ಮಕ್ಕಳಿಗೆ ಪರೀಕ್ಷೆ : ಅಮ್ಮಂದಿರಿಗೆ ಅಗ್ನಿ ಪರೀಕ್ಷೆ

ದೇಶಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಇಲ್ಲವೇ ಬಿಗಡಾಯಿಸುವ ಮೈಲಿಗಲ್ಲು ಎಂಬಂತೆ ಸಾಬೀತಾಗುತ್ತಿದೆ. ಅದರಲ್ಲಿ ಸಮರ್ಪಕವಾಗಿ ಉತ್ತೀರ್ಣರಾದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಇಲ್ಲವೇ ಜೀವನ ಅರೆಬರೆ, ಮುಖ ಮುಚ್ಚಿಕೊಂಡು ಇರಬೇಕಾಗುತ್ತದೆ. ಅಮ್ಮಂದಿರ ಪಾಲಿಗೆ ಈ ಪರೀಕ್ಷೆ ಒಂದು ಅಗ್ನಿ ಪರೀಕ್ಷೆಯೇ ಹೌದು.  ಸೀತೆ ಅಗ್ನಿಗೆ ತನ್ನನ್ನು ಸಮರ್ಪಿಸಿಕೊಂಡಂತೆ ಪ್ರತಿ ತಾಯಿ ಕೂಡ ಆ ಬೆಂಕಿಯಲ್ಲಿ ಬೇಯಬೇಕಾಗುತ್ತದೆ. ಮಗ/ಮಗಳು ಯಾರದ್ದೇ ಪರೀಕ್ಷೆ ಇರಲಿ, ಅವರಿಗೆ ಕಡಿಮೆ ಅಂಕ ಬಂದರೆ ಅಮ್ಮನ ಮುಖ ಸೊಟ್ಟಗಾಗುತ್ತದೆ.

ಇಡೀ ವರ್ಷ ಅಮ್ಮ ಈ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕಿರುತ್ತದೆ. ಭಾರಿ ಭಾರಿ ಪುಸ್ತಕಗಳನ್ನು ಖರೀದಿಸುವುದು, ಹೊರಗೆ ಸುತ್ತಾಡುವುದನ್ನು ತ್ಯಾಗ ಮಾಡುವುದು, ಮಕ್ಕಳಿಗಾಗಿ ಬೇಗ ಎದ್ದು ತಿಂಡಿ ಸಿದ್ಧಪಡಿಸಬೇಕು. ಸಂಬಂಧಿಕರ ಮನೆಗೆ ಹೋಗುವುದನ್ನು ನಿಲ್ಲಿಸಬೇಕಾಗುತ್ತದೆ. ಆ ಬಳಿಕ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇದ್ದರೆ ಇಂದಿನ ಕಾಲಘಟ್ಟದಲ್ಲಿ ಯಾವುದೇ ಬೆಲೆಯಿಲ್ಲ. ಆ ಕಾರಣಕ್ಕಾಗಿ ಅಮ್ಮ ಸಪ್ಪೆ ಮುಖ ಹೊತ್ತು ತಿರುಗಬೇಕಾಗುತ್ತದೆ.

ಇದು ನಮ್ಮ ಸರ್ಕಾರಗಳ ನೀತಿಯ ಕೊಡುಗೆಯಾಗಿದ್ದು, ಶಿಕ್ಷಣಕ್ಕೆ ಯಾವುದೇ ಮಹತ್ವ ಇಲ್ಲದಂತಾಗುತ್ತಿದೆ. ಅತಿ ಯೋಗ್ಯ ಹಾಗೂ ಸಾಧಾರಣ ಬುದ್ಧಿವಂತರು ಮೊದಲಿನಿಂದಲೇ ಇದ್ದರು. ಪ್ರತಿಯೊಬ್ಬರಿಗೂ ಅವರವರ ಅರ್ಹತೆಗೆ ಅನುಗುಣವಾಗಿ ಅವಕಾಶಗಳು ಲಭಿಸುತ್ತಿದ್ದವು. ಆದರೆ ದ್ವಿತೀಯ ಪಿಯುಸಿಯಲ್ಲಿ 98% ಹಾಗೂ 99.5% ಅಂಕಗಳು ಒಬ್ಬರದ್ದಲ್ಲ, ಹಲವರದ್ದು ಬರಲಾರಂಭಿಸಿದಾಗ, ಇಡೀ ದೇಶದಲ್ಲಿ ಶೇ.90ಕ್ಕಿಂತ ಕಡಿಮೆ ಅಂಕ ಗಳಿಸಿದವರು ನಿರುಪಯುಕ್ತರಾಗಿದ್ದಾರೆ.

ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೂ ತಮ್ಮ ಇಷ್ಟದ ಕೋರ್ಸ್‌ ಸಿಗಬಹುದೆಂಬ ನಂಬಿಕೆ ಇಲ್ಲ. ದ್ವಿತೀಯ ಪಿಯುಸಿಯ ಜೊತೆಗೆ ನೀಟ್‌, ಜೆಇಇಯಂತಹ ಪರೀಕ್ಷೆಗಳನ್ನು ಬರೆಯಬೇಕಾಗಿ ಬರುತ್ತದೆ. ಇದರಿಂದ ಯಾವುದಾದರೊಂದು ಕೆರಿಯರ್‌ ರೂಪಿಸಿಕೊಳ್ಳಬಹುದೆಂಬ ಆಕಾಂಕ್ಷೆ ಇರುತ್ತದೆ. ಇಲ್ಲದಿದ್ದರೆ ಅವರಿಗೆ ಅಮೆಝಾನ್‌, ಫ್ಲಿಪ್‌ಕಾರ್ಟ್‌ನವರ ಬ್ಯಾಗ್‌ನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಮನೆಮನೆಗೆ ತಿರುಗುವ ಉದ್ಯೋಗವಷ್ಟೇ ಬಾಕಿ ಉಳಿಯುತ್ತದೆ.

ದೇಶಕ್ಕೆ ಕುಶಲ ವೈದ್ಯರು, ಎಂಜಿನಿಯರ್‌, ವಿಜ್ಞಾನಿಗಳು, ಆಡಳಿತಗಾರರ ಅವಶ್ಯಕತೆ ಇರುವಂತೆ ಇತರೆ ಕೆಲಸ ನಿರ್ವಹಿಸುವವರ ಅಗತ್ಯ ಕೂಡ ಇರುತ್ತದೆ. ಆದರೆ ದ್ವಿತೀಯ ಪಿಯು ಪರೀಕ್ಷೆ ಎಂತಹ ತಡೆಗೋಡೆಯಾಗಿದೆ ಎಂದರೆ ಚೀನಾದ ಗೋಡೆಯ ಹಾಗೆ ಎತ್ತರ ಮತ್ತು ಉದ್ದ ಎಂಬಂತೆ ಭಾಸವಾಗುತ್ತದೆ. ಅಕಸ್ಮಾತ್‌ ಅದನ್ನು ದಾಟಲು ಆಗದಿದ್ದರೆ ವಾಪಸ್‌ ಹೋಗಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಲಕ್ಷಾಂತರ ರೂ. ಸಂಬಳದ ನೌಕರಿ ಬಿಇ, ಎಂಬಿಎ, ಎಂಬಿಬಿಎಸ್‌, ಐಐಟಿ ಮಾಡಿದ ಬಳಿಕ ದೊರೆತೇ ದೊರೆಯುತ್ತೆ ಎಂದೇನಿಲ್ಲ. ಆದರೆ ಯಾವುದಾದರೊಂದು ಸಿಗಬೇಕು. ಅದರಿಂದ ಅಮ್ಮನಿಗೆ ಖುಷಿ ಆಗಬೇಕು. ತಾನು ತನ್ನ ಕರ್ತವ್ಯ ಮುಗಿಸಿದ್ದೇನೆ ಎಂಬ ಭಾವನೆ ಆಕೆಗೆ ಬರಬೇಕು.

90% ಗಿಂತ ಹೆಚ್ಚು ಅಂಕ ತಂದವನ ತಾಯಿಯೂ ಅಳುತ್ತಾಳೆ ಹಾಗೂ 90%ಕ್ಕಿಂತ ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಯ ತಾಯಿಯೂ ಗೋಳು ತೋಡಿಕೊಳ್ಳುತ್ತಾಳೆ ಎಂದರೆ ಇದೊಂದು ಅನ್ಯಾಯವೇ ಹೌದು. ಸಮಾಜ, ಸರ್ಕಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಈ ಎಲ್ಲ ಸೇರಿ ಇದನ್ನು ಮಾಡುತ್ತಿವೆ. ನಿರುದ್ಯೋಗ ಚುನಾವಣೆಯ ವಿಷಯವಾದದ್ದು ಕೇವಲ ವಿರೋಧ ಪಕ್ಷಗಳಿಗೆ ಮಾತ್ರ. ನರೇಂದ್ರ ಮೋದಿ ಅವರು ತಾವು ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್‌ ನಡೆಸಿದ್ದು, ಹಸುಗಳನ್ನು ಕಟುಕರಿಂದ ರಕ್ಷಿಸಿದ್ದು, ಭಾರತ ಮಾತಾ ಕೀ ಜೈ ಎಂದು ಹೇಳಿದರೆ ಅಮ್ಮನ ಕಷ್ಟ ನಿವಾರಣೆಯಾದಂತೆ ಎಂಬ ರೀತಿಯಲ್ಲಿ ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ