ಮಿನಿ ಕಥೆ  -  ಮೂಲೆಮನೆ ರತ್ನಾಕರ ಭಿಡೆ 

ಪತ್ರಿಕೆಯೊಂದರ ಅಂಕಣಕ್ಕಾಗಿ ವಿಶ್ವ ತಾನು ಎದುರಿಸಿದ ಅಪಘಾತದ ಪ್ರಸಂಗವನ್ನು ಸ್ವಾರಸ್ಯಕರವಾಗಿ ವರ್ಣಿಸಿ ಅದನ್ನು ಪ್ರಕಟಣೆಗೆ ಕಳುಹಿಸಿದ

ಅಂದು ಪತ್ರಿಕೆಯಲ್ಲಿ ಜಾಹೀರಾತು ಬಂದಿತ್ತು. ಮಾರ್ಚ್‌ 4 ರಾಷ್ಟ್ರೀಯ ಸುರಕ್ಷಾ ದಿನಾಚರಣೆ. ಓದುಗರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಸುರಕ್ಷಾ ಸಪ್ತಾಹದಲ್ಲಿ ನಿಮ್ಮ ಕೊಡುಗೆ ಏನು? ನೀವೇನಾದರೂ ಅಪಘಾತ ಯಾ ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ್ದೀರಾ? ಬರೆಯಿರಿ. ಲೇಖನ ಸ್ವಾರಸ್ಯವಾಗಿರಲಿ. ಆಯ್ಕೆಯಾದ ಲೇಖನಕ್ಕೆ ಸೂಕ್ತ ಬಹುಮಾನ ಕೊಡಲಾಗುವುದು. ಸಂಪಾದಕ ವಿಶ್ವನಿಗೆ ಥಟ್ಟನೆ ಉಪಾಯ ಹೊಳೆಯಿತು. ನಾನು ಮಾಡಿದ ಸಾಧನೆಯನ್ನು ಅವರಿವರಲ್ಲಿ ಕೊಚ್ಚಿಕೊಂಡರೆ ಆತ್ಮಸ್ತುತಿ ಆಗುತ್ತದೆ. ಅದರ ಬದಲು ಪತ್ರಿಕೆಗೆ ಬರೆದರೆ ನಾನು ಮಾಡಿದ ಸೇವೆ ನೂರಾರು ಜನಕ್ಕೆ ತಿಳಿಸಿದಂತಾಗುತ್ತದೆ. ಅಲ್ಲದೇ, ಒಂದು ವೇಳೆ ಪ್ರಕಟಗೊಂಡರೆ ಸಂಭಾವನೆ ಸಿಗಲೂಬಹುದು. ತಕ್ಷಣ ಲೇಖನವನ್ನು ಗೀಚಿ ಪತ್ರಿಕೆಗೆ ರವಾನಿಸಿಯೇಬಿಟ್ಟ.

ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ನಾನಾಗ ಬಹುರಾಷ್ಟ್ರಿಯ ಕಂಪನಿಯಲ್ಲಿದ್ದೆ. ಬನಶಂಕರಿ ಮೂರನೇ ಹಂತದ ಮನೆಯಿಂದ ಎರಡನೇ ಪಾಳಿ ಡ್ಯೂಟಿಗೆ ಹೊರಟ ನಾನು, ಹೀರೋಹೋಂಡಾ ಮೋಟಾರ್‌ಬೈಕ್‌ನಲ್ಲಿ ನೆಟ್ಟಕಲ್ಲಪ್ಪ ಸರ್ಕಲ್ ತಲುಪುತ್ತಿದ್ದಂತೆ ನನ್ನ ಮುಂದುಗಡೆ ವೇಗವಾಗಿ ಚಲಿಸುತ್ತಿದ್ದ ಸ್ಕೂಟರ್‌ ರಸ್ತೆ ದಾಟುತ್ತಿದ್ದ ಹದಿನೆಂಟರ ಯುವತಿಗೆ ಡಿಕ್ಕಿ ಹೊಡೆಯಿತು. ಹೊಡೆದ ರಭಸಕ್ಕೆ ಯುವತಿ ಸುಮಾರು ನಾಲ್ಕೈದು ಅಡಿ ದೂರಕ್ಕೆ ಎಸೆಯಲ್ಪಟ್ಟಳು.

ಅವನಿನ್ನೂ ಯುವಕ. ಲೈಸೆನ್ಸ್ ಪಡೆಯಲು ಅರ್ಹನೋ ಇಲ್ಲವೋ ಗೊತ್ತಿಲ್ಲ. ಅವನೂ ಬಿದ್ದರೂ ತಕ್ಷಣ ಎದ್ದವನೇ ಗಾಡಿ ಸ್ಟಾರ್ಟ್‌ ಮಾಡಿ ಓಟಕಿತ್ತ. ಹಿಂದಿನಿಂದ ಬಂದ ನಾನು ಬೈಕ್‌ನ್ನು ಅಲ್ಲೇ ನಿಲ್ಲಿಸಿ ಅವಳ ಸಹಾಯಕ್ಕೆ ನಿಂತೆ. ಸ್ವಲ್ಪ ಹೊತ್ತಲ್ಲಿ ಇನ್ನಷ್ಟು ಜನ ಸೇರಿ ಯುವತಿಯನ್ನು ಎತ್ತಿಕೊಂಡು ಫುಟ್‌ಪಾತ್‌ನಲ್ಲಿ ಕುಳ್ಳಿರಿಸಿ ನೀರು ಕೊಟ್ಟು ಉಪಚರಿಸಿದೆವು. ಗಾಯಗಳಿಂದ ರಕ್ತ ಸೋರಲಾರಂಭಿಸಿತು. ಅದನ್ನು ನೋಡುತ್ತಿದ್ದಂತೆ ಚೀರಾಡುತ್ತಾ ಯುವತಿ ಮೂರ್ಛೆ ಹೋದಳು. ಎಲ್ಲರೂ ನನ್ನನ್ನು ದುರುಗುಟ್ಟಿ ನೋಡುವವರೇ. ``ಏನಪ್ಪಾ ಬೈಕ್‌ನ್ನು ನಿಧಾನಕ್ಕೆ ಓಡಿಸಬಾರದಾಗಿತ್ತಾ. ಒಂದು ವೇಳೆ ಅವಳ ಪ್ರಾಣಕ್ಕೇನಾದರೂ ಅಪಾಯವಾಗಿದ್ದರೆ....?'' ಆಳಿಗೊಬ್ಬರ ಮಾತು. ನಿಜ ವಿಚಾರ ಹೇಳ ಹೊರಟರೂ ಅದನ್ನು ಕೇಳುವ ವ್ಯವಧಾನ ಅವರಿಗಿಲ್ಲ.

ಯಾರೋ ಸುದ್ದಿ ಮುಟ್ಟಿಸಿದಾಗ ಅವರ ಪೋಷಕರು ಹಾಜರ್‌. ಮಗಳ ಪರಿಸ್ಥಿತಿಯನ್ನು ನೋಡಿ ಆಕೆಯ ಅಮ್ಮ ಗೊಳೋ ಅಂತ ಅಳುತ್ತಿದ್ದರೆ, ಯುವತಿಯ ಅಪ್ಪ ನನ್ನ ಕಾಲರ್‌ ಪಟ್ಟಿಯನ್ನು ಹಿಡಿದೇಬಿಟ್ಟ. ಹಿಂದಿನಿಂದ ಒಂದು ಗೂಸಾನೂ ಬಿತ್ತು. ಅವರೆಲ್ಲರ ದೃಷ್ಟಿಯಲ್ಲಿ ನಾನು ತಪ್ಪಿತಸ್ಥನಾಗಿದ್ದೆ. ನನ್ನದು ಅರಣ್ಯ ರೋದನವಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಪೊಲೀಸ್‌ ಪೇದೆಯೊಬ್ಬ ಬಂದು ನನ್ನ ಹೇಳಿಕೆ ಪಡೆದುಕೊಡು ಸಹಿ ಮಾಡಿಸಿಕೊಂಡು ಹೊರಟೇಬಿಟ್ಟ. ಹುಡುಗಿಯ ಪೋಷಕರೊಡನೆ ನಾನೂ ಸೇರಿ ಯುವತಿಯನ್ನು ಆಟೋದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಸಾಗಿಸಿದೆ. ತಕ್ಷಣ ತಪಾಸಣೆಯೆಲ್ಲಾ ಮುಗಿಸಿ ಎಕ್ಸ್-ರೇಯನ್ನು ಪರೀಕ್ಷಿಸುತ್ತಾ ವೈದ್ಯರು, ``ಹೆಚ್ಚಿನ ಅಪಾಯವೇನೂ ಇಲ್ಲ. ಎಡಗಾಲಿನ ಮೀನಖಂಡದ ಹತ್ತಿರ ಮೂಳೆ ಮುರಿದಿದೆ. ತಕ್ಷಣ ಆಪರೇಷನ್‌ ಮಾಡಬೇಕಾಗಿದೆ. ಈಗಲೇ ಇಪ್ಪತ್ತು ಸಾವಿರ ಕಟ್ಟಿ....''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ