- ರಾಘವೇಂದ್ರ ಅಡಿಗ ಎಚ್ಚೆನ್.
ಈಗಿನ ಕಾಲಕ್ಕೆ ಲುಕ್ ಅನ್ನೋದು ಬಹಳ ಮುಖ್ಯ. ಎಲ್ಲರಿಗೂ ತಾವೂ ಚೆನ್ನಾಗಿ ಕಾಣಬೇಕು ಎಂಬುದೇ ಅವರ ಆಸೆಯಾಗಿರುತ್ತೆ. ಸೆಲ್ಫ್ ಕಾನ್ಫಿಡೆನ್ಸ್ ಅನ್ನೋದು ಬರೋದೆ ನಾವೂ ಹೇಗೆ ಕಾಣ್ತೀವಿ ಅನ್ನೋದರ ಮೇಲೆ ಡಿಪೆಂಡ್ ಆಗುತ್ತೆ. ಅದನ್ನ ಕಲರ್ಸ್ ಹೆಲ್ತ್ ಕೇರ್ ಹೆಲ್ಪ್ ಮಾಡ್ತಾ ಇದೆ. ಕಳೆದ 20 ವರ್ಷಗಳಿಂದ ಗುಣಮಟ್ಟತೆಯನ್ನ ಕಾಪಾಡಿಕೊಂಡು ಬಂದಿದೆ. ಈಗಾಗಲೇ 55 ಬ್ರಾಂಚಸ್ ಗಳನ್ನ ಹೊಂದಿದ್ದು,ನಮ್ಮ ಬೆಂಗಳೂರು ಒಂದರಲ್ಲಿಯೇ ಏಳು ಬ್ರಾಂಚ್ ಗಳು ಇದಾವೆ. ತುಂಬಾನೇ ಅಪ್ ಗ್ರೇಡ್ ಮಾಡಿದ್ದಾರೆ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದು, ಬೆಂಗಳೂರಿನ ಕಲ್ಯಾಣ ನಗರದ ಬ್ರಾಂಚ್. ಇತ್ತೀಚೆಗಷ್ಟೇ ಕಲ್ಯಾಣ ನಗರದಲ್ಲಿ ಕಲರ್ಸ್ ಬ್ರಾಂಚ್ ಉದ್ಘಾಟನೆ ಮಾಡಿದ್ದು, ನಟಿ ಆಶಿಕಾ ರಂಗನಾಥ್ ಅತಿಥಿಯಾಗಿ ಬಂದಿದ್ದರು. ಟೇಪ್ ಕಟ್ ಮಾಡಿ ಉದ್ಘಾಟನೆಯನ್ನ ಮಾಡಿದರು. ಕಂಪ್ಲೀಟ್ ಟ್ರಾನ್ಸಫರ್ಮೇಷನ್ ಗೆ ಒನ್ ಸಲ್ಯೂಷನ್ ಅಂದ್ರೆ ಅದು ಕಲರ್ಸ್ ಅಂತ ಹೇಳಬಹುದು. ಕಲರ್ಸ್ ಹೆಲ್ತ್ ಕೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ವಿಜಯ ಕೃಷ್ಣ, ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ್ ಶಿವಾಜಿ ಖುನಾ ಆಪರೇಚನ್ ಡೈರೆಕ್ಟರ್ ಕೃಷ್ಣ ರಾಜ್ ತುಮ್ಮಲಾ ಹಾಗೂ ನಟಿ ಆಶಿಕಾ ರಂಗನಾಥ್ ವೇದಿಕೆ ಮೇಲೆ ಹಾಜರಿದ್ದರು.
ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಆಶಿಕಾ ರಂಗನಾಥ್, ವೆಲ್ನೆಸ್ ಕೇರ್ ಹೆಸರುವಾಸಿಯಾಗಿರುವ ಕಲರ್ಸ್. ನನಗೆ ವೈಯಕ್ತಿಕವಾಗಿ ತುಂಬಾ ಚೆನ್ನಾಗಿ ಕಲರ್ಸ್ ನಲ್ಲಿ ಕನೆಕ್ಟ್ ಆಗಿದೆ. ಕಲರ್ಸ್ ಬ್ರಾಂಡ್ ಬಗ್ಗೆ ಕೇಳಿದ್ದೆ. ಆದರೆ ಹೇಗೆ ವರ್ಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಉದ್ಘಾಟನೆಗೆ ನನ್ನ ಬರ ಮಾಡಿಕೊಂಡಿರೋದಕ್ಕೆ ಧನ್ಯವಾದಗಳು ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.
ಕಲರ್ಸ್ ಹೆಲ್ತ್ ಕೇರ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಿವಾಜಿ ಖುನ್ನಾ ಮಾತನಾಡಿ, ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತ ವಿಚಾರ ಅಂದ್ರೆ ದೇಹವನ್ನ ಸಮತೋಲನವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದು. ಹಾಗೇ ಕ್ಯಾಲರಿಗಳನ್ನ ಹೇಗೆ ಬರ್ನ್ ಮಾಡಬೇಕು ಎಂಬುದು.ಈ ಇಂಜೆಕ್ಷನ್, ಸರ್ಜರಿಯ ಮೊರೆ ಹೋಗದೆ ಹೇಗೆ ನಮ್ಮನ್ನ ಫಿಟ್ ಆಗಿ ಇಟ್ಟುಕೊಳ್ಳಬಹುದು ಎಂಬುದನ್ನ ಕಲರ್ಸ್ ನಲ್ಲಿ ಹೇಳಿಕೊಡಲಾಗುತ್ತದೆ ಎಂದಿದ್ದಾರೆ ಕಲರ್ಸ್ ನ ಕಲರ್ಸ್ ಹೆಲ್ತ್ ಕೇರ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಿವಾಜಿ ಖುನ್ನಾ ಅವರು.
ಕೃಷಿ ರಾಜ್ ಮಾತನಾಡಿ, ಕಲ್ಯಾಣ ನಗರದಲ್ಲೂ ಬ್ರಾಂಚ್ ಓಪನ್ ಆಗಿರೋದು ಸಂತಸ ತಂದಿದೆ. ಒಂದು ಬ್ರಾಂಡ್ ಯಶಸ್ವಿಯಾಗಿ ಎಲ್ಲೆಡೆ ಪ್ರಚಾರ ಆಗ್ಬೇಕು ಅಂದ್ರೆ ಅದರ ಹಿಂದೆಯೂ ಒಬ್ಬ ವ್ಯಕ್ತಿ ಇರ್ತಾರೆ. ಅವರೇ ಚೇರ್ಮನ್ ಜಯಕೃಷ್ಣ. ಇಂಜೆಕ್ಷನ್, ಮೆಡಿಸಿನ್ ಇದ್ಯಾವುದನ್ನು ಕಲರ್ಸ್ ಬಿಲೀವ್ ಮಾಡಲ್ಲ. ಹೌದು ಇವತ್ತು ತುಂಬಾನೇ ಕಾಂಪಿಟೇಷನ್ ಇದೆ. ಆದರೆ ಕಲರ್ಸ್ ಜನರ ನಂಬಿಕೆಗೆ ಪೂರಕವಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಬ್ರಾಂಚ್ ಗಳನ್ನ ತೆರೆಯುತ್ತೇವೆ ಎಂದಿದ್ದಾರೆ.