ಭಾರತದಲ್ಲಿ ಚಿತ್ರ ನಿರ್ಮಾಣ ಅಂತ ಆರಂಭಗೊಂಡಿದ್ದೇ 1913ರಲ್ಲಿ. ಮೊದಲ ಮೂಕಿ ಕಪ್ಪುಬಿಳುಪು ಚಿತ್ರ `ರಾಜ ಹರಿಶ್ಚಂದ್ರ' ಭಾರತೀಯ ಸಿನಿಮಾಗಳಲ್ಲಿ ಆರಂಭದಿಂದಲೇ ಬೆಳ್ಳಿಪರದೆಯಲ್ಲಿ ಭಾರತೀಯ ಹೆಣ್ಣನ್ನು ಬಲು ಅಸಹಾಯಕಿ, ಶೋಷಿತೆ, ಕಣ್ಣೀರು ಹರಿಸುವವಳು, ದೈನ್ಯ ಮೂರ್ತಿ, ಅಪಾರ ದೈಭಕ್ತಿಯುಳ್ಳವಳು, ಸದಾ ಸಂಪ್ರದಾಯಸ್ಥೆ, ಅತ್ತೆಯ ಅಡಿಯಾಳಾಗಿ ಬದುಕುವವಳು, ಎಂಥ ಅಪಮಾನವಾದರೂ ಸಹಿಸಿ ತೆಪ್ಪಗಿರುವಳು..... ಗಂಡ, ಮನೆ, ಮಕ್ಕಳಷ್ಟೇ ತನ್ನ ಪ್ರಪಂಚ ಎಂಬಂತೆ ಅವಳನ್ನು ಬಿಂಬಿಸಲಾಗಿತ್ತು. ಆದರೆ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮ್ಮ ಭಾರತೀಯ ಸಮಾಜದಲ್ಲಿ, ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ಗಂಡಸರಿಗಿಂತ 2 ಹೆಜ್ಜೆ ಸದಾ ಮುಂದಿರುತ್ತಿದ್ದ ಹೆಂಗಸರಿಗೇನೂ ಕೊರತೆ ಇರಲಿಲ್ಲ.

ರಾಣಿ ಲಕ್ಷ್ಮೀಭಾಯಿ, ಬೇಗಂ ಹಝರತ್‌ ಮೆಹಲ್, ಸಾವಿತ್ರಿ ಬಾಯಿಪುಲೆ, ಕಸ್ತೂರಬಾ ಗಾಂಧಿ, ವಿಜಯಲಕ್ಷ್ಮಿ ಪಂಡಿತ್‌, ಕಮಲಾ ನೆಹರೂ, ದುರ್ಗಾಬಾಯಿ ದೇಶ್‌ ಮುಖ್‌, ಸುಚೇತಾ ಕೃಪಾನಿ, ಅರುಣಾ ಆಸಿಫ್‌, ಸರೋಜಿನಿ ನಾಯ್ಡು....... ಹೀಗೆ ನಾಡಿನುದ್ದಕ್ಕೂ ಹೇಳುತ್ತಲೇ ಹೋಗಬಹುದು. ಇವರುಗಳ ಸಂಘರ್ಷಮಯ ಜೀವನವನ್ನು ಅವರ ವೀರತೆಯನ್ನು ಬೆಳ್ಳಿ ಪರದೆಯಲ್ಲಿ ಆ ಕಾಲದಲ್ಲೇ ತೋರಿಸಬೇಕಿತ್ತು, ಆಗ ಇಡೀ ದೇಶ ಈ ವೀರ ನಾರಿಯರ ಕುರಿತಾಗಿ ಸ್ಪಷ್ಟ ಅರಿವು ಹೊಂದಲು ಸಾಧ್ಯವಾಗುತ್ತಿತ್ತು, ಆದರೆ ಹಾಗೇನೂ ಆಗಲಿಲ್ಲ. ಕನ್ನಡದಲ್ಲೂ ಕಿತ್ತೂರು ಚನ್ನಮ್ಮ ಬಿಟ್ಟರೆ ಬೇರೆ ಚಿತ್ರಗಳೇ, ಇಲ್ಲ ಎನ್ನಬಹುದು. ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮನನ್ನು ಯಾರೂ ನೆನೆಸಿಕೊಳ್ಳಲೇ ಇಲ್ಲ.

1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಮೊದಲ ಮಹಿಳೆ ಎಂದರೆ ಬೇಗಂ ಹಝರತ್‌ ಮೆಹಲ್. ಈಕೆ ಇಡೀ ಅರ್ಧ ಪ್ರದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದಳು. ಆದರೆ ಈಕೆ ಕುರಿತು ಇದುವರೆಗೂ ಚಿತ್ರ ಬರಲೇ ಇಲ್ಲ. ರಾಣಿ ಲಕ್ಷ್ಮಿಬಾಯಿ ಬಗ್ಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತ 7 ದಶಕಗಳ ಬಳಿಕ `ಮಣಿಕರ್ಣಿಕಾ' ಸಿದ್ಧವಾಯಿತಷ್ಟೆ.

Hindi-filmo-main-mahilaye

ಹೆಣ್ಣಿನ ಹೀನಾಯ ಸ್ಥಿತಿ

ಒಂದು ವಿಷಯವಂತೂ ನಿಜ, ಭಾರತದಲ್ಲಿ ಸಿನಿಮಾ ಅಂತ ಶುರುವಾದಾಗ, ಜನ ಬಹಳ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು. ಹೆಂಗಸರ ಸ್ಥಿತಿಯಂತೂ ಶೋಚನೀಯವಾಗಿತ್ತು ಎಂದೇ ಹೇಳಬೇಕು. ಸಾಮಾನ್ಯ ಹೆಣ್ಣು ಕೇವಲ ಅಡುಗೆಮನೆ, ಮನೆಗೆಲಸ, ಮಕ್ಕಳ ಪಾಲನೆ, ಹಿರಿಯರ ಸೇವೆ..... ಇಷ್ಟಕ್ಕೆ ಸೀಮಿತವಾಗಿತ್ತು. ಹೆಣ್ಣು ಊರ ಗೌಡನ, ಅತಿ ಶ್ರೀಮಂತನ ದೌರ್ಜನ್ಯಗಳಿಗೆ ಒಳಗಾಗಿ, ರೇಪ್‌ ಆಗುತ್ತಿದ್ದಳು. ಅಂದಿನ ಸಾಂಸಾರಿಕ ಚಿತ್ರಗಳಲ್ಲಿ ಹೆಣ್ಣನ್ನು ಈ ಸ್ಥಿತಿಯಲ್ಲೇ ತೋರಿಸಲಾಗಿತ್ತು.

ಬದಲಾವಣೆಯ ಆರಂಭ

ಸ್ವಾತಂತ್ರಾ ನಂತರ 1957ರಲ್ಲಿ `ಮದರ್‌ ಇಂಡಿಯಾ' ಚಿತ್ರದಲ್ಲಿ ಹೆಣ್ಣಿನ ಭಾವುಕತೆ, ಪರಿಶ್ರಮ, ಆಕ್ರೋಶಗಳನ್ನು ಪದರ ಪದರವಾಗಿ ಬಿಂಬಿಸಲಾಗಿತ್ತು. ಈ ಚಿತ್ರ ಭಾರತೀಯ ಸಿನಿಮಾಗಳ ಆರಂಭಿಕ ಸ್ತ್ರೀಪ್ರಧಾನ ಕ್ಲಾಸಿಕ್‌ ಚಿತ್ರ ಎನಿಸಿತು. ಈ ಚಿತ್ರದಲ್ಲಿ ನಟಿ ನರ್ಗಿಸ್‌ ಒಬ್ಬ ಬಡ ರೈತ ಮಹಿಳೆ ರಾಧಾಳ ಪಾತ್ರ ನಿರ್ವಹಿಸಿದ್ದರು. ತನ್ನ ಇಬ್ಬರು ಮಕ್ಕಳನ್ನು ಸಾಕಿಸಲಹಲು ರಾಧಾ ಪಡುವ ಪಾಡು ಅಷ್ಟಿಷ್ಟಲ್ಲ. ಅದಕ್ಕಾಗಿ ಇಡೀ ಪ್ರಪಂಚದ ವಿರುದ್ಧ ತಿರುಗಿ ಬೀಳುತ್ತಾಳೆ. ಕೊನೆಗೆ ಹಳ್ಳಿಯವರು ಅವಳನ್ನು ನ್ಯಾಯ, ಸತ್ಯಗಳ ದೇವಿ ಎಂದೇ ಭಾವಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ