ಜಾಗೀರ್ದಾರ್*
‘ಅಯ್ಯನ ಮನೆ ಸಕ್ಸಸ್ ಬಳಿಕ ಪ್ರದೀಪ್ ಬಂದು ವೆಬ್ ಸಿರೀಸ್ ಐಡಿಯಾ ಇದೆ ಮಾಡೋಣಾ ಎಂದು ಕೇಳಿದರು. ಅದಕ್ಕೆ ಫ್ರೆಶ್ ರೈಟಿಂಗ್ ಬರಬೇಕು. ಸುಹಾಸ್ ಹಿಂದಿಯಲ್ಲಿ ಫರ್ಜಿ ವೆಬ್ ಸಿರೀಸ್,
ಫ್ಯಾಮಿಲಿ ಮ್ಯಾನ್ 2, 3 ವೆಬ್ ಸರಣಿಗೆ ರೈಟರ್ ಆಗಿ ಕೆಲಸ ಮಾಡಿದ್ದರು. ಅವರನ್ನು ತಂದೆವು. ಬಳಿಕ ಸುನಿಲ್ ಮೈಸೂರು ಬಂದರು. ಹೀಗೆ ಒಬೊಬ್ಬರೇ ತಂಡ ಸೇರಿಕೊಂಡರು. ತುಂಬಾ ಜನ ಸೇರಿಕೊಂಡು ವೆಬ್ ಸಿರೀಸ್ ಮಾಡಿದ್ದೇವೆ. ಟ್ರೇಲರ್ ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಇದೇ ತಿಂಗಳ 29ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದರು. ಕಾರ್ತಿಕ್ ಗೌಡ
ನಟ ಪವನ್ ಕುಮಾರ್ ಮಾತನಾಡಿ, ನಾವು ಹಿಂದಿಯಲ್ಲಿ ಸಿರೀಸ್ ಮಾಡಿದ್ದೆ. ಕನ್ನಡದಲ್ಲಿಯೂ ಮಾಡಬೇಕು ಎಂದಾಗ ರಿಜೆಕ್ಟ್ ಆಗುತ್ತಿತ್ತು. zee5ನಲ್ಲಿ ವೆಬ್ ಸಿರೀಸ್ ಮಾಡುತ್ತಿದ್ದಾರೆ ಎಂದಾಗ ಖುಷಿಯಾಯ್ತು. ಶೋಧದಲ್ಲಿ ಆಕ್ಟ್ ಮಾಡ್ತೀಯಾ ಎಂದು ಕೇಳಿದರು. ಕಥೆ ಕೇಳಿದಾಗ ನಾನು ಆಟವಾಡಲು ಅವಕಾಶವಿದೆ ಎಂದು ತಿಳಿಯಿತು. ವೆಬ್ ಸಿರೀಸ್ ನಲ್ಲಿ ಒಳ್ಳೊಳ್ಳೆ ಕಥೆಗಳನ್ನು ಹೇಳಬಹುದು. ತುಂಬಾ ಜನ ಡೈರೆಕ್ಟರ್ ಹಾಗೂ ರೈಟರ್ಸ್ ಗೆ ದೊಡ್ಡ zee5 ಫ್ಲಾಟ್ ಫಾರ್ಮ್ ಆಗಲಿ ಎಂದು ಶುಭ ಹಾರೈಸಿದರು.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನೀಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನ ಸೆಳೆದವರು ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ರವಿಕುಮಾರ್, ಅರುಣ್ ಸಾಗರ್ ಮತ್ತು ಅನುಷಾ ರಂಗನಾಥ್ ತಾರಾಬಳಗದಲ್ಲಿದ್ದಾರೆ. ಸಪ್ತಮಿ ಗೌಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದು,ಆರು ಎಪಿಸೋಡ್ ಗಳುಳ್ಳ ಸಖತ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಳೆಯೇ ‘ಶೋಧ’. ಆಗಸ್ಟ್ 29ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.