ಕಥೆ  - ಜಿ. ವಿನೋದಿನಿ 

``ಸುಚೀ, ಇವತ್ತು ನನ್ನ ಸ್ನೇಹಿತನನ್ನು ಮನೆಗೆ ಕರೆಯುತ್ತಿದ್ದೇನೆ. ವಿಶೇಷವಾಗಿ ರುಚಿಕರವಾಗಿ ಅಡುಗೆ ತಯಾರಿಸು,'' ವಿನಯ್‌ ಹೇಳಿದಾಗ ಸುಚಿತ್ರಾಳ ಮುಖ ಕಳೆಗುಂದಿತ್ತು.

``ನೀವು ಇದನ್ನು ಸ್ವಲ್ಪ ಮೊದಲೇ ಹೇಳಬಾರದೇ? ಈಗಾಗಲೇ ಏಳು ಗಂಟೆ ಮೇಲಾಗಿದೆ....''

``ಏನು ಹೇಳುತ್ತಿದ್ದೀಯಾ.....? ದೂರದ ಮುಂಬೈನಿಂದ ಬರುತ್ತಿರುವ ನನ್ನ ಸ್ನೇಹಿತನಿಗೆ ಕೇವಲ ಚಪಾತಿ ಪಲ್ಯ ಮಾಡಿ ತಿನ್ನಿಸುವುದೇ? ಇದರಿಂದ ಅವನಿಗೆ ನನ್ನ ಬಗ್ಗೆ ಎಂತಹ ಇಮೇಜ್‌ ಸಿಗುತ್ತದೆ ಗೊತ್ತಾ....?'' ಎಂದ ವಿನಯ್‌.

``ಸರಿ, ಹಾಗಿದ್ದಲ್ಲಿ ರೆಸ್ಟೋರೆಂಟ್‌ನಿಂದ ಊಟ ತರಿಸಿ ಇಡುತ್ತೇನೆ. ಆಗದೆ?'' ಎಂದಳು ಸುಚಿತ್ರಾ.

``ಓಹೋ...! ಅಂತೂ ನಿನಗೆ ಅಡುಗೆ ಮಾಡಲು ಸಾಧ್ಯವಿಲ್ಲ ಅಂತ ತಾನೇ ನೀನು ಹೇಳುತ್ತಿರುವುದು. ಇಷ್ಟಕ್ಕೂ ಬೆಳಗಿನಿಂದ ಸಂಜೆಯವರೆಗೆ ಮನೆಯಲ್ಲಿರುವ ನೀನು ಮಾಡುವುದಾದರೂ ಏನನ್ನು? ಇದೇ ನನ್ನ ತಾಯಿಯಾಗಿದ್ದರೆ ನಾನು ಹೇಳಿದುದಕ್ಕಿಂತ ಹೆಚ್ಚು ಚೆನ್ನಾಗಿ ಮಾಡಿ ಬಡಿಸುತ್ತಿದ್ದರು,'' ಎಂದು ಸಿಡುಕಿದ.

``ಸರಿ. ನಾನೂ ನಿಮ್ಮ ಇಷ್ಟದಂತೆಯೇ  ಮಾಡುತ್ತೇನೆ,'' ಎಂದಳು ಸುಚಿತ್ರಾ.

ಸುಚಿತ್ರಾ ವಿನಯ್‌ ಮದುವೆಯಾಗಿ ಎರಡು ತಿಂಗಳಾಗಿತ್ತು. ಸುಚಿತ್ರಾ ಮೊದಲಿನಿಂದಲೂ ಚೆನ್ನಾಗಿ ಅಡುಗೆ ಮಾಡಲು ಕಲಿತಿರಲಿಲ್ಲ. ಮದುವೆಗೆ ಇನ್ನೇನು ತಿಂಗಳಿದೆ ಎನ್ನುವಾಗ ದಿನನಿತ್ಯಕ್ಕೆ ಅಗತ್ಯವಾದ ಮೂರುನಾಲ್ಕು ಬಗೆಯ ತಿಂಡಿ, ಅಡುಗೆಗಳನ್ನು ಮಾಡಲು ಕಲಿತಿದ್ದಳು. ಇವಳು ಮನೆಯಲ್ಲಿ ಒಬ್ಬಳೇ ಮಗಳಾಗಿದ್ದ ಕಾರಣ ತಾಯಿ ತಂದೆಯರೂ ಮುದ್ದಾಗಿ ಬೆಳೆಸಿ ಯಾವ ಕೆಲಸಕ್ಕೂ ಅತಿಯಾಗಿ ಹಚ್ಚಿಸಿಕೊಳ್ಳಲಿಲ್ಲ.

ಮದುವೆ ಮಾತುಕಥೆಗೆ ಬಂದಾಗಲೇ ಸುಚಿತ್ರಾ ವಿನಯ್‌ಗೆ ಈ ವಿಚಾರದ ಕುರಿತು ತಿಳಿಸಿದ್ದಳು. ``ಅಯ್ಯೋ, ಇದಕ್ಕೆಲ್ಲ ಏಕೆ ತಲೆ ಕೆಡಿಸಿಕೊಳ್ಳಬೇಕು? ಅಡುಗೆ ತಾನೇ..... ನಾನೇ ಹೇಳಿಕೊಡುತ್ತೇನೆ. ಪ್ರತಿದಿನ ಅಡುಗೆ ಮಾಡಲು ನಾನೂ ಸಹಾಯ ಮಾಡ್ತೀನಿ,'' ಸುಚಿತ್ರಾಳ ರೂಪಕ್ಕೆ ಮನಸೋತಿದ್ದ ವಿನಯ್‌ ಅಂದು ಭರವಸೆ ಕೊಟ್ಟಿದ್ದ. ಮದುವೆಯಾಗಿ ಬಂದ ಸುಚಿತ್ರಾ ತನಗೆಷ್ಟು ಸಾಧ್ಯವೋ ಅಷ್ಟೂ ಉತ್ತಮ ರೀತಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದಳು. ಇಷ್ಟಕ್ಕೂ ಎರಡು ತಿಂಗಳ ಕಾಲ ಅಡುಗೆ ತರಬೇತಿ ಕೇಂದ್ರಕ್ಕೆ ಹೋಗಿ ದಿನನಿತ್ಯದ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಮಾಡುವುದನ್ನು ಹೇಗೋ ಕಲಿತಿದ್ದಳು. ಆದರೆ ಅಡುಗೆ ಕಲೆಯಲ್ಲಿ ಪೂರ್ಣ ಪ್ರಮಾಣದ ಪರಿಣಿತಿ ಇನ್ನೂ ಸಾಧಿಸಲಾಗಿರಲಿಲ್ಲ.

ಇದೀಗ ವಿನಯ್‌ನ ನಿಲುವೆ ಬೇರೆಯಾಗಿದೆ. ಮದುವೆಗೆ ಮುನ್ನ ಮಾತು ನೀಡಿದಂತೆ ಅವನು ಎಂದೂ ಅಡುಗೆಗೆ ಸಹಾಯ ಮಾಡುತ್ತಿರಲಿಲ್ಲ. ಆಫೀಸ್‌ ಮುಗಿಸಿ ಬಂದವನೇ, `ಊಟಕ್ಕೆ ಎಲ್ಲ ತಯಾರಿದೆಯಾ?' ಎಂದು ಕೇಳುತ್ತಾ ಟಿ.ವಿ ಮುಂದೆ ಕುಳಿತರೆ, ಸುಚಿತ್ರಾಳೆ ಅಡುಗೆಯೆಲ್ಲವನ್ನೂ ಮಾಡಿ, ಊಟ ಬಡಿಸಲು ತಟ್ಟೆ ಜೋಡಿಸುವವರೆಗೆ ಅವನು ಎದ್ದು ಬರುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಅವಳು ಮಾಡಿದ ಅಡುಗೆಗೆ `ಇದಕ್ಕೆ ಉಪ್ಪು ಕಡಿಮೆ, ಹುಳಿಯಾಗಿದೆ, ಖಾರ ಬೇಕಿತ್ತು,' ಎಂದು ಟೀಕಿಸುತ್ತಾ, ನಿನಗಿಂತ ನನ್ನ ಅಮ್ಮ ಚೆನ್ನಾಗಿ ಅಡುಗೆ ಮಾಡುತ್ತಿದ್ದರು ಎಂದು ಪದೇ ಪದೇ ಹೇಳಿ ಅವಳ ಕಣ್ಣಿಂದ ನೀರು ತರಿಸುತ್ತಿದ್ದ. ಇಂದು ಸಹ ವಿನಯ್‌ ಮಾತಿನಿಂದ ಅವಳ ಕಣ್ಣಂಚು ಒದ್ದೆಯಾಗಿತ್ತು. ಆದರೂ ಅವಳು ತನಗೆ ತಿಳಿದಂತೆ ಒಳ್ಳೆಯ ಊಟದ ತಯಾರಿ ಮಾಡಲು ನಿರ್ಧರಿಸಿದಳು. ಮನೆಯಲ್ಲಿ ತರಕಾರಿ ಖಾಲಿಯಾಗಿದ್ದು, ಅದಕ್ಕಾಗಿ ಅಂಗಡಿಗೆ ಹೊರಟವಳಿಗೆ ಅಲ್ಲಿಯೂ ನಿರಾಶೆಯಾಗಿತ್ತು. ಅವಳು ಯಾವಾಗಲೂ ತರಕಾರಿ ಕೊಳ್ಳುತ್ತಿದ್ದ ಅಂಗಡಿಯವನು ಅಂದು ಅಂಗಡಿ ಮುಚ್ಚಿ ಎಲ್ಲಿಗೋ ಹೋಗಿದ್ದ. ಮತ್ತೆ ಆಟೋ ಮಾಡಿಕೊಂಡು ನಗರದ ಮುಖ್ಯ ಮಾರುಕಟ್ಟೆಗೆ ಹೋಗಿ ತರಕಾರಿ ತರಬೇಕಾಯಿತು. ಸುಚಿತ್ರಾ ಮನೆ ಸೇರುವಾಗ ಆಗಲೇ ಎಂಟು ಗಂಟೆಯಾಗಿತ್ತು. ಬಂದವಳೇ ತರಕಾರಿಗಳನ್ನು ಹೆಚ್ಚಿ, ಅಕ್ಕಿ ತೊಳೆದು ಒಲೆಯ ಮೇಲಿಟ್ಟಳು. ಅಷ್ಟರಲ್ಲಿ ಕಾಲಿಂಗ್‌ ಬೆಲ್ ಸದ್ದಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ