ಪ್ರತೀ ವರ್ಷ ನವೆಂಬರ್ ತಿಂಗಳಿನ 30 ದಿನಗಳ ಕಾಲ ಕನ್ನಡ ನಾಡು, ನುಡಿ, ಲಲಿತ ಕಲೆ, ಸಾಹಿತ್ಯ ಸಂಗೀತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಪರಿಚಯಿಸುವ ಕನ್ನಡ ಕಲಿಗಳು ಎಂಬ ಮಾಲಿಕೆಯನ್ನು ನಮ್ಮ ಏನಂತೀರೀ? ಬ್ಲಾಗಿನಲ್ಲಿ ಕಳೆದ ಐದು ವರ್ಷಗಳಿಂದಲೂ ರೂಢಿಮಾಡಿಕೊಂಡು ಬಂದಿದ್ದು ಮೂರನೇ ವರ್ಷಕ್ಕೂ ಅಂತಹ ಮಹನೀಯ ಕನ್ನಡಿಗರ ಪಟ್ಟಿಯಲ್ಲಿ ಖಂಡಿತವಾಗಿಯೂ ಇವರ ಹೆಸರು ಇರಲೇ ಇಲ್ಲ.

ಆದರೆ ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ ಎನ್ನುವಂತೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜಕುಮಾರ್ ಅವರು‌ ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ.

pun11

1975ರ ವೇಳೆಗೆ ಕನ್ನಡದ ವರನಟ ರಾಜಕುಮಾರರು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಮದ್ರಾಸ್ ಇಂದಿನ ಚೆನ್ನೈನಲ್ಲಿಯೇ ಬಹುತೇಕ ದಕ್ಷಿಣಭಾರತದ ಚಿತ್ರರಂಗದ ಚಟುವಟಿಕೆಗಳೆಲ್ಲವೂ ನಡೆಯುತ್ತಿದ್ದ ಕಾರಣ, ಅಲ್ಲಿಯೇ ಕೂಡು ಕುಟುಂಬದೊಂದಿಗೆ ಇದ್ದ ರಾಜಕುಮಾರ ಧರ್ಮಪತ್ನಿ ತುಂಬು ಗರ್ಭಿಣಿಯಾಗಿದ್ದ ಶ್ರೀಮತಿ ಪಾರ್ವತಮ್ಮನವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ರಾಜಕುಮಾರರು ಆ ಸಮಯದಲ್ಲಿ ಆ ಸ್ಥಳದಲ್ಲಿ ಇಲ್ಲದಿದ್ದ ಕಾರಣ, ನಿರ್ದೇಶಕ ಭಗವಾನ್ ಮತ್ತವರ ಪತ್ನಿ ಪಾರ್ವತಮ್ಮನವರನ್ನು ಆಸ್ಪತ್ರೆಗೆ ಸೇರಿಸಿದಾಗ, 17 ಮಾರ್ಚ್, 1975ರಲ್ಲಿ ಮುದ್ದಾದ ಗಂಡು ಮಗುವೊಂದಕ್ಕೆ ಜನ್ಮನೀಡುತ್ತಾರೆ. 1965ರಲ್ಲಿ ಬಿಡುಗಡೆಯಾಗಿ ರಾಜಕುಮಾರರಿಗೆ ಅತ್ಯಂತ ಕೀರ್ತಿಯನ್ನು ತಂದಿದ್ದ ಸತ್ಯಹರಿಶ್ಚಂದ್ರ ಸಿನಿಮಾದ ನೆನಪಿಗಾಗಿ ಆ ಪುಟ್ಟ ಕಂದನಿಗೆ ಲೋಹಿತ್ ಎಂದು ನಾಮಕರಣ ಮಾಡುತ್ತಾರೆ.

pun12

ಕಣ್ಣು ಮೂಗು ಹೋಲಿಕೆಯಲ್ಲಿ ಅಪ್ಪನ ತದ್ರೂಪಾದರೆ, ಬಣ್ಣದಲ್ಲಿ ಥೇಟ್ ಅಮ್ಮನ ಪ್ರತಿರೂಪವಾದ ಲೋಹಿತನಿಗೆ ಕೇವಲ 6 ತಿಂಗಳಾಗಿರುವಾಗಲೇ ನಿರ್ದೇಶಕ ವಿ. ಸೋಮಶೇಖರ್ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅವರು ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರೆ, 1977ರಲ್ಲಿ ಕೇವಲ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮಗನಾಗಿ ಮೀನಿಗೆ ಈಜಲು ಹೇಳಿಕೊಡಬೇಕೆ ಎನ್ನುವಂತೆ ಅಧ್ಭುತವಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮುಖಾಂತರ ಸಂಪೂರ್ಣವಾಗಿ ಬಾಲನಟನಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ.

pun8

ನಂತರ ವಸಂತ ಗೀತ (1980), ಭಾಗ್ಯಂತ (1981), ಚಲಿಸುವ ಮೋಡಗಳು (1982), ಚಿತ್ರದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಹಾಡನ್ನೂ ಹಾಡುವ ಮುಖಾಂತರ ಹಿನ್ನಲೆ ಗಾಯಕನಾಗಿಯೂ ಗುರುತಿಸಿಕೊಳ್ಳುತ್ತಾರೆ. ಇನ್ನು 1983ರಲ್ಲಿ ತೆರೆಗೆ ಬಂದ ಎರಡು ನಕ್ಷತ್ರಗಳು ಚಿತ್ರದಲ್ಲಿ ಗಾಯನದ ಜೊತೆ ದ್ವಿಪಾತ್ರಾಭಿನಯದಲ್ಲಿ ಸೈ ಎನಿಸಿಕೊಳ್ಳುತ್ತಾರೆ. 1983ರಲ್ಲಿ ಹಿರಣ್ಯಕಷಪುವಾಗಿ ರಾಜಕುಮಾರ್ ಮತ್ತು ಹರಿಭಕ್ತ ಪ್ರಹ್ಲಾದನಾಗಿ ಪುನೀತ್ ಅಭಿನಯವನ್ನು ಖಂಡಿತವಾಗಿಯೂ ಮರೆಯಲಾಗದು. 1985 ರಲ್ಲಿ ಬೆಟ್ಟದ ಹೂವು ಚಿತ್ರದಲ್ಲಿ ರಾಮಾಯಣ ದರ್ಶನಂ ಪುಸ್ತಕವನ್ನು ಕೊಳ್ಳುವ ಸಲುವಾಗಿ ಶೆರ್ಲಿ ಮೇಡಂಗಾಗಿ ಕಾಡಿನಿಂದ ಆರ್ಕಿಡ್ ಹೂವುಗಳನ್ನು ಆರಿಸಿ ತರುವ ರಾಮು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಾರಣ ಆ ಪಾತ್ರದ ಬಾಲ ನಟನೆಗಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಇಲ್ಲಿಂದ ನಂತರ ಶಿವರಾಜ ಕುಮಾರ್ ಅವರನ್ನು ನಾಯಕರಾಗಿ ತೆರೆಯ ಮೇಲೆ ತರುವುದರಲ್ಲಿ ನಿರತರಾದ ರಾಜ್ ಕುಟುಂಬ ಲೋಹಿತ್ ಅವರ ಬಾಲನಟನೆಗೆ ಬ್ರೇಕ್ ಹಾಕುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ