ಕೆ. ಮಂಜುಳಾ

ಸಹಜವಾಗಿ ತೀರಿಕೊಂಡ ಕಾಡು ಪ್ರಾಣಿಗಳನ್ನು ಎಲ್ಲಿಯೋ ಒಂದೆಡೆ ಮಣ್ಣು ಮಾಡುವ ಬದಲು ಅಂತಹ ಪ್ರಾಣಿಗಳ ಮುಖದಲ್ಲಿ ಜೀವಂತ ಭಾವ ತುಂಬುವಂತೆ ಮಾಡುವ ಕಲೆಯೇ ಟ್ಯಾಕ್ಸಿಡರ್ಮಿನಮ್ಮ ದೇಶದ ಏಕೈಕ ಪ್ರಾಣಿ ಪ್ರಸಾಧನ ಕಲೆಯ ಅಪರೂಪದ ಕಲಾವಿದೆ ಕೆ. ಮಂಜುಳಾ ಕಲೆಯ ಬಗ್ಗೆ ಹೀಗೆ ವಿವರಿಸುತ್ತಾರೆ........?

ನಾವು ಸಾಮಾನ್ಯವಾಗಿ ಹಳೆಯ ಕಾಲದ ಚಲನಚಿತ್ರಗಳಿಗೆ ಹೋದಾಗ ಅದರಲ್ಲಿದ್ದ ದೊಡ್ಡ ದೊಡ್ಡ ಅರಮನೆ ಅಥವಾ ಬಂಗಲೆಗಳನ್ನು ತೋರಿಸುವಾಗ ಗೋಡೆಯ ಮೇಲೆ ನೇತು ಹಾಕಿದ ಪ್ರಾಣಿಗಳು ನೋಡ ಸಿಗುತ್ತವೆ. ಉದಾಹರಣೆಗೆ ಹುಲಿಯ ಮುಖ, ಕಾಡು ಕೋಣದ ಮುಖ, ಪಕ್ಕದಲ್ಲಿ ಅದರ ಎರಡು ಕೊಂಬುಗಳು, ಜಿಂಕೆಯ ಮುಖ ಮತ್ತು ಅದರ ಕೊಂಬು.... ಈ ರೀತಿ ವಿಭಿನ್ನ ಪ್ರಾಣಿಗಳ ಮುಖಗಳು ಕೊಂಬುಗಳ ಸಮೇತ ಗೋಡೆಗಳನ್ನು ಅಲಂಕರಿಸುತ್ತಿದ್ದವು.

ಅನೇಕ ಬಾರಿ ವೀಕ್ಷಕರಿಗೆ ಹೆದರಿಕೆ ಹುಟ್ಟಿಸಲು ಆ ಪ್ರಾಣಿಯ ಮುಖವನ್ನು ತೋರಿಸಿದಾಗ ಭಯವಾಗುವಂತಹ ಹಿನ್ನೆಲೆ ಸಂಗೀತವನ್ನೂ ಮೂಡಿಸುತ್ತಿದ್ದರು. ಆಗ ನೋಡುಗನಿಗೆ ನಿಜವಾಗಲೂ ಭಯವಾಗುತ್ತಿತ್ತು. ಆ ಪ್ರಾಣಿಗಳ ಮುಖವಾಡದ ಹಿನ್ನೆಲೆ ಏನು? ಅಲ್ಲಿ ನಿಜವಾದ ಪ್ರಾಣಿಗಳೇ ಇರುವಂತೆ ಕಾಣಿಸುತ್ತಿತ್ತಲ್ಲಾ, ಅವು ನಿಜವಾದವುಗಳೇ? ಅಥವಾ ಕೃತಕವಾಗಿ ಮಾಡಿದವುಗಳೇ ಎನ್ನುವ ಪ್ರಶ್ನೆ ನಮ್ಮಲ್ಲಂತೂ ಮೂಡುವುದು ಸಹಜ. ಹಾಗಾದರೆ ಇವುಗಳ ಹಿಂದಿನ ಸ್ವಾರಸ್ಯಕರ ಕಥೆ ಏನು? ಇದಕ್ಕೆಂದೆ ಇರುವ ವಿಶೇಷ ಪ್ರಾಣಿ ಪ್ರಸಾಧನ ಕಲೆಯಾದ ಟ್ಯಾಕ್ಸಿಡರ್ಮಿಯ ಬಗ್ಗೆ ನಮ್ಮ ದೇಶದ ಏಕೈಕ ಕಲಾವಿದೆ ಮೈಸೂರಿನ ಕೆ. ಮಂಜುಳಾ ತಿಳಿಸುತ್ತಾರೆ.

ಶಿಕಾರಿಯಿಂದ ಸಿಂಗಾರ

ನಮ್ಮ ಹಿಂದಿನ ರಾಜ ಮಹಾರಾಜರು ಬೇಟೆಗೆ (ಶಿಕಾರಿ)ಗೆ ಹೋಗಿ ತಾವು ಕೊಂದ ಒಂದೆರಡು ಪ್ರಾಣಿಗಳನ್ನು ತಮ್ಮ ವಿಜಯದ ಸಂಕೇತ ಎನ್ನುವಂತೆ ತೆಗೆದುಕೊಂಡು ಬಂದುದುಂಟು. ನಂತರ ಬ್ರಿಟಿಷರಿಗೂ ಬೇಟೆ ಎನ್ನುವುದು ಒಂದು ಮನರಂಜನೆಯಾಗಿತ್ತು. ಅದರ ಮಾಂಸ ತಿಂದು ಮಿಕ್ಕ ಚರ್ಮವನ್ನು ಬಳಸಿಕೊಂಡು ಮತ್ತೆ ಅದೇ ಪ್ರಾಣಿಯ ರೂಪವನ್ನೇ ಕೊಡುತ್ತಿದ್ದರು. ಅದನ್ನು ಶ್ರೀಮಂತರ ಮನೆಗಳಲ್ಲಿ ಗೋಡೆಗಳ ಮೇಲೆ ಅಲಂಕಾರವನ್ನಾಗಿ ಬಳಸಲಾಗುತ್ತಿತ್ತು.

ಮಂಜುಳಾ ಅವರ ಅಜ್ಜ ಬೇಟೆಗಾರ ಆಗಿದ್ದರಂತೆ. ಜುಗರ್ಟ್‌ ವ್ಯಾನಿಂಗನ್‌ ಎನ್ನುವ ಬ್ರಿಟಿಷ್‌ ಅಧಿಕಾರಿಯ ಜೊತೆಯಲ್ಲಿ ಇದ್ದರಂತೆ ಮತ್ತು ಅವರ ಜೊತೆ ಒಳ್ಳೆಯ ಸಂಬಂಧವಿತ್ತಂತೆ. ಅವರ ಮೂಲಕ ಆಗಿನ ಕಾಲದಲ್ಲಿ ಅವರ ತಂದೆ ಸಹ ಪ್ರಾಣಿಗಳ ಜೊತೆ ಇದ್ದು ಪ್ರಾಣಿ ಪ್ರಸಾಧನ ಕಲೆಯನ್ನು ಕಲಿತುಕೊಂಡರಂತೆ. ಈ ಕಲೆಯ ಹಿನ್ನೆಲೆ ಸತ್ತ ಪ್ರಾಣಿಯ ಚರ್ಮವನ್ನು ತೆಗೆದು ಅದಕ್ಕೆ ಮತ್ತೆ ನಿಜ ರೂಪವನ್ನು ಕೊಡುವುದು. ಇದನ್ನು ಟ್ಯಾಕ್ಸಿ ಡರ್ಮಿ ಎಂತಲೂ ಹೇಳುತ್ತಾರೆ. ಈ ಕಲೆ ಬಹಳ ಹಿಂದಿನದು 1700-1800 ರಿಂದ ಬಂದದ್ದು.

ಜುಗರ್ಟ್‌ ವ್ಯಾನಿಗನ್‌ ಸಂಸಾರದ ಜೊತೆ, ಅವರ ಆಶ್ರಯದಲ್ಲಿ ಇವರ ಕುಟುಂಬ ಬೆಳೆಯಿತು. ಆಗಿನ ಕಾಲದಲ್ಲಿ ಜನರನ್ನು ಪ್ರಾಣಿಗಳಿಂದ ಕಾಪಾಡುವ ದೃಷ್ಟಿಯಿಂದ ಶಿಕಾರಿಗೆ ಮಹಾರಾಜರೂ ಹೋಗುತ್ತಿದ್ದರು. ಇದು ಪ್ರಾಣಿಗಳು ಕಾಡಿನಲ್ಲಿ ವಿಪುಲವಾಗಿದ್ದ ಕಾಲ, ಆದರೆ ನಂತರ ಪ್ರಾಣಿಗಳ ಸಂತತಿ ಕಡಿಮೆ ಆಗತೊಡಗಿದಾಗ, ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರದ ಕಡೆಯಿಂದ ಪ್ರಾಣಿಗಳನ್ನು ಸಾಯಿಸುವ ಬಗ್ಗೆ ನಿಯಂತ್ರಣ ಹೇರಲಾಗುತ್ತದೆ ಮತ್ತು ಕಾಯಿದೆಯನ್ನೂ ತರಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ