ಕಥೆ  -  ಎಸ್‌. ನೀರಜಾ 

``ತನು, ಏನು ಕಾಲೇಜ್‌ ಬಿಟ್ಟು ಕಾಫಿ ಕುಡಿಯುತ್ತಾ ಕುಳಿತಿದ್ದೀಯಾ? ಈವತ್ತು ಮತ್ತೆ ಕ್ಲಾಸ್‌ ಬಂಕ್‌ ಮಾಡಿದೆಯಾ? ಇಟ್‌ ಈಸ್‌ ನಾಟ್‌ ಫೇರ್‌ ಬೇಬಿ,'' ಮಾಲಿನ ರೆಸ್ಟೋರೆಂಟ್‌ನಲ್ಲಿ  ತನ್ನ ಗೆಳತಿಯರ ಜೊತೆ ಕಾಫಿ ಹೀರುತ್ತಿದ್ದ ಮಗಳನ್ನು ನೋಡಿ ಶಶಿ ಉದ್ಗರಿಸಿದಳು. ಅದಕ್ಕೆ ತನುಜಾ ಏನೂ ಉತ್ತರಿಸದಿದ್ದಾಗ ಶಶಿ ಕೊಂಚ ಸಿಟ್ಟಿನಿಂದ ಅವಳ ಗೆಳತಿಯರತ್ತ ನೋಡಿದಳು.

ಆಧುನಿಕ ಕೇಶಾಲಂಕಾರ, ಹೈ ಹೀಲ್ಡ್ ಚಪ್ಪಲಿ, ಲೇಟೆಸ್ಟ್ ಡ್ರೆಸ್‌ನಲ್ಲಿ ಅಲಂಕೃತಳಾಗಿದ್ದ ಶಶಿಯನ್ನು ತನುಜಾಳ ಗೆಳತಿಯರು ರೆಪ್ಪೆ ಮಿಟುಕಿಸದೆ ನೋಡಿದರು.

``ಬಿಡು, ಬಂದಿದ್ದೇ ಆಗಿದೆ. ಎಂಜಾಯ್‌ ಮಾಡು,'' ಎನ್ನುತ್ತಾ ಶಶಿ ಮಗಳ ಪರ್ಸ್‌ನಲ್ಲಿ ಕೆಲವು ನೋಟುಗಳನ್ನು ತುರುಕಿ ಎಲ್ಲರಿಗೂ ಬಾಯ್‌ ಹೇಳುತ್ತಾ ಹೊರಗೆ ಹೋದಳು.

ಶಶಿ ಅತ್ತ ಹೋಗುತ್ತಲೇ ತನುಜಾಳ ಗೆಳತಿಯರು, ``ಏ ತನು, ನಿನ್ನ ಮಮ್ಮಿ ಎಷ್ಟು ಹಾಟ್‌ ಅಂಡ್‌ ಸ್ವೀಟ್‌ ಆಗಿದ್ದಾರೆ. ಅವರ ಮುಂದೆ ನೀನು ಏನೂ ಇಲ್ಲ ಬಿಡು,'' ಎಂದು ಟೀಕೆ ಮಾಡಿದರು. ಅದನ್ನು ಕೇಳಿ ಅವಳ ಮುಖ ಬಿರುಸಾಯಿತು.

ಶಶಿ ನಿಜಕ್ಕೂ ಅತ್ಯಂತ ಸುಂದರಿಯಾಗಿದ್ದಳು. ಅವಳ ರೂಪ, ಮೈಮಾಟವನ್ನು ಕಂಡ ಯಾರಿಗೇ ಆದರೂ ಮತ್ತೊಮ್ಮೆ ಅವಳನ್ನು ಹಿಂದಿರುಗಿ ನೋಡದೇ ಇರಲಾಗುತ್ತಿರಲಿಲ್ಲ. 16 ವರ್ಷ ವಯಸ್ಸಿನ ತನುಜಾ ತಾಯಿಯೊಡನೆ ಹೋಗುತ್ತಿದ್ದರೆ, ಅವರು ತಾಯಿ ಮಗಳಂತಲ್ಲ, ಅಕ್ಕ ತಂಗಿಯರಂತೆ ತೋರುತ್ತಿದ್ದರು.

ಶಶಿಯ ಅನುಪಮ ಸೌಂದರ್ಯಕ್ಕೆ ಜನರ ದೃಷ್ಟಿ ತಾಕಿತೇನೋ ಎಂಬಂತೆ, 5 ವರ್ಷಗಳ ಹಿಂದೆ ಅವಳ ಪತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಆ ಸಮಯದಲ್ಲಿ  ರೂಪವೇ ಅವಳ ಪಾಲಿಗೆ ಮುಳ್ಳಾದಂತೆ ಭಾಸವಾಯಿತು. ಕಾಮುಕರ ಕ್ರೂರ ದೃಷಿಯನ್ನು ಎದುರಿಸಲಾರದೆ ಅವಳು ಮನೆಯೊಳಗೇ ಅವಿತು ಕುಳಿತುಕೊಳ್ಳುವಂತಾಯಿತು.

ಪತಿಯ ಆಫೀಸಿನಲ್ಲಿ ಅನುಕಂಪದ ಆಧಾರದ ಮೇಲೆ ಶಶಿಗೆ ಒಂದು ಉದ್ಯೋಗ ದೊರಕಿದಾಗ ಅವಳು ಅನಿವಾರ್ಯವಾಗಿ ಹೊರಗೆ ಬರಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ ಅವಳಿಗೆ  ಧೈರ್ಯ ತುಂಬಿ ಆಸರೆಯಾಗಿ ನಿಂತವರು ಚಂದ್ರಕಾಂತ್‌!

ಚಂದ್ರಕಾಂತ್‌ ಅದೇ ಆಫೀಸ್‌ನಲ್ಲಿ ಶಶಿಯ ಪತಿಯೊಡನೆ ಕೆಲಸ ಮಾಡುತ್ತಿದ್ದರು. ಅವರಿನ್ನೂ ಅವಿವಾಹಿತರಾಗಿಯೇ ಇದ್ದರು, ಅದೇಕೆಂದು ಇತರರಿಗೆ ತಿಳಿದಿರಲಿಲ್ಲವಾದರೂ ಮುಂದೊಮ್ಮೆ ಅವರೇ ಶಶಿಯೊಡನೆ ಅದರ ಕಾರಣವನ್ನು ವಿವರಿಸಿದ್ದರು. ತಂದೆಯನ್ನು ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲೇ ಕಳೆದುಕೊಂಡ ಚಂದ್ರಕಾಂತ್‌ ಮನೆಯ ಹಿರಿಯ ಮಗನಾಗಿದ್ದರಿಂದ ತಮ್ಮ ತಂಗಿಯರ ಜವಾಬ್ದಾರಿ ನಿಭಾಯಿಸುತ್ತಲೇ ಯೌವನಾವಸ್ಥೆ ಕಳೆದುಹೋಯಿತು.

ತಮ್ಮ ಮದುವೆಯ ವಯಸ್ಸು ಕಳೆದುಹೋದುದು ಅವರ ಅರಿವಿಗೆ ಬರಲಿಲ್ಲ. ಅಲ್ಲದೆ, ಶಶಿಯನ್ನು ಕಂಡಾಗ ಅವರ ಹೃದಯ ತಾಳ ತಪ್ಪಿದಂತೆ ಹಿಂದೆಂದೂ ಅಂತಹ ಅನುಭವವಾಗಿರಲಿಲ್ಲ.

ಚಂದ್ರಕಾಂತ್‌ ತಮ್ಮ ಮನದಿಂಗಿತವನ್ನು ಶಶಿಯ ಮುಂದಿಟ್ಟಾಗ ಅವಳಿಗೆ ಕಕ್ಕಾಬಿಕ್ಕಿಯಾಯಿತು. ತನಗೆ ಎರಡನೆಯ ಮದುವೆಯೇ ಎಂದು ಗಾಬರಿಯಾದಳು. ನಂತರ, ತನ್ನ ಬಾಳನೌಕೆಯ ಹುಟ್ಟನ್ನು ವಿಶ್ವಾಸಪಾತ್ರರೊಬ್ಬರ ಕೈಲಿರಿಸಿ ತಾನು ನಿಶ್ಚಿಂತೆಯಿಂದ ಪಯಣಿಸಬಹುದಲ್ಲವೇ ಎನಿಸಿತು.

ಆದರೆ ಯಾವುದನ್ನು ತೀರ್ಮಾನಿಸುವ ಮೊದಲು ಮಗಳ ಅಭಿಪ್ರಾಯನ್ನು ತಿಳಿಯುವುದು ಅಗತ್ಯವಾಗಿತ್ತು. ತನುಜಾ ಇನ್ನೂ ತನ್ನ ತಂದೆಯ ಅಕಾಲಿಕ ಮರಣದ ಹೊಡೆತದಿಂದ ಚೇತರಿಸಿಕೊಂಡಿರಲಿಲ್ಲ. ಶಶಿಯಾದರೂ ಅದನ್ನು ಹೇಗೆ ಮರೆಯಲು ಸಾಧ್ಯ? ಆದರೆ ಕಾಲ ಮತ್ತು ಪರಿಸ್ಥಿತಿಗಳು ಹಳೆಯ ಘಟನೆಗಳನ್ನು ಮಸುಕುಗೊಳಿಸುತ್ತಾ ಸಾಗುತ್ತವೆ. ತನುಜಾ ಸಹ ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ