ಪ್ರಜಾಪ್ರಭುತ್ವ ಮತ್ತು ವ್ಯಾಪಾರ ಅಪಾಯದಲ್ಲಿ

ಮನೆ ಮನೆಗೆ ಸಾಮಗ್ರಿ ತಲುಪಿಸುವ ಪೀಳಿಗೆಗಳ ಕೆಲಸ ಈಗ ಹೊಸದೊಂದು ರೂಪ ಪಡೆದುಕೊಂಡಿದೆ. ಅದೊಂದು ಕಾಲದಲ್ಲಿ ಮಹಿಳೆಯರು ಹೊಸ್ತಿಲು ದಾಟಲು ನಿರ್ಬಂಧವಿತ್ತು. ಅಂಗಡಿಯವರೇ ಮನೆ ಬಾಗಿಲಿಗೆ ಬಂದು ಸಾಮಗ್ರಿಗಳನ್ನು ತಲುಪಿಸುತ್ತಿದ್ದರು.

ಅಮೆರಿಕಾದಲ್ಲಿ ಸೇಲ್ಸ್ ಮನ್‌ಗಳು ಒಂದು ವಿಶಿಷ್ಟ ಪೆಟ್ಟಿಗೆಯಲ್ಲಿ 1 ಕ್ವಿಂಟಾಲ್ ತನಕ ಸಾಮಾನುಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ಮನೆಬಾಗಿಲಿಗೆ ತಂದು ಕೊಟ್ಟು ಹೋಗುತ್ತಿದ್ದರು. ಬಳಿಕ ಅಂಗಡಿಗಳು ತೆರೆದವು, ಮಾಲ್‌ಗಳು ಬಂದವು. ಈಗಂತೂ ಮೊಬೈಲ್ ‌ಮತ್ತು ಇ-ಕಾಮರ್ಸ್‌ನ ಯುಗ. ಈಗ ಶಾಪಿಂಗ್‌ ಸಾಮಾನುಗಳನ್ನು ನೋಡಿ ಅಲ್ಲ, ಬ್ರ್ಯಾಂಡ್‌ ಹೆಸರು ಮತ್ತು ಬೆಲೆಯಲ್ಲಿ ರಿಯಾಯಿತಿ ನೋಡಿ ಮಾರಲಾಗುತ್ತದೆ. ಈಗ ಉತ್ಪಾದಕರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಾಗಿರುವ ಇ-ಕಾಮರ್ಸ್‌ ಕಂಪನಿಗಳಷ್ಟೇ ಉಳಿದಿವೆ. ಅವು ತಮ್ಮ ಸಾಫ್ಟ್ ವೇರ್‌ ಬಲದಿಂದ ಕೋಟಿ ಕೋಟಿ ಗಳಿಸುತ್ತಿವೆ. ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಅಸ್ತಿತ್ವವೇ ಅಪಾಯದಲ್ಲಿದೆ. ಒಂದು ವಿಶಿಷ್ಟ ವಸ್ತು ವಿಶಿಷ್ಟ ಅಂಗಡಿಯಲ್ಲಿಯೇ ದೊರೆಯುತ್ತಿತ್ತು. ಆದರೆ ಈಗ ಇ-ಕಾಮರ್ಸ್‌ ಕಂಪನಿಗಳು ಪ್ರತಿಯೊಂದು ವಸ್ತುವನ್ನೂ ಮಾರಾಟ ಮಾಡುತ್ತಿವೆ. ಸೂಜಿಯಿಂದ ಸೀರೆ ತನಕ ಮತ್ತು ಸ್ಕ್ರೂ ಡ್ರೈವರ್‌ನಿಂದ ಹಿಡಿದು ಕಪಾಟುಗಳ ತನಕ ಏನೆಲ್ಲ ಲಭಿಸುತ್ತವೆ.

ಭಾರತ ಸರ್ಕಾರ ದೇಶವಿದೇಶದ ಇ-ಕಾಮರ್ಸ್‌ ಕಂಪನಿಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದೆ. ಇದರಿಂದಾಗಿ ಕಪ್ಪು ಹಣದಲ್ಲಿ ಇಳಿಮುಖವಾಗುತ್ತದೆ ಎಂದು ಅದು ಭಾವಿಸಿತ್ತು. ಆದರೆ ಆಗುತ್ತಿರುವುದೇ ಬೇರೆ. ಯಾವ ಕಪ್ಪು ಅರ್ಥ ವ್ಯವಸ್ಥೆಯ ಭಾಗವಾಗಿತ್ತೋ, ಅದೇ ಈಗ ಕೊನೆಗೊಳ್ಳುತ್ತಿದೆ. ಹೊಸ ಸರ್ಕಾರ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಎಷ್ಟೊಂದು ಒತ್ತು ಕೊಡುತ್ತಿದೆ ಎಂದರೆ, ಅದು ಬೀದಿ ಬೀದಿಯ ಅಂಗಡಿಗಳಿಂದ ಹಿಡಿದು ಸಗಟು ಮಂಡಿ ವ್ಯವಹಾರವನ್ನು ಕೊನೆಗೊಳಿಸಲು ಹುನ್ನಾರ ನಡೆಸುತ್ತಿದೆ.

ದೊಡ್ಡ ಕಂಪನಿಗಳಿಗೆ ಲಾಭ ಸಿಗಬೇಕು, ಅವರ ಷೇರುಗಳ ಬೆಲೆ ಗಗನಮುಖಿ ಆಗಬೇಕು ಎನ್ನುವ ಧೋರಣೆ ಇದೆ. ಈ ಧೋರಣೆಯಿಂದ ಲಕ್ಷಾಂತರ ಕುಟುಂಬಗಳು ದಿವಾಳಿ ಏಳುವ ಸ್ಥಿತಿ. ನಿನ್ನೆ ಮೊನ್ನೆಯವರೆಗೆ ಯಾರು ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೊ, ಅವರು ನಿರುದ್ಯೋಗಿಗಳಾಗಬಹುದು. ಯಾರು ಬೆನ್ನ ಮೇಲೆ ಸಾಮಾನು ಹೊತ್ತುಕೊಂಡು ಹೋಗಲು ಸಿದ್ಧರಿರುತ್ತಾರೊ, ಅವರಿಗಷ್ಟೇ ಹೊಸ ನೌಕರಿಗಳು ಲಭಿಸಬಹುದು. ಅಮೆರಿಕಾದಲ್ಲಿ ಬ್ರಿಕ್‌ ಅಂಡ್‌ಮೋಟರ್ನ್‌ ಸ್ಟೋರ್ಸ್‌ ಈಗ ಮುಚ್ಚುತ್ತಿದೆ. ಏಕೆಂದರೆ  ಅದು ಇ-ಕಾಮರ್ಸ್‌ ಕಂಪನಿಗಳ ಸ್ಪರ್ಧೆ ಎದುರಿಸಲು ಆಗುತ್ತಿಲ್ಲ.

ಲಕ್ಷಾಂತರ ಪುಟ್ಟ ಮಧ್ಯಮ ವ್ಯಾಪಾರಿಗಳ ಭವಿಷ್ಯ ಅತಂತ್ರವಾಗಿದೆ. ಜೊತೆಗೆ ಶಾಪಿಂಗ್‌ನ ನೆಪದಲ್ಲಿ ಹೊರಗೆ ಸುತ್ತಾಡಲು ಹೋಗುತ್ತಿದ್ದ ಅವಕಾಶ ಕೂಡ ಕಡಿಮೆಯಾಗುತ್ತಿವೆ. ಭಾರತದಂತಹ  ದೇಶದಲ್ಲಿ ಈ ಬದಲಾವಣೆಯನ್ನು ಸರ್ಕಾರ ಒತ್ತಾಯ ಪೂರ್ವಕವಾಗಿ ನೋಟು ರದ್ಧತಿ ಹಾಗೂ ಜಿಎಸ್‌ಟಿ ಮುಖಾಂತರ ಹೇರುತ್ತಿದೆ. ಸರ್ಕಾರದ ನೋಟು ರದ್ಧತಿ ಈಗಲೂ ಜಾರಿಯಲ್ಲಿದೆ.  ಏಕೆಂದರೆ ನೋಟುಗಳ ಕೊರತೆ ಆದಾಗಿಲ್ಲ ಹಣ ಪಾವತಿಯನ್ನು ಕಂಪ್ಯೂಟರ್‌ ಮುಖಾಂತರ ಮಾತ್ರ ಮಾಡಬಹುದು. ಯಾರಿಗೆ ಕಂಪ್ಯೂಟರ್‌ ಬಗ್ಗೆ ಗೊತ್ತೇ ಇಲ್ಲ ಅಂಥವರನ್ನು ಸರ್ಕಾರ ಕತ್ತಿಯ ಬಾವಿಗೆ ನೂಕುತ್ತಿದೆ. ವ್ಯಾಪಾರಿಗಳಿಗೂ ರಿಟರ್ನ್‌ ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕಿದೆ. ಇದು ನಿಜಕ್ಕೂ ಕಠಿಣ. ಈಗ ಹೊಸ ಉದ್ಯೋಗಗಳು ಮತ್ತು ಹೊಸ ವ್ಯಾಪಾರಗಳು ಕೇವಲ ಕಂಪ್ಯೂಟರ್‌ನ್ನೇ ಅವಲಂಬಿಸಿವೆ. ಅವುಗಳ ಮೇಲೆ ದೊಡ್ಡ ಕಂಪನಿಗಳು ಹಾಗೂ ಸರ್ಕಾರದ ಅಧಿಪತ್ಯ ಇರುತ್ತದೆ. ದೊಡ್ಡ ಕಂಪನಿಗಳು ಈಗ ಈಸ್ಟ್ ಇಂಡಿಯಾ ಕಂಪನಿಯ ಹಾಗೆ ದೇಶಗಳ ರಾಜರುಗಳನ್ನು ಬದಲಿಸಲಿದೆ. ಷೇರು ಮಾರುಕಟ್ಟೆಗಳ ಕಂಪನಿಗಳು ಪ್ರಜಾಪ್ರಭುತ್ವದಲ್ಲಿ ಹಸ್ತಕ್ಷೇಪ ನಡೆಸುವುದರ ಮೂಲಕ ಡೊನಾಲ್ಡ್ ಟ್ರಂಪ್‌ರಂಥವರಿಗೆ ರಾಜಪಟ್ಟ ಕೊಟ್ಟಿತು. ಪ್ರತಿ ಮನೆ ಮನೆಗೂ ಸ್ವಾತಂತ್ರ್ಯ ತಂದುಕೊಡುವ, ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುತ್ತಿದ್ದ ಪ್ರಜಾಪ್ರಭುತ್ವ ಈಗ ಅದೃಶ್ಯವಾಗುವ ಸ್ಥಿತಿಯಲ್ಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ