ದಕ್ಷಿಣ ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ, ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬವೇ ಓಣಂ. ಆದರೆ ಓಣಂ ಕೇವಲ ಒಂದು ಧಾರ್ಮಿಕ ಹಬ್ಬವಲ್ಲ; ಕೇರಳದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಭಾವೈಕ್ಯತೆಯ ಪ್ರತೀಕವೂ ಹೌದು. ಧರ್ಮ, ಜಾತಿ, ಪಂಥಗಳ ಭೇದವಿಲ್ಲದೆ ಸಮಸ್ತ ಕೇರಳೀಯರು ಒಗ್ಗೂಡಿ ಆಚರಿಸುವ ಈ ಹಬ್ಬ ತಲೆತಲಾಂತರಗಳಿಂದಲೂ ಸಹಬಾಳ್ವೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತಾ ಬಂದಿದೆ.

ಮಲಯಾಳೀ ಪಂಚಾಂಗದ ಮೊದಲ ತಿಂಗಳಾದ **ಚಿಂಗಮ್ (ಆಗಸ್ಟ್–ಸೆಪ್ಟೆಂಬರ್)**ನಲ್ಲಿ ಓಣಂ ಆಚರಣೆ ನಡೆಯುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭದಲ್ಲಿ ಕೇರಳದ ಮನೆಮನೆಗಳ ಮುಂದೆ ವಿವಿಧ ಬಗೆಯ ಹೂಗಳಿಂದ ಕಂಗೊಳಿಸುವ ‘ಪೂಕ್ಕಳಂ’ ಎಂಬ ಪುಷ್ಪ ರಂಗವಲ್ಲಿಗಳು ಮೂಡುತ್ತವೆ. ಮನೆಗಳಲ್ಲಿ ವಿಶೇಷ ಅಡುಗೆಗಳು ತಯಾರಾಗುತ್ತವೆ; ದೇವಾಲಯಗಳಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನಡೆಯುತ್ತವೆ; ಸಾಂಪ್ರದಾಯಿಕ ನೃತ್ಯ, ಜಾನಪದ ಕ್ರೀಡೆಗಳು, ದೋಣಿ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ.

ನಮ್ಮ ಕರ್ನಾಟಕದಲ್ಲಿ ಸುಗ್ಗಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಹೇಗೆ ಸಡಗರದಿಂದ ಆಚರಿಸುತ್ತೇವೆಯೋ, ಕೇರಳದಲ್ಲಿ ಓಣಂ ಕೂಡ ಅಷ್ಟೇ ಮಹತ್ವದ ಹಬ್ಬ ಎನ್ನಬಹುದು. ‘ತಿರುವೋಣಂ’ ಎಂಬ ಹೆಸರು ಓಣಂ ಹಬ್ಬದ ಪ್ರಮುಖ ದಿನಕ್ಕೆ ಸಂಬಂಧಿಸಿದ್ದು, ‘ತಿರು’ ಎಂಬುದು ಗೌರವ, ಶ್ರೀ ಅಥವಾ ಪವಿತ್ರತೆಯನ್ನು ಸೂಚಿಸುವ ಪದವಾಗಿದೆ. ತಿರುವೋಣಂ ನಕ್ಷತ್ರದ ದಿನವೇ ಓಣಂ ಆಚರಣೆಯ ಪ್ರಮುಖ ಘಟ್ಟವಾಗುತ್ತದೆ.

ಮಹಾಬಲಿ ಚಕ್ರವರ್ತಿಯ ನೆನಪಿನ ಹಬ್ಬ

ಓಣಂ ಹಬ್ಬದ ಹಿಂದೆ ಅತ್ಯಂತ ಜನಪ್ರಿಯವಾದ ಪೌರಾಣಿಕ ಐತಿಹ್ಯವಿದೆ.

ಪುರಾಣಕಾಲದಲ್ಲಿ ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದನು ಎಂದು ನಂಬಲಾಗುತ್ತದೆ. ಆತ ಅಸುರರ ರಾಜನಾಗಿದ್ದರೂ ಅತ್ಯಂತ ದಯಾಮಯ, ಕರುಣಾಳು ಮತ್ತು ಪ್ರಜಾಹಿತೈಷಿಯಾಗಿದ್ದನು. ಅವನ ರಾಜ್ಯದಲ್ಲಿ ಜನರು ಸುಖ, ಸಮೃದ್ಧಿ ಮತ್ತು ನೆಮ್ಮದಿಯಿಂದ ಬದುಕುತ್ತಿದ್ದರು. ಅಧಿಕಾರ ಮತ್ತು ಐಶ್ವರ್ಯವಿದ್ದರೂ ಮಹಾಬಲಿ ನಿರಹಂಕಾರಿಯಾಗಿದ್ದನೆಂಬುದು ಈ ಕಥೆಯ ವಿಶೇಷತೆ.

ಮಹಾಬಲಿಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಂತೆ ದೇವತೆಗಳಿಗೆ ಆತಂಕ ಉಂಟಾಯಿತು. ಅವನ ಶಕ್ತಿಯಿಂದ ದೇವಾನು ದೇವತೆಗಳಿಗೆ ತೊಂದರೆ ಉಂಟಾಗಬಹುದು ಎಂಬ ಕಾರಣದಿಂದ ಅವನ ಅಹಂಕಾರವನ್ನು ಪರೀಕ್ಷಿಸಲು ಭಗವಾನ್ ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ವಿಷ್ಣುವು ವಾಮನನ ರೂಪದಲ್ಲಿ, ಪುಟ್ಟ ವಟುವಾಗಿ ಮಹಾಬಲಿ ಚಕ್ರವರ್ತಿ ನಡೆಸುತ್ತಿದ್ದ ಯಾಗದ ಸ್ಥಳಕ್ಕೆ ಬರುತ್ತಾನೆ. ದಾನಶೂರನಾಗಿದ್ದ ಬಲಿ, ಬಂದ ಬಾಲಕನಿಗೆ ಬೇಕಾದ ವರವನ್ನು ಕೇಳುವಂತೆ ಹೇಳುತ್ತಾನೆ.

ಆಗ ವಾಮನನು ಕೇಳಿದ್ದು ದೊಡ್ಡ ರಾಜ್ಯವನ್ನಾಗಲಿ, ಅಪಾರ ಸಂಪತ್ತನ್ನಾಗಲಿ ಅಲ್ಲ. “ನನಗೆ ಮೂರು ಹೆಜ್ಜೆ ಇಡುವಷ್ಟು ಜಾಗವನ್ನು ದಾನವಾಗಿ ಕೊಡು”ಎಂದು ಕೇಳುತ್ತಾನೆ.

ಇಷ್ಟು ಚಿಕ್ಕ ಬೇಡಿಕೆಯೇ ಎಂದು ಭಾವಿಸಿದ ಮಹಾಬಲಿ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಮುಂದಿನ ಕ್ಷಣವೇ ವಾಮನನು ತ್ರಿವಿಕ್ರಮನಾಗಿ ವಿಶ್ವರೂಪವನ್ನು ತಾಳುತ್ತಾನೆ. ಮೊದಲ ಹೆಜ್ಜೆಯಲ್ಲಿ ಆಕಾಶವನ್ನು ಅಳೆಯುತ್ತಾನೆ. ಎರಡನೇ ಹೆಜ್ಜೆಯಲ್ಲಿ ಸಮಸ್ತ ಭೂಮಂಡಲವನ್ನು ಆವರಿಸುತ್ತಾನೆ. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಮಹಾಬಲಿಯನ್ನು ಪ್ರಶ್ನಿಸುತ್ತಾನೆ.

ತಾನು ಎದುರಿಸುತ್ತಿರುವುದು ಸಾಮಾನ್ಯ ವಟುವಲ್ಲ ಎಂಬುದನ್ನು ಅರಿತ ಬಲಿಚಕ್ರವರ್ತಿ, “ಮೂರನೇ ಹೆಜ್ಜೆಯನ್ನು ನನ್ನ ತಲೆಯ ಮೇಲಿಡಿ” ಎಂದು ವಿನಯದಿಂದ ಹೇಳುತ್ತಾನೆ. ಅದರಂತೆ ವಾಮನನು ಅವನನ್ನು ಪಾತಾಳ ಲೋಕಕ್ಕೆ ಕಳುಹಿಸುತ್ತಾನೆ. ಆದರೆ ಬಲಿಯ ಪ್ರಾಮಾಣಿಕತೆ, ದಾನಶೀಲತೆ ಮತ್ತು ಪ್ರಜೆಗಳ ಮೇಲಿನ ಅಪಾರ ಪ್ರೀತಿಯಿಂದ ಸಂತುಷ್ಟನಾದ ವಿಷ್ಣು, ಪ್ರತಿವರ್ಷವೂ ಒಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸುವ ಅವಕಾಶವನ್ನು ಅವನಿಗೆ ವರವಾಗಿ ನೀಡುತ್ತಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ