ಸಾಮಗ್ರಿ : 1-1 ಕಪ್ ಕಡಲೆಹಿಟ್ಟು, ಸಕ್ಕರೆ, ಅರ್ಧರ್ಧ ಕಪ್ ಬಾದಾಮಿ ಪೌಡರ್, ತುಪ್ಪ, ಅಗತ್ಯವಿದ್ದಷ್ಟು ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ ಚೂರು, ನೀರು.
ವಿಧಾನ : ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಬಾದಾಮಿ ಪೌಡರ್ ಸೇರಿಸಿ ಕೆದಕಬೇಕು. ಇದಕ್ಕೆ ಸಕ್ಕರೆ ಸೇರಿಸಿ ಕೆದಕುತ್ತಾ, ತುಸು ನೀರು ಸೇರಿಸಿ ನಿಧಾನವಾಗಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಡುನಡುವೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ, ಮೈಸೂರುಪಾಕಿಗೆ ಮಾಡುವಂತೆ ಕೆದಕಬೇಕು. 2-3 ನಿಮಿಷ ಬಿಟ್ಟು ಇದನ್ನು ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಯಲ್ಲಿ ಹರಡಿರಿ. ಆರಿದ ನಂತರ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿರಿಸಿ, ಆಮೇಲೆ ವಜ್ರಾಕಾರದಲ್ಲಿ ಕತ್ತರಿಸಿ, ಗೋಡಂಬಿ, ಬಾದಾಮಿ ಚೂರು ಉದುರಿಸಿ, ಸವಿಯಲು ಕೊಡಿ
ಸ್ವಾದಿಷ್ಟ ರಸಗುಲ್ಲ
ಸಾಮಗ್ರಿ : 4 ಕಪ್ ಮಸೆದ ಪನೀರ್, ಅರ್ಧ ಕಪ್ ಮೈದಾ, ರುಚಿಗೆ ತಕ್ಕಷ್ಟು 5-6 ಕಪ್ ಸಕ್ಕರೆ, 1 ಕಪ್ ಗಟ್ಟಿ ಹಾಲು.
ವಿಧಾನ : ತುಪ್ಪದ ಕೈ ಮಾಡಿಕೊಂಡು, ಅದರಿಂದ ಮಸೆದ ಪನೀರ್ ನ್ನು ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ. ಈ ಉಂಡೆಗಳಲ್ಲಿ ಸ್ವಲ್ಪವೂ ಬಿರುಕು ಇರಬಾರದು, ಎಚ್ಚರಿಕೆ ವಹಿಸಿ. ಇದರ ಮೇಲೆ ತೆಳು ಒದ್ದೆ ಬಟ್ಟೆ ಹೊದಿಸಿಬಿಡಿ.
ಕಾದಾರಿದ ಹಾಲಿಗೆ ಸಕ್ಕರೆ, 3-4 ಕಪ್ ಬೆಚ್ಚನೆಯ ನೀರು ಬೆರೆಸಿ ಚೆನ್ನಾಗಿ ಕದಡಿಕೊಂಡು, ಒಲೆಯ ಮೇಲಿರಿಸಿ ಮಂದ ಉರಿಯಲ್ಲಿ ಕಾಯಿಸಿ, ಕುದಿಸಿರಿ. ಮಂದ ಉರಿ ಮಾಡಿ, ಪಾಕ ಕುದಿಯಲಿ. 5 ನಿಮಿಷ ಬಿಟ್ಟು ಮತ್ತೆ 1 ಕಪ್ ನೀರು ಬೆರೆಸಿ. 10 ನಿಮಿಷ ಹಾಗೇ ಕುದಿ ಬಂದ ನಂತರ, ಪೂರ್ತಿ ಮಂದ ಉರಿ ಮಾಡಿಕೊಳ್ಳಿ. ಈಗ ಮತ್ತೆ 1 ಕಪ್ ನೀರು ಬೆರೆಸಬೇಕು. 2-3 ನಿಮಿಷ ಮಂದ ಉರಿಯಲ್ಲಿ ಕುದಿಸಿರಿ. ನಂತರ ಇದನ್ನು ಕೆಳಗಿಳಿಸಿ ಆರಲು ಬಿಡಿ. ಮೈದಾಗೆ 1 ಕಪ್ ಬಿಸಿ ನೀರು ಬೆರೆಸಿ ಚೆನ್ನಾಗಿ ಗೊಟಾಯಿಸಿ ಬೇರೆಯಾಗಿಡಿ. ಮತ್ತೆ ಸಕ್ಕರೆ ಪಾಕನ್ನು ಒಲೆ ಮೇಲಿಟ್ಟು ಕುದಿಸಬೇಕು. ಮೈದಾ ಮಿಶ್ರಣದ ಅರ್ಧ ಭಾಗ ಇದಕ್ಕೆ ಬೆರೆಸಿ, ಮಂದ ಉರಿಯಲ್ಲಿ ಮುಚ್ಚಳ ಇರಿಸಿ ಕುದಿಸಬೇಕು. ಪಾಕದಿಂದ ನೊರೆ ಉಕ್ಕಿ ಬಂದಂತೆ, ಅದರ ಮೇಲೆ ನೀರ ಹನಿ ಚಿಮುಕಿಸಿ, ಉಳಿದ ಮೈದಾ ಮಿಶ್ರಣ ಬೆರೆಸಿಬಿಡಿ. ಈ ರೀತಿ ಸಂಪೂರ್ಣ ಮಂದ ಉರಿಯಲ್ಲಿ 15 ನಿಮಿಷ ಕುದಿಸಬೇಕು. ನಂತರ 1 ರಸಗುಲ್ಲ ತೆಗೆದು ತಣ್ಣೀರ ಬಟ್ಟಲಿಗೆ ಹಾಕಿ ನೋಡಿ. ಅದು ಮುಳುಗಿದರೆ, ಚೆನ್ನಾಗಿ ಬೆಂದಿದೆ ಎಂದರ್ಥ. ಇಲ್ಲದಿದ್ದರೆ ಮತ್ತೆ 5-6 ನಿಮಿಷ ಹಾಗೇ ಕುದಿಸಿರಿ. ನಂತರ ಒಲೆ ಆರಿಸಿ, ಪಾಕದ ಬಾಣಲೆ ಕೆಳಗಿಳಿಸಿ. ಚೆನ್ನಾಗಿ ಆರುವವರೆಗೂ 3-4 ಗಂಟೆ ಕಾಲ, ಅದು ಹಾಗೇ ಪಾಕದಲ್ಲಿ ನೆನೆಯಲಿ. ನಂತರ ಬಟ್ಟಲಿಗೆ ಹಾಕಿ 1-2 ತಾಸು ಫ್ರಿಜ್ ನಲ್ಲಿರಿಸಿ ಆಮೇಲೆ ಸವಿಯಲು ಕೊಡಿ!