ಡ್ಯಾಡಿಯ ಮಗಳು

ತಾರಾ ಮಕ್ಕಳು ಸಿನಿಮಾರಂಗದಲ್ಲಿ ಮೆರೆದಾಡುತ್ತಿರುವಾಗ ನಿರ್ದೇಶಕರ ಮಕ್ಕಳು ಸಹ ತಾವೇನು ಕಡಿಮೆ ಇಲ್ಲ ಅಂತ ಬೆಳ್ಳಿತೆರೆಗೆ ಲಗ್ಗೆ ಹಾಕುತ್ತಿದ್ದಾರೆ. ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ಹಾಗೂ ರೇಖಾದಾಸ್‌ ಅವರ ಪುತ್ರಿ ಶ್ರಾವ್ಯಾ ತನ್ನ ಸ್ವಂತ ಸಾಮರ್ಥ್ಯದಿಂದ ನಟಿಯಾಗಿ ಮಿಂಚಿದ್ದು ಗೊತ್ತಿರುವ ಸಂಗತಿ. ಶ್ರಾವ್ಯಾ ತಾನೊಬ್ಬ ಪ್ರತಿಭೆಯುಳ್ಳ ಕಲಾವಿದೆ ಎಂದು ಕಿರುತೆರೆ ಮೂಲಕವೇ ಸಾಬೀತುಪಡಿಸಿದ್ದಳು. ಶ್ರಾವ್ಯಾ ಸಿನಿಮಾರಂಗಕ್ಕೂ ಕಾಲಿಟ್ಟಾಗ ಆಕೆಗೆ ಯಾರೂ ಗಾಡ್ ‌ಫಾದರ್‌ ಇರಲಿಲ್ಲ. ಓಂಪ್ರಕಾಶ್‌ ಕೂಡಾ ಶ್ರಾವ್ಯಾಳನ್ನು ದೊಡ್ಡದಾಗಿ ಲಾಂಚ್‌ ಮಾಡಿರಲಿಲ್ಲ. ತನ್ನ ಶ್ರಮದ ಫಲದಿಂದ ಅವಕಾಶವನ್ನು ಪಡೆದ ಶ್ರಾವ್ಯಾ ಇತ್ತೀಚೆಗೆ `ರೋಸ್’ ಚಿತ್ರದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾಳೆ.

`ರೋಸ್‌’ ಚಿತ್ರ ಶ್ರಾವ್ಯಾಳಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ತಂದೆ ಮಗಳನ್ನು ಡೈರೆಕ್ಟ್ ಮಾಡೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಬಹಳ ಬೇಗ ಸಿಕ್ಕಿತು. ತಮಿಳು ಚಿತ್ರವೊಂದರ ರೀಮೇಕಾಗಿರುವ `ಕಟ್ಟೆ’ ಚಿತ್ರದಲ್ಲಿ ಓಂಪ್ರಕಾಶ್‌ನಿರ್ದೇಶಕರಾಗಿದ್ದು, ನಾಯಕಿ ಪಾತ್ರವನ್ನು ಶ್ರಾವ್ಯಾ ನಿರ್ವಹಿಸಿದ್ದಾಳೆ.

`ಚಿಕ್ಕ ಮಗುವಾಗಿದ್ದಾಗಲೇ ಇವಳು ತುಂಬಾನೇ ಚೂಟಿ, ಸಖತ್‌ ಟ್ಯಾಲೆಂಟೆಡ್‌. ಕ್ಯಾಮೆರಾ ಮುಂದೆ ಅವಳು ಒಬ್ಬ ನಟಿ ಮಾತ್ರ. ತಂದೆ ಮಗಳು ಅಂತ ಸೆಟ್‌ನಲ್ಲಿ ಸಲುಗೆ ತೋರಿಸುವುದಿಲ್ಲ,’ ಎಂದು ಓಂಪ್ರಕಾಶ್‌ ಹೇಳಿದ್ದಾರೆ. ನಾನು ಅಪ್ಪನಿಂದ ಒಮ್ಮೆಯೂ ಬೈಸಿಕೊಂಡಿಲ್ಲ. ಚೆನ್ನಾಗಿ ನಟಿಸದೇ ಹೋದರೆ ಮಾತ್ರ ಬಯ್ಯುತ್ತಾರೆ. ಅವರಿಂದ ಹೊಗಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ,’ ಎಂದು ಶ್ರಾವ್ಯಾ ಹೇಳುತ್ತಾಳೆ.

ಉಪ್ಪಿ-2 ರುಚಿ

_MG_0754

ಉಪೇಂದ್ರ ಏನೇ ಮಾಡಲಿ ಅದು ಟ್ರೆಂಡ್‌ ಸೆಟ್‌ ಮಾಡುತ್ತೆ. ಇದೀಗ ಅವರ `ಉಪ್ಪಿ-2′ ಚಿತ್ರದ ಟ್ರೇಲರ್‌ ನೋಡಿರೋರಿಗೆ ಅದರ  ಅನುಭವ ಆಗಿರುತ್ತೆ. ಇತ್ತೀಚೆಗೆ ಬಿಡುಗಡೆಯಾದಂಥ `ಸೂಪರ್ರೊ ರಂಗ’ ಚಿತ್ರದಲ್ಲೂ ಸಹ ಉಪೇಂದ್ರ ತಮ್ಮ ವಿಭಿನ್ನವಾದ ಗೆಟಪ್‌ಗಳಿಂದ ಅಭಿಮಾನಿಗಳ ಹೃದಯ ಗೆದ್ದರು. ಇಪ್ಪತ್ನಾಲ್ಕು ತಾಸು ಸಿನಿಮಾ ಬಗ್ಗೆ ಕನಸು ಕಾಣುವ ಉಪೇಂದ್ರ ಇದೀಗ `ಬಸವಣ್ಣ’ ಚಿತ್ರ ಮುಗಿಸಿ ಬಂದಿದ್ದಾರೆ. ಒಂದು ಚಿತ್ರ ಕೈಗೆತ್ತಿಕೊಂಡರೆ ಅವರು ಬೇರೆ ವಿಷಯದ ಬಗ್ಗೆ ಚರ್ಚಿಸುವುದಿಲ್ಲ. `ಉಪ್ಪಿ-2′ ಚಿತ್ರವನ್ನು ನಿರ್ದೇಶಿಸುವುದರಲ್ಲಿ ನಿರತರಾಗಿರುವ ಉಪ್ಪಿ `ಸೂಪರ್‌’ ಚಿತ್ರದ ನಂತರ ತಮ್ಮದೇ ಬ್ಯಾನರ್‌ನಲ್ಲಿ `ಉಪ್ಪಿ-2′ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. `ಸೂಪರ್‌’ ಚಿತ್ರದಲ್ಲಿ ನಯನತಾರಾಳನ್ನು ಕರೆತಂದಿದ್ದ ಉಪ್ಪಿ ಈ ಬಾರಿ ರಷ್ಯನ್‌ ಸುಂದರಿಯನ್ನು ಆರಿಸಿದ್ದಾರೆ. ಅರಿವಾ ರಷ್ಯನ್‌ ಬಾಲೆಯಾದರೂ ಮುಂಬೈನ ಬಾಲಿವುಡ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಂಡಂಥ ಬೆಡಗಿ. `ಪಾರ್ಟಿ 2′ ಚಿತ್ರದಲ್ಲಿ ನಟಿಸಿದ್ದ ಅರಿವಾ ಅತ್ಯುತ್ತಮ ಮಾಡೆಲ್ ‌ಕೂಡಾ ಆಗಿದ್ದಾಳೆ. ಅರಿವಾಳಿಗೆ ಉಪ್ಪಿ ಎಂಥ ಪಾತ್ರ ಸೃಷ್ಟಿ ಮಾಡಿದ್ದಾರೋ ಎಂಬುದೇ ಕುತೂಹಲ ಹುಟ್ಟಿಸುವಂಥ ಸಂಗತಿ. ಉಪೇಂದ್ರ ಇದ್ದ ಕಡೆ ಏನಾದರೂ ಸ್ಪೆಷಾಲಿಟಿ ಇರಲೇಬೇಕು. `ಉಪ್ಪಿ-2′ ರುಚಿಯಾಗಿರುತ್ತಾ… ನೋಡೋಣ.

ಡಾ. ರವಿಚಂದ್ರನ್‌

Brahma-(8)

ಇದೇನಿದು ಕ್ರೇಜಿ ಸ್ಟಾರ್‌ಗೆ ಡಾಕ್ಟರೇಟ್‌ ಪದವಿ ಸಿಕ್ಕಿಬಿಡ್ತಾ? ಹಾಗೇನಿಲ್ಲ ಬಿಡಿ. ಅವರೀಗ ಡಾಕ್ಟರ್‌ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಅಷ್ಟೆ. ಇವರಿಗೆ ಡಾಕ್ಟರ್‌ ಪಾತ್ರ ಸೃಷ್ಟಿಸಿರೋದು ಮತ್ಯಾರಲ್ಲ ನಿರ್ಮಾಪಕ, ನಿರ್ದೇಶಕ, ಪತ್ರಕರ್ತರಾಗಿರುವ ಇಂದ್ರಜಿತ್‌ ಲಂಕೇಶ್‌. ರವಿಚಂದ್ರನ್‌ ಅವರ ಸೆಕೆಂಡ್‌ ಇನ್ನಿಂಗ್ಸ್ `ಮಾಣಿಕ್ಯ’ ಚಿತ್ರದ ಮೂಲಕ ಶುರುವಾದಾಗಿನಿಂದ ಒಳ್ಳೆ ಪಾತ್ರಗಳು ಅವರ ಬುಟ್ಟಿಗೆ ಬೀಳುತ್ತಲೇ ಇವೆ.

`ದೃಶ್ಯ’ ಚಿತ್ರ ಕೂಡಾ ಯಶಸ್ಸು ಕಂಡಿತು. ಅಪ್ಪನ ಪಾತ್ರವನ್ನು ವಿಭಿನ್ನವಾಗಿ ಎಲ್ಲರ ಮನಮುಟ್ಟುವಂತೆ ನಿಭಾಯಿಸುತ್ತಿರುವ ರವಿಚಂದ್ರನ್‌ ಒಬ್ಬ ಮೆಚ್ಯೂರ್ಡ್ ಆರ್ಟಿಸ್ಟಾಗಿ ತೆರೆಯ ಮೇಲೆ ಮಿನುಗುತ್ತಿದ್ದಾರೆ. ರವಿಚಂದ್ರನ್‌ರ ಈ ಹೊಸ ರೂಪವನ್ನು ಕನ್ನಡ ಸಿನಿಮಾರಂಗದವರು ಸಂತೋಷವಾಗಿಯೇ ಬರಮಾಡಿಕೊಂಡಿದ್ದಾರೆ ಅನಿಸುತ್ತೆ. ರವಿಚಂದ್ರನ್‌ಗೆ ಈ ಹೊಸ ಇಮೇಜನ್ನು ಕೊಟ್ಟಿದ್ದು ಸುದೀಪ್‌ ಅಂತಾನೇ ಹೇಳಬಹುದು. ಸುದೀಪ್‌ ರವಿಯನ್ನು ಭೇಟಿ ಮಾಡಿ `ಮಾಣಿಕ್ಯ’ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ವಿವರಿಸಿ ನೀವು ಮಾಡುವುದಾದರೆ ಮಾತ್ರ ಈ ಚಿತ್ರ ಮಾಡುತ್ತೇನೆ. ಬೇರೆ ಯಾವುದೇ ನಟರೂ ಆ ಪಾತ್ರಕ್ಕೆ ಹೊಂದುವುದಿಲ್ಲ. ಮಾಡುವುದಾದರೆ ನೀವೇ ಮಾಡಬೇಕು ಎಂದಾಗ ರವಿಚಂದ್ರನ್‌ ಸುದೀಪ್‌ ಬಗ್ಗೆ ಅವರಿಗಿದ್ದ ಪ್ರೀತಿಯಿಂದ ಹಾಗೂ ಒಬ್ಬ ನಿರ್ದೇಶಕ ಕಂಡ ಕನಸನ್ನು ನನಸು ಮಾಡಲು ಒಪ್ಪಿದರು. ಅಂದಹಾಗೆ ರವಿಚಂದ್ರನ್‌ ಈಗ ಡಾಕ್ಟರ್‌ ಪಾತ್ರವನ್ನು ಇಂದ್ರಜಿತ್ ಗಾಗಿ ಮಾಡಲಿದ್ದಾರೆ. ಅವರ ವೃತ್ತಿಯಲ್ಲಿ ಇದೇ ಮೊದಲ ಬಾರಿ ಡಾಕ್ಟರ್‌ ಪಾತ್ರ ಮಾಡುತ್ತಿರುವುದು.

ವಾಹ್….ಕ್ಯಾ ಜೋಡಿ!

IMG-(51)

ಏ…. ಮಾದೇಶ….. ಅಂತ ಸ್ಕೂಲ್ ‌ಯೂನಿಫಾರಂನಲ್ಲಿ ಐಶೂ ಕೂಗಿದಾಗ ಇಡೀ ಚಿತ್ರರಂಗ ಆ ಜೋಡಿಯನ್ನು ನೋಡಿ ಬೆರಗಾಗಿತ್ತು. `ಚೆಲುವಿನ ಚಿತ್ತಾರ’ ಚಿತ್ರ ಸೂಪರ್‌ ಹಿಟ್‌ ಆಯಿತು. ಗಣೇಶ್‌ ಅಮೂಲ್ಯಾ ಯಶಸ್ವಿ ಜೋಡಿಯಾದರೂ ಅವರಿಬ್ಬರು ಮತ್ತೆ ಒಟ್ಟಿಗೆ ನಟಿಸಲು ವರ್ಷಗಳೇ ಬೇಕಾಯ್ತು. ಈ ಜೋಡಿಯನ್ನು ಹೇಗಾದರೂ ಮಾಡಿ ಒಂದುಗೂಡಿಸಬೇಕೆಂದು ಎಲ್ಲರೂ ಪ್ರಯತ್ನಿಸುತ್ತಲೇ ಇರುವಾಗ ನಿರ್ಮಾಪಕ ಸುರೇಶ್‌ `ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದಲ್ಲಿ ಅವರಿಬ್ಬರನ್ನು ಒಟ್ಟಿಗೆ ತರುವಲ್ಲಿ ಸಫಲರಾದರು. ಈ ಚಿತ್ರ ಕೂಡಾ ಸೂಪರ್‌ ಹಿಟ್‌. ಗಣೇಶ್‌ ಅಮೂಲ್ಯಾ ಈಗ ಮತ್ತೆ `ಖುಷಿ ಖುಷಿಯಾಗಿ’ ಚಿತ್ರದ ಮೂಲಕ ತೆರೆಯ ಮೇಲೆ ಮಿಂಚಲಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳನ್ನು ನೋಡಿರುವವರು ವಾಹ್… ಎನ್ನುತ್ತಿದ್ದಾರೆ. ಅಮೂಲ್ಯಾ ಕೂಡಾ ಸಾಕಷ್ಟು ಬದಲಾಗಿದ್ದಾಳೆ. ಯೂಥ್‌ ಲುಕ್‌ನಲ್ಲಿ ಮಿಂಚುತ್ತಾಳೆ. ಚಿತ್ರದ ಹಾಡುಗಳನ್ನು ಬಹಳ ಸ್ಟೈಲಿಶ್‌ ಆಗಿ ಶೂಟ್‌ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಜೋಡಿಗಳು ಸಾಕಷ್ಟು ತೆರೆ ಮೇಲೆ ಮೆರೆದಿರುವುದನ್ನು ನಾವು ನೋಡಿದ್ದೇವೆ. ಹಿಟ್‌ಜೋಡಿಯಾದ ಮೇಲೂ ಸಹ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹಿಂದುಮುಂದು ನೋಡುವ ಇತ್ತೀಚಿನ ದಿನಗಳಲ್ಲಿ ಗಣೇಶ್‌ಅಮೂಲ್ಯಾ ಮೂರನೇ ಬಾರಿ `ಖುಷಿ ಖುಷಿಯಾಗಿ’ ಜೋಡಿಯಾಗಿದ್ದಾರೆ. ಹ್ಯಾಟ್ರಿಕ್‌ ಆಗುತ್ತಾ….? ನೋಡೋಣ.

ಹೊಸ ಹುಡುಗಿ ರುಕ್ಷಾ

IMG_217-8

ಮಾಡೆಲಿಂಗ್‌ ಲೋಕದಿಂದ ಬಂದಿಳಿದವಳಂತೆ ಮಿಂಚುವ ಎತ್ತರ ನಿಲುವಿನ ಬೆಡಗಿ ರುಕ್ಷಾ `ಕಟ್ಟೆ’ ಚಿತ್ರದಲ್ಲಿನ ನಟಿ. ಚೇತನ್‌ಗೆ ಜೋಡಿಯಾಗಿ ನಟಿಸುತ್ತಿದ್ದಾಳೆ. ರುಕ್ಷಾಳಿಗಿದು ಮೊದಲ ಚಿತ್ರವಾದರೂ ಕ್ಯಾಮೆರಾ ಮುಂದೆ ನಿಂತಾಗ ಅನುಭವವಿರುವಂತೆ ಕಾಣಿಸುತ್ತಿದ್ದಳಂತೆ. ಜ್ಯೂವೆಲರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ರುಕ್ಷಾ ಪರಭಾಷೆಗಳಲ್ಲಿ ಅವಕಾಶ ಪಡೆಯುತ್ತಿರುವಂಥ ನಟಿ. ಬೆಂಗಳೂರಿನವಳೇ ಆದ ರುಕ್ಷಾಗೆ ಕನ್ನಡದಲ್ಲಿ ನಟಿಸುವ ಆಸೆ. ಖ್ಯಾತ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಿರುವುದು ನಿಜಕ್ಕೂ ತನ್ನ ಅದೃಷ್ಟ ಎಂದು ಹೇಳಿಕೊಳ್ಳುವ ಈ ನಟಿಗೆ ಜೋಡಿಯಾಗಿ ಕಿರುತೆರೆ ಸ್ಟಾರ್‌ ಚೇತನ್‌ ನಟಿಸುತ್ತಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ಹೊಸಬರಿಗೆ ಬರವಿಲ್ಲ. ದಿನಕ್ಕೊಬ್ಬ ನಟ ನಟಿಯರು ಬರುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ಹೊಸ ಹುಡುಗಿ ತನ್ನ ಪ್ರತಿಭೆ ಮೂಲಕ ಎಲ್ಲರನ್ನು ಗೆಲ್ಲಲು ಹೊರಟಂತಿದೆ. ಒಳ್ಳೆ ಅವಕಾಶಗಳ ನಿರೀಕ್ಷೆಯಲ್ಲಿರುವ ರುಕ್ಷಾಳನ್ನು ಕನ್ನಡದ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರಾ ಎಂದು ಕಾದು ನೋಡಬೇಕು.

ಹಲೋ ರಾಗಿಣಿ ಮೇಡಂ

IMG_355-4

ರವಿಗರಣಿ ನಿರ್ಮಾಣದಲ್ಲಿ ಆರ್‌. ರಘುರಾಜ್‌ ನಿರ್ದೇಶನದ `ನಮಸ್ತೇ ಮೇಡಂ’ ಚಿತ್ರ.  `ನಮಸ್ತೇ ಮೇಡಂ’ ತೆಲುಗಿನಲ್ಲಿ ಯಶಸ್ವಿಯಾದ `ಮಿಸ್ಸಮ್ಮ’ ಚಿತ್ರದ ರೀಮೇಕ್‌. ಚಿತ್ರದ ಪ್ರಮುಖ ಆಕರ್ಷಣೆ ರಾಗಿಣಿ ದ್ವಿವೇದಿ. ಲೇಡಿ ಬಾಸ್‌ ಪಾತ್ರದಲ್ಲಿ ಕಿಟ್ಟಿಯನ್ನು ಆಟ ಆಡಿಸುವ ರಾಗಿಣಿಗೆ ಇದು ಹೇಳಿ ಮಾಡಿಸಿದ ಚಿತ್ರ ಎನ್ನಲಾಗುತ್ತಿದೆ. ಸಾಕಷ್ಟು ಬೋಲ್ಡ್ ಆಗಿ ಇಡೀ ಚಿತ್ರವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿರುವ ರಾಗಿಣಿ ತನ್ನ ಅಭಿಮಾನಿಗಳು ಖುಷಿ ಆಗುವಷ್ಟು ರಂಜಿಸಿದ್ದಾಳೆ. ಕಿಟ್ಟಿ ಪತ್ನಿಯಾಗಿ ನಿಕಿಶಾ ಪಟೇಲ್ ಕಾಣಿಸಿದ್ದಾಳೆ. ಬಾಸ್‌ ಮತ್ತು ಪತ್ನಿ ನಡುವೆ ಚಟ್ನಿಯಾಗುವ ಕಿಟ್ಟಿ ಪಾತ್ರ ಕೂಡಾ ಅಷ್ಟೇ ನಗುವಿನ ಅಲೆ ತೇಲಿಸುತ್ತದಂತೆ. ಚಿತ್ರದ ಹಾಡುಗಳನ್ನು ನೋಡಿದಾಗ ರಾಗಿಣಿ ತನ್ನ ಬೋಲ್ಡ್ ಲುಕ್ಕಿನ ಖದರ್‌ ತೋರಿಸಿದ್ದಾಳೆ. `ನಮಸ್ತೇ ಮೇಡಂ’ ಎನ್ನುವುದರ ಬದಲು ರಾಗಿಣಿ ಮೇಡಂ ಎಂದೇ ಕರೆಯಬಹುದು. ರಾಗಿಣಿಯ ಬಿಂದಾಸ್‌ ಅಭಿನಯ ಚಿತ್ರದ ಪ್ಲಸ್‌ ಪಾಯಿಂಟ್‌. ರಾಗಿಣಿ ಗುಂಡಿನ ಹಾಡೊಂದರಲ್ಲೂ ಸಹ ಟಪ್ಪಾಂಗುಚ್ಚಿ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದ್ದಾಳೆ. ಒಟ್ಟಿನಲ್ಲಿ ರಾಗಿಣಿ ಏನೇ ಮಾಡಲಿ ಅದು ಸುದ್ದಿಯಾಗುತ್ತೆ. `ನಮಸ್ತೆ ಮೇಡಂ’ ಮೂಲಕ ಕನ್ನಡ ಚಿತ್ರರಂಗದ ಹೊಸ ಮೇಡಂ ಆದರೂ ಆಶ್ಚರ್ಯವಿಲ್ಲ.

ಹ್ಯಾಟ್ರಿಕ್‌ ಡೈರೆಕ್ಟರ್‌

IMG_996-2

ತನ್ನ ಕಾಮಿಡಿ ನಟನೆಯಿಂದ ಸಿನಿಮಾರಂಗದಲ್ಲಿ ಹೆಜ್ಜೆ ಇಟ್ಟಂಥ ನಾಗಶೇಖರ್‌ನೊಳಗೊಬ್ಬ ಅತ್ಯುತ್ತಮ ನಿರ್ದೇಶಕ ಅಡಗಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಗಣೇಶ್‌ ನಾಯಕತ್ವದ `ಅರಮನೆ’ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದಾಗ ನಾಗಶೇಖರ್‌ನ ಹೊಸ ಪ್ರತಿಭೆ ಯಶಸ್ಸಿನತ್ತ ಕೊಂಡೊಯ್ದಿತ್ತು. `ಅರಮನೆ’ ಒಂದು ವಿಭಿನ್ನ ರೀತಿಯ ಚಿತ್ರವಾಗಿತ್ತು. ಅದಾದ ನಂತರ ಕಿಟ್ಟಿ ರಮ್ಯಾ ನಟಿಸಿದ `ಸಂಜು ವೆಡ್ಸ್ ಗೀತ’ ನಾಗ್‌ ನಿರ್ದೇಶನದ ಎರಡನೇ ಚಿತ್ರ ಕೂಡಾ ಯಶಸ್ಸಿನ ಜೊತೆ ಪ್ರಶಸ್ತಿಗಳನ್ನು ಪಡೆಯಿತು. ಸೂಕ್ಷ್ಮ ಕಥಾ ವಸ್ತುವನ್ನು ಆರಿಸಿಕೊಂಡು ಅಷ್ಟೇ ನೀಟಾಗಿ ಮಾಡಿದ್ದ ನಾಗ್‌ ಹ್ಯಾಟ್ರಿಕ್‌ನತ್ತ ಹೆಜ್ಜೆ ಹಾಕತೊಡಗಿದಾಗ ಅವರು ಆರಿಸಿಕೊಂಡ ಚಿತ್ರ `ಮೈನಾ.’ ಸುಂದರವಾದ ಚಿತ್ರ. ಅಷ್ಟೇ ಸುಂದರವಾದ ದೂಧ್‌ ಸಾಗರ್‌ ಲೋಕೇಶನ್‌ ತಮ್ಮ ಚಿತ್ರಕ್ಕೆ ಬ್ಯಾಕ್‌ ಡ್ರಾಪಾಗಿ ಬಳಸಿದ್ದ ನಾಗ್‌ರ `ಮೈನಾ’ ಚಿತ್ರ ಕೂಡಾ ಪ್ರಶಂಸೆಗೊಳಗಾಯ್ತು. ಪ್ರಶಸ್ತಿಗಳು ಹರಿದುಬಂದವು. ಈ ಚಿತ್ರದ ಹಾಡುಗಳು ಸಾಕಷ್ಟು ಹಿಟ್‌ ಆದ. ನಾಗಶೇಖರ್‌ ಈಗ ನಟರಾಗಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಸ್ಲಿಮ್ ಆಗಿದ್ದಾರೆ. ಗುಟ್ಟೇನು ಅಂತ ಕೇಳಿದರೆ ಒಂದೈದು ಲಕ್ಷ ಸಾಲ ಮಾಡಿ ನೋಡಿ, ಸಾಲ ಕೇಳಲು ಬರ್ತಾರಲ್ಲ ಅವರನ್ನು ತಪ್ಪಿಸಿ ಓಡಾಡಿದರೆ ಸಾಕು ತೆಳ್ಳಗಾಗಿ ಬಿಡ್ತೀರಾ ಎಂದು ತಮಾಷೆ ಮಾಡುತ್ತಾರೆ. ಇತ್ತೀಚೆಗೆ ನಾಗ್‌ ಶೇಖರ್‌ ತಮ್ಮ ಯಶಸ್ಸನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ನವಿಲಿನೂರಿನ ಇಂದ್ರ

in

ಇತ್ತೀಚೆಗೆ ಇಂದ್ರಜಿತ್‌ ಲಂಕೇಶ್‌ ತನ್ನ ಹುಟ್ಟುಹಬ್ಬವನ್ನು ಪತ್ರಿಕಾಗೋಷ್ಠಿಯಲ್ಲಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. “ನಾನು ಬರ್ತ್‌ಡೇ ಆಚರಿಸಿಕೊಳ್ಳುವುದಿಲ್ಲ ಕೇಕ್‌ ಕಟ್‌ ಮಾಡಿ ಪಾರ್ಟಿ ಮಾಡುವ ಅಭ್ಯಾಸವಿಲ್ಲ. ಆದರೆ ಇತ್ತೀಚೆಗೆ ನಾನು ಯಶ್‌ಗಾಗಿ, ದಿಗಂತ್‌ಗಾಗಿ ಸಿನಿಮಾ ಮಾಡ್ತಿದ್ದೀನಿ ಅಂತ ಸುದ್ದಿ ಹಬ್ಬಿತ್ತು. ಆದರೆ ಸದ್ಯಕ್ಕೆ ಅಂಥ ಪ್ರಾಜೆಕ್ಟ್ ಕೈಗೆತ್ತಿಕೊಂಡಿಲ್ಲ ಅಂತ ಹೇಳಬೇಕಿತ್ತು. ಹಾಗೆಯೇ ನನ್ನ ಹೊಸ ಚಿತ್ರದ ಬಗ್ಗೆ ಹಂಚಿಕೊಳ್ಳೋಣ ಎಂದು ಮಾಧ್ಯಮ ಮಿತ್ರರನ್ನು ಕರೆದು ಬರ್ತ್‌ಡೇ ಶಾಸ್ತ್ರ ಮಾಡಿ ಎಲ್ಲವನ್ನೂ ಹೇಳಿಕೊಳ್ಳಬೇಕೆನಿಸಿತು,” ಎಂದು ಇಂದ್ರಜಿತ್‌ ತಮ್ಮ ಕುಟುಂಬ ಸಮೇತ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಇಂದ್ರಜಿತ್‌ ನವಿಲಿನಾಕಾರದ ಕೇಕ್‌ ಕಟ್‌ ಮಾಡುವಾಗ ಸಂಕೋಚದಿಂದಲೇ ಇದೆಲ್ಲ ಅಭ್ಯಾಸವಿಲ್ಲ ಎನ್ನುತ್ತಲೇ ಅಮ್ಮ ಇಂದಿರಾ ಹಾಗೂ ಪತ್ನಿ ಅರ್ಪಿತಾಗೆ ಕೇಕ್‌ ತಿನ್ನಿಸಿದರು. ಅವರ ಪುತ್ರ ಕನ್ನಡದಲ್ಲಿ ಕವಿತೆ ಬರೆದದ್ದನ್ನು ಓದಿದರು. ಇದೆಲ್ಲದರ ಜೊತೆಗೆ ತಾವು ಒಂದು ನವಿಲನ್ನು ದತ್ತು ತೆಗೆದುಕೊಂಡಿದ್ದಾಗಿ ತಿಳಿಸಿದರು.

“ಅಮ್ಮ ತಮ್ಮ ಕಷ್ಟದ ದಿನಗಳಲ್ಲಿ ಸೀರೆ ಅಂಗಡಿ ತೆಗೆದು ಮಯೂರಿ ಅಂತ ಹೆಸರಿಟ್ಟಿದ್ದರು. ಮನೆಗೂ ಸಹ ನವಿಲು ಎಂದೇ ಹೆಸರಿಟ್ಟಿದ್ದೇನೆ. ಈಗ ನಾನು ಕೂಡ ನವಿಲನ್ನು ದತ್ತು ತಗೊಂಡದ್ದೇವೆ. ಇದೆಲ್ಲ ಕೋಇನ್ಸಿಡೆನ್ಸ್ ಅಷ್ಟೆ,” ಅಂದರು. ಇಂದ್ರಜಿತ್‌, ರವಿಚಂದ್ರನ್‌, ಭೂಮಿಕಾ ಚಾಲಾ ತಾರಾಗಣದಲ್ಲಿ ಸಿನಿಮಾ ಶುರುಮಾಡಲಿದ್ದಾರೆ. ಹೊಸದೊಂದು ಜೋಡಿಯ ತಾಷೆಯಲ್ಲಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ