ಕರ್ನಾಟಕದ ರಾಷ್ಟ್ರೀಯ ಅಭಯಾರಣ್ಯ ನಾಗರಹೊಳೆ, ತನ್ನಲ್ಲಿನ ಅನನ್ಯ ತಿರುವು, ಬಳಸುವ ಮಾರ್ಗಗಳಿಂದ ಭಾರತದ ನೈಸರ್ಗಿಕ ನಿಗೂಢ ತಾಣವಾಗಿ ಉಳಿದಿದೆ. ಇಲ್ಲಿನ ಸಫಾರಿ ನೀಡುವ ರೊಮ್ಯಾಂಟಿಕ್‌ ಥ್ರಿಲ್‌, ಆ ರೋಮಾಂಚನವನ್ನು ಅನುಭವಿಸಿಯೇ ತೀರಬೇಕು. ಅದು ಇಲ್ಲಿನ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಒಂದು ಅದ್ಭುತ ಕಲೆಯೇ ಸರಿ.

ಕಬಿನಿ ನದಿ ಸುತ್ತಿ ಬಳಸಿ ಹರಿವ ರಭಸ ಹೇಗಿದೆ ಎಂದರೆ, ಅದು ನಾಗರಹೊಳೆ ಅಭಯಾರಣ್ಯವನ್ನು ಒಂದು `ಸರ್ಪ'ದಂತೆ ಸುತ್ತುವರೆದಿದೆ ಹೀಗಾಗಿ ಇದಕ್ಕೆ ಆ ಹೆಸರು ಬಂದಿದೆ. ನಾಗರಹೊಳೆ ನಿಜಕ್ಕೂ ಕರ್ನಾಟಕದ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ತನ್ನಲ್ಲಿನ ಅನನ್ಯ ತಿರುವುಗಳಿಂದಾಗಿ ಭಾರತದ ನೈಸರ್ಗಿಕ ನಿಗೂಢ ತಾಣವೆನಿಸಿದೆ. ಆದರೆ ನಾಗರಹೊಳೆ ತನ್ನ ಪಕ್ಕದಲ್ಲೇ ಇರುವ ನೆರೆಯ ಬಂಡೀಪುರ ಟೈಗರ್‌ ರಿಸರ್ವ್ ಅಥವಾ ತಮಿಳುನಾಡಿನ ಮುದುಮೈ ರಾಷ್ಟ್ರೀಯ ಅಭಯಾರಣ್ಯಗಳಂತೆ ವಿಖ್ಯಾತಿಗೊಂಡಿಲ್ಲ, ಜೊತೆಗೆ ಬಹಳ ಕುತೂಹಲಕಾರಿಯೂ ಅಲ್ಲ. ನಾಗರಹೊಳೆ ಒಂದು ವಿಧದಲ್ಲಿ ಪ್ರಕೃತಿಯ ಒಂದು ಬೆಡಗಿನ ಭವ್ಯ ಶೋಕೇಸ್‌ ಎನ್ನಬಹುದು.

ನಾಗರಹೊಳೆ ಅಂದ ತಕ್ಷಣ ನಮಗೆ ನೆನಪಿಗೆ ಬರುವುದು, ದಶಕಗಳ ಹಿಂದೆ ವಿಷ್ಣು, ಭಾರತಿ, ಅಂಬರೀಷ್‌ ಹಾಗೂ ಇನ್ನಿತರ ಖ್ಯಾತ ಬಾಲನಟರು ನಟಿಸಿದ್ದಂಥ, ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ `ನಾಗರಹೊಳೆ' ಮಕ್ಕಳ ಚಿತ್ರ. ಅದರಲ್ಲಿನ ಒಂದೊಂದು ದೃಶ್ಯಗಳೂ ನಾಗರಹೊಳೆ ಕಾಡಿನ ದಟ್ಟ ರಮಣೀಯತೆಯನ್ನು ಇಂದಿಗೂ ನಿಮ್ಮ ಕಣ್ಣಮುಂದೆ ಕಟ್ಟಿಕೊಡುತ್ತದೆ.

ಇನ್ನೊಂದು ಅಂದರೆ ಶೇಖರ್‌ ದತ್ತಾರಿಯವರ ಉತ್ಕೃಷ್ಟ ಡಾಕ್ಯುಮೆಂಟರಿ ಚಿತ್ರ `ನಾಗರಹೊಳೆ : ಟೇಲ್ಸ್ ಫ್ರಂ ಆ್ಯನ್‌ ಇಂಡಿಯನ್‌ಜಂಗಲ್.' ಇದು ನಿಜಕ್ಕೂ ಬೆಸ್ಟ್ ವೈಲ್ಡ್ ಲೈ‌ಫ್‌ ಡಾಕ್ಯುಮೆಂಟರಿ ಎನ್ನಬಹುದು. ಇಲ್ಲಿ ನಾಗರಹೊಳೆಯ ಅನುಪಮ ವನ್ಯಜೀವದ ವೈವಿಧ್ಯತೆಯನ್ನು ಕಾಡಿನ ಸಂಗೀತದ ಹಿನ್ನೆಲೆಯೊಂದಿಗೆ ನಾಟಕೀಯವಾಗಿ, ಸರ್ವಸಮ್ಮೋಹನಗೊಳ್ಳುವಂತೆ ಚಿತ್ರಿಸಲಾಗಿದೆ.  ಇಲ್ಲಿನ ಪ್ರಕೃತಿ ಪ್ರೇಮಿಗಳು ನಾಗರಹೊಳೆ ಕುರಿತು ನಮಗೆ ರಂಜನೀಯವಾಗಿ, ಅತಿ ವರ್ಣನೆಯೊಂದಿಗೆ ಬಣ್ಣಿಸುತ್ತಾರೆ. ಇಲ್ಲಿನ ಕಾಡುಹಕ್ಕಿಗಳ ಕಲರವ.... ಅಬ್ಬಬ್ಬಾ, ಅದೆಂಥ ಚಿತ್ರ ವಿಚಿತ್ರ ಬಣ್ಣಗಳೋ ಹೇಳಲಾಗದು. ಅಲ್ಲಲ್ಲಿ ಕಂಡುಬರುವ ಬೃಹತ್‌ಹುತ್ತಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ.

ಇಲ್ಲಿನ ಪೊದೆಗಳು, ಗಿಡಗಂಟಿಗಳಲ್ಲಿ ಅರಳುವ ಅಂದಚಂದದ ಬಣ್ಣ ಬಣ್ಣದ ಹೂಗಳು, ಅದರ ಮಕರಂದ ಹೀರಲು ಬರುವ ದುಂಬಿಗಳು, ಹಿಂಡು ಹಿಂಡಾಗಿ ಸುತ್ತಾಡುವ ಚಿಟ್ಟೆಗಳು, ಬಣ್ಣದ ರೆಕ್ಕೆಗಳನ್ನು ಹರಡಿ ಪಟಪಟ ಬಡಿಯುತ್ತಾ ಕೀಚ್‌ ಕೀಚ್‌, ಕುಹೂ ಕುಹೂ ಎನ್ನುವ ಹಕ್ಕಿಗಳ ಕಲರವ..... ಒಟ್ಟಾರೆ ನಾಗರಹೊಳೆ ಧರೆಗಿಳಿದ ಹಸಿರು ಸ್ವರ್ಗವೇ ಸರಿ!

ಇಲ್ಲಿನ ಪ್ರಾಣಿಗಳ ವರ್ತನೆಯನ್ನು ಕಾಡಿನ ನಿಗೂಢತೆಯನ್ನು ಚೆನ್ನಾಗಿ ಅರಿತವರು ಯಾರು ಗೊತ್ತೇ? ಅನಧಿಕೃತ ಬೇಟೆಯಾಡುವರು! ಆದರೆ ಕಳೆದ 15 ವರ್ಷಗಳಿಂದ ಇಲ್ಲಿ ಅನಧಿಕೃತ ಬೇಟೆಗೆ ಅವಕಾಶವೇ ಇಲ್ಲ. ಏಕೆಂದರೆ ನಾಗರಹೊಳೆ ಅಭಯಾರಣ್ಯ ಭಾರತದ ಪ್ರತಿಷ್ಠಿತ `ಪ್ರಾಜೆಕ್ಟ್ ಟೈಗರ್‌`ನಡುವೆ ಬರುವುದರಿಂದ ಇದನ್ನು ಅಹರ್ನಿಶಿ ಕಾಯಲಾಗುತ್ತದೆ. ಈ ಕಾಡನ್ನು ಬಹು ಹಿಂದಿನಿಂದಲೇ ಸಂರಕ್ಷಿಸಲಾಗಿದೆ. ಅದರಲ್ಲೂ ಬ್ರಿಟಿಷ್‌ ಆಡಳಿತದಲ್ಲಿ ನಾಗರಹೊಳೆಯಲ್ಲಿ ತೇಗದ ಮರಗಳನ್ನು ಗುರುತಿಸಿದಾಗಿನಿಂದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ