ನಮ್ಮ ದೇಶದಲ್ಲಿ ಹೆಂಗಸರಿಗೆ ಎಂಥ ಮರ್ಯಾದೆ ಸಿಗುತ್ತಿದೆ ಎಂಬುದು, ಭಾರತೀಯ ಕುಸ್ತಿ ಸಂಘದ ಚುನಾವಣೆಗಳಿಂದ ಸ್ಪಷ್ಟವಾಗಿದೆ. ಸಂಘದ ಮಾಜಿ ಅಧ್ಯಕ್ಷರು ಬಿಜೆಪಿಯ ಸಾಂಸದರಾದ ಬೃಜಭೂಷಣ್ ಸಿಂಗ್ ರ ವಿರುದ್ಧ ಮಹಿಳಾ ಕುಸ್ತಿಪಟುಗಳು ಖುಲ್ಲಂಖುಲ್ಲ ಆರೋಪಿಸಿದ್ದರು ಹಾಗೂ ತಿಂಗಳುಗಟ್ಟಲೆ ಧರಣಿ ಕುಳಿತಿದ್ದರು, ಆದರೆ ವಿಶೇಷ ಏನೂ ನಡೆಯಲಿಲ್ಲ. ಬಿಜೆಪಿ ಅವರನ್ನು ಸಂಪೂರ್ಣ ರಕ್ಷಿಸಿತು. ಅಪರಾಧಿ ಪ್ರಕರಣ, ಪಾರ್ಟಿಯಿಂದ ಉಚ್ಛಾಟನೆ ಇತ್ಯಾದಿ ಏನೂ ನಡೆಯಲಿಲ್ಲ. ಅಪರಾಧ ಸಾಬೀತಾದರೆ ಮುಂದೆ ಪಾರ್ಟಿಯಿಂದ ಉಚ್ಛಾಟನೆ ಎಂದು ಕೈ ತೊಳೆದುಕೊಂಡರು.
ಈ ಮಹಿಳಾ ಕುಸ್ತಿಪಟುಗಳ ಗಾಯದ ಮೇಲೆ ಆ್ಯಸಿಡ್ ಸಿಂಪಡಿಸುತ್ತಾ, ಭಾರತೀಯ ಕುಸ್ತಿ ಸಂಘದ ಮುಂದಿನ ಚುನಾವಣೆಗಳಲ್ಲಿ ಇವರ ಸಹೋದ್ಯೋಗಿ ಸಂಜಯ ಸಿಂಗ್ ಗೆ 47ರಲ್ಲಿ 40 ಮತ ಸಿಕ್ಕಿತು. ಸಕ್ರಿಯ 15 ಸೀಟುಗಳ 13ರಲ್ಲಿ ಅವರದೇ ರಾಜ್ಯಭಾರವಾಯ್ತು. ಇದರಲ್ಲಿ ಮತ ಚಲಾಯಿಸುವರು, ದೇಶದ ವಿಭಿನ್ನ ಕುಸ್ತಿ ಸಂಘಗಳ ಸ್ಥಾನೀಯ ಅಧ್ಯಕ್ತರಾಗಿರುತ್ತಾರೆ.
ನಂತರ ಈ ಕುರಿತು ಟೀಕೆಗಳಾದಾಗ, ಈ ಚುನಾವಣೆಗಳನ್ನೇ ರದ್ದುಗೊಳಿಸಿದರು. ಏಕೆಂದರೆ ಹೊಸ ಪಪೆಟ್ ಅಧ್ಯಕ್ಷ, ಬೃಜಭೂಷಣರ ಹಳ್ಳಿಯವನೇ ಆಗಿದ್ದು, ಹೊಸ ಕುಸ್ತಿ ಸ್ಪರ್ಧೆಗಳ ಘೋಷಣೆ ಮಾಡಿ, ಮಹಿಳಾ ಪಟುಗಳೇ, ನಾವು ಮೀಸೆ ಹೊತ್ತ ಗಂಡಸರು ಮಾತ್ರ ಈ ಕುಸ್ತಿ ವಿಭಾಯಿಸಬಲ್ಲೆವು. ನೀವು ತೆಪ್ಪಗೆ ನಾವು ಹೇಳಿದಂತೆ ಕೇಳಿಕೊಂಡಿರಬೇಕಷ್ಟೆ, ಎಂದಿದ್ದಾರೆ. ಬಿಜೆಪಿಗೆ ಈ ವಿಪಕ್ಷೀಯರು ಮುಂದಿನ 2024ರ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಬಹುದು ಎಂದೆಣಿಸಿ, ಸ್ಪೋರ್ಟ್ಸ್ ಅಥಾರಿಟಿ ಅಸರವಸರದಲ್ಲಿ ಈ ಚುನಾವಣೆಯನ್ನು ಮಾತ್ರವಲ್ಲದೆ, ಹೊಸ ಸಕ್ರಿಯ ಸದಸ್ಯರನ್ನೂ ಸಹ ರದ್ದುಗೊಳಿಸಿತು. ಇದೊಂದು ಉದಾಹರಣೆ ಅಷ್ಟೆ, ಹೆಂಗಸರ ಹಕ್ಕುಗಳ ಅದರಲ್ಲೂ ದೈಹಿಕವಾಗಿ ದುರ್ಬಲರಲ್ಲದ ಹೆಂಗಸರ ಹಾಗೂ 80-85% ಗಂಡಸರನ್ನು ತಮ್ಮ ಬಲವಾದ ಪಟ್ಟಿನಿಂದ ಸೋಲಿಸಬಲ್ಲಂಥವರನ್ನು ಮೂಲೆಗೆ ಒತ್ತರಿಸಿತು. ಈ ಹೆಂಗಸರು ತಿಂಗಳುಗಟ್ಟಲೇ ಧರಣಿ ಕೂರುವಷ್ಟು ಗಟ್ಟಿಗರಾಗಿದ್ದರು. ಪೊಲೀಸರ ಲಾಠಿ, ಚಳಿ, ಮಳೆ, ಬಿಸಿಲು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿದರು. ಆದರೆ ನಮ್ಮ ಸಮಾಜ ಮತ್ತು ಸರ್ಕಾರ ಎಷ್ಟು ನಿಷ್ಕುರಣಿಗಳಾದವೆಂದರೆ, ಅತ್ತ ಸಾಂಸದ ಅಧ್ಯಕ್ಷರ ತಲೆಗೂದಲೂ ಕೊಂಕಲಿಲ್ಲ, ಅವರ ಅಧಿಕಾರಕ್ಕೂ ಚ್ಯುತಿ ಬರಲಿಲ್ಲ. ಅವರೇ ಮುಂದಿನ ಅಧ್ಯಕ್ಷರಲ್ಲದಿದ್ದರೂ, ಅವರ ಮುಖವಾಣಿಯಾದರು.
ಗಂಡಿನ ಶೋಷಣೆಗೆ ಸಿಡಿದೇಳುವ ಪ್ರತಿ ಹೆಣ್ಣೂ ಈ ಸವಾಲನ್ನು ಎದುರಿಸಲೇ ಬೇಕಾಗುತ್ತದೆ. ತನ್ನ ಮನೆ ಮಾತ್ರವಲ್ಲದೆ ವಠಾರ, ಕಾಲೋನಿ, ನಗರ, ನೆಂಟರಿಷ್ಟರೆಲ್ಲರ ವಿರೋಧ ಕಟ್ಟಿಕೊಳ್ಳಬೇಕು ಹಾಗೂ ಈ ರೀತಿ ಗಂಡಸರ ವಿರುದ್ಧ ಸಿಡಿದು ನಿಂತಾಗ ಅವರಿಗೆ ಅನ್ನ ನೀರು ಸಿಗದಂತೆ ಮಾಡಲಾಗುತ್ತದೆ. ಲೋಕಸಭೆಯಲ್ಲಿ ಓಂ ಬಿರ್ಲಾ ಹಾಗೂ ರಾಜ್ಯಸಭೆಯಲ್ಲಿ ಜಗದೀಪ್, ವಿಪಕ್ಷದ ಸಾಂಸದರೊಂದಿಗೆ ನಡೆದುಕೊಳ್ಳುತ್ತಿರುವ ಹಾಗೆ. ಬಂಗಾಳದ ಮಹುಲಾ ಮೊಯೆತ್ರಾರೊಂದಿಗೂ ಹೀಗೇ ನಡೆಯಿತು. ಏಕೆಂದರೆ ಆಕೆ ಸಂಪೂರ್ಣವಾಗಿ ಸಿಡಿದು ಬಿದ್ದಿದ್ದಳು, ತನ್ನ ಹಠ ಬಿಟ್ಟುಕೊಡಲಿಲ್ಲ.
ವಿದ್ರೋಹ ಮಾಡುವ ಯುವತಿಯರು ತಮ್ಮ ಕುಟುಂಬದ ಪಾಲಿಗೆ ಧರ್ಮ ಸಮ್ಮತ ಕಪ್ಪು ಚುಕ್ಕೆ ಆಗುತ್ತಾರೆ. ಅವರಿಗೆ ಹೊಸ ನೌಕರಿ ಸಿಗುವುದಿಲ್ಲ, ತಮ್ಮ ಕುಟುಂಬದವರೊಂದಿಗೆ ಸೌಹಾರ್ದ ಸಂಬಂಧ ಇರೋಲ್ಲ. ಇವರ ಒಡಹುಟ್ಟಿದವರ ಮದುವೆ ಸಂದರ್ಭದಲ್ಲಿ ಇನ್ನಿಲ್ಲದ ಕಷ್ಟಗಳು ಎದುರಾಗುತ್ತವೆ, ಯಾವ ಫಂಕ್ಷನ್ ಗೂ ಆಹ್ವಾನ ಇರುವುದಿಲ್ಲ.
ಹಿಂದೂ ಧರ್ಮ ಮಾತ್ರವಲ್ಲದೆ, ಎಲ್ಲಾ ಧರ್ಮಗಳೂ ಹೆಣ್ಣನ್ನು ಸದಾ ಗುಲಾಮಳನ್ನಾಗಿಯೇ ಇರಿಸಿಕೊಳ್ಳಲು ಸದಾ ಮುನ್ನುಗ್ಗುತ್ತದೆ. ಹೆಣ್ಣು ಏನಿದ್ದರೂ ಗಂಡಿಗೆ ಅಡಿಯಾಳಾಗಿ ಲೈಂಗಿಕ ಜೊತೆ ನೀಡಿ, ಮಕ್ಕಳು ಹೆತ್ತು ಕೊಡಬೇಕಷ್ಟೆ, ಇಂಥ ಗಂಡಸರಿಂದ ಧರ್ಮದ ದಂಧೆ ನಡೆಯುತ್ತದೆ. ಸ್ಟ್ರಾಂಗ್ಸೆಲ್ಫ್ ಕಾನ್ಛಿಡೆಂಟ್ ಹೆಂಗಸರು ಸದಾ ಧರ್ಮವನ್ನು ವಿರೋಧಿಸುತ್ತಾ ಬಂದಿದ್ದಾರೆ. ಅಹಲ್ಯಾ, ಸೀತಾ, ದ್ರೌಪದಿ ಮುಂತಾದವರ ಹೆಸರು ಹೇಳುತ್ತಾ ಹೆಣ್ಣಿನ ಇಮೇಜ್ ಹೆಚ್ಚಿಸಲು ಯತ್ನಿಸುತ್ತಾರೆ. ಮನೆಮನೆಗಳಲ್ಲೂ ಇದನ್ನೇ ಒತ್ತಿ ಹೇಳುತ್ತಾರೆ, ಕುಸ್ತಿ ಸಂಘದ ಚುನಾವಣೆಯಲ್ಲಿ ಅವರ ಗೆಲುವು ಒಂದು ಉದಾ ಅಷ್ಟೆ.
ಇದು ಸರ್ಕಾರದ ಅಹಂಕಾರ
ಸೋಶಿಯಲ್ ಮೀಡಿಯಾಗಳಲ್ಲಿ ಬಗೆಬಗೆಯ ಪೋಸ್ಟ್ ನೋಡಿದರೆ, ಅರಬ್ಬಿ ಸಮುದ್ರದ ದ್ವೀಪ ದೇಶ ಮಾಲ್ಡೀವ್ಸ್ ನ ಆರ್ಥಿಕತೆಯನ್ನು ಭಾರತೀಯ ಪ್ರವಾಸಿಗರು ಚೂರು ಚೂರು ಮಾಡಿಬಿಟ್ಟರು ಎಂಬಂತೆಯೇ ಬಿಂಬಿಸಲಾಗುತ್ತಿದೆ. ಏಕೆಂದರೆ ಅಲ್ಲಿನ ಹೊಸ ರಾಷ್ಟ್ರಪತಿ ಮೊಹಮ್ಮದ್ ಮುಇಜ್ಜು ಭಾರತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಹಾಗಾಗಿ ನರೇಂದ್ರ ಮೋದಿಯವರು ಸೇಡು ತೀರಿಸಿಕೊಳ್ಳಲು ಲಕ್ಷದ್ವೀಪವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಮೀಡಿಯಾ ಪೋಸ್ಟ್ ಗಳಲ್ಲಿ ಸಾವಿರಾರು ಕ್ಯಾನ್ಸೆಲೇಶನ್ ಗಳ ಮಾತು ಬರುತ್ತಿದ್ದವು, ಕೇವಲ ಅಲ್ಲಿಗೆ ಭಾರತೀಯ ಪ್ರವಾಸಿಗರು ಮಾತ್ರವೇ ಹೋಗುತ್ತಾರೆ ಎಂಬಂತೆ ಬಿಂಬಿಸಲಾಗಿದೆ.
ಮಾಲ್ಡೀವ್ಸ್ ವಿಶ್ವದ ಎಲ್ಲಾ ಪ್ರವಾಸಿಗರಿಗೂ ಒಂದು ಪ್ರಮುಖ ಆಕರ್ಷಣೆ. ದ್ವೀಪಗಳ ಬೀಚ್ ಬಲು ಸ್ವಚ್ಛ, ಶುಭ್ರ. ಕೆಲವು ರೆಸಾರ್ಟ್ಸ್ ನೀರ ಮೇಲೆ ನಿರ್ಮಾಣಗೊಂಡಿವೆ. ವಾಟರ್ ಸ್ಪೋರ್ಟ್ಸ್, ಸ್ನೂಕಿಂಗ್ ನಂಥ ರೋಮಾಂಚಕಾರಿ ಅನುಭವಗಳಿಗಾಗಿ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಬಿಜೆಪಿ ಸಮರ್ಥಕರು ತಮ್ಮ ಪೋಸ್ಟ್ ಮೂಲಕ ಏನೇ ಹೇಳಿಕೊಳ್ಳಲಿ, ಕೇವಲ ಭಾರತೀಯರು ಮಾತ್ರ ಬರುತ್ತಾರೆ ಅಂತೇನಿಲ್ಲ.
ಎಷ್ಟು ಮಂದಿ ಭಾರತೀಯರು ಬರುತ್ತಾರೋ ಅಷ್ಟೇ ಮಂದಿ ರಷ್ಯಾ, ಚೀನೀಯರೂ ಬರುತ್ತಾರೆ. ಭಾರತೀಯರಿಗೆ ಈ ಪ್ರವಾಸದ ಹುಚ್ಚು ಹಿಡಿದಾಗಿನಿಂದ, ಹೆಚ್ಚು ಮಂದಿ ಇಲ್ಲಿಗೆ ಹೋಗುತ್ತಿದ್ದಾರೆ. ಇಲ್ಲಿ ವೀಸಾ ಇತ್ಯಾದಿಗಳ ದೊಡ್ಡ ಸಮಸ್ಯೆ ಇಲ್ಲ. ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಸಾರಾಂಶವೆಂದರೆ, ಭಾರತೀಯ ಪ್ರವಾಸಿಗರು ಅಲ್ಲಿಗೆ ಹೋಗದಿದ್ದರೆ, ಮಾಲ್ಡೀವ್ಸ್ ದಿವಾಳಿಯಾಗುತ್ತದಂತೆ.
ಇಂಥ ಅಹಂಕಾರ ದೂರ್ವಾಸ ಮುನಿಗಳಿಗಷ್ಟೇ ಸರಿ. ಮಾತಿಗೆ ಮೊದಲೇ ಕೋಪ, ಶಾಪ, ಭಸ್ಮ ಮಾಡಿಬಿಡುವ ಪ್ರತಾಪ! ಪೌರಾಣಿಕ ಕಥೆಗಳನ್ನೇ ಸತ್ಯ ಎಂದು ಭಾವಿಸುವ ಜನ, ಇಂಥ 4-6 ಪೋಸ್ಟ್ ಗಳನ್ನೇ ನಿಜವೆಂದು ನಂಬಿ ಮತ್ತೆ ಮತ್ತೆ ರೀಪೋಸ್ಟ್ ಮಾಡುತ್ತಾರೆ.
ಭಾರತದ ಹಿಂದೂವಾದಿ, ಮುಸ್ಲಿಂ ವಿರೋಧಿ ನೀತಿಯ ಕಾರಣ ಮುಸ್ಲಿಮರ ದೇಶ ಮಾಲ್ಡೀವ್ಸ್ ನಲ್ಲಿ ಬದಲಾವಣೆ ಬಂದಿದೆ, ಹಾಗಾಗಿ ಅವರು ಹೊಸ ರಾಷ್ಟ್ರಪತಿ ಆರಿಸಿದ್ದಾರೆ, ಅವರು ಭಾರತ ವಿರೋಧಿ ಎಂಬುದೇನೋ ಸರಿ. ಇದು ಸ್ವಾಭಾವಿಕ ಕೂಡ. ಇದನ್ನು ಪ್ರವಾಸೋದ್ಯಮಕ್ಕೆ ಜೋಡಿಸಿ ಸೋಶಿಯಲ್ ಮೀಡಿಯಾದ ಭಗವಾ ನಕ್ಸಲೀಯರು ಮಾಡಿದ ಕೆಲಸ ಮಾತ್ರ ನಿರರ್ಥಕವೇ ಸರಿ.
ಮಾಲ್ಡೀವ್ಸ್ ಸಹ 2 ವರ್ಷಗಳ ಕೋವಿಡ್ ಕಾಟಕ್ಕೆ ತತ್ತರಿಸಿತ್ತು, ಹಾಗೇಂತ ಅದೇನೂ ಸತ್ತು ಹೋಗಲಿಲ್ಲ. ಅದರ ಅರ್ಥ ವ್ಯವಸ್ಥೆ ಹೇಗೋ ಸುಧಾರಿಸಿತು, ಭಾರತೀಯ ಪ್ರವಾಸಿಗರು ಬರಲಿಲ್ಲ ಅನ್ನುವುದು ದೊಡ್ಡ ವಿಷಯವೇ ಅಲ್ಲ.
ಟೂರ್ ಆಪರೇಟರ್ ಗಳು ಹೇಳೋದಂದ್ರೆ ಹೊಸ ಬುಕ್ಕಿಂಗ್ಸ್ ಕಡಿಮೆ ಆಗಿರಬಹುದು, ಕ್ಯಾನ್ಸೀಶನ್ಸ್ ಹೆಚ್ಚಾಗಿರಬಹುದು, ಇದೊಂದು ದೊಡ್ಡ ಕೊರತೆ ಅಲ್ಲ. ಕೆಲವು ಭಾರತೀಯ ಪ್ರವಾಸಿಗರು ಬರಲಿಲ್ಲ ಅನ್ನುವುದು ದೊಡ್ಡ ವಿಷಯವೇ ಅಲ್ಲ. ಭಾರತೀಯರು ಹುಯಿಲೆಬ್ಬಿಸಿದರು ಅಂತ ಇವರ ಆಸೆಗೆ ವಿರುದ್ಧ ಇತರ ಭಾರತೀಯರು ಅಲ್ಲಿಗೆ ಹೋಗದೆ ಇರುತ್ತಾರೆಯೇ?
ಮಾಲ್ಡೀವ್ಸ್ ನ ಪ್ರತಿ ವ್ಯಕ್ತಿಯ ತಲಾದಾಯ 11,780 ಡಾಲರ್ ಗಳಾದರೆ, ಸರಾಸರಿ ಭಾರತೀಯರ ತಲಾದಾಯ 2,200 ಡಾಲರ್ಮಾತ್ರ, ಇಂಥವರು ಹೆಚ್ಚು ಬೊಬ್ಬೆ ಹೊಡೆಯಬಾರದು.
ಧರ್ಮದ ಗುಟ್ಟು ರಟ್ಟಾಗದಿರಲೆಂದು
ಅಹಂಕಾರ ಪ್ರದರ್ಶನ ಹೆಂಗಸರ ಗುಣ ಎನ್ನಲಾಗುತ್ತದೆ. ಕಿಟೀ ಪಾರ್ಟಿಗಳಲ್ಲಿ ಒಬ್ಬಾಕೆ ಬರಲಿಲ್ಲ ಎಂದರೆ, ಆಕೆ ಬಗ್ಗೆ ಉಳಿದವರು 4-6 ಮಾತು ಆಡಿಕೊಳ್ಳದೇ ಇರುತ್ತಾರಾ? ಮುಂದಿನ ಪಾರ್ಟಿಯಲ್ಲಿ ಅದೇ ಕಿಡಿ ಹೊತ್ತಿಕೊಳ್ಳುತ್ತದೆ. ಸಾಮಾನ್ಯವಾಗಿ ಅತ್ತೆ ಸೊಸೆಗೆ ಹೇಳುವುದೆಂದರೆ, ಇಲ್ಲಿನ ವಿಚಾರ ನಿನ್ನ ತವರಲ್ಲಿ ಹೇಳಬೇಡ, ಮುಖ್ಯವಾಗಿ ಇಲ್ಲಿನ ಲೋಪದೋಷ, ಕುಂದುಕೊರತೆಗಳನ್ನು ಅಂತ. ಯಾವುದೋ ಅಂಥ ಮಾತಿಗಾಗಿ ಅತ್ತೆ ಸೊಸೆ ನಡುವೆ ಜೋರು ಜಗಳ, ಯಾರು ಯಾವುದನ್ನು ಸಮರ್ಥಿಸಿದರೋ ಗೊತ್ತಿಲ್ಲ. ಇಲ್ಲಿನ ಸವಾಲು ಎಂದರೆ, ಅಂಥ ಮಾತು ಹೇಳಿದ್ದೇಕೆ? ರಾಜಕೀಯದಲ್ಲೂ ಈಗ ಇದೇ ವಿಚಾರ ನಡೆಯುತ್ತಿದೆ. ಉಪರಾಷ್ಟ್ರಪತಿ ಜಗದೀಪ್ ಧವನ್ ಖಡ್ ಅಳುತ್ತಿರುವುದೆಂದರೆ, ಇತರ ಸಾಂಸದರು ಸಂಸತ್ತಿನ ಹೊರಗೆ ತಮ್ಮನ್ನು ಅಣಕಾಡಿದ್ದು ಯಾಕೆ ಅಂತ? ಅದು ಅವರಿಗೆ ಈ ದೇಶಕ್ಕೆ, ಜಾಟ್ ಸಮುದಾಯಕ್ಕೆ ಮಾಡಿದ ಅಪಮಾನ ಎನಿಸಿದೆ. ಇವರು ಪ್ರೈಮರಿ ಶಾಲೆ ಹೆಡ್ ಮಾಸ್ಟರ್ ತರಹ, ಸಂಸತ್ತಿನಿಂದ ಒಬ್ಬರಾದ ನಂತರ ಒಬ್ಬರನ್ನು ತೆಗೆಯುತ್ತಿದ್ದರೆ, ಅವರು ಹೊರಗೆ ಹೋಗಿ ಆಡಿಕೊಳ್ಳುತ್ತಾರೆ ಅಂತ ಗೊತ್ತಿಲ್ಲವೇ? ಅವರು ಹಾಗೆ ಆಡಿಕೊಂಡರೆಂದು ಇವರೇಕೆ ಕೂಗಾಡಬೇಕು?
ಇದಂತೂ ಅತ್ತೆಸೊಸೆ ಜಗಳಕ್ಕಿಂತ ಕೀಳಾಯಿತು. ಇವರೀರ್ವರ ಜಗಳಕ್ಕೆ ಇಡೀ ಸಮುದಾಯಕ್ಕೇ ಅಪಮಾನ ಅನ್ನೋದು ಸರಿಯೇ? ಬಹುಶಃ ಅತ್ತೆಯವರು ರಾಜ್ಯಸಭಾ ಅಧ್ಯಕ್ಷರನ್ನು ಸಮರ್ಥಿಸುತ್ತಾ, ಒಬ್ಬ ಅತ್ತೆಗೆ ಮಾಡಿದ ಅವಮಾನ ಇಡೀ ಜಂಬೂ ದ್ವೀಪದ ಎಲ್ಲಾ ಅತ್ತೆಯರಿಗೂ ಮಾಡಿದ ಅವಮಾನಕ್ಕೆ ಸಮ ಎಂದು ಕಾನೂನು ಮಾಡುವುದು ಸರಿ, ಎನ್ನಬಹುದು.
ಇದೇ ತರಹ ತಮಿಳುನಾಡಿನ ನೇತಾರ ದಯಾನಿಧಿ ಮಾರನ್ ಹೇಳಿದ್ದು ಎಂದರೆ, ಉ. ಬಾರತದ ಯುವಜನತೆ ಕೇವಲ ಹಿಂದಿ ಬಲ್ಲವರು, ಹೀಗಾಗಿ ಅವರಿಗೆ ಬೇರೆ ರಾಜ್ಯಗಳಲ್ಲಿ ಕೇವಲ ಕ್ಲೀನಿಂಗ್ಕನ್ಸಟ್ರಕ್ಷನ್ ಕೆಲಸ ಸಿಗುತ್ತಿದೆ. ಇದರ ನಿಜಾಂಶ ಗೊತ್ತಿದ್ದೂ ಅಲ್ಲಿನ ಬಿಹಾರಿಗಳು ಸಿಡಿದೆದ್ದು, ಇದು ಇಡೀ ಬಿಹಾರಕ್ಕೇ ಮಾಡಿದ ಅವಮಾನ ಎಂದರು. ಹಾಗೇಂತ ಅದು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ಇಂಥ ಮಂದಿಗೂ ಅನ್ವಯಿಸುತ್ತದೆಯೇ? ತೇಜಸ್ವಿ ಯಾದವ್ ಸಹ ಇಂಥದ್ದೇ ಹುಯಿಲೆಬ್ಬಿಸಿ, ಸೊಸೆಯಾದವಳು ತವರಿಗೆ ಹೋಗಿ ಗಂಡನ ಮನೆಯವರ ಬಗ್ಗೆ ಯಾಕೆ ಆಡಿಕೊಳ್ಳಬೇಕು ಅಂತ ತಗಾದೆ ತೆಗೆದರು.
ಇದಕ್ಕೆ ಮೊದಲು ಹಿಂದೂ ಧರ್ಮದ ಕೆಲವು ಅಂಗಡಿಕಾರರು, ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಮಾತುಗಳು ಸನಾತನ ಧರ್ಮಕ್ಕೆ ಮಾಡಿದ ಅಪಮಾನ ಎಂದೇ ಬೊಬ್ಬೆ ಇಟ್ಟಿದ್ದರು.
ಸತ್ಯವನ್ನು ಕೇಳಿಸಿಕೊಳ್ಳದೆ ಇರುವ ಅಭ್ಯಾಸ ನಿಜಕ್ಕೂ ತಪ್ಪು ಅಭ್ಯಾಸ. ಆದರೆ ನಮ್ಮಲ್ಲಿ ಇದು ಆಳವಾಗಿ ಬೇರೂರಿದೆ. ಏಕೆಂದರೆ ಇಲ್ಲಿ ಧರ್ಮದ ಹೆಸರಿನಲ್ಲಿ ಸುಳ್ಳನ್ನೇ ಸತ್ಯವೆಂದು ನಂಬುವ ಅಭ್ಯಾಸವಿದೆ. ಹೀಗಾಗಿ ಆಸ್ತಿಕರು ಧರ್ಮದ ಗುಟ್ಟು ಎಲ್ಲಿ ರಟ್ಟಾದೀತೋ ಎಂದು ಹೆದರುತ್ತಾರೆ. ಎಲ್ಲಾ ಧರ್ಮಗ್ರಂಥಗಳೂ ಸುಳ್ಳಿನ ಆಗರ, ಹೀಗೆಂದು ಹೇಳಿದರೆ ದೊಡ್ಡ ಗಲಭೆ ಆದೀತು.
ಬಿಜೆಪಿಯಂತೂ ಸತ್ಯವನ್ನು ಕಂಡು ಎಲ್ಲರಿಗಿಂತಲೂ ಬಹಳ ಹೆದರುತ್ತದೆ. ಸಂಸತ್ತಿನಿಂದ ಸಾಂಸದರನ್ನು ತೆಗೆದಾಗ, ಮುಂಬರುವ ಚುನಾವಣೆಯ ಸಮಯದಲ್ಲಿ ಸಾಂಸದರು ಸರ್ಕಾರದ ಗುಟ್ಟು ರಟ್ಟು ಮಾಡಬಾರದೆಂದು ಹೆದರುತ್ತಾರೆ. ಹೆಚ್ಚಿನ ಡೈವೋರ್ಸ್ ಕೇಸುಗಳಲ್ಲೂ, ಪತಿಪತ್ನಿಯರ ಸುಳ್ಳಿನ ಸರಮಾಲೆ ಬಿಚ್ಚಿಡುವುದೇ ಆಗುತ್ತದೆ. ಮುಂದೆ ಟೀಕೆ ಟಿಪ್ಪಣಿ, ಹೊಡೆತಬಡಿತ ಇತ್ಯಾದಿ ಸಹ ಸತ್ಯವನ್ನು ಏಕೆ ಮುಚ್ಚಿಡಲಿಲ್ಲ ಎಂದೇ ಹೆಚ್ಚುತ್ತದೆ.