‌ ಚಿತ್ರ ಸಿಗಲೇ ಇಲ್ಲ. ಆದರೆ ಅವಳು ಸತತ ಒಂದಲ್ಲ ಒಂದು ಪ್ರಾಜೆಕ್ಟ್ ನಲ್ಲಿ ಬಿಝಿ ಆಗಿದ್ದಳು, ಏನಾದರೂ ಕಲಿಯುತ್ತಿದ್ದಳು ಎಂಬುದೇ ಉತ್ತಮ ವಿಚಾರ. ಈ ಕಾರಣದಿಂದಲೇ ಈಕೆಗೆ `ಸ್ಯಾಮ್ ಬಹಾದ್ದೂರ್‌’ ಚಿತ್ರದಲ್ಲಿ ಮುಖ್ಯ ಪಾತ್ರ ದೊರಕಿದೆ. ಹೀಗಾಗಿ ಇವಳ ಕೆರಿಯರ್‌ ಗ್ರಾಫ್ ಚಿಗುರಿದೆ. ಈ ಸ್ಪೀಡನ್ನು ಈಕೆ ಸತತ ನಿಭಾಯಿಸಬೇಕಷ್ಟೆ. ಅಂದಹಾಗೆ, ಆಮೀರ್‌ ಖಾನ್‌ ಜೊತೆ ಇವಳ ದೋಸ್ತಿ ಚೆನ್ನಾಗಿಯೇ ಮುಂದುವರಿದಿದೆ, ಹೀಗಾಗಿ FB‌ನಲ್ಲಿ ಈ ಜೋಡಿ ಆಗಾಗ ಮಿಂಚುತ್ತಿರುತ್ತದೆ.

Wapsi-Ki-Koshish-Me-Tara

ತಾರಾ ಮತ್ತೆ ವಾಪಸ್ಬರ್ತಾಳಾ?

ಬಾಲಿವುಡ್‌ ನ ತಾರಾಳ ಪ್ರೇಮ ವ್ಯವಹಾರ ಮುರಿದು ಬಿದ್ದಾಗಿನಿಂದ, ಅವಳು ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇವಳ ಮಾಜಿ ಪ್ರೇಮಿ ಆದರ್‌ ಜೈನ್‌, ಬೇರೊಬ್ಬ ಗರ್ಲ್ ಫ್ರೆಂಡ್‌ ಜೊತೆ ಸುತ್ತುತ್ತಿದ್ದಾನೆ! ಇರಲಿ, ಸದ್ಯಕ್ಕಂತೂ ತಾರಾ `ಅಪೂರ್ವಾ’ ಚಿತ್ರದಿಂದ ಬೆಳ್ಳಿ ತೆರೆಗೆ ವಾಪಸ್ಸಾಗಿದ್ದಾಳೆ. ಇದರಲ್ಲಿ ಇವಳ ನಟನೆಯ ಬಗ್ಗೆ ಎಲ್ಲೆಲ್ಲೂ ಮೆಚ್ಚುಗೆ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಹೆಣ್ಣಿನ ಕಥೆ ಇದೆ, ನಾಯಕಿ ಪಾತ್ರವನ್ನು ತಾರಾ ಬಹಳ ಚೆನ್ನಾಗಿ ನಿಭಾಯಿಸಿದ್ದಾಳಂತೆ. ಪ್ರೇಮಲೋಕ ಬಿಟ್ಟು ವಾಸ್ತವಕ್ಕೆ ಬಾ ತಾಯಿ, ಆಗಲೇ ನಿನ್ನ ಕೆರಿಯರ್‌ ಉದ್ಧಾರ ಆಗೋದು, ಎನ್ನುತ್ತಿದ್ದಾರೆ ಹಿತೈಷಿಗಳು.

Har-Kirdar-Me-Fit

ಎಲ್ಲಾ ಪಾತ್ರಗಳಲ್ಲೂ ಈತ ಪರ್ಫೆಕ್ಟ್

`ಉರಿ’ ಚಿತ್ರದ ವೀರ ಸಿಪಾಯಿ ಇರಲಿ, `ಝರಾ ಹಟ್ಕೆ ಝರಾ ಬಚ್ಕೆ’ ಚಿತ್ರದ ಜಿಪುಣಾಗ್ರೇಸ ಪತಿ ಆಗಿರಲಿ, `ಸ್ಯಾಮ್ ಬಹಾದ್ದೂರ್‌’ ಚಿತ್ರದ ಫೀಲ್ಡ್ ಮಾರ್ಶಲ್ ಪಾತ್ರ ಇರಲಿ, ವಿಕ್ಕಿ ಕೌಶ್‌ ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಬಲ್ಲ! `ಸ್ಯಾಮ್’ ಚಿತ್ರದಲ್ಲಿ ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣಿಕ್‌ ಶಾರ ಲುಕ್ಸ್ ಹಾವಭಾವಗಳನ್ನು ವಿಕ್ಕಿ ನಿಭಾಯಿಸಿದಂತೆ, ಬೇರೆಯವರು ಮಾಡುತ್ತಿದ್ದರೋ ಇಲ್ಲವೇ ಎಂಬಷ್ಟು ಈತ ಎಲ್ಲರ ಹೊಗಳಿಕೆ ಗಿಟ್ಟಿಸುತ್ತಿದ್ದಾನೆ. ಆ್ಯಕ್ಷನ್‌ ಚಿತ್ರಗಳ ಹಾವಳಿಯಲ್ಲಿ ಹೂತುಹೋಗಿರುವ ಖಾನ್‌ ಇರಲಿ, ಮಸಾಲೆ ಚಿತ್ರಗಳ ಫ್ಯಾಕ್ಟರಿಯಲ್ಲಿ ಕಳೆದುಹೋಗಿರುವ ಕುಮಾರ್‌ ಇರಲಿ, ಎಲ್ಲರೂ ವಿಕ್ಕಿಯಿಂದ ದೊಡ್ಡ ಬಜೆಟ್‌ ಚಿತ್ರಕ್ಕಿಂತ ಗಟ್ಟಿ ಪಾತ್ರದ ಚಿತ್ರಗಳು ಯಶಸ್ವಿಯಾಗುತ್ತವೆ ಎನ್ನುವುದನ್ನು ಕಲಿಯಲೇಬೇಕು. ಕೋಟ್ಯಂತರ ಬಜೆಟ್‌ ಚಿತ್ರಗಳ ಹಂಗು ತೊರೆದು, ಉತ್ತಮ ಕಥೆಯ ಗಟ್ಟಿ ಪಾತ್ರಗಳಿಂದ ವಿಕ್ಕಿ ಯಶಸ್ವಿ ಎನಿಸುತ್ತಿದ್ದಾನೆ. ಕೈಹಿಡಿದ ಕತ್ರೀನಾಳ ಭಾಗ್ಯ ಇರಬಹುದೇ?

Kya-Acting-Ke-Lie-Nakaab-Utra

ನಟನೆಗಾಗಿ ಈತ ಮುಖವಾಡ ಕಳಚಿದನೇ?

ಪೋರ್ನ್‌ ಚಿತ್ರಗಳ ತಯಾರಿಯ ಆರೋಪ, ಅದಕ್ಕಾಗಿ ಜೈಲ್, ನಂತರ ಬೇಲ್….. ಎಲ್ಲವೂ ಆಯಿತು. ನಂತರ ಸುದ್ದಿಗಾರರಿಂದ ಮುಖ ಮರೆಸಿಕೊಳ್ಳಲು, ಶಿಲ್ಪಾ ಶೆಟ್ಟಿಯ ಪತಿರಾಯ ಈ ರಾಜ್‌ ಕುಂದ್ರಾ ಮುಖವಾಡ ಧರಿಸಿದ್ದೂ  ಆಯ್ತು. ಈಗ ಈತ ಮುಖವಾಡ ಕಳಚಿ, ಹೋಂ ಪ್ರೊಡಕ್ಷನ್‌ ಚಿತ್ರದಲ್ಲಿ ತಾನೇ ನಾಯಕನಾಗಿ ನಟಿಸುತ್ತಿದ್ದಾನೆ. ಈ ಮುಖವಾಡ ದಿಢೀರ್‌ ಎಂದು ಕಳಚಿ ಬಿದ್ದದ್ದು ಹೇಗೆ ಅಂತ ಯಾರಿಗೂ ಗೊತ್ತಾಗಲಿಲ್ಲ. ಇದು ಚಿತ್ರದ ಪಾತ್ರಕ್ಕಾಗಿಯೋ ಅಥವಾ ಪ್ರಪಂಚಕ್ಕೆ ತನ್ನ ಹೊಸ ಮುಖ ತೋರಿಸಲೋ…..?

Ritayar-Hone-Ka-Samay-Aa-Gaya

ರಿಟೈರ್ಆಗಲೇ ಬೇಕಿದೆ ಖಾನ್

ಬಾಲಿವುಡ್‌ ನ ಖಾನ್‌ ಗಳಿಗೆ ಬುದ್ಧಿ ಕೆಟ್ಟಿಲ್ಲ ತಾನೇ? ಭಾರಿ ಭಾರಿ ಆ್ಯಕ್ಷನ್‌ ಹೀರೋ ಆಗಿಯೇ ಮೆರೆಯುವ ಇವರ ದುಸ್ಸಾಹಸಕ್ಕೆ ಏನು ತಾನೇ ಹೇಳುವುದು? ಪಠಾಣ್‌, ಜಾನ್‌ ನಂಥ ಫ್ಲಾಪ್‌ ಚಿತ್ರಗಳ ನಂತರ ಸಲ್ಮಾನ್‌ ನ `ಟೈಗರ್‌’ ಯಂಥ ತಲೆಬಾಲವಿಲ್ಲದ ಚಿತ್ರ ಬಿಡುಗಡೆ ಆಗಿದೆ. ಇದರಲ್ಲಿ ಅತ್ತ ಯುವಜನತೆಗೆ ಯಾವ ಸಂದೇಶವೂ ಇಲ್ಲ, ಇತ್ತ ಕಥಾಹಂದರವೂ ಇಲ್ಲ. ಇನ್ನು ಸಲ್ಮಾನ್ ನಟನೆ ನೋಡಿದರೆ, ಸುಸ್ತಾದಂತಿದೆ! ಹೀಗಾಗಿ ಈತ ಇಂಥ ಬೇಕಾರ್‌ ಪಾತ್ರ ಮಾಡುವ ಬದಲು ರಿಟೈರ್‌ ಆಗುವುದೇ ಲೇಸು. ನಟನೆಯಿಂದ ರಿಟೈರ್‌ ಆದ ಮಾತ್ರಕ್ಕೆ ಈ ಪ್ರಪಂಚದಲ್ಲಿ ಬದುಕಲು ಬೇರೆ ವೃತ್ತಿಗಳಿಲ್ಲವೇ? ಮನೆ ಮಾತ್ರವಲ್ಲ, ಹೆಸರೂ ಬದಲಿಸಿಕೊಂಡ ಕಪಿಲ್ ಅಯ್ಯೋ! ಹೀಗೆಂದ ಮಾತ್ರಕ್ಕೆ ಗಾಬರಿ ಆಗಬೇಕಾದ ಅಗತ್ಯವಿಲ್ಲ. ಮನೆ ಬದಲಾವಣೆ ಅಂದ್ರೆ, ಕಪಿಲ್‌ ಶರ್ಮ ಟಿವಿ ಬಿಟ್ಟು ಇದೀಗ OTT ದಾರಿ ಹಿಡಿದಿದ್ದಾನೆ. ಹೆಸರಿನ ಬದಲಾವಣೆ ಅಂದ್ರೆ, ಈತನ ಶೋಗೆ ಈಗ ಬೇರೆಯೇ ಹೆಸರಿಡ್ತಾರಂತೆ! ವಿಶೇಷ ಸಮಾಚಾರ ಅಂದ್ರೆ, ಈತನ ಕಾಮಿಡಿ ಪರಿವಾರದಲ್ಲಿ ಒಂದಿಬ್ಬರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಈತನ ಜೊತೆ ಹೊಸ ಮನೆಗೆ ಬಂದಿದ್ದಾರೆ! ಮುಂದೆ? ಈತ OTTಯ ಲಾಭ ಪಡೆದು ಪ್ರೇಕ್ಷಕರ ಮೆಚ್ಚುಗೆಗಾಗಿ ತನ್ನ ಸಂಭಾಷಣೆಯಲ್ಲಿ ಅದೇ ಹಿಂದಿನ ದ್ವಂದ್ವಾರ್ಥಗಳ ಸುರಿಮಳೆ ಸುರಿಸುತ್ತಾನಾ ಅಥವಾ ಮನೆಮಂದಿ ಎಲ್ಲಾ ಕುಳಿತು ನೋಡುವಂಥ ಚಿತ್ರ ಮಾಡ್ತಾನಾ….? ಕಾಲವೇ ಉತ್ತರಿಸಬೇಕು.

Adakaar-Jise-Khangala-Nahi-Gaya

ಬ್ರಾಂಡೆಡ್ಪಾತ್ರಗಳಲ್ಲಿ ಕಮರಿಹೋದ ಪ್ರತಿಭೆ

`ಜಂಗಲ್’ ಚಿತ್ರದ ಸೈಕೋ ಪಾತ್ರಧಾರಿ ರಾಜ್‌ ಪಾಲ್ ಗೂ ಈಗಿನ ಕಮೆಡಿಯನ್‌ ರಾಡ್‌ ಪಾಲ್ ಗೂ ಅಜಗಜಾಂತರ ವ್ಯತ್ಯಾಸವಿದೆ. ಬಾಲಿವುಡ್‌ ನಲ್ಲಿ ಯಾವುದೇ ಕಲಾವಿದರ ಒಂದು ಗೆಟಪ್‌ ಪ್ರೇಕ್ಷಕರಿಗೆ ಬಲು ಇಷ್ಟವಾಗಿ ಹೋದರೆ, ಏನೇ ಆದರೂ ಆತ/ಆಕೆ ಅಂಥದ್ದೇ ಪಾತ್ರಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ರಾಜ್‌ ಪಾಲ್ ಮಾತ್ರ ಈ ಕ್ರಮ ಮುರಿದು ಮುನ್ನುಗ್ಗಿದ್ದಾನೆ. ಇದರ ಪರಿಣಾಮ? ಈತನಿಗೆ ಕೆಲಸವೇ ಇಲ್ಲ! OTTಯ ಹೊಸ `ಅಪೂರ್ವಾ’ ಚಿತ್ರದಲ್ಲಿ ಈತನಿಗೆ ನೆಗೆಟಿವ್ ‌ಪಾತ್ರ ಸಿಕ್ಕಿದೆ. ಹೀಗೆ ಎಷ್ಟೋ ಕಲಾವಿದರು ಒಂದೇ ಬ್ರಾಂಡೆಡ್‌ ಪಾತ್ರಕ್ಕೆ ಬಂಧಿಯಾಗುತ್ತಾರೆ. ಅಂಥವರಿಗೆ ತಮ್ಮ ಅಸಲಿ ಪ್ರತಿಭೆ ತೋರಿಸಲು ಅವಕಾಶ ಸಿಗುವುದೇ ಕಷ್ಟ.

Apna-Naam-Khud-Banaya

ತಾನಾಗಿ ಹೆಸರು ಗಳಿಸಿದ ಪ್ರತಿಭಾಶಾಲಿ

ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ತನ್ನ ಜಾವ್ಲೀನ್‌ ಥ್ರೋಯಿಂದ, ಭಾರತೀಯ ಅಪ್ರತಿಮ ಟ್ರಾಕ್‌ಫೀಲ್ಡ್ ಅಥ್ಲೀಟ್‌ ಎನಿಸಿರುವ ನೀರಜ್‌ ಚೋಪ್ರಾ, ಒಲಿಂಪಿಕ್ಸ್ ಸಾಧನೆಗಳಿಂದ ಇದೀಗ ಬಯೋಪಿಕ್‌ ಚಿತ್ರಕ್ಕೆ ಆಧಾರವಾಗಲಿದ್ದಾರೆ. ಉ.ಪ್ರ.ದ ಪಾಣಿಪತ್‌ ನ ಖಂಡಾರಾ ಹಳ್ಳಿಯಿಂದ ಬಂದ ಈ ಹುಡುಗ, ಒಂದು ದಿನ ಈ ಮಟ್ಟಕ್ಕೆ ಬೆಳೆಯಬಲ್ಲ ಎಂದು ಯಾರೂ ಊಹಿಸಿರಲಿಲ್ಲ. ಈಗ ಅಂತಾರಾಷ್ಟ್ರೀಯ ಜಾಹೀರಾತುಗಳ ಎಲ್ಲಾ ಬ್ರಾಂಡ್‌ ಗಳಲ್ಲೂ ಈತ ಮಿಂಚಿದ್ದೇ ಮಿಂಚಿದ್ದು! ನಿಜಕ್ಕೂ ಇಂದಿನ ಯುವಜನತೆಗೆ ನೀರಜ್‌ ಬಲು ಆದರ್ಶಪ್ರಾಯ. ಇಂದಿನ ಯುವಜನತೆ ಸದಾ FB‌ನ ಲೈಕ್ಸ್ ಹಿಂದೆ ಬೀಳದೆ, ನಿಜವಾದ ಸಾಧನೆ ಮಾಡಿದ್ದೇ ಆದರೆ, ಜನ ತಾವಾಗಿ ಲೈಕ್‌ ಮಾಡುತ್ತಾರೆ ಎಂದು ಈತ ನಿರೂಪಿಸಿದ್ದಾನೆ!

Mahilaon-Ki-Chavi-Kharab-Karta-Show

ಹೆಂಗಸರ ಛವಿ ಕೆಡಿಸುವ ಮಹಾನ್ಶೋ

ಹಿಂದಿಯ `ಬಿಗ್‌ ಬಾಸ್‌’ಗೂ ವಿವಾದಕ್ಕೂ ಎಡೆಬಿಡದ ನಂಟು. ಈ ಶೋದ ಹೋಸ್ಟ್ ನಿಂದ ಹಿಡಿದು, ಕೆಲವು ಪಾತ್ರಧಾರಿಗಳವರೆಗೂ ಕಾನೂನಿನ ಪಂಜಾದಡಿ ಸಿಲುಕಿ, ಜೇಲಿನ ರುಚಿ ಕಂಡಿದ್ದಾರೆ. ಸ್ತ್ರೀ ಪಾತ್ರಧಾರಿಗಳಿಗಂತೂ ಶೋಗೆ ಮಸಾಲೆ ತುಂಬುವುದಷ್ಟೇ ಇವರ ಕೆಲಸ ಎಂದಾಗಿದೆ. ಇವರನ್ನು ಚೀಟರ್‌, ವಂಚಕಿ, ಜಗಳಗಂಟಿ, ಪ್ರೇಮಘಾತಕಿ…. ಹೀಗೇ ತೋರಿಸುವುದು. ಹಾಗಿದ್ದರೆ ಈ ಶೋ ಹೆಂಗಸರ ಯಾವ ಮುಖ ತೋರಿಸಲು ಯತ್ನಿಸುತ್ತಿದೆ? ವಿಡಂಬನೆ ಎಂದರೆ, ಇದುವರೆಗೂ ಯಾ ಸ್ತ್ರೀ ಪಾತ್ರಧಾರಿಯೂ ಇದರ ವಿರುದ್ಧ ಸೊಲ್ಲೆತ್ತದೆ ಇರುವುದು! ಇಂದಿನ ಆಧುನಿಕ ತರುಣಿಯರು ತಮ್ಮ ವೈಯಕ್ತಿಕ ಜೀವನದ ಛವಿ ಕೆಡಿಸುವ ಇಂಥ ಶೋಗೆ ಬರುವ ಮೊದಲು, ಇದು ಮುಖ್ಯವೋ ಅಥವಾ ಆದರ್ಶ ಜೀವನವೇ ಎಂಬುದರತ್ತ ಗಮನಹರಿಸಬೇಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ