ಚೈಲ್ಡ್ ಪೋರ್ನೋಗ್ರಫಿ ಹಾಗೂ ಕುಟಿಲ ಸಮಾಜ
ಸುಪ್ರೀಂಕೋರ್ಟ್ ಈ ಬಾರಿ ಒಂದು ಮಹತ್ವಪೂರ್ಣ ತೀರ್ಪು ನೀಡುತ್ತಾ, ಮನ್ ಮೋಹನ್ ಸಿಂಗ್ ರ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ `ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಂ ಸೆಕ್ಶುಯಲ್ ಅಫೆನ್ಸ್ ಆ್ಯಕ್ಟ್ 2012′ ನ ಅಂತರ್ಗತ ತನ್ನ ವ್ಯಾಖ್ಯೆ ನೀಡಿದೆ, ಕಾನೂನಿನ ಪ್ರಕಾರ ಚೈಲ್ಡ್ ಪೋರ್ನೋಗ್ರಫಿ ತಯಾರಿಸುವುದು, ಅದನ್ನು ಫೋನ್/ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಇಟ್ಟುಕೊಳ್ಳುವುದು, ನೋಡುವುದು ಅಪರಾಧ ಎಂದೇ ಸಾರಿದೆ.
ಈ ಆ್ಯಕ್ಟ್ ನ ಕಲಂಗಳನ್ನು ಬಲು ಸಡಿಲ ಎಂದು ಭಾವಿಸಿ, ಚೈಲ್ಡ್ ಪೋರ್ನೋಗ್ರಫಿಯನ್ನು ಬಿಲ್ ಕುಲ್ ನಿಷೇಧಿಸುವ ಪ್ರಯತ್ನದಲ್ಲಿ ಸುಪ್ರಿಂ ಕೋರ್ಟಿನ ಈ 200 ಪುಟಗಳ ವ್ಯಾಖ್ಯಾನ, ಒಂದು ವಿಧದಲ್ಲಿ ಕಾನೂನು ಕ್ರಮವನ್ನು ಅತಿ ಶಿಸ್ತಿನಿಂದ ಚಾಲನೆಗೆ ತರುವ ಪ್ರಯತ್ನವಾಗಿದೆ.
ಚೈಲ್ಡ್ ಪೋರ್ನ್ ವಿಶ್ವವಿಡಿಯ ಸಮಾಜದಲ್ಲಿ, ಸರ್ಕಾರ ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ತೊಡಗಿರುವ ಸಿಬ್ಬಂದಿಗೆ ಒಂದು ದೊಡ್ಡ ಸವಾಲಾಗಿದೆ. ಕೋಟ್ಯಂತರ ಮಂದಿ ಸೆಕ್ಸ್ ನಲ್ಲಿ ವಿಶೇಷವಾಗಿ ಮಕ್ಕಳೊಂದಿಗೆ ಎಂಜಾಯ್ ಅಥವಾ ಹಾಗೆ ನಡೆಯುವ ವಿಡಿಯೋ ನೋಡುವುದೊಂದು ಗೀಳಾಗಿದೆ, ಇದು ಬಲು ಅಸಹ್ಯಕರ ಎನಿಸಿದರೂ ಅಷ್ಟೇ ದುಬಾರಿ ಆಗಿದೆ. ಲಕ್ಷಾಂತರ ಮಕ್ಕಳನ್ನು ಇದರಡಿ ಬಲವಂತವಾಗಿ ಎಳೆತರಲಾಗಿದೆ, ವಿಶ್ವದೆಲ್ಲೆಡೆ ಹೆಣ್ಣು/ಗಂಡು ಮಕ್ಕಳ ಚೈಲ್ಡ್ ಪ್ರಾಸಿಟ್ಯೂಟ್ ಬಲು ದುಬಾರಿ ಬೆಲೆಯಲ್ಲಿ ಲಭ್ಯ ಎಂಬುದು ಸುಳ್ಳಲ್ಲ.
ಈ ನಿಟ್ಟಿನನಲ್ಲಿ ಕ್ಯಾಥೊಲಿಕ್ ಚರ್ಚ್ ಗಳು ಪ್ರತಿ ವರ್ಷ ಕೋಟ್ಯಂತರ ಡಾಲರ್ ಹಣವನ್ನು ಇಂಥ ದಂಧೆಗೆ ಒಳಗಾದ ಮಕ್ಕಳ ಪೋಷಕರಿಗೆ ಸಂಭಾವನೆ ರೂಪದಲ್ಲಿ ಒದಗಿಸುತ್ತವೆ, ಮುಖ್ಯವಾಗಿ ವಿದೇಶೀ ಕಾನ್ವೆಂಟ್ ಗಳಲ್ಲಿ ದೇವರ ಹೆಸರ ಸಮವಸ್ತ್ರ ಧರಿಸಿದ ಪಾದ್ರಿಗಳ ಸೆಕ್ಶುಯಲ್ ಅಬ್ಯೂಸ್ ಗೆ ಒಳಗಾದ ಮಕ್ಕಳಿಗೆ ಇದು ಮೀಸಲು.
ಇದಕ್ಕಾಗಿಯೇ ಒಂದು ದೊಡ್ಡ ಮಾರುಕಟ್ಟೆ ಚೈಲ್ಡ್ ಟ್ರಾಫಿಕಿಂಗ್ ಗೆಂದೇ ಇದೆ. ವಿಶ್ವದ ನಾನಾ ಮೂಲೆಗಳಿಂದ ಮುಗ್ಧ ಮಕ್ಕಳನ್ನು ಅಪಹರಿಸಿ, ಈ ಕಾಮುಕ ದಂಧೆಗೆ ಬಲಿಪಶು ಆಗಿಸುತ್ತಾರೆ. ಮಕ್ಕಳಿಗೆ ನಾನಾ ಚಿತ್ರಹಿಂಸೆ ನೀಡಿ ಅವರಿಂದ ಇಂಥದ್ದನ್ನು ಮಾಡಿಸಲಾಗುತ್ತದೆ. ಎಲ್ಲಿಂದ ಈ ಮಕ್ಕಳನ್ನು ಅಪಹರಿಸಿ ಎಲ್ಲಿಗೆ ರವಾನಿಸಲಾಗುತ್ತಿದೆ ಎಂಬುದು ಆ ಮುಗ್ಧ ಜೀವಗಳಿಗೆ ಕಿಂಚಿತ್ತೂ ಗೊತ್ತಾಗದು.
ಇದರ ಬೇಡಿಕೆ ಪೂರೈಸಲಾಗದಷ್ಟು ಹೆಚ್ಚಿದೆ. ಇದರ ನಿರ್ವಹಣೆಯಲ್ಲಿ ಏನೇ ಅಪಾಯ ಇರಲಿ, ದೊಡ್ಡ ಮೊತ್ತದ ಲಾಭ ಗ್ಯಾರಂಟಿ! ಮದ್ರಾಸ್ ಹೈಕೋರ್ಟ್ ಕೆಲವು ವರ್ಷಗಳ ಹಿಂದೆ ಈ ಕುರಿತು ಹೇಳಿದ್ದೆಂದರೆ, ಮಕ್ಕಳನ್ನು ಬಳಸಿ ಇಂಥ ಲೈಂಗಿಕ ಚಿತ್ರ ತಯಾರಿ ಯಾ ಮಾರಾಟ ಅಪರಾಧ ಎಂದು ಸಾರಿತ್ತು. ಖಾಸಗಿ ವೀಕ್ಷಣೆ ಯಾ ಮೊಬೈಲ್ ನಲ್ಲಿ ಸೇವ್ ಮಾಡಿ ಇರಿಸಿಕೊಳ್ಳುವುದು ಅಪರಾಧದ ಅಡಿ ಬರಲಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಟ್ ತನ್ನ ಹೊಸ ತೀರ್ಪಿನಲ್ಲಿ ಚೈಲ್ಡ್ ಪೋರ್ನೋಗ್ರಫಿಯನ್ನು ಡಾರ್ಕ್ ವೆಬ್ ನಿಂದ ಡೌನ್ ಲೋಡ್ ಮಾಡಿಕೊಂಡು ಫೋನ್ ನಲ್ಲಿ ಸಂಗ್ರಹಿಸಿಡುವುದನ್ನೂ ಅಪರಾಧ ಎಂದಿದೆ!
ಜನ ಇದನ್ನು ಇಷ್ಟಪಟ್ಟು ದುಬಾರಿ ಬೆಲೆ ತೆತ್ತು ಕೊಂಡಾಗ ತಾನೇ ಇಂಥ ಚೈಲ್ಡ್ ಪೋರ್ನೋಗ್ರಫಿ ನಡೆಯುವುದು? ಮೊಬೈಲ್ ಸೇವ್ ಮಾಡಿಕೊಳ್ಳುವುದು ಚೈಲ್ಡ್ ಪ್ರಾಸ್ಟಿಟ್ಯೂಷನ್ ಎಲ್ಲವೂ ಕಾಲಕ್ಕೂ ಕಾನೂನುಬಾಹಿರವೇ ಸರಿ. ಆ ಕುರಿತು ಯಾವ ವಿವಾದ ಇಲ್ಲ. ಯಾವುದೇ ದೇಶದಲ್ಲಿ ಇಂಥ ಚಿತ್ರದ ಶೂಟಿಂಗ್ ನಡೆಸಿ ಅಲ್ಲೇ ತಯಾರಾಗಿದ್ದರೆ, ಡಾರ್ಕ್ ವೆಬ್ ಮೂಲಕ ಅಳವಡಿಸಿ ಇದನ್ನು ಮಾರಾಟ ಮಾಡಿದ್ದಲ್ಲಿ, ಭಾರತೀಯರು ಇದನ್ನು ಖರೀದಿಸಿ ಯಾ ತಮ್ಮ ಮೊಬೈಲ್ ನಲ್ಲಿ ಇರಿಸಿಕೊಂಡಿದ್ದರೆ ಅದು ಹೇಗೆ ಅಪರಾಧ ಎಂಬ ಸಣ್ಣ ಡೌಟ್ ವಿವಾದಕ್ಕೆ ಎಡೆ ಮಾಡಿತ್ತು. ಹೀಗಾಗಿಯೇ ಸುಪ್ರೀಂ ಕೋರ್ಟ್ ಇದನ್ನು ಕ್ಲಿಯರ್ ಮಾಡಿ, ಮನ್ಮೋಹನ್ ಸಿಂಗ್ ರ ಕಾನೂನಿನಲ್ಲಿ ಇದು ಅಪರಾಧ ಎಂದೇ ಸಾರಲಾಗಿದೆ.
ಈ ತೀರ್ಪು ಚೈಲ್ಡ್ ಅಬ್ಯೂಸ್ ನ್ನು ಕೊನೆಗಾಣಿಸಲಿದೆ ಎಂದು ಖಂಡಿತಾ ಹೇಳಲಾಗದು. ಕಾಮದಾಹ ಎಷ್ಟು ಕ್ರೂರವಾದುದು ಎಂದರೆ ಜನ ಕಾನೂನು, ಶಿಕ್ಷೆ ಯಾವುದನ್ನೂ ಗಮನಿಸದೆ ಮುಗ್ಧ ಮಕ್ಕಳೊಂದಿಗೆ ಪಾಶವೀ ವ್ಯವಹಾರ ನಡೆಸುತ್ತಾರೆ, FBತಯಾರು ಮಾಡಿ, ಸುಲಭ ಸಂಪಾದನೆಗೆ ದಾರಿ ಕಂಡುಕೊಳ್ಳುತ್ತಾರೆ. ಒಬ್ಬ ವಯಸ್ಕನೆದುರು ಚಿಕ್ಕ ಮಗು ಅಸಹಾಯಕವಾಗುತ್ತದೆ, ತನ್ನೊಂದಿಗೆ ಏನು ನಡೆಯುತ್ತಿದೆ ಎಂಬುದೂ ಅರಿಯದ ಮುಗ್ಧತೆ ಅದರದು! ಇಂಥದ್ದನ್ನು ವಿರೋಧಿಸಲು ಯತ್ನಿಸುವ ಮಕ್ಕಳ ಬಾಯಿ ಬಡಿದು, ಅವರ ಮನೆಯ ಹಿರಿಯರನ್ನೂ ಕೊಂದುಬಿಡುವುದಾಗಿ ಈ ಪಾಪಿಗಳು ಹೆದರಿಸುತ್ತಾರೆ.
ಸಾಮಾನ್ಯವಾಗಿ ತಾಯಂದಿರಿಗೆ ತಮ್ಮ ಮಕ್ಕಳ ಜೊತೆ ನಡೆಯುವ ಯಾವುದೇ ಸಣ್ಣಪುಟ್ಟ ಅವ್ಯವಹಾರದ ಬಗ್ಗೆ ತಿಳಿದಾಗಲೂ, ಸಮಾಜಕ್ಕೆ ಹೆದರಿ ಅವರು ಬಾಯಿ ಹೊಲಿದುಕೊಂಡು ಸುಮ್ಮನಾಗುತ್ತಾರೆ. ಏಕೆಂದರೆ ಈ ಸಮಾಜ ಅಂಥ ತಾಯಿಮಕ್ಕಳನ್ನು ಸಹ ದೋಷಿ ಎಂದೇ ಪರಿಗಣಿಸುತ್ತದೆ. ಇಂಥ ಬಲಿಪಶು ಮುಗ್ಧ ಮಗು ಅಂತೂ ಎಲ್ಲರ ಕೀಟಲೆಗೆ ಪಾತ್ರವಾಗುತ್ತದೆ. ನಮ್ಮ ಸಮಾಜ ಇಂಥ ಪ್ರಸಂಗಗಳಲ್ಲಿ ಬಲು ಕ್ರೂರಿಯೇ ಸರಿ. ಮಕ್ಕಳನ್ನು ಈ ಕುರಿತು ಟೀಕಿಸಲಿಕ್ಕೂ ಹಿಂಜರಿಯದು. ಎಷ್ಟೋ ಸಲ ಮಗುವನ್ನೇ ದೋಷಿ ಎಂದು ಗೂಬೆ ಕೂರಿಸುತ್ತದೆ, ಯಾವುದೋ ದುರಾಸೆಗೆ ಒಳಗಾಗಿ ಹೀಗೆ ಮಾಡಿದೆ ಎನ್ನುತ್ತದೆ.
ಕಾನೂನಿನ ವ್ಯಾಖ್ಯಾನ ಈ ಸಮಾಜಕ್ಕೆ ಏನೇನೂ ಅಲ್ಲ. ಪೀಡಿತ ಮಗುವಿನ ತಾಯಿ ತಂದೆ ಅಪಮಾನದಿಂದ ಕುಗ್ಗಿ ಹೋದರೆ, ಸಂತ್ರಸ್ತ ಮಗು ಒಡಹುಟ್ಟಿದರ ನಗೆಪಾಟಲಿಗೆ ಗುರಿಯಾಗುತ್ತದೆ. ಸುಪ್ರೀಂ ಕೋರ್ಟ್ ಈ ಕುರಿತು ಏನೇ ಕಾನೂನಿನ ವ್ಯಾಖ್ಯಾನ ನೀಡಲಿ, ಇಂಥ ಪ್ರಕರಣಗಳನ್ನು ಠಾಣೆಗಳಲ್ಲಿ ಸದಾ ಅವಾಚ್ಯ ಶಬ್ದಗಳಲ್ಲಿ ಮಾತನಾಡುವ ಪೊಲೀಸರೇ ಕೋರ್ಟಿಗೆ ದಾಖಲಿಸುತ್ತಾರೆ ಎಂಬುದು ನಿಜ. ಸಂತ್ರಸ್ತರು ಹಿರಿಯರೋ, ಮಕ್ಕಳೋ ಅವರಿಗೆ ಬೇಕಿಲ್ಲ, ಎಲ್ಲರನ್ನೂ ಒಂದೇ ತರಹ ಅವಾಚ್ಯವಾಗಿ ನಿಂದಿಸುತ್ತಾರೆ.
ಕೋರ್ಟಿನಲ್ಲಂತೂ ಸಾಕ್ಷಿಗಳಿಂದ ಮಾತು ಹೊರಡಿಸುವುದು ಬಿಟ್ಟರೆ ನ್ಯಾಯ ತೀರ್ಮಾನಕ್ಕೆ ಬೇರೆ ದಾರಿಯೇ ಇಲ್ಲ. ಹೀಗಿರುವಾಗ ಸಂತ್ರಸ್ತ ಮಗು ಎಲ್ಲರ ಎದುರು ಮತ್ತೆ ಮತ್ತೆ ತನ್ನ ದೇಹದೊಂದಿಗೆ ಯಾರು ಯಾವಾಗ ಏನೇನು ಅವ್ಯವಹಾರ ನಡೆಸಿದರೆಂದು ಹೇಗೆ ತಾನೇ ಹೇಳಿಕೊಂಡೀತು? ತಾನು ಮರೆಯಬೇಕೆಂದಿರುವ ಆ ಅನಿಷ್ಟವನ್ನು ಮತ್ತೆ ಮತ್ತೆ ನುಡಿಸುವ ಈ ಕೋರ್ಟಿನ ಪರಿ ಅದಕ್ಕೆ ಪರಮ ಹಿಂಸೆ ಅಲ್ಲದೆ ಮತ್ತೇನು?
ಭಾರತದ ಮಾರುಕಟ್ಟೆಯಲ್ಲಿ ಈ ತೀರ್ಪಿನ ನಂತರ ಇಂಥ ಚೈಲ್ಡ್ ಪೋರ್ನೋಗ್ರಫಿ ತುಸು ಕಡಿಮೆ ಆದಿತೇನೋ…. ಹಾಗೆಂದು ವಿಶ್ವವಿಡೀ ನಿಂತೇಹೋಗದು. ಭಾರತದಲ್ಲಿ ಇಂಥದ್ದನ್ನು ಶೂಟ್ ಮಾಡಿದರು, ಇಲ್ಲಿ ಅಲ್ಲದಿದ್ದರೆ ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡದೇ ಇರುತ್ತಾರೆಯೇ? ಯಾರಿಂದ ಇದನ್ನು ನಿಯಂತ್ರಿಸಲು ಸಾಧ್ಯ?
ನಾವೇಕೆ ಹಂಚಿ ಹೋಗಿದ್ದೇವೆ?
ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಹಿಂದೂ ಧರ್ಮವನ್ನು ಮೆರೆಸುತ್ತಾ ಮತ್ತೆ ಪುನರಾವರ್ತಿಸಿದ್ದು ಎಂದರೆ, ಹಿಂದೆ ನಾವು ಹಂಚಿಹೋಗಿದ್ದೆ, ಹೀಗಾಗಿ ಮತ್ತೆ ಮೆತ್ತ ವಿದೇಶೀಯರು ನಮ್ಮನ್ನು ಸೋಲಿಸಿ ದುರಾಡಳಿತ ನಡೆಸಿದರು. ಹಿಂದೂ ಧರ್ಮದ ಕಂದಾಚಾರಿಗಳ ಈ ಮಾತು, ಸವೆದು ಹೋದ ರೆಕಾರ್ಡ್ ಆಗಿದೆ, ಹಿಂದೂ ಧರ್ಮದಲ್ಲಿ ಎಲ್ಲವೂ ಸರಿ ಎಂಬುದು ಇವರ ಡಂಗೂರ. ಆದರೆ ಇದನ್ನು ನಂಬುವವರೇ ಹಂಚಿ ಹೋಗಿರುವುದರಿಂದ, ನಾವು ಮತ್ತೆ ಮತ್ತೆ ಸೋಲುತ್ತಲೇ ಇರುತ್ತೇವೆ. ಈ ಕಾರಣದಿಂದಲೇ ರಾಮಜನ್ಮ ಭೂಮಿ 500 ವರ್ಷಗಳಿಂದ ವಿಧರ್ಮೀಯರ ಕೈವಶದಲ್ಲಿತ್ತು.
ಆದರೆ ಹಿಂದೂ ಧರ್ಮದ ಈ ಭಕ್ತರು ನಾವೇಕೆ ಹೀಗೆ ಹಂಚಿ ಹೋಗಿದ್ದೇವೆ ಎಂದು ವಿವರಿಸಲಾರದವರಾಗಿದ್ದಾರೆ. ಇಂಥ ಹಂಚುವಿಕೆ ಆಗುವುದು ಸಮಾಜದಿಂದ, ರಾಜನಿಂದ, ಸ್ವಯಂ ಜನರಿಂದಲೂ ಅಂದ್ರೂ ತಪ್ಪಿಲ್ಲ. ಮುಖ್ಯವಾಗಿ ಇಲ್ಲಿ ಧರ್ಮದ ಪಾತ್ರ ಪ್ರಧಾನ! ಸ್ಮೃತಿ, ರಾಮಾಯಣ, ಮಹಾಭಾರತದ ಪೌರಾಣಿಕ ಕಥೆಗಳಲ್ಲಿ ತುಂಬಿರುವುದೆಲ್ಲ ಹರಿದು ಹಂಚುವಿಕೆಯಷ್ಟೆ. ಅಲ್ಲಿನ ಹಂಚುವಿಕೆ ಮಾಡಿದ ಮಹಾಮಹಿಮರು ಏನನ್ನು ಸಾಧಿಸಿದರೋ? ಒಂದು ವಿಧದಲ್ಲಿ ಜನ, ರಾಜ ಇದಕ್ಕೆ ಹೊಣೆಯಲ್ಲ….. ಈ ಗೊಡ್ಡು ಪುರಾಣಗಳೇ ಕಾರಣ.
ಸುರಾಸುರರು ಎಂದು ಸಮಾಜವನ್ನು ಹಂಚಿದ್ದೇಕೆ? ನಮ್ಮೆಲ್ಲ ದೇವದೇವಿಯರ ಕೈಗಳಲ್ಲಿ ಆಯುಧಗಳೇಕೆ? ಧನುರ್ಧಾರಿಯ ಸರ್ವೋತ್ತಮ ಬಾಣಗಳು ಕೊಂದಿದ್ದು, ತನ್ನವರನ್ನೇ ಅಲ್ಲವೇ? ಮಹಾರಥಿಗಳ ರಥ ತಮ್ಮವರನ್ನೇ ಕೊಂದ, ಸೇನೆಗಳು ತಮ್ಮವರದೇ ರಕ್ತದ ಕೋಡಿ ಹರಿಸಿದ….. ಇಂಥವನ್ನೇ ಧರ್ಮ ಗ್ರಂಥಗಳು ವೈಭವೀಕರಿಸಿದ. ಇಂದಿಗೂ ಇಂಥವನ್ನು ಕೇಳುವುದು, ಓದುವುದು ಧರ್ಮಕಾರ್ಯ ಎನಿಸಿದೆ. ಹಾಗಿರುವಾಗ ಹಂಚಿಹೋದ ಮೇಲೆ ದುಃಖ ಏಕೆ? ರಾಮಾಯಣ ಮಹಾಭಾರತ ಆಧರಿಸಿ ನಡೆಯುವ ಇಂದಿನ ನಮ್ಮ ರಾಜನೀತಿ, ಮನೆಗಳನ್ನು ಹರಿದು ಹಂಚುತ್ತದೆಯಷ್ಟೆ. ಎರಡೂ ಕಥೆಗಳಲ್ಲಿ ಹರಿದು ಹಂಚಿಹೋಗುವುದೇ ತುಂಬಿದೆ. ಅಧಿಕಾರಕ್ಕಾಗಿ ಎರಡೂ ಕಥೆಗಳಲ್ಲಿ ಇನ್ನೊಬ್ಬರನ್ನು ಮನೆಯಿಂದ ಓಡಿಸುವುದು, ನಿಲ್ಲಲು ನೆಲೆ ಇಲ್ಲದಂತೆ ಮಾಡುವುದೇ ಆಗಿದೆ. ಪ್ರಮಾಣವಚನ ನೀಡಿ ಹೊರಗುಳಿದು, ಕೊಟ್ಟ ಮಾತು ಉಳಿಸಿಕೊಳ್ಳುವುದಾಗಿದೆ. ಇಷ್ಟೆಲ್ಲ ಅನಾದಿ ಕಾಲದಿಂದ ನಡೆಯುತ್ತಿರುವಾಗ ಈ ಭಾಗಾಕಾರಕ್ಕಾಗಿ ಈಗ ಏಕೆ ದುಃಖ? ಇಂದು ವೋಟ್ ಬ್ಯಾಂಕ್ ಹಂಚಿಹೋಗುತ್ತಿದೆ ಎಂಬ ದುಃಖವೇ?
ಅವಿಭಕ್ತ ಕುಟುಂಬಗಳು ವಿಭಜಿತಗೊಂಡು ಈ ಮಂಗಳ ಕಾರ್ಯಕ್ಕೆ ನಾಂದಿ ಹಾಡುತ್ತವೆ. ಇಂಥ ಕುಟುಂಬಗಳಲ್ಲಿ ಎಲ್ಲರೂ ಭಾಗೀದಾರರೇ ಆಗಿರುತ್ತಾರೆ. ಅಷ್ಟು ದೊಡ್ಡ ಮನೆಗೆ ಒಂದೇ ಅಡುಗೆಮನೆ ಇದ್ದು, ಹಲವು ದಂಪತಿಗಳು ತಂತಮ್ಮ ಪರಿವಾರದೊಂದಿಗೆ ಒಂದೇ ಕಡೆ ನೆಲೆಸಿರುವುದರಿಂದ, ಸದಾ ಇದು ನನ್ನದು, ಇದು ನಿನ್ನದು ಎಂಬ ಲಟಾಪಟಿ ನಡೆಯುತ್ತಿರುತ್ತದೆ. ಇಂತಹ ಕಲಹ ಹೊರಗೂ ಹರಡಿ ಎಷ್ಟೋ ವ್ಯಾಪಾರ ವಹಿವಾಟು ಹೇಳಹೆಸರಿಲ್ಲದೆ ನಾಶವಾಗುತ್ತವೆ.
ಈ ಸಮಾಜ ಹೀಗೆ ಹಂಚಿಹೋಗುತ್ತಾ ಪುನರ್ಜನ್ಮದ ಪ್ರಸ್ತಾಪ ಬಂದಿದೆ. ಹಿಂದಿನ ಜನ್ಮದ ಪಾಪಗಳ ಕಾರಣ ಮುಂದಿನ ಜನ್ಮದಲ್ಲಿ ಅದರ ಫಲ ಉಣ್ಣಬೇಕಾದ ಕರ್ಮ ಕಾಡುತ್ತದಂತೆ. ಇದು ಅನಾದಿ ಕಾಲದಿಂದಲೂ ಕೇಳಿಬರುತ್ತಲೇ ಇದೆ. ಈ ಕಾರಣದಿಂದಲೇ ಮೇಲುಕೀಳು ಎಂಬ ತಾರತಮ್ಯ ಹುಟ್ಟಿಕೊಂಡಿತು. ಅಸ್ಪೃಶ್ಯತೆ, ಬಡವಬಲ್ಲಿದ, ಜಾತಿವಾದಗಳು ಹರಡಿ, ಅದು ಆಹಾರದವರೆಗೂ ಹಂಚಿಹೋಗಿದೆ. ಇದು ಸಾಮಾಜಿಕ ವ್ಯವಸ್ಥೆ ಅಲ್ಲ, ಧಾರ್ಮಿಕ ಕುರೀತಿಯದಾಗಿದೆ. ಪ್ರತಿ ಜಾತಿಯೂ ಬೇರೆ, ಅದರ ದೇವರು ಬೇರೆ, ಅವರ ಭಾಗ್ಯವೇ ಬೇರೆ, ಎಂದೆಲ್ಲ ಧರ್ಮ ಕಲಿಸುತ್ತದೆ. ಹಿಂದೂ ಸಮಾಜ ಹಿಂದೂ ಧರ್ಮದ ದಾರಿಯಲ್ಲಿ ಅನಿವಾರ್ಯವಾಗಿ ನಡೆಯಬೇಕಿದೆ.
ಧರ್ಮ ಎಂಬುದು ಸದಾ ಕಾಲ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ ಎಂದು ಹೇಳಲಾಗದು. ಆದರೆ ಅದನ್ನು ನಂಬು ಸಮಾಜ ಭಲೇ ಗಬ್ಬೆದ್ದು ಹೋಗಿದೆ, ನಿಷ್ಪ್ರಯೋಜಕವಾಗಿದೆ. ಧರ್ಮ ಎಂಬುದು ಅಪ್ರಯೋಜಕ, ಇದು ಸಮಾಜಕ್ಕೆ ಯಾವುದೇ ಒಳಿತು ಮಾಡದು. ಇದು ಕಂದಾಚಾರಿಗಳು ಗಂಟು ಕಟ್ಟಿಕೊಳ್ಳಲು ಒಂದು ಮಾರ್ಗವಷ್ಟೆ, ಅಮಾಯಕ ಹೆಂಗಸರನ್ನು ಗುಲಾಮರನ್ನಾಗಿಸುವ ಒಂದು ಷಡ್ಯಂತ್ರ ಮಾತ್ರ!
ಈ ನಿಟ್ಟಿನಲ್ಲಿ ಆ ಧರ್ಮ ಈ ಧರ್ಮಕ್ಕಿಂತ ಬೆಟರ್ ಎಂಬ ಮಾತೂ ಇಲ್ಲವೇ ಇಲ್ಲ. ಪ್ರತಿ ಧರ್ಮ ಮಾಡಿರುವ ಕುತಂತ್ರ ಇದೇ! ಈ ಸಮಾಜವನ್ನು ತುಂಡು ತುಂಡು ಮಾಡಲು ಇರಾನ್ ಇರಾಕ್ ಯುದ್ಧಕ್ಕೆ ಶಿಯಾ ಸುನ್ನಿ ಕಾರಣರಾಗಿರುವಂತೆ, ಕ್ಯಾಥೋಲಿಕ್ ಪ್ರೊಟೆಸ್ಟೆಂಟ್ ಗಳ ವಿವಾದ ಮುಗಿಯುವಂಥದ್ದಲ್ಲ. ಇದೇ ತರಹ ಹೀನಯಾನ ಮಹಾಯಾನ ಅಥವಾ ಶ್ವೇತಾಂಬರ ದಿಗಂಬರರೂ ಸಹ. ಇಡೀ ವಿಶ್ವ ಇಂದು ಒಂದಾಗಿರುವುದು ಅಂದ್ರೆ ಕೇವಲ ವಿಜ್ಞಾನದಿಂದ ಮಾತ್ರ ! ಅದು ಪುಸ್ತಕ, ಮುದ್ರಣ, ರೇಡಿಯೋ, ಟಿವಿ, ರೈಲು, ವಿಮಾನ ಇಂದಿನ ಪ್ರಸ್ತುತ ಇಂಟರ್ ನೆಟ್ ಮೂಲಕ ಇಡೀ ಜಗತ್ತನ್ನೇ ಒಂದುಗೂಡಿಸುತ್ತದೆ. ವಿಜ್ಞಾನವನ್ನೇ ಎಲ್ಲರೂ ಆರಾಧಿಸೋಣ.
ಹೆಂಗಸರ ಕಮಾಲ್ ಅಂತಿಂಥದ್ದಲ್ಲ!
ಯಾವ ಕೆಲಸವನ್ನು ಸರ್ಕಾರ ತಕ್ಷಣ ಯಾವ ಕಾನೂನಿನ ಮೂಲಕ ಮಾಡಲಾಗಲಿಲ್ಲವೇ, ಅದನ್ನು ಸಾಮಾನ್ಯ ಹೆಂಗಸರು ಮಾಡಿ ತೋರಿಸಿದ್ದಾರೆ. ಅದುವೇ ಜನಸಂಖ್ಯೆಯ ನಿಯಂತ್ರಣ! ಇದೀಗ ಅಂಕಿಸಂಖ್ಯೆಗಳ ಎಲ್ಲಾ ಪೇರ್ ಕಾಸ್ಟ್ ಗಾಳಿಯಲ್ಲಿ ತೇಲಿಹೋಯ್ತು. ಇಡೀ ವಿಶ್ವದ ಜನಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಎಲ್ಲೆಲ್ಲೂ ದಂಗೆ, ಲೂಟಿ, ನೀರಿನ ಕೊರತೆ, ವಾಸಿಸಲು ನೆಲೆ ಇಲ್ಲ, ಅನ್ನಾಹಾರ ಇಲ್ಲದ ಬರ, ಬಡತನ….. ಒಂದೇ ಎರಡೇ!
ಮುಂದೆ ಇಂಥ ಕಷ್ಟ ಎದುರಾಗದು. ಹಿಂದೆ ಇದ್ದ ನಂಬಿಕೆ ಎಂದರೆ 2100ರ ಹೊತ್ತಿಗೆ ವಿಶ್ವದ ಜನಸಂಖ್ಯೆ 12 ಶತಕೋಟಿ ಆಗಲಿದೆ ಎಂಬುದು. ಆದರೆ ಇದೀಗ 2060ರ ಹೊತ್ತಿಗೆ 10 ಶತಕೋಟಿ ಮುಟ್ಟಿದ್ದರೂ, ಜನಸಂಖ್ಯೆ ಇಳಿಮುಖ ಕಾಣುತ್ತಿದೆ!
ಜಪಾನಿನಲ್ಲಿ ಇದೀಗ ಪ್ರತಿ ಘಂಟೆಗೆ 100 ಜನ ಸಾಯುತ್ತಿದ್ದಾರೆ. ಚೀನಾದಲ್ಲಿ ಕಳೆದ 30 ವರ್ಷದಲ್ಲಿ ಕಾಲು ಭಾಗದಷ್ಟು ಅದರ ಜನಸಂಖ್ಯೆ ಕಡಿಮೆ ಆಗಿಹೋಗಿದೆ.
ಟೋಟಲ್ ಫರ್ಟಿಲಿಟಿ ರೇಟ್ ಅಂದ್ರೆ ಒಬ್ಬ ಹೆಣ್ಣು ಎಷ್ಟು ಮಕ್ಕಳನ್ನು ಹೆರಬಲ್ಲಳು ಎಂಬ ಸರಾಸರಿ ಲೆಕ್ಕ. ಈಗ ಅನೇಕ ದೇಶಗಳಲ್ಲಿ ಸ್ಟೇಬಲ್ ಪಾಪ್ಯುಲೇಶನ್ ಗಾಗಿ ಇದು ಅಗತ್ಯವಾಗಿ 2.1 ರಿಂದ ಕಡಿಮೆ ಆಗಿ 0.79 ಆಗಿಹೋಗಿದೆ. ಭಾರತದಲ್ಲಿ ಜನಸಂಖ್ಯೆ ಜಾಸ್ತಿ ಎನ್ನುವವರಿಗೆ, ಅದು ಈಗ 1.9 ಆಗಿದೆ ಎಂಬುದು ನೆನಪಿರಲಿ. ಅಂದ್ರೆ ಜನಸಂಖ್ಯೆ ಹೆಚ್ಚುತ್ತಿಲ್ಲ…. ತಗ್ಗುತ್ತಿದೆ!
ನಗರವಾಸಿ ಹೆಂಗಸರು ಕಲಿತವರಾಗಿ, ಗಳಿಸುವವರಾಗಿ ಸ್ಮಾರ್ಟ್ ಎನಿಸಿದ್ದಾರೆ. ಅವಳಿಗೆ ತನ್ನ ಕೆರಿಯರ್ ಮುಖ್ಯವೇ ಹೊರತು ಮಗುವಿನ ಹೊರೆಯಲ್ಲ. ಗಂಡಸರಿಗೆ ತಮ್ಮ ವಂಶ ಮುಂದುವರಿದರೆ ಸಾಕು ಎಂದು ಆಗಿಹೋಗಿದೆ. ತಾವು ಸ್ಮಶಾನಕ್ಕೆ ಹೊರಡುವಾಗ ಬೆಂಕಿ ಇಡಲು ಸಂತಾನ ಬೇಕಾದ್ದರಿಂದ, ಸಾರೋಗೇಟ್ ಮದರ್ ಸಿಕ್ಕರೂ ಸಾಕು ಎಂದಾಡುತ್ತಿದ್ದಾರೆ. ಲಕ್ಷಾಂತರ ಅಶಿಕ್ಷಿತ ಹೆಂಗಸರು ಇಂದಿಗೂ ಸಹ ಸೆಕ್ಸ್ ಬಜಾರಿನಲ್ಲಿ ದೇಹ ಮಾರಿಕೊಂಡು ಹಣ ಸಂಪಾದಿಸುತ್ತಿದ್ದಾರೆ. ಅವರು ತಮ್ಮ ಬಸಿರನ್ನು ಬಾಡಿಗೆಗೆ ನೀಡಿ ದೊಡ್ಡ ಮೊತ್ತ ಗಳಿಸಲು ರೆಡಿ. ಪರಿಸರವಾದಿಗಳ ಗಲಾಟೆ ಈಗ ಕಡಿಮೆ ಆದೀತು. ಕಡಿಮೆ ಮಕ್ಕಳು ಅಂದ ಮೇಲೆ ಸಣ್ಣ ಮನೆ, ಶಾಲೆ, ಆಸ್ಪತ್ರೆ, ರೇಶನ್, ಹೆಚ್ಚಿನ ಖರ್ಚಿನ ಬಾಬತ್ತೇ ಇಲ್ಲ. ಜಪಾನಿನ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ, ಆದರೆ ಜನ ಬೆಟರ್ ಲೈಫ್ ಸ್ಟೈಲ್ ಹೊಂದುತ್ತಿದ್ದಾರೆ. ಇಲ್ಲಿ ಕಮಾಲ್ ಮಾಡುತ್ತಿರುವವರು ಹೆಂಗಸರೇ ಹೊರತು ಸರ್ಕಾರವಲ್ಲ, ಕುಟುಂಬ ಯೋಜನೆ ಕುರಿತಾದ ಜಾಹೀರಾತು ಪ್ರಕಟಿಸಿ ಅದು ಕೈ ತೊಳೆದು ಕೂತಿದೆ.
ಹೆಚ್ಚಿನ ಗೌಜು ಗದ್ದಲ ಇಲ್ಲದೆ ಈಗ ಎಲ್ಲ ಮನೆಗಳಲ್ಲೂ ಶಾಂತಿ ತುಂಬಿದೆ. ಉತ್ತಮ ವಾತಾವರಣದಲ್ಲಿ ನಿಮಗಾಗಿ ಬದುಕಿರಿ. ಮಗು, ಅದರ ತಂದೆಯ ಚಿಂತೆ ಬಿಡಿ. ಗಂಡು ಸೆಕ್ಸ್ ಗಾಗಿ ಬೇಕೇ ಹೊರತು, ಮಗುವನ್ನು ಹೆರಿಸಲು ಅಲ್ಲ! ಮಗುವನ್ನು ಪೋಷಿಸಲು ಹಣ ಕೊಡಲಿಕ್ಕಲ್ಲ. ಸರ್ಕಾರಕ್ಕೆ ಈಗ ಚಿಂತೆ ಬೇಡ, ಏನು ಮಾಡಬೇಕು ಮಾಡಬಾರದು ಎಂಬುದನ್ನು ಆಧುನಿಕ ಹೆಂಗಸರು ಅರಿತಿದ್ದಾರೆ!





