ಕಥೆ -ಎಸ್‌. ಎನ್‌. ದಿವ್ಯಪ್ರಭಾ

ಆದರೆ ಆಶ್ರಮದಿಂದ ಹಿಂದಿರುಗಿದಾಗ ಗರ್ಭಪಾತವಾಗಲು ಕಾರಣವೇನು? ಅದು ಆ ಕಪಟ ಸ್ವಾಮೀಜಿಯ ಕೈವಾಡವೇ ಅಥವಾ ಬೇರೇನಾದರೂ ಆಯಿತೇ.....?

ನಿದ್ದೆ ಬಾರದೆ ಮತ್ತೊಂದು ಪಕ್ಕಕ್ಕೆ ಹೊರಳಿದೆ. ಕಿಟಕಿಯಾಚೆ ಆಗಸದಲ್ಲಿ ಮಿನುಗುತ್ತಿರುವ ತಾರೆಗಳು ಕಂಡವು. ಆದರೆ ನನ್ನ ಮನದ ಆಗಸದ ತಾರೆಗಳು ಮಸುಕಾಗಿದ್ದವು.

ಪಕ್ಕದಲ್ಲಿದ್ದ ಪ್ರಶಾಂತ್‌ ಆರಾಮವಾಗಿ ನಿದ್ರಿಸುತ್ತಿದ್ದರು. ಬಹುಶಃ ಅವರಿಗೆ ಮನಸ್ಸನ್ನು ಕದಡುವ ಯಾವುದೇ ಯೋಚನೆಗಳು ಇದ್ದಿರಲಾರವು. ಹಾಗೆ ನೋಡಿದರೆ ನನಗೂ ಅಂತಹ ತೊಂದರೆಗಳೇನೂ ಇರಲಿಲ್ಲ. ವಿನಾಕಾರಣ ಚಿಂತಿಸುವ ಅಭ್ಯಾಸ ನನ್ನದಿರಬಹುದೇನೋ! ಸಲ್ಲದ ಯೋಚನೆಗಳಿಂದಾಗಿ ರಾತ್ರಿ ಕಳೆಯುವುದೇ ನನಗೆ ಕಷ್ಟವಾಗುತ್ತಿದೆ. ನಿಶೆಯ ಈ ನೀರವತೆಯಲ್ಲಿ ನನ್ನ ಮನಸ್ಸಿನ ವಿಚಾರ ಲಹರಿಯನ್ನು ತಡೆಗಟ್ಟಲು ನನ್ನಿಂದಾಗುತ್ತಿಲ್ಲ. ನಾನು ನಿದ್ರೆ ಇಲ್ಲದೆ ರಾತ್ರಿಯನ್ನು ಕಳೆಯುತ್ತೇನೆಂಬ ಅರಿವೇ ಪ್ರಶಾಂತ್‌ಗೆ ಇಲ್ಲ.

ಮೊದಲಿನಿಂದಲೂ ನಾನು ಸ್ವಾಭಿಮಾನಿ ಹೆಣ್ಣು ಸ್ವತಂತ್ರ ಮನೋಭಾವದವಳು. ಪ್ರತಿಯೊಂದು ವಿಷಯವನ್ನು ಆಳವಾಗಿ ಯೋಚಿಸುತ್ತಿದ್ದೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದೆ. ಎಲ್ಲಾ ಮಾತಿನಲ್ಲೂ ಒಳಾರ್ಥವನ್ನು ಹುಡುಕಿ ಹೊರಗೆಳೆಯುತ್ತಿದ್ದೆ. ಹೀಗಾಗಿ ಎಲ್ಲರೂ ನನ್ನಿಂದ ಕೊಂಚ ದೂರವೇ ನಿಲ್ಲುತ್ತಿದ್ದರು. ಈಗ ಪ್ರಶಾಂತ್‌ ಕೂಡ ಹಾಗೆ ನನ್ನಿಂದ ಒಂದಿಷ್ಟು ದೂರವೇ ಉಳಿದು ಬಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಪ್ರಶಾಂತ್‌ ಏನೂ ಕೆಟ್ಟವರಲ್ಲ. ಅವರು ಎಲ್ಲ ವಿಷಯಗಳನ್ನು ನೇರವಾಗಿ ತೆಗೆದುಕೊಳ್ಳುವರು. ನಮ್ಮಿಬರ ಸ್ವಭಾವಗಳು ವಿಭಿನ್ನವಾಗಿವೆಯಷ್ಟೇ.

ಮದುವೆಗೆ ಮೊದಲು ಒಂದೆರಡು ಭೇಟಿಗಳ ಸಂದರ್ಭದಲ್ಲೇ ನನ್ನ ನೇರ ಮಾತಿನಿಂದ ಪ್ರಶಾಂತ್‌ ಮುಜುಗರ ಪಟ್ಟಿದ್ದರೆಂದು ತೋರುತ್ತದೆ.

``ಇದೇನಿದು ಶಿಲ್ಪಾ? ನೀನು ನನ್ನ ಹೆಸರು ಹಿಡಿದು ಮಾತನಾಡಿಸುತ್ತೀಯಲ್ಲ!'' ಪ್ರಶಾಂತ್‌ ಅಸಮಾಧಾನದಿಂದ ಹೇಳಿದ್ದರು.

``ನೀವು ಅಷ್ಟೇ ತಾನೇ? `ಶಿಲ್ಪಾ' ಎಂದೇ ನನ್ನನ್ನು ಕರೆಯುತ್ತಿದ್ದೀರಲ್ಲವೇ?'' ನಾನು ತಡಬಡಾಯಿಸದೆ ಉತ್ತರಿಸಿದೆ.

ನನ್ನ ಮಹಿಳಾವಾದಿ ಧೋರಣೆಯು ನನಗೆ ಹೆಮ್ಮೆಯ ವಿಷಯವಾಗಿತ್ತು. ಆದರೆ ಪ್ರಶಾಂತ್‌ ಮುಖದಲ್ಲಿ ಬೇಸರ ಸ್ಪಷ್ಟವಾಗಿ ವ್ಯಕ್ತವಾಗಿತ್ತು.

ಮದುವೆಯ ಶಾಸ್ತ್ರ ಮುಗಿಸಿ ಬಂದ ಮೇಲಾಗಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಿತು. ಮನೆಯಲ್ಲಿ ಸಾಕಷ್ಟು ನೆಂಟರಿಷ್ಟರು ನೆರೆದಿದ್ದರು.

``ರತ್ನದಂತಹ ಹುಡುಗಿ ಕಣೋ ಪ್ರಶಾಂತು. ಒಂಟಿಯಾಗಿ ಎಲ್ಲೂ ಕಳಿಸಬೇಡಪ್ಪ,'' ಚಿಕ್ಕಮ್ಮ ಹೇಳಿದರು.

``ಎಲ್ಲಾದರೂ ಉಂಟೇ ಚಿಕ್ಕಮ್ಮ. ಜೊತೆ ಇಲ್ಲದೆ ಕಳಿಸೋ ಪ್ರಶ್ನೆಯೇ ಇಲ್ಲ.''

ಈ ಮಾತು ಕೇಳಿ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ನಕ್ಕರು. ಅದೊಂದು ತಮಾಷೆಯ ಮಾತೆಂಬಂತೆ ನಾನೂ ನಸು ನಾಚಿ ಎಲ್ಲರ ನಗುವಿನಲ್ಲಿ ಭಾಗಿಯಾದೆ. ಆದರೆ ಅದು ಕೇವಲ ತಮಾಷೆಯ ಮಾತಲ್ಲ, ಹೆಣ್ಣಿನ ಬಗ್ಗೆ ಅವರ ಭಾವನೆ ಏನು ಎಂಬ ಅಂತರಾರ್ಥವನ್ನು ನಾನು ಆ ಮಾತಿನ ಆಳದಲ್ಲಿ ಹುಡುಕಿ ತೆಗೆದೆ. ಈ  ಕಾಲದಲ್ಲಿಯೂ ಹೆಣ್ಣಿನ ಸ್ಥಾನ ಪುರುಷನಿಗಿಂತಲೂ ಕೆಳಗಿನದು ಎಂಬ ಅವರ ಆಲೋಚನೆಯು ನನ್ನನ್ನು ನಾನು ಗಟ್ಟಿಗೊಳಿಸಿಕೊಳ್ಳಲು ಪ್ರೇರಣೆ ನೀಡಿತು.

ಹನಿಮೂನ್‌ ಸಂಭ್ರಮವೆಲ್ಲ ಮುಗಿಸಿ ವಿರಾಮ ಆದಾಗ ನಾನು ಪ್ರಶಾಂತ್‌ಗೆ ಹೇಳಿದೆ, ``ಒಬ್ಬಳೇ ಮನೆಯಲ್ಲಿ ಕೂರೋದಕ್ಕೆ ಆಗೋಲ್ಲ. ನಾನು ಕೆಲಸಕ್ಕೆ ಸೇರುತ್ತೇನೆ.''

``ಕೆಲಸಕ್ಕೆ ಸೇರೋ ಅಗತ್ಯ ಏನಿದೆ? ನಾನು ಸಂಪಾದಿಸುತ್ತಾ ಇದ್ದೇನಲ್ಲ.'' ಈ ಉತ್ತರ ಕೇಳಿ ಹಳೇ ಸಿನಿಮಾಗಳ ಗಡಸು ಮುಖದ ಪತಿಯ ಪಾತ್ರದ ಚಿತ್ರಗಳು ಕಣ್ಣಮುಂದೆ ಬಂದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ