ಇರುವಂತೆಯೇ ಸ್ವೀಕರಿಸಿ

ನರೇಂದ್ರ ಮೋದಿಯವರ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಚುನಾವಣೆಗಳ ಅದ್ಭುತ ಗೆಲುವು ದೇಶದ ನಕಾಶೆಯನ್ನೇ ಬದಲಿಸಿಬಿಟ್ಟಿದೆ. 2014ರ ಗೆಲುವನ್ನು ಒಂದು ಆಕಸ್ಮಿಕ ಎಂದು ತಿಳಿಯಲಾಗಿತ್ತು. ಆದರೆ ಈ ಎರಡು ರಾಜ್ಯಗಳಲ್ಲಿನ ಗೆಲುವಿನ ಬಳಿಕ ಒಂದು ಹೊಸ ರೀತಿಯ ಭಾರತೀಯ ಜನತಾ ಪಾರ್ಟಿ ಒಂದು ಹೊಸ ರೀತಿಯ ರಾಜಕಾರಣವನ್ನು ನಡೆಸುವುದು ನಿಶ್ಚಿತವಾಗಿದೆ. ಭಾಜಪ ಸರ್ಕಾರಗಳಿಲ್ಲದ ಇತರ ರಾಜ್ಯಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಆಕ್ರಮಣಶೀಲವಾಗಿರುತ್ತದೆ ಮತ್ತು 2014 ಹಾಗೂ 2017ರ ಅನುಭವಗಳನ್ನು ಪುನರಾವರ್ತಿಸುತ್ತದೆ.

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಗೆಲುವುಗಳು ಭಾರತೀಯ ಜನತಾ ಪಾರ್ಟಿಯನ್ನು 1947 ರಿಂದ 1975ರವರೆಗಿನ ಕಾಂಗ್ರೆಸ್‌ನ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ. ಇತರ ಪಾರ್ಟಿಗಳ ರಾಜ್ಯ ಸರ್ಕಾರಗಳ ಬಳಿ ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಕಾರ್ಯಸೂಚಿಯನ್ನು ಜಾರಿಗೆ ತರುವುದು ಬಿಟ್ಟು ಬೇರಾವುದೇ ಉಪಾಯವಿಲ್ಲ.

ಕಾಂಗ್ರೆಸ್‌ನ 2004 ರಿಂದ 2014ರವರೆಗಿನ ಸುಧಾರಣೆಗಳನ್ನು ಒಪ್ಪದ ಜನತೆ ಅದಕ್ಕೆ ಭ್ರಷ್ಟಾಚಾರದ ಭಾರೀ ದಂಡವನ್ನಂತೂ ವಿಧಿಸಿತು. ರಾಜಕಾರಣದಲ್ಲಿ ಬರೀ ನಿಲ್ಲುವುದಷ್ಟೇ ಸಾಕಾಗುವುದಿಲ್ಲ. ತಮ್ಮನ್ನು ವಿಕ್ರಯಿಸಿಕೊಳ್ಳುವುದೂ ಅಗತ್ಯ. ನರೇಂದ್ರ ಮೋದಿಯವರನ್ನು ಎದುರಿಸುವುದು ಈಗ ಕಾಂಗ್ರೆಸ್‌ಗೆ ಮತ್ತು ಇತರ ಪಕ್ಷಗಳು ಹಾಗೂ ಅವರ ಮೈತ್ರಿಕೂಟಗಳಿಗೆ ಸಾಧ್ಯವಿಲ್ಲ.

ಈಗ ಭಾರತೀಯ ಜನತಾ ಪಾರ್ಟಿಗೆ ಅಭಿವೃದ್ಧಿ ಕಾರ್ಯಸೂಚಿಯ ಸೋಗನ್ನು ಹಾಕುವುದೂ ಅಗತ್ಯವಿಲ್ಲ. ಅದಕ್ಕೆ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಲೀ, ಸ್ವಚ್ಛ ಭಾರತವನ್ನಾಗಲೀ ಮಾಡುವುದು ಬೇಕಾಗಿಲ್ಲ. ಅದು ಜಾತಿಗಳು, ಸಂತರು, ಮಠಾಧಿಪತಿಗಳ ಸೈನ್ಯ ಮತ್ತು ಮೂಢನಂಬಿಕೆ ಇರುವವರ ಆಸರೆಯಿಂದ ಧರ್ಮದ ಆಸರೆ ಪಡೆದು ಹೊಸ ರಾಜಕಾರಣ ಮಾಡುತ್ತಿರುವುದು ವಿಚಿತ್ರವೇನಲ್ಲ.

ಸಾಮಾನ್ಯ ವ್ಯಕ್ತಿ ಶತಮಾನಗಳಿಂದ ತಮ್ಮ ಹೊಟ್ಟೆ ಹಾಗೂ ತಮ್ಮ ಬದುಕನ್ನು ಧರ್ಮ, ರೀತಿ ನೀತಿ, ಪರಂಪರೆಯ ಹೆಸರಿನಲ್ಲಿ ತ್ಯಾಗ ಮಾಡುತ್ತಿದ್ದಾರೆ ಹಾಗೂ ಅದರಲ್ಲಿಯೇ ತಮ್ಮ ಅಸ್ತಿತ್ವನ್ನು ಕಾಣುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಇತರ ಪಾರ್ಟಿಗಳೂ ಸಹ ಇದನ್ನೇ ಉಪಯೋಗಿಸಿದ್ದಾರೆ. ಆದರೆ ಭಾಜಪಾದ ರೀತಿಯಿಂದಲ್ಲ.

ಸುದ್ದಿ ಸಮಾಚಾರ

ನರೇಂದ್ರ ಮೋದಿಗೆ ಸಿಕ್ಕ ಗೆಲುವು ಅವರ ಸರ್ಕಾರಕ್ಕೆ ದೇಶದ ಅರ್ಥ ವ್ಯವಸ್ಥೆ ಮತ್ತು ಸಮಾಜದ ಜೊತೆ ಹೊಸ ಪ್ರಯೋಗ ಮಾಡುವ ಸ್ವಾತಂತ್ರ್ಯ ಕೊಟ್ಟಿದೆ. ಈಗ ಸರ್ಕಾರ ವಿರೋಧದ ಬಗ್ಗೆ ಚಿಂತಿಸದೆ ಕೆಲಸ ಮಾಡಬಹುದು. ಈಗ ಸಂವಿಧಾನ ಹಾಗೂ ರಾಜಕಾರಣದ ಪರಂಪರೆಗಳನ್ನು ಇಂದಿರಾ ಗಾಂಧಿ 1969 ರಿಂದ 1977ರ ನಡುವೆ ಇಟ್ಟಿದ್ದಂತೆಯೇ ಅದೇ ದೃಷ್ಟಿಯಲ್ಲಿ ಇಡಬಹುದಾಗಿದೆ.

ಸರ್ಕಾರದ ವಿರೋಧಿಗಳಿಗೆ ಈಗ 4 ಬಾರಿ ಯೋಚಿಸಿ ಹೇಳುವ ಧೈರ್ಯ ಮಾಡಬೇಕಾಗಿದೆ. ಏಕೆಂದರೆ ಜನತೆ ಬ್ಯಾಲಟ್‌ ಮೆಷಿನ್‌ಗಳ ಮೂಲಕ ಒಂದು ಹೊಸ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಈ ತೀರ್ಮಾನ ಒಳ್ಳೆಯದೋ ಕೆಟ್ಟದ್ದೊ ಎಂಬ ವಾದಕ್ಕೆ ಎಡೆಯಿಲ್ಲ.

ಮದುವೆಯ ನಂತರ ಮನೆಗೆ ಸೊಸೆ ಅಥವಾ ಪತ್ನಿ ಬಂದರೆ ಅವಳ ಕೊರತೆಗಳ ಬಗ್ಗೆ ಗಮನ ಕೊಡುವುದರಿಂದ ಯಾವುದೇ ಲಾಭವಿಲ್ಲ. ಯಾವುದು ಹೇಗಿದೆಯೋ ಅದರಂತೆಯೇ ಸ್ವೀಕರಿಸುವುದು ಒಳ್ಳೆಯದು. ಒಂದು ವೇಳೆ ಪಂಚಾಯಿತಿದಾರರು ಅಂದರೆ ಜನತೆಯ ಅಭಿಪ್ರಾಯ, ಪರಿಪೂರ್ಣ ಅಭಿಪ್ರಾಯದೊಂದಿಗೆ ಗೆದ್ದು ಯಾವುದಾದರೂ ಸರ್ಕಾರ ರಚಿತವಾದರೆ ಅದನ್ನು ಸ್ವೀಕರಿಸಲೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ