ಹಿಂದೆಲ್ಲ ಹಬ್ಬ ಆಚರಿಸುವಾಗ, ಬಗೆಬಗೆಯ ರಸಗವಳ ತಯಾರಿಸಿ ಬಂಧುಬಾಂಧವರ ಜೊತೆ ಕುಳಿತು ಹರಟುತ್ತಾ ಸವಿದಂತೆ, ಈಗಿನ ಕೊರೋನಾ ಕಾಲದಲ್ಲಿ ಸುಲಭವಲ್ಲ. ಕೋವಿಡ್‌-19 ಎಲ್ಲರನ್ನೂ ಭಯಪಡಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನೀವು ನಿಮ್ಮ ಇಮ್ಯುನಿಟಿ ಕಡೆ ಹೆಚ್ಚು ಗಮನ ಕೊಡಲೇಬೇಕು. ಈ ಹಬ್ಬದಲ್ಲಿ ಇಮ್ಯುನಿಟಿ ಹೆಚ್ಚಿಸುವಂಥ ಒಂದಿಷ್ಟು ಮಿಠಾಯಿಗಳ ಬಗ್ಗೆ ತಿಳಿಯೋಣವೇ?

ಒಣಶುಂಠಿ : ನೀವು ಯಾವುದೇ ಸಿಹಿ ತಯಾರಿಸಿದರೂ ಅದಕ್ಕೆ ಅಗತ್ಯ ತುಸು ಒಣಶುಂಠಿ ಪುಡಿ ಸೇರಿಸಿ. ಥೆರಪಿಸ್ಟ್ ಗುಣಾಂಶ ಹೊಂದಿರುವ ಇದು ಔಷಧಿಯಾಗಿ ಕೆಲಸ ಮಾಡುತ್ತದೆ. ಆ್ಯಂಟಿ ಆಕ್ಸಿಡೆಂಟ್‌ ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳನ್ನೂ ಹೊಂದಿದ್ದು ಬೀಟಾ ಕೆರಾಟಿನ್‌, ಮೈಗ್ರೇನ್‌, ಹೃದ್ರೋಗ, ಮಂಡಿ ನೋವು, ಆರ್ಥ್‌ ರೈಟಿಸ್‌, ಮೆಟಬಾಲಿಸಂ ಇತ್ಯಾದಿಗಳನ್ನು ಬ್ಯಾಲೆನ್ಸ್ ಆಗಿಡುತ್ತದೆ. ಉಷ್ಣ ಗುಣ ಪ್ರಧಾನವಾದ ಒಣಶುಂಠಿ ರಕ್ತಸ್ರಾವ ವಿಕಾರ, ಅನೀಮಿಯಾ, ಅಲ್ಸರ್‌ ಇತ್ಯಾದಿಗೆ ರಾಮಬಾಣ.  ಬೇಸಿಗೆಯಲ್ಲಿ ಇದರ ಸೇವನೆ ಬೇಡ.

ಖರ್ಜೂರ : ಬಿಳಿ ಸಕ್ಕರೆ ಅವಾಯ್ಡ್ ಮಾಡಲು ಖರ್ಜೂರ ಬಳಸಿ. ಸಕ್ಕರೆಯಿಂದ ಬೊಜ್ಜು, ಸ್ಥೂಲತೆಯ ರೋಗ ತಪ್ಪಿದ್ದಲ್ಲ. ಆದರೆ ಖರ್ಜೂರದಲ್ಲಿ ದೇಹವನ್ನು ಸದಾ ಆರೋಗ್ಯವಾಗಿಡಬಲ್ಲ ಅಗತ್ಯದ ಕಾರ್ಬೋಹೈಡ್ರೇಟ್‌, ಮಿನರಲ್ಸ್, ಫೈಬರ್‌, ವಿಟಮಿನ್‌ ಗಳ ಗಣಿಯಾಗಿಡಿ. ಇಮ್ಯುನಿಟಿ ಹೆಚ್ಚಿಸಿ, ಇದು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡಬಲ್ಲದು.

ಎಳ್ಳು : ಇದು ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚಿಸಬಲ್ಲದು, ಅದು ಹೆಂಗಸರಿಗೆ ಅತ್ಯಗತ್ಯ ಬೇಕೇ ಬೇಕು. ಇದು ಮೂಳೆ ಸದೃಢಗೊಳಿಸಿ, ಲಿವರ್‌ ನ್ನೂ ಸ್ವಸ್ಥವಾಗಿಡುತ್ತದೆ. ದೇಹ ತೂಕ ನಿಯಂತ್ರಿಸಿ, ಚರ್ಮಕ್ಕೆ ಸ್ನಿಗ್ಧತೆ ನೀಡಿ, ಮಸಲ್ಸ್ ಸ್ಟ್ರಾಂಗ್‌ಆಗಿಸುತ್ತದೆ. ಇಮ್ಯುನಿಟಿ ಬೂಸ್ಟ್ ಮಾಡುತ್ತಾ, ಮಧುಮೇಹ ನಿಯಂತ್ರಣದಲ್ಲೂ ನೆರವಾಗುತ್ತದೆ. ಇದರಲ್ಲಿ ಝಿಂಕ್‌, ಐರನ್‌, ವಿಟಮಿನ್‌ಮೆಗ್ನೀಶಿಯಂ ಧಾರಾಳ ಅಡಗಿವೆ.

ಕೋಕೋನಟ್‌ : ಇದು ಮುಟ್ಟಿನ ದಿನಗಳ ನೋವು, ಯೂರಿನ್‌ ಪ್ರಾಬ್ಲಮ್ಸ್, ಹಾರ್ಟ್‌ ಬರ್ನ್‌, ಆ್ಯಕ್ನೆ ಮೊಡವೆ, ಸ್ಕಿನ್‌ ರಾಶೆಸ್‌, ಓವೇರಿಯನ್‌ ಸಿಸ್ಟ್ ನಂತಹ ಸಮಸ್ಯೆಗಳನ್ನೂ ಸುಲಭವಾಗಿ ನಿವಾರಿಸಬಲ್ಲದು. ಶೀತ ಪ್ರಕೃತಿ ಹೊಂದಿರುವ ತೆಂಗು, ಪಿತ್ತ ದೋಷ ನಿವಾರಣೆಗೆ ಪೂರಕ.

ತುಪ್ಪ : ದೈನಂದಿನ ಆಹಾರದಲ್ಲಿ ಇದರ ಬಳಕೆ ಹೆಚ್ಚು ಲಾಭಕಾರಿ. ಇದು ದೇಹದ ಟಾಕ್ಸಿನ್ಸ್ ನಿವಾರಿಸಿ, ರೋಗ ನಿವಾರಣೆಗೆ ಪೂರಕ. ತುಪ್ಪದಲ್ಲಿನ ವಿಟಮಿನ್‌, ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರಿ. ಆರ್ಥ್‌ ರೈಟಿಸ್‌, ವಾತ ದೋಷ, ತೂಕ ತಗ್ಗಿಸಲು ತುಪ್ಪ ಪೂರಕ. ರೀಫೈಂಡ್‌ ಆಯಿಲ್‌ ಬ್ಯಾಡ್‌ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ, ಆದರೆ ತುಪ್ಪ ಗುಡ್‌ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇಮ್ಯುನಿಟಿ ಹೆಚ್ಚಿಸುವ ಇದು ನೆನಪಿನ ಶಕ್ತಿ ವರ್ಧಿಸಿ, ದೇಹವನ್ನು ಸದೃಢಗೊಳಿಸುತ್ತದೆ.

ಅಖರೋಟ್‌ : ಇದು ಮೆದುಳಿನ ಗೊಂದಲ ನಿವಾರಿಸಿ, ಏಕಾಗ್ರತೆ ಹೆಚ್ಚಿಸುತ್ತದೆ. ಮೆಟಬಾಲಿಸಂ ಚುರುಕುಗೊಳಿಸಿ, ತೂಕ ತಗ್ಗಿಸಲು ನೆರವಾಗುತ್ತದೆ. ಇದರಲ್ಲಿನ ಒಮೇಗಾ-3 ಯಿಂದಾಗಿ ದೇಹಕ್ಕೆ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ನೀಡಬಲ್ಲದು.

ಬೆಲ್ಲ : ಇದು ನೈಸರ್ಗಿಕ ಸಿಹಿ ಹೊಂದಿದ್ದು, ಸಕ್ಕರೆಗೆ ಹೋಲಿಸಿದಲ್ಲಿ ಎಷ್ಟೋ ಪಾಲು ಉತ್ತಮ. ಇದರಲ್ಲಿ ಫೈಬರ್‌, ಕ್ಯಾಲ್ಶಿಯಂ, ಐರನ್‌, ವಿಟಮಿನ್‌ ಅಡಗಿವೆ. ನಿತ್ಯ ಬೆಲ್ಲದ ಸೇವನೆಯಿಂದ ಅನೀಮಿಯಾ ದೂರವಾಗುತ್ತದೆ. ಇದು ಅಜೀರ್ಣಕ್ಕೆ ಸಹ ಬಲು ಉಪಕಾರಿ. ಇದರ ಹಾಗೆಯೇ ಒಣದ್ರಾಕ್ಷಿ, ಜೇನು ಸಹ ಬಳಸಿಕೊಳ್ಳಿ.

ಜೇಷ್ಠಮಧು : ಇದು ಗ್ಯಾಸ್ಟ್ರಿಕ್‌, ಅಲ್ಸರ್‌, ತಲೆನೋವು, ಸ್ಟ್ರೆಸ್‌, ವೀಕ್‌ ಇಮ್ಯುನಿಟಿ, ಮೈ ಕೈ ನೋವು ಸಂಧಿವಾತ, ಮೆನೋಪಾಸ್‌, ಕೊಲೆಸ್ಟ್ರಾಲ್ ಕಂಟ್ರೋಲ್ ‌ಗೆ ಬಹಳ ನೆರವಾಗುತ್ತದೆ. ದೈನಂದಿನ ಅಡುಗೆಗೆ ಇದನ್ನು ಬಳಸುವುದರಿಂದ ಹೆಚ್ಚಿನ ಲಾಭವಿದೆ. ಇದರ ಜೊತೆ ಅರಿಶಿನ, ಲವಂಗ, ಏಲಕ್ಕಿ, ಮೆಣಸು, ಚಕ್ಕೆ ಇತ್ಯಾದಿ ಬಳಸಲು ಮರೆಯದಿರಿ. ಹಬ್ಬಕ್ಕಾಗಿ ತಯಾರಿಸುವ ಉಂಡೆ, ಲಾಡು, ಬರ್ಫಿ, ಪಾಯಸ ಇತ್ಯಾದಿಗಳಲ್ಲಿ ಯಾವುದೋ ಒಂದು ರೂಪದಲ್ಲಿ ಇವನ್ನು ಬಳಸಿಕೊಳ್ಳಿ. ಈ ರೀತಿ ಕೊರೋನಾ ವಿರುದ್ಧ ನೈಸರ್ಗಿಕವಾಗಿ ಸದೃಢ ಇಮ್ಯುನಿಟಿ ಬೆಳೆಸಿಕೊಳ್ಳಿ.

ಇವನ್ನು ನಿಮ್ಮ ದೈನಂದಿನ ಅಡುಗೆಯಲ್ಲಿ ಹೀಗೆ ಬಳಸಿಕೊಳ್ಳಿ :

ಊಟಕ್ಕೆ ಮೊದಲು ನಿಯಮಿತವಾಗಿ ತುಸು ಖರ್ಜೂರ ಸೇವಿಸುವುದರಿಂದ ಆಹಾರದ ಪ್ರಮಾಣ ತಗ್ಗಿಸಬಹುದು, ಬೇಗ ಜೀರ್ಣವಾಗುತ್ತದೆ. ಸಿಹಿಯಲ್ಲಿ ಕೇಕ್‌, ಕ್ಯಾಂಡಿ, ಚಾಕಲೇಟ್‌ ಬದಲಿಗೆ ಖರ್ಜೂರದ ಸೇವನೆ ಆರೋಗ್ಯಕ್ಕೆ ಹಿತಕರ. ದೇಹ ತೂಕ ನಿಯಂತ್ರಣಕ್ಕೆ ಸಹಕಾರಿ.

ಊಟದ ನಂತರ ತುಸು ಬೆಲ್ಲ ತಿಂದರೆ, ಆಹಾರದ ಸುಲಭವಾಗಿ ಜೀರ್ಣವಾಗುತ್ತದೆ. ಅಗತ್ಯವಾಗಿ ಇದನ್ನು ಬಿಸಿ ನೀರಿನ ಜೊತೆ ಸೇವಿಸಿ, ಹೊಟ್ಟೆಯ ತೊಂದರೆಗಳು ದೂರವಾಗಿ ದೇಹ ತೂಕ ನಿಯಂತ್ರಣ ಸುಲಭವಾಗುತ್ತದೆ.

ನೀವು ಸೇವಿಸುವ ಪ್ರತಿ ಸಲಾಡ್‌ ಗೂ ಅಗತ್ಯ ತೆಂಗು ಬೆರೆಸಿರಿ. ಹಾಲು ಅಲರ್ಜಿ ಎನ್ನುವವರು ತೆಂಗಿನ ಹಾಲನ್ನು ಸೇವಿಸಬೇಕು. ಸಾದಾ ಹಾಲಿಗಿಂತ ತೆಂಗಿನಹಾಲು ಹೆಚ್ಚು ಪುಷ್ಟಿಕರ.

ತುಪ್ಪದ ಸೇವನೆಯಿಂದ ದೇಹ ತೂಕ ಹೆಚ್ಚುವುದಿಲ್ಲ. ಬಹುತೇಕ ಹೆಂಗಸರು ಇದು ಕೊಬ್ಬು ಹೆಚ್ಚಿಸುತ್ತದೆ ಎಂದು ನಿರ್ಲಕ್ಷಿಸುತ್ತಾರೆ. ಆರ್ಥ್‌ ರೈಟಿಸ್‌ ತಪ್ಪಿಸಲು ನಿತ್ಯ ತುಪ್ಪ ಬಳಸಿರಿ. ಪ್ರತಿ ದಿನ ನಿಮ್ಮ ಉಪಾಹಾರ, 2 ಹೊತ್ತಿನ ಊಟಕ್ಕೂ ಅಗತ್ಯ ತುಪ್ಪ ಬಳಸಿಕೊಳ್ಳಿ. ಹಸುವಿನ ಶುದ್ಧ ತುಪ್ಪ ಬಲು ಉತ್ತಮ.

ಶುಂಠಿ, ಮೆಣಸು, ಚಕ್ಕೆ, ಲವಂಗ, ಅರಿಶಿನ ಇತ್ಯಾದಿಗಳನ್ನು ಯಾವುದೋ ರೂಪದಲ್ಲಿ ದಿನನಿತ್ಯ ಬಳಸುತ್ತಿರಿ.

ಶಶಿಕಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ