ರಾಯರು : ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಮಿತಭಾಷಿ!

ಗುಂಡ : ನಾನೂ ಅಷ್ಟೆ. ನನಗೂ ಮದುವೆಯಾಗಿದೆ!

ನವ ದಂಪತಿಗಳು ಮಧುಚಂದ್ರಕ್ಕೆಂದು ಕಾಶ್ಮೀರಕ್ಕೆ ಹೊರಟಿದ್ದರು. ಆಗ ಪುಟ್ನಂಜಿಗೆ ಒಂದು ಸಂದೇಹ ಬಂತು.

ಪುಟ್ನಂಜಿ : ಅಲ್ಲ…. ಅಕಸ್ಮಾತ್‌ ಅಲ್ಲಿ ನಾನೇನಾದರೂ ಕಳೆದುಹೋದರೆ ಏನು ಮಾಡ್ತೀರಿ….?

ಗುಂಡ : ತಕ್ಷಣ ಎಲ್ಲಾ ಕಡೆ ಕಾಣೆಯಾಗಿದ್ದಾರೆ ಅಂತ ಪೋಸ್ಟರ್‌ ಹಾಕಿಸ್ತೀನಿ.

ಪುಟ್ನಂಜಿ : ಹೌದೇ….? ಅದರಲ್ಲಿ ಏನಿರುತ್ತೆ…?

ಗುಂಡ : ಇವರು ಕಾಣೆಯಾಗಿದ್ದಾರೆ. ಇವರನ್ನು ಗುರುತಿಸಿದರೆ ಯಾರೂ ಕರೆತರಬೇಡಿ ಅಂತ!

ಯಜಮಾನಿ : ಸರೋಜಾ, ಕರೆಂಟ್‌ ಬರೋವರೆಗೂ ಹಾಗೇ ಅಲುಗಾಡದೆ ನಿಂತಿರು. ಹುಷಾರು ಕತ್ತಲೆ ಜಾರಿ ಬಿದ್ದೀಯಾ?

ಕೆಲಸದಾಕೆ : ನೀವೇನೂ ಚಿಂತೆ ಮಾಡಬೇಡಿ ಅಮ್ಮಾವರೇ…. ಯಜಮಾನರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಟೀಚರ್‌ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು?

ವಿದ್ಯಾರ್ಥಿ : ಬಿರ್ಲಾ ಸಿಮೆಂಟ್‌

ಟೀಚರ್‌ : ಯಾಕೆ?

ವಿದ್ಯಾರ್ಥಿ : ಅದರಲ್ಲಿ ಜೀವ ಇದೆ.

ರಂಗಮ್ಮ : ಇಲ್ಲಿ ಶಂಕರಾನಂದ ಸ್ವಾಮಿ ಯಾರು?

ಒಬ್ಬ : ನಾನೇ ತಾಯಿ! ಸೆಕೆಯನ್ನು ತಾಳಾರದೆ ತಲೆಗೆ ಹಾಕಿಸಿಕೊಂಡಿದ್ದ ವಿಗ್‌, ಅಂಟಿಸಿಕೊಂಡಿದ್ದ ಗಡ್ಡನ್ನು ಬಿಚ್ಚಿಟ್ಟಿದ್ದೇನೆ ಅಷ್ಟೆ.

ಹೆಂಡತಿ (ಫೋನ್‌ನಲ್ಲಿ) : ರೀ ನೀವು ಕೆಲಸದ ಮೇಲೆ ಅಂತ ಹೋಗಿ ಹದಿನೈದು ದಿವಸ ಆಯಿತು. ನಿಮ್ಮನ್ನು ಕಾಣದೆ ಅರ್ಧ ಸತ್ತಿದ್ದೇನೆ. ಯಾವಾಗ ಬರುತ್ತೀರಿ?

ಗುಂಡ : ಇನ್ನೂ ಹದಿನೈದು ದಿನ ಬಿಟ್ಟು.

ಭಿಕ್ಷುಕ : ಏನ್ಸಾರ್‌ ಊರಿಗೆ ಹೊರಟಿದ್ದೀರಾ?

ಯಜಮಾನ : ಹೌದಯ್ಯ

ಭಿಕ್ಷುಕ : ಆದಷ್ಟು ಬೇಗ ಬಂದು ಬಿಡಿ ಸಾರ್‌.

ಯಜಮಾನ : ಯಾಕಯ್ಯಾ…?

ಭಿಕ್ಷುಕ : ಅಮ್ಮಾವ್ರ ಕೈ ಅಡುಗೆ ಚೆನ್ನಾಗಿರುವುದಿಲ್ಲ ಅದಕ್ಕೆ…..

ರಾಧಾ : ಲೇ ಸುಮಾ ಎಷ್ಟು ವರ್ಷ ಆಯ್ತು ನಿನ್ನನ್ನು ನೋಡಿ! ಅಂದಹಾಗೆ ಈಗ ನಿನ್ನ ವಯಸ್ಸೆಷ್ಟು?

ಸುಮಾ : ಹದಿನೆಂಟು…. ನಿನ್ನದು…?

ರಾಧಾ : ಏನು ಹದಿನೆಂಟು ಅಂದೆಯಾ….? ಆ ಲೆಕ್ಕಾಚಾರದಲ್ಲಿ ನೋಡಿದರೆ ನಾನಿನ್ನೂ ಹುಟ್ಟೇ ಇಲ್ಲ…..

ಹೆಂಡತಿ : ರೀ ಟಿ.ವಿ.ಯಲ್ಲಿ ಒಂದು ಆಶ್ಚರ್ಯಕರ ಸುದ್ದಿ ಹೇಳಿದರು. ಹಾವು ಮುಂಗುಸಿ ಒಟ್ಟಿಗೇ ಜೀವಿಸುತ್ತಿವೆಯಂತೆ.

ಗುಂಡ : ಅದೇನು ಮಹಾ! ಈಗ ನಾನು ನೀನು ಒಟ್ಟಿಗೆ ಜೀವಿಸುತ್ತಿಲ್ಲವೇ….?

ಗುಂಡ : ಏನೇ ಎಲ್ಲಾ ಬಿಟ್ಟು ನಿನ್ನ ನಾಲಿಗೆಗೆ ಯಾಕೆ ಅರಿಶಿನ ಕುಂಕುಮ ಹಚ್ಚಿಕೊಳ್ಳುತ್ತಿದ್ದೀಯಾ…..?

ಹೆಂಡತಿ : ಇಂದು ಆಯುಧ ಪೂಜೆ ಅಲ್ಲಾ….? ಅದಕ್ಕೆ.

ನರ್ಸ್‌ : ಡಾಕ್ಟರ್‌ ಡಾಕ್ಟರ್‌…..! ಆಪರೇಷನ್‌ ಥಿಯೇಟರ್‌ನಿಂದ ಪೇಶೆಂಟ್‌ ಓಡಿ ಹೋಗ್ತಾ ಇದಾನೆ….

ವೈದ್ಯ : ಹೋಗಲಿ ಬಿಡು ಬದುಕಿಕೊಳ್ಳಲಿ….!

ಗುಂಡ : ಸಾರ್‌ ನನ್ನ ಹೆಂಡತಿ ಕಳೆದುಹೋಗಿದ್ದಾಳೆ. ದಯವಿಟ್ಟು ಹುಡುಕಿ ಕೊಡಿ.

ಪೋಸ್ಟ್ ಮಾಸ್ಟರ್‌ : ರೀ ಸ್ವಾಮಿ! ಇದು ಪೋಸ್ಟ್ ಆಫೀಸ್. ಪೊಲೀಸ್‌ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್‌ ಕೊಡಿ.

ಗುಂಡ : ನನಗಾಗುತ್ತಿರುವ ಸಂತೋಷಕ್ಕೆ ನಾನೆಲ್ಲಿ ಹೋಗುತ್ತಿದ್ದೇನೆ ಎಂಬುದೇ ನನಗೆ ತಿಳಿಯುತ್ತಿಲ್ಲ.

ಪಂಕಜಾ : ನನ್ನ ಯಜಮಾನರು ನಮ್ಮ ಮದುವೆಯಾದ ಆರು ತಿಂಗಳೊಳಗೇ ತೀರಿಕೊಂಡುಬಿಟ್ಟರು.

ಗುಂಡ : ಅವರು ನಿಜವಾಗಿಯೂ ಪುಣ್ಯವಂತರು, ಹೆಚ್ಚು ಕಾಲ ನರಳಲಿಲ್ಲ.

ಗುಂಡನ ಮದುವೆಯಾಗಿ 2 ದಿನ ಆಗಿತ್ತು. ಹೀಗೆ ಮಾತನಾಡುತ್ತಾ ಗುಂಡ ಕೇಳಿದ. “ನೀನು ನನ್ನಲ್ಲಿ ಏನು ಕಂಡು ಕೂಡಲೇ ಮದುವೆಗೆ ಒಪ್ಪಿದೆ?”

ಗುಂಡಿ ನಾಚುತ್ತಾ ಹೇಳಿದಳು, “ನೀವು ದಿನಾ ಪಾತ್ರೆ ತೊಳೆಯುವುದನ್ನು ನಾನು ನೋಡಿದ್ದೆ!”

ಗುಂಡನ ಹೆಂಡತಿ ಗುಂಡಿ ಮಹಾ ಕಪ್ಪು. ಅವಳು ಬೇಕೆಂದೇ ಒಂದು ದಿನ ಕಡು ಕೆಂಪಾದ ಸೀರೆ ಉಟ್ಟು ಅವನ ಮುಂದೆ ಬಂದು, “ಈಗ ನಾನು ಹೇಗೆ ಕಾಣಿಸ್ತೀನಿ?” ಎಂದಳು.

“ಕಣ್‌ಕಪ್ಪಿನ ಫ್ಯಾಕ್ಟ್ರಿಗೆ ಬೆಂಕಿ ಹತ್ತಿಕೊಂಡಂತೆ!” ಎನ್ನುವುದೇ ಗುಂಡ?

ಗಂಡ ಸಾರನ್ನು ಕಲಸಿ ಬಾಯಿಗಿಟ್ಟ ನಂತರ ಉಪ್ಪಿನಕಾಯಿ ಬೇಕೆಂದು ಕೇಳಿದರೆ, ಸಾರು ನೆಟ್ಟಗಿಲ್ಲವೆಂದೂ, ಪ್ರಾಣಿ ನೇರವಾಗಿ ಹೇಳಿಕೊಳ್ಳುವ ಸ್ವಭಾವದವನಲ್ಲವೆಂದೇ ಲೆಕ್ಕ!

ರಮಣ : ಪುರೋಹಿತರೇ ಮದುಮಗಳನ್ನು ಎಲ್ಲಿ ಕೂರಿಸುತ್ತೀರಾ? ನನ್ನ ಎಡಕ್ಕೋ ಅಥವಾ ಬಲಕ್ಕೋ…?

ಪುರೋಹಿತ : ಎಲ್ಲೋ ಒಂದು ಕಡೆ ಕೂರಿಸಿದರಾಯ್ತು ಬಿಡಪ್ಪ….. ಕೊನೆಗೆ ಅವಳು ಕೂರುವುದು ನಿನ್ನ ತಲೆಯ ಮೇಲೆ ತಾನೇ…..?

ಅಜಯ್‌-ವಿಜಯ್‌ ತಂತಮ್ಮ ಪತ್ನಿಯರನ್ನು ಹೊಗಳುತ್ತಿದ್ದರು.

ಅಜಯ್‌ : ನನ್ನ ಪತ್ನಿಗೆ ಚೆನ್ನಾಗಿ ಹಾಡಲು ಬರುತ್ತದೆ, ಆದರೆ ಸಭೆಯಲ್ಲಿ ಎಂದೂ ಹಾಡಿದ್ದಿಲ್ಲ.

ವಿಜಯ್‌ : ನೀನೇ ಪುಣ್ಯವಂತ, ನನ್ನವಳಿಗೆ ಹಾಡಲು ಗೊತ್ತಿಲ್ಲದಿದ್ದರೂ, ಕಚೇರಿ ಖರ್ಚನ್ನು ನನ್ನ ತಲೆಗೇ ಅಂಟಿಸುತ್ತಾಳೆ.

ಪತಿ : ಇವತ್ತು ಮನೆ ಬಹಳ ಕ್ಲೀನ್‌ ಆಗಿದೆ. ಯಾಕೆ…. ಏನೂ ಮೆಸೇಜ್‌ ನೋಡಲಿಲ್ಲವೇ?

ಪತ್ನಿ : ಅದೇ ಮತ್ತೆ….. ನನ್ನ ಚಾರ್ಜರ್‌ ಕಳೆದು ಹೋಗಿತ್ತು. ಅದನ್ನು ಹುಡುಕುವುದರಲ್ಲಿ ಮನೆ ತಾನಾಗಿ ಕ್ಲೀನ್‌ ಆಯಿತು.

ರಾಯರು : ಏನೋ ಗುಂಡ ತುಂಬಾ ಖುಷಿಯಾಗಿದ್ದೀಯಾ? ಏನು ಸಮಾಚಾರ…..?

ಗುಂಡ : ನನ್ನ  ಹೆಂಡತಿಗೆ ಸಿಕ್ಕಾಪಟ್ಟೆ ಬಾಯಿಹುಣ್ಣು.

ಪತಿ : ಇವತ್ತು ತುಂತುರು ಮಳೆ ಹನಿಯ ವಾತಾವರಣ ರಮ್ಯವಾಗಿದೆ. ಡಾರ್ಲಿಂಗ್‌, ಏನಾದರೂ ವಿಶೇಷವಾಗಿ ಹೇಳಬಾರದೇ?

ಪತ್ನಿ : ಹೌ ನೈಸ್‌…. ನಡಿ, ಶಾಪಿಂಗ್‌ ಹೋಗೋಣ!

ಯಜಮಾನ : ಏನಯ್ಯಾ… ಒಂದು ತಿಂಗಳಿನಿಂದ ನಮ್ಮ ಮನೆ ಕಡೆ ಭಿಕ್ಷೆಗೆ ಬರಲೇ ಇಲ್ಲ…..?

ಭಿಕ್ಷುಕ : ಏನು ಮಾಡಲಿ ಸಾರ್‌….. ಇಲ್ಲೆಲ್ಲೂ ಕಾರ್‌ ಪಾರ್ಕಿಂಗ್‌ಗೆ ಜಾಗವೇ ಇಲ್ಲ ……!

ಪತಿಪತ್ನಿ ಪರಸ್ಥಳಕ್ಕೆ ಹೋಗಿ ಹೋಟೆಲ್‌ನಲ್ಲಿ ತಂಗಿದ್ದರು. ಮಾರನೇ ದಿನ ಪತಿ ಹೋಟೆಲ್ ‌ಮ್ಯಾನೇಜರ್‌ಗೆ ಫೋನ್‌ ಮಾಡಿದ, “ಪ್ಲೀಸ್‌….. ಬೇಗ ಬನ್ನಿ! ನನಗೂ ನನ್ನ ಹೆಂಡತಿಗೂ ಘನಘೋರ ಜಗಳ ಆಗಿದೆ. ಅವಳು ಹೋಟೆಲ್ ಬಾಲ್ಕನಿಯಿಂದ ಧುಮುಕಿ ಪ್ರಾಣ ಬಿಡ್ತೀನಿ ಅಂತಿದ್ದಾಳೆ!”

ಮ್ಯಾನೇಜರ್‌ : ಸಾರಿ ಸರ್‌, ಇದು ನಿಮ್ಮ ಪರ್ಸನಲ್ ವಿಷಯ. ನಾನೇನೂ ಮಾಡಲಾಗದು.

ಗುಂಡ : ಅಯ್ಯೋ ನಿನ್ನ ಮನೆ ಕಾಯೋಗ! ಇಲ್ಲಿ ಬಾಲ್ಕನಿ ಕದ ತೆಗೆಯಲಾಗುತ್ತಿಲ್ಲ, ಬಂದು ಅದನ್ನು ರಿಪೇರಿ ಮಾಡ್ರಯ್ಯ ಅಂತಂದ್ರೇ…..

ಮೋಹನ್‌ : ಲವ್ ಮ್ಯಾರೇಜ್‌ ಮತ್ತು ಅರೇಂಜ್ಡ್ ಮ್ಯಾರೇಜ್‌ ಮಧ್ಯೆ ಅಂತರವೇನು?

ಕಿಶೋರ್‌ : ಅದೇ… ಆತ್ಮಹತ್ಯೆಗೂ ಹತ್ಯೆಗೂ ಇರುವ ಅಂತರ!

ಪತ್ನಿ : ನಿಮ್ಮ ಫ್ರೆಂಡ್‌ಗೆ ನಾನು ಮಾಡಿದ ಮೈಸೂರುಪಾಕು ಬಹಳ ಇಷ್ಟವಾಯ್ತು ಅನ್ಸುತ್ತೆ. ಅದನ್ನೇ ತಿರುಗಾಮುರುಗಾ ಮಾಡಿ ನೋಡ್ತಿದ್ದರು.

ಪತಿ : ಬಡ್ಕೊಂಡ್ರು! ಅವನೊಬ್ಬ ಬಿಲ್ಡಿಂಗ್‌ ಕಂಟ್ರಾಕ್ಟರ್‌. ತಾನು ಕಟ್ಟಿಸಿದ ಬಂಗಲೆ ಬಿದ್ದುಹೋಯ್ತು, ಆದರೆ ಈ ಮೈಸೂರುಪಾಕು ಅದ್ಹೇಗೆ ಇಷ್ಟು ಗಟ್ಟಿಯಾಗಿದೆ, ಕಚ್ಚಲು ಆಗ್ತಿಲ್ಲವಲ್ಲ ಅಂತ ನೋಡ್ತಿದ್ದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ