ಮೇ9 ರಂದು ಟಿ.ವಿ. ಧಾರಾವಾಹಿಯೊಂದರಲ್ಲಿ ನಟಿಸುವ ನಟಿಯೊಬ್ಬಳು ಚಾರಕೋಪ್‌ ಪೊಲೀಸ್‌ ಸ್ಟೇಷನ್ನಿಗೆ ಬಂದು ದೂರು ಕೊಡುತ್ತಾಳೆ. ಆಕೆ ಕೊಟ್ಟ ದೂರನ್ನು ನೋಡಿ ಸಬ್‌ ಇನ್ಸ್ಪೆಕ್ಟರ್‌ ಭೋಸಿ ದಂಗಾಗಿ ಹೋದರು. ಇಂದಿನ 21ನೇ ಶತಮಾನದಲ್ಲೂ ಓದುಬರಹ ಬಲ್ಲ ಹುಡುಗಿಯರು ಭೂತ ಪ್ರೇತ, ಮಾಟ ಮಂತ್ರ ನಂಬುತ್ತಾರೆಯೇ? ಎಂದು ಅವರಿಗೆ ಅಚ್ಚರಿಯೂ ಆಯಿತು. ಆ ಕಾರಣದಿಂದ ಮೋಸಕ್ಕೂ ತುತ್ತಾಗುತ್ತಾರೆಯೇ ಎಂದು ಆತಂಕ ಆಯಿತು. ಆಕೆ 7 ವರ್ಷಗಳ ಹಿಂದೆ ಚಲನಚಿತ್ರಗಳಲ್ಲಿ, ಟಿ.ವಿ. ಧಾರಾವಾಹಿಗಳಲ್ಲಿ ನಟಿಸಲೆಂದು ಮುಂಬೈಗೆ ಬಂದಿದ್ದಳು. ಬಹಳಷ್ಟು ಸಂಘರ್ಷದ ಬಳಿಕ ಆಕೆಗೆ ಮಾಡೆಲಿಂಗ್‌ ಹಾಗೂ ಟಿ.ವಿ ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗಾಗಿ ಆಕೆ ಮುಂಬೈನಲ್ಲಿಯೇ ವಾಸಿಸತೊಡಗಿದಳು. ಇದೇ ಸಂದರ್ಭದಲ್ಲಿ ಆಕೆಗೆ ಒಬ್ಬ ಉದಯೋನ್ಮುಖ ಹಾಗೂ ಇವಳ ಹಾಗೆಯೇ ಸಂಘರ್ಷ ಮಾಡಿ ಮುಂದೆ ಬಂದ ಒಬ್ಬ ನಟ ಭೇಟಿಯಾಗುತ್ತಾನೆ. ಸುಮಾರು 3 ವರ್ಷಗಳ ಸ್ನೇಹ ಸುತ್ತಾಟದ ಬಳಿಕ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆಕೆ ಅವನಿಗೆ ಸಾಕಷ್ಟು ಸಹಾಯ ಮಾಡಿದಳು. ಕೆಲವೇ ತಿಂಗಳ ಬಳಿಕ ಅವನಿಗೆ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ಈ ಕಾರಣದಿಂದ ಅವನು ಅವಳೊಂದಿಗೆ ಸಂಪರ್ಕ ಮಿತಗೊಳಿಸಿದ. ಅವನು ಅವಳ ದೂರವಾಣಿ ಕರೆಗಳನ್ನು ತಿರಸ್ಕರಿಸತೊಡಗಿದ.

ತನ್ನ ಪ್ರೇಮಿ ತನ್ನನ್ನು ದೂರ ಇಡುತ್ತಿದ್ದುದರಿಂದ ಒತ್ತಡಕ್ಕೆ ಸಿಲುಕಿದ ಆ ನಟಿ, ಸಹೋದರನೆಂದು ಹೇಳಿಕೊಂಡ ಒಬ್ಬ ವ್ಯಕ್ತಿಯ ಮುಂದೆ ತನ್ನೆಲ್ಲ ನೋವನ್ನು ಹೇಳಿಕೊಂಡಳು. ಆಗ ಆತ 60-70 ವರ್ಷದ ಭಗವಾನ್‌ ದಾಸ್‌ ಎಂಬ ಮಂತ್ರವಾದಿಯ ಬಳಿ ಹೋಗಲು ಸಲಹೆ ನೀಡಿದ. ಅವಳಿಗೂ ಅದು ಸರಿ ಎನಿಸಿತು.

ಇಬ್ಬರೂ ಸೇರಿಕೊಂಡು ಮಾಹಿಮ್ ನಲ್ಲಿರುವ ಭಗವಾನ್‌ ದಾಸ್‌ ಬಳಿ ಹೋದರು. ಆಕೆ ಸ್ವಾಮಿಯನ್ನು ಭೇಟಿಯಾಗಿ ವಿಷಯ ತಿಳಿಸಿದಾಗ, ನಿನ್ನ ಮೇಲೆ ಭೂತಪ್ರೇತದ ಪ್ರಭಾವ ಉಂಟಾಗಿದೆ. ಅದರಿಂದ ಹೊರಬರಬೇಕೆಂದರೆ ನೀನು ವಿಶೇಷ ಪೂಜೆ ಮಾಡಬೇಕು. ಅದಕ್ಕಾಗಿ ನಿನಗೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದ.

ಸ್ವಾಮೀಜಿಯ ಆ ಮಾತಿಗೆ ಯುವತಿ ಹೂಂ ಎಂದರು. ಪೂಜೆ ಪುನಸ್ಕಾರದಿಂದ ತನ್ನ ಪ್ರೇಮಿ ತನಗೆ ವಾಪಸ್‌ ಸಿಗಬಹುದೆಂದು ಆಕೆ ನಂಬಿದಳು. ಸ್ವಾಮೀಜಿ ಹೇಳಿದ ಪ್ರಕಾರ 70,000 ರೂ. ತೆಗೆದುಕೊಂಡು ಆಕೆ ಮರುದಿನ ಬಾಬಾ ಬಳಿ ಹೋದಳು. ಪೂಜೆ ಪುನಸ್ಕಾರದ ಬಳಿಕ ಆ ಬಾಬಾ ತಾನು ಯೋನಿ ದ್ವಾರದ ಮುಖಾಂತರ ಭೂತವನ್ನು ಹೊರತೆಗೆಯುವುದಾಗಿ ಹೇಳಿದ. ಆ ಯುವತಿ ಒಮ್ಮೆಲೆ ಹೌಹಾರಿದಳು. ತಕ್ಷಣವೇ ಅಲ್ಲಿಂದ ಹೊರಟುಹೋದಳು. 2-3 ದಿನಗಳ ಬಳಿಕ ಸ್ವಾಮೀಜಿಯ ಚೇಲಾ ಇಸ್ಮಾಯಿಲ್ ‌ಶೇಖ್‌ ಆಕೆಯನ್ನು ಭೇಟಿಯಾದ. ಅವನು ತನ್ನನ್ನು ತಾನು ಸಾಯಿಬಾಬಾ ಭಕ್ತ ಎಂದು ಹೇಳಿಕೊಂಡ ಭಗವಾನ್‌ ದಾಸ್‌ ಅವರ ಮಾತನ್ನು ನೀನು ಮನ್ನಿಸದೇ ಹೋದರೆ ನಿನಗೆ ಇನ್ನಷ್ಟು ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ಕೊಡುವ ರೀತಿಯಲ್ಲಿ ಹೇಳಿದ. ಸಾಯಿಬಾಬಾ ಒಂದು ಸಲ ಒಬ್ಬರ ಮನಸ್ಸಿನಲ್ಲಿ ಪ್ರವೇಶಿಸಿದರೆ ಖಂಡಿತ ಅವರಿಗೆ ಒಳ್ಳೆಯದಾಗುತ್ತೆ ಎಂದೂ ಆ ಚೇಲಾ ಹೇಳಿದ. ಆ ಮಾತಿಗೆ ಆಕೆ ಮನಸ್ಸಿಲ್ಲದ್ದಿದರೂ ಒಪ್ಪಿಕೊಂಡಳು. ಪೂಜೆ ಪುನಸ್ಕಾರವನ್ನು ತಾನು ಈ ಸಲ ನಿನ್ನ ಮನೆಯಲ್ಲಿಯೇ ನಡೆಸುವುದಾಗಿ ಹೇಳಿದ. ಆ ಪೂಜೆ ಸುಮಾರು 3 ತಿಂಗಳ ಕಾಲ ನಡೆಯುವುದಾಗಿಯೂ ಹೇಳಿದ. 3 ತಿಂಗಳ ಕಾಲ ಪೂಜೆ ನಡೆಯುತ್ತಲೇ ಇತ್ತು. ಆ ಯುವತಿ ಕೊನೆ ಕೊನೆಗೆ ಪೂಜೆ ಪುನಸ್ಕಾರದಿಂದ ಬೇಸತ್ತು ಹೋದಳು. ಆಗ ಆ ಇಸ್ಮಾಯಿಲ್ ‌ಶೇಖ್‌ ಈ ಸಲದ ಪೂಜೆ ಅತ್ಯಂತ ಪ್ರಭಾವಕಾರಿಯಾಗಿದೆ. ನಿನ್ನ ಪ್ರೇಮಿ ನಿನಗೆ ಖಂಡಿತ ವಾಪಸ್‌ ಸಿಕ್ಕೇ ಸಿಗುತ್ತಾನೆ. ನೀನು ಭರವಸೆ ಕಳೆದುಕೊಳ್ಳಬಾರದೆಂದು ಅವಳಿಗೆ ಧೈರ್ಯ ತುಂಬಿದ. ಬಳಿಕ ಅವಳನ್ನು ಪುಸಲಾಯಿಸುತ್ತ ನೀನು 25 ಲಕ್ಷ ರೂ. ತಂದುಕೊಡು. ಅದನ್ನು ನನಗೆ ಕೊಡಬೇಡ. ಪೂಜೆಯಲ್ಲಿ ಇಡಲು ಮಾತ್ರ ಎಂದು ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ