ಅಪ್ರಾಮಾಣಿಕರೇ…. ನಿಮಗೆ ಸ್ವಾಗತ!

ಅಪ್ರಾಮಾಣಿಕತೆಯೂ ಸಕ್ಷಮ ಎಂದಾದರೆ ಅದಕ್ಕೆ ಸಮಾಜ ಏನೂ ಮಾಡಲಾಗದು. ಪ್ರಸ್ತುತ ನಮ್ಮ ದೇಶದಲ್ಲಿ ಜೈಲುಗಳು ತುಂಬಿ ತುಳುಕುತ್ತಿವೆ ಎಂದರೆ ರಾಮ ರಾಜ್ಯದ ಕಾನೂನು ಬಂದುಬಿಟ್ಟಿದೆ ಎಂದು ಸಂಭ್ರಮಿಸದಿರಿ. ಅದೇಕೆಂದರೆ, ಈ ಅಪರಾಧಿಗಳು ತಮ್ಮ ಸುರಕ್ಷತೆ ಮಾಡಿಕೊಳ್ಳಲಾಗದೆ ಸಿಕ್ಕಿಬಿದ್ದರಷ್ಟೆ.

ಇತ್ತೀಚೆಗಂತೂ ಎಷ್ಟೋ ಅಪ್ರಾಮಾಣಿಕರು ಬಲು ಗೌರವವಾಗಿ ಜೈಲುಗಳಿಂದ ಹೊರಬರುತ್ತಿದ್ದಾರೆ ಅಥವಾ ಅಪ್ರಾಮಾಣಿಕತೆಯ ಪದವಿ ಪಡೆದರೂ ಬಲು ಗೌರವಸ್ಥರಂತೆ ಮೆರೆಯುತ್ತಿದ್ದಾರೆ. ಲಾಲೂ ಯಾದವ್ ಹೊರಗಿದ್ದಾರೆ. ಸಜಾಯಾಫ್ತಾ ಕೈದಿ ಆದಕಾರಣ ಚುನಾವಣೆಗೆ ಸ್ಪರ್ಧಿಸಲಾಗದಿದ್ದರೂ, ತಮ್ಮ ಪಕ್ಷಕ್ಕಾಗಿ ಜಬರ್ದಸ್ತಾಗಿ ಪ್ರಚಾರ ಮಾಡುತ್ತಿದ್ದಾರೆ. ಸುಬ್ರತೋ ರಾಯ್‌ ಮೇಲೆ ಸುಪ್ರೀಂ ಕೋರ್ಟಿಗೆ ಕೆಂಡಾಮಂಡಲ ಸಿಟ್ಟಿದೆ, ಆದರೆ 10 ಸಾವಿರ ಕೋಟಿ ಹಣ ಕಟ್ಟಿರುವುದರಿಂದ ಅದು ಸಹಿಸಬೇಕಿದೆ. 2 ಜಿ ಹಗರಣದ ಎ. ರಾಜಾ ದಿಲ್ ದಾರಾಗಿ ಚುನಾವಣಾ ಅಭ್ಯರ್ಥಿಯಾಗಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭಾಜಪ ರೆಡ್‌ ಕಾರ್ಪೆಟ್‌ ಹಾಕಿ ಕರೆಸಿತು, ಆದರೆ ಅವರ ಹಗರಣಗಳ ಪಟ್ಟಿ ದೊಡ್ಡದಿದೆ. ನರೇಂದ್ರ ಮೋದಿಯವರ ಮೇಲೆ 2 ಸಾವಿರ ಹತ್ಯೆಗಳ ಆರೋಪವಿದೆ ಹಾಗೂ ಅವರ ಏಕಮಾತ್ರ ವಿಶ್ವಾಸಾರ್ಹರಾದ ಅಮಿತ್‌ ಶಾಹ್‌ರ ಮೇಲೆ ಹತ್ಯೆ ಮಾಡಿಸಲು ಅದೇಶ ನೀಡಿದರೆಂಬ ನೇರ ಆರೋಪವಿದೆ. ಆದರೆ ಇಬ್ಬರೂ ದೇಶದ ಆಡಳಿತದ ಚುಕ್ಕಾಣಿ ಹಿಡಿದೇ ತೀರುತ್ತೇವೆ ಎಂದು ಹಠ ಹೂಡಿದ್ದಾರೆ. ಕಾಂಗ್ರೆಸ್‌ ಅಶೋಕ್‌ ಚವ್ಹಾಣ್‌ರನ್ನು ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಪಟ್ಟದಿಂದ ತೆಗೆಯುವ ನಾಟಕವಾಡಿ ನಂತರ ಲೋಕಸಭೆಯ ಟಿಕೆಟ್‌ ನೀಡುತ್ತದೆ.

ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ಲಲಿತ್‌ ಮೋದಿ, ರಾಜಾಸ್ಥಾನಕ್ಕೆ ಬರದೆಯೇ ರಾಜಾಸ್ಥಾನದ ಕ್ರಿಕೆಟ್‌ ಬೋರ್ಡ್‌ಅಧ್ಯಕ್ಷ ಪಟ್ಟ ಗಿಟ್ಟಿಸುತ್ತಾರೆ. ಎನ್‌. ಶ್ರೀನಿವಾಸನ್‌ ತಮ್ಮ ಅಳಿಯನೊಡಗೂಡಿ ಐಪಿಎಲ್ ನ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಆರೋಪಿ ಎನಿಸಿದ್ದರೂ, ಮತ್ತೆ ಮತ್ತೆ ಸುನಾಯಾಸವಾಗಿ ಅಧಿಕಾರಕ್ಕೆ ಬರುತ್ತಾರೆ. ಸುಪ್ರೀಂಕೋರ್ಟ್‌ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತದಷ್ಟೆ.

ಈ ಮಹನೀಯರಾರೂ ಜೈಲಿನಲ್ಲಿಲ್ಲ, ಆದರೆ ಜೈಲು ಮಾತ್ರ ತುಂಬಿದೆ. 2,000 ಕೈದಿಗಳಿರಬೇಕಾದ ಕಡೆ 10,000 ಕೈದಿಗಳಿದ್ದಾರೆ. ಈ ಕೈದಿಗಳಾರು? ಇವರು ಸಮಾಜಘಾತುಕರೇ? ಯಾರೋ 100 ರೂ.ಗಾಗಿ ಪಿಕ್‌ ಪಾಕೆಟ್‌ ಮಾಡಿರಬಹುದು, 1,000 ರೂ.ಗಾಗಿ ಯಾರೋ ಲಂಚ ಪಡೆದಿರಬಹುದು, ಇನ್ನಾರೋ ದ್ವೇಷಕ್ಕಾಗಿ ಜಗಳ ಆಡಿರಬಹುದು. ಕೇವಲ ಕೆಲವರು ಮಾತ್ರ ಕೊಲೆ ಮಾಡಿರಬಹುದು. ಹೆಚ್ಚು ಅತ್ತೆಯರು ಸೊಸೆಯಂದಿರನ್ನು ಪೀಡಿಸಿದರೆಂದು ಕೈದಿಗಳಾಗಿದ್ದಾರೆ. ಇವರುಗಳಿಂದ ಮಾತ್ರ ಸಮಾಜಕ್ಕೆ ಅಪಾಯವೇ? ಇವರು ನಮ್ಮ ಕಾನೂನು ಹಾಗೂ ಕೋರ್ಟಿನ ದೃಷ್ಟಿಯಲ್ಲಿ ಘಾತುಕರು. ಆದರೆ…. ಯಾರು ಸಕ್ಷಮರಾಗಿ ಉಳಿದರೋ, ಯಾರೂ ಜನತೆಯ ಕೋಟ್ಯಂತರ ಆಸ್ತಿ ಗುಳುಂ ಮಾಡಿದರೋ, ಅವರು ಸಜ್ಜನರು, ಸರ್ವಗುಣ ಸಂಪನ್ನರು!

ಜೈಲು ತುಂಬಿರುವ ಕೈದಿಗಳಿಂದಾದ ಕೊಲೆಗಳಿಗಿಂತ ಹೆಚ್ಚಾಗಿ, ಸೇತುವೆ ಅಥವಾ ಕಟ್ಟಡಗಳ ಕುಸಿತದಿಂದ ಆಗಿರಬಹುದಾದ ದಾರುಣ ಹತ್ಯೆಗಳು, ಅಗ್ಗದ ರಸ್ತೆಗಳನ್ನು ನಿರ್ಮಿಸಿ ಅದರಲ್ಲಿ ಹಳ್ಳಗಳಾಗಿ ಬರ್ಬರ ಅಪಘಾತಗಳಿಗೆ ಕಾರಣಕರ್ತರಾಗುವವರು ಸಮಾಜಘಾತುಕರಲ್ಲವೇ? ತಪ್ಪು ವಿಧಾನದಲ್ಲಿ ತಯಾರಾದ ಅಥವಾ ಅನಗತ್ಯ ಔಷಧಿಗಳನ್ನು ಸೇವಿಸಿ ಸತ್ತವರು ಕಡಿಮೆಯೇ? ಸಾವಿರಾರು ಜನ ಹೆಂಡ ಸಾರಾಯಿ, ಬೀಡಿ ಸಿಗರೇಟ್‌, ಪಾನ್‌ ಮಸಾಲಾಗಳಿಂದ ಸಾಯುತ್ತಿದ್ದಾರೆ, ಇವುಗಳ ತಯಾರಿಕೆಗೆ ಅನುಮತಿ ಕೊಟ್ಟವರಾರು? ಇವುಗಳ ತಯಾರಕರು ಅಸಲಿ ದುಶ್ಮನ್‌ಗಳಲ್ಲವೇ? ಪ್ರತಿದಿನ ಯಾವುದೋ ಕಾರಣಕ್ಕಾಗಿ ಇಂಥ ಮಹನೀಯರು ಕೋರ್ಟಿನ ಕಟಕಟೆ ಹತ್ತಿದರೂ ರಾಜಾರೋಷವಾಗಿ ಜಾಮೀನು ಪಡೆದು ಮೆರೆಯುತ್ತಾರೆ. ಈ ಅಪ್ರಾಮಾಣಿಕರ ಅನ್ಯಾಯಗಳಿಗೆ ದೇಶ ಬೆಲೆ ತೆರುತ್ತಿದೆ. ನಮ್ಮ ರಾಷ್ಟ್ರದ ಬಡತನದ ಹಿಂದೆ ನಮ್ಮಲ್ಲಿನ ಕಣಕಣದ ಅಪ್ರಾಮಾಣಿಕತೆ ಹಾಗೂ ಅಂಥವರನ್ನು ಪೂಜಿಸುವ ಅಸಹಾಯಕರ ದೈನೇಸಿತನವಿದೆ. ನಮ್ಮ ಪುರಾಣದಲ್ಲಿನ ದೇವದೇವತೆಗಳು ಅಪ್ರಾಮಾಣಿಕರು (ಪುರಾಣಗಳನ್ನು ವಿವರವಾಗಿ ಪರಾಮರ್ಶಿಸಿ), ಮುಖಂಡರಂತೂ ಮಹಾ ಅಪ್ರಾಮಾಣಿಕರು (ಎಲ್ಲರೂ ಆರೋಪಿಗಳೇ!) ಅಧಿಕಾರಿಗಳೆಲ್ಲರೂ ಅಪ್ರಾಮಾಣಿಕತೆಯ ಆರಾಧಕರು (ಮರಣ ಪ್ರಮಾಣಪತ್ರ ಲಂಚವಿಲ್ಲದೆ ಸಿಗಲಾರದು), ಆದರೆ ಎಲ್ಲರೂ ಸಕ್ಷಮರೇ, ಹೀಗಾಗಿ ಹಾಯಾಗಿದ್ದಾರೆ!

ಹೊರಗೆಲ್ಲ ಥಳುಕು ಒಳಗೆಲ್ಲ ಹುಳುಕು

ನಗರವಾಸಿಗಳನ್ನು, ವಿಶೇಷವಾಗಿ ನಗರದ ಮಹಿಳೆಯರು ಹಾಗೂ ಮಕ್ಕಳನ್ನು ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ಚಿಂತೆಗೀಡು ಮಾಡುವುದು ಫುಟ್‌ಪಾತ್‌ಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವಿಕೆ ಮತ್ತು ಫುಟ್‌ಪಾತ್‌ಗಳನ್ನು ಸುವ್ಯವಸ್ಥಿತವಾಗಿ ಇಡದಿರುವುದು, ನಗರಗಳಲ್ಲಿ ವಾಸಿಸುವುದರ ಅರ್ಥ ಫುಟ್‌ಪಾತ್‌ಗಳ ಮೇಲೆ ಹಕ್ಕು ಸ್ಥಾಪಿಸುವುದು. ರಸ್ತೆಗಳು ಹಿಂದೆ ಕುದುರೆಗಳು, ಎತ್ತಿನ ಗಾಡಿಗಳು ಮತ್ತು ಕುದುರೆಯ ಗಾಡಿಗಳಿಗೆ ಸುರಕ್ಷಿತವಾಗಿದ್ದವು. ಆದರೆ ಈಗ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿರುವ ಸಾಮಾನ್ಯ ಜನಕ್ಕೆ ಫುಟ್‌ಪಾತ್‌ ಸುರಕ್ಷಿತ ಜಾಗವಾಗಿದೆ.

vihangam-2

ಸ್ವಾತಂತ್ರ್ಯಕ್ಕೆ ಮೊದಲು ಹಾಗೂ ಸ್ವಾತಂತ್ರ್ಯದ ನಂತರ ನಗರಗಳಲ್ಲಿ ಎಂದೂ ಫುಟ್‌ಪಾತ್‌ಗಳ ಹಕ್ಕನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಎಲ್ಲರೂ ಅವನ್ನು ಉಳಿದಿರುವ ನಿರುಪಯೋಗಿ ಜಮೀನು ಎಂದುಕೊಂಡು ಅದರ ಮೂಲೆಯಲ್ಲಿ ಸಣ್ಣ ಮನೆ ಕಟ್ಟಿ, ಮಾರ್ಕೆಟ್‌ ಆರಂಭಿಸಿ ರಸ್ತೆಗಳೇ ಫುಟ್‌ಪಾತ್‌ಗಳನ್ನು ನುಂಗಿದಂತಾಗಿಬಿಟ್ಟಿತು.

ಈಗ ಪೆಟ್ರೋಲ್, ಡೀಸೆಲ್ ‌ದುಬಾರಿಯಾಗುತ್ತಿದೆ. ಮಾಲಿನ್ಯ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ, ಕಾರು ಪಾರ್ಕಿಂಗ್‌ಗೆ ಜಾಗವಿಲ್ಲ. ಈ ಸಮಸ್ಯೆಗಳಿಂದ ಪಾರಾಗಲು ಫುಟ್‌ಪಾತೇ ಏಕೈಕ ಪರಿಹಾರವಾಗಿದೆ. ಫುಟ್‌ಪಾತ್‌ ಮೇಲೆ ಅಂಗಡಿ ಹಾಕುವುದನ್ನು ಬಡವರು ತಮ್ಮ ಹಕ್ಕೆಂದು ತಿಳಿದಿದ್ದಾರೆ. ಕೆಲವರು ಮನೆಯನ್ನೂ ಕಟ್ಟಿ ಈ ಹಕ್ಕನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತಾರೆ. ಅಂಗಡಿಗಳವರು ಫುಟ್‌ಪಾತ್‌ ಮೇಲೆ ತಮ್ಮ ವಸ್ತುಗಳನ್ನು ಹಾಕುವುದು ತಮ್ಮ ಜನ್ಮಸಿದ್ಧ ಹಕ್ಕೆಂದುಕೊಳ್ಳುತ್ತಾರೆ. ಹೆಚ್ಚು ಬುದ್ಧಿವಂತರು ಫುಟ್‌ಪಾತ್‌ನ್ನು ಆಕ್ರಮಿಸಿ ಪೂರ್ತಿ ಮನೆ ಕಟ್ಟಿಕೊಳ್ಳುತ್ತಾರೆ.

ಫುಟ್‌ಪಾತ್‌ನಲ್ಲಿ ಪಾರ್ಕಿಂಗ್‌ ಮಾಡುವುದು ಸಾಮಾನ್ಯ. ಕಾರು, ಬಸ್‌ ಫುಟ್‌ಪಾತ್‌ ಹತ್ತದಿದ್ದರೆ ಮೋಟರ್‌ ಬೈಕ್‌ ಅಂತೂ ಹತ್ತುತ್ತದೆ. ಕಸದ ರಾಶಿ ಹಾಕಲೂ ಎಲ್ಲರಿಗೂ ಇದೇ ಜಾಗ. ಅಂಗಡಿ, ಮನೆ ಸ್ವಚ್ಛಗೊಳಿಸಿದರೆ ಅದರ ಕಸ ಫುಟ್‌ಪಾತ್‌ ಮೇಲೆ. ಜಿಲೇಬಿ ಇತ್ಯಾದಿ ಸಿಹಿತಿಂಡಿಗಳನ್ನು ನೋಡ ಬೇಕಾದರೆ ಯಾವ ಫುಟ್‌ಪಾತ್‌ನಲ್ಲಿ ಹೆಚ್ಚು ನೊಣಗಳು ತುಂಬಿವೆಯೋ ಅಲ್ಲಿ ಸಿಗುತ್ತದೆ. ಹೆಚ್ಚು ನೊಣ ತುಂಬಿದ್ದರೆ ಅದೇ ಉತ್ತಮವಾದ ಸಿಹಿ ತಿಂಡಿ.

ಅಂಗಡಿಯವರನ್ನು ಬಿಡಿ, ಸರ್ಕಾರಿ ಇಲಾಖೆಯವರು ಕೂಡ ತಮ್ಮ ನಿರುಪಯೋಗಿ ವಸ್ತುಗಳನ್ನು ಈ ಫುಟ್‌ಪಾತ್‌ಗಳಲ್ಲಿ ಹಾಕಿರುತ್ತಾರೆ.

ಮೋರಿಗಳ ಮೇಲೆ ಇರುವ ಫುಟ್‌ಪಾತ್‌ನಲ್ಲಿ ಚೇಂಬರ್‌ನ ಮುಚ್ಚಳಗಳನ್ನು ಕಳ್ಳತನ ಮಾಡಿಸುವುದು ಇವರ ಕೆಲಸ. ಮೋರಿಗಳನ್ನು ಮುಚ್ಚಿರುವ ಕಲ್ಲುಗಳೇ ಫುಟ್‌ಪಾತ್‌ ಆಗಿದ್ದು, ಅಲ್ಲಿ ಕೆಳಗೆ ಎಚ್ಚರಿಕೆಯಿಂದ ನೋಡಿ ನಡೆಯುವ ಶಿಕ್ಷೆಯನ್ನೂ ಕೊಡುತ್ತವೆ. ಆ ಕಲ್ಲುಗಳು ಯಾವಾಗ ಬೇಕಾದರೂ ತಮ್ಮ ಜಾಗದಿಂದ ಅಲುಗಾಡಿ ಮೇಲೆ ನಡೆಯುವವರು ಮೋರಿಯಲ್ಲಿ ಬಿದ್ದು ಹೋಳಿ ಆಚರಿಸಬೇಕಾಗುತ್ತದೆ.

ಇದು ಮೂರ್ಖರ ನಾಡು. ಮೂರ್ಖ ಸರ್ಕಾರಿ ನೌಕರರ ನಾಡು. ಸೋಮಾರಿಗಳು, ಆಸೆಬುರಕರ ನಾಡು. 4 ಅಡಿಗಳ ಫುಟ್‌ಪಾತ್‌ಮೇಲೂ ಕನಿಕರವಿಲ್ಲ. ಆ ಫುಟ್‌ಪಾತ್‌ ಮೇಲೆ ನಗರಷ್ಟೇ ಅಲ್ಲ, ಹಳ್ಳಿಗಳ ಬದುಕೂ ಸಹ ಅವಲಂಬಿತವಾಗಿದೆ.

ಫುಟ್‌ಪಾತ್‌ಗಳು ಉಗಿಯಲು, ಮೂತ್ರ ಹಾಗೂ ಮಲವಿಸರ್ಜನೆ ಮಾಡಲು ಒಳ್ಳೆಯ ಜಾಗವಾಗಿದೆ. ಇದು ನಮ್ಮ ಮಹಾನ್ ಸಭ್ಯತೆಯ ಗುರುತಾಗಿದೆ. ತ್ರಿವರ್ಣ ಧ್ವಜ ಹಾಗೂ ಭಗವಾ ಧ್ವಜಗಳ ಬಟ್ಟೆಗಳು ಕಾಟನ್‌ನಿಂದ ರೇಷ್ಮೆಯಾಗಿವೆ. ಆದರೆ ಫುಟ್‌ಪಾತ್‌ಗಳು ಕಳೆಗುಂದಿ, ಹಾಳಾಗಿವೆ.

ಮಸಣದ ಹೂಗಳ ಸಂಘರ್ಷಕ್ಕೆ ಕೊನೆಯುಂಟೆ?

ವೇಶ್ಯೆಯರ ಉದ್ಯೋಗವನ್ನು ಸಾಮಾನ್ಯವಾಗಿ ಅಸಾಮಾಜಿಕ ಹಾಗೂ ಕೀಳು ಎನ್ನಲಾಗುತ್ತದೆ. ಸರ್ಕಾರಗಳಲ್ಲದೆ, ಕಾನೂನು ಹಾಗೂ ಮಹಿಳೆಯರ ಹಿತಕ್ಕಾಗಿ ದುಡಿಯುವ ಸಂಸ್ಥೆಗಳೂ ಸಹ ಈ ಪತಿತೆಯರ ಉದ್ಧಾರಕ್ಕೆ ಹೋರಾಡುತ್ತಿರುತ್ತವೆ. ಆ ಮಹಿಳೆಯರನ್ನು ವೇಶ್ಯಾ ಕೇಂದ್ರಗಳಿಂದ ಹೊರತರುವವರಲ್ಲಿ ಯಶಸ್ವಿಯಾದರೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ಇಂಗ್ಲೆಂಡ್‌ನ ಒಂದು ಪತ್ರಿಕೆ `ದಿ ನೇಶನ್‌’ನಲ್ಲಿ ಮೆಲಿಸಾ ಗೀರಾ ಗ್ರಾಂಟ್‌ ಈ ಉದ್ಯೋಗದ ಬಗ್ಗೆ ಸಮರ್ಥಿಸುತ್ತಾ ಈ ವೃತ್ತಿಗೂ ಇತರ ದೇಶಗಳಲ್ಲಿ ಎಲ್ಲ ಮಹಿಳೆಯರಿಗೆ ಸಿಗುವ ಗೌರವ ಸಿಗಬೇಕು ಎನ್ನುತ್ತಾರೆ.

ವೇಶ್ಯೆಯರ ಉದ್ಯೋಗವನ್ನು ತಪ್ಪೆನ್ನುವ ಸಮಾಜ ಲಕ್ಷಾಂತರ ಮಹಿಳೆಯರು ಗೌರವದಿಂದ ಬದುಕುವ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಅವರ ಉದ್ಯೋಗವನ್ನು ಅಪರಾಧವೆಂದು ಹೇಳಿ ಪಾರದರ್ಶಕ ಪಂಜರಗಳೊಳಗೆ ಬಂಧಿಸಿಡಲಾಗುತ್ತದೆ. ಅವರಿಗೆ ಶಿಕ್ಷಣ ಸಿಗುವುದಿಲ್ಲ, ಸೌಲಭ್ಯಗಳೂ ಸಿಗುವುದಿಲ್ಲ. ವೈದ್ಯಕೀಯ ಸಹಾಯ ಸಿಗುವುದಿಲ್ಲ. ಅವರ ಮಕ್ಕಳಿಗೆ ಭೇದಭಾವ ಮಾಡಲಾಗುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಒಮ್ಮೊಮ್ಮೆ ಕ್ಯಾರೆಕ್ಟರ್‌ ಸರ್ಟಿಫಿಕೇಟ್‌ ಕೇಳಲಾಗುತ್ತದೆ. ವೇಶ್ಯೆಯರಿಗೆ ಈ ಸರ್ಟಿಫಿಕೇಟ್‌ ಎಂದೂ ದೊರೆಯುವುದಿಲ್ಲ.

ವೇಶ್ಯೆಯರ ಉದ್ಯೋಗ ಪುರುಷರನ್ನು ಅವಲಂಬಿಸಿದೆ. ಪುರುಷರು ಆ ಉದ್ಯೋಗ ನಡೆಸುತ್ತಿದ್ದರೂ ಶುದ್ಧರು, ಪ್ರಾಮಾಣಿಕರು ಮತ್ತು ನಿರ್ದೋಷಿಗಳು ಎನ್ನಿಸಿಕೊಳ್ಳುತ್ತಾರೆ, ಇದು ತಪ್ಪು. ವೇಶ್ಯೆಯರು ಸಾಮಾನ್ಯ ಮಹಿಳೆಯರು ಮಾಡದಂತಹ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ, ಒಂದು ಬಿಟ್ಟು. ಅದು ಏನೆಂದರೆ ಅವರು ಒಬ್ಬ ಪುರುಷನ ಬದಲು ಹಲವು ಪುರುಷರೊಂದಿಗೆ ಮಲಗುತ್ತಾರೆ. ಹಣಕ್ಕಾಗಿ ದೇಹ ಮಾರಿಕೊಳ್ಳುವ ವಿಷಯ ಬಂದಾಗ ಆ ಆರೋಪ ಎಲ್ಲರ ಮೇಲೂ ಬರುತ್ತದೆ, ಏಕೆಂದರೆ ಯಾವ ಪತ್ನಿಗೆ ತಾನೆ ಪತಿಯ ಹಣ ಬೇಡ? ಇದಕ್ಕೆ ಪ್ರತಿಯಾಗಿ ಕೆಲವು ಪತ್ನಿಯರು ಪತಿಗೆ ಲೈಂಗಿಕ ಸುಖ ಕೊಡುವುದಕ್ಕೆ ಹೆಚ್ಚು ಹಣ ಕೇಳುತ್ತಾರೆ. ಪತಿಯೊಡನೆ ಸಹವಾಸ ಇಲ್ಲದಿದ್ದರೂ ಸಹ. ಈ ಪತ್ನಿಯರು ತಾವು ಏನೂ ಕೊಡದೆ ಪುರುಷರ ಜೇಬನ್ನು ಖಾಲಿ ಮಾಡುತ್ತಾರೆ. ಅಂತಹವರು ಗ್ರಾಹಕರನ್ನು ಲೂಟಿ ಮಾಡುವ ವೇಶ್ಯೆಯರಿಗಿಂತ ಹೆಚ್ಚು ಕೆಟ್ಟವರು.

ದೇಹವನ್ನು ನಿರಂತರವಾಗಿ ಅಥವಾ ಕೆಲವು ಗಂಟೆಗಳ ಕಾಲ ವಿಕ್ರಯಿಸುವುದು ಒಂದು ವ್ಯವಹಾರವಾಗಿದೆ. ಆದರೆ ಮೆಲಿಸಾ ಗೀರಾ ಗ್ರಾಂಟ್‌ ಹೇಳುವುದೇನೆಂದರೆ ವೇಶ್ಯೆಯರು ಮತ್ತು ಸೆಕ್ಸ್ ಉದ್ಯೋಗದಲ್ಲಿ ತೊಡಗಿಕೊಂಡಿರುವ ಪೋರ್ನ್‌ ಸ್ಟಾರ್‌ಗಳು, ಬಾರ್‌ ಡ್ಯಾನ್ಸರ್‌ಗಳು ಇತ್ಯಾದಿಗಳ ಜೀವನ ಬಹಳ ದುಸ್ತರವಾಗಿರುತ್ತದೆ. ಕೆಲಸದ ಅವಧಿಯೂ ಹೆಚ್ಚು. ಅವರು ಕಾಯಿಲೆಗಳಿಂದ ಬಳಲ ಬೇಕಾಗುತ್ತದೆ. ಬಹಳಷ್ಟು ಪೈಪೋಟಿ ತುಂಬಿರುವ ಬದುಕಾಗಿದೆ. ಅವರು ಮಕ್ಕಳಿಂದ ಅಗಲಿರಬೇಕಾಗುತ್ತದೆ. ಹಿಂಸೆಯನ್ನು ಎದುರಿಸಬೇಕಾಗುತ್ತದೆ. ದುರ್ಗಂಧಯುಕ್ತ ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಜೊತೆಗೆ ಸಮಾಜದಿಂದ ತಿರಸ್ಕಾರ ಬೇರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ