– ರಾಘವೇಂದ್ರ ಅಡಿಗ ಎಚ್ಚೆನ್.
ಸಂಭ್ರಮ ಸಡಗರದ ನಡುವೆ ಸೂತಕ ಸೇರಿಕೊಂಡಿದೆ. ಆರ್.ಸಿ.ಬಿ. ಕಪ್ ಗೆದ್ದ ಬೆನ್ನಲ್ಲೇ ಕಾಲ್ತುಳಿತಕ್ಕೆ ಸಿಲುಕಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ.
ಇಂದು ಸಂಜೆ ಆರ್.ಸಿ.ಬಿ ತಂಡ ಬೆಂಗಳೂರು ಸೇರಬೇಕಿತ್ತು ಆದರೆ ಇಷ್ಟೊಂದು ತರಾತುರಿಯಲ್ಲಿ ತಂಡವನ್ನು ಕರೆಸಿಕೊಳ್ಳುವ ಅವಶ್ಯಕತೆ ಏನಿತ್ತು ? ಇನ್ನು ತಯಾರಿ ಸಂಪೂರ್ಣ ಅಗಿಲ್ಲ ಅಂತಾದರೆ ತಂಡದ ಮ್ಯಾನೇಜ್ಮೆಂಟ್ ಬಳಿ ಒಂದೆರೆಡು ದಿನದ ಕಾಲಾವಕಾಶ ಕೇಳಬಹುದಿತ್ತು. ಇದೆಲ್ಲೋ ಕೆಲ ರಾಜಕಾರಾಣಿಗಳು ಕ್ರೆಡಿಟ್ ತೆಗೆದುಕೊಳ್ಳಲೆಂದೆ ವಿಧಾನಸೌದ ದಲ್ಲಿ ಕಾರ್ಯಕ್ರಮ ಆಯೋಜಿಸಿದಂತಿದೆ. ಅದೆಷ್ಟೊಂದು ನಿರ್ಲಕ್ಷದಿಂದ ಕಾರ್ಯಗಳನ್ನು ಆಯೋಜಿಸಿದ್ದರು ಎಂಬುದಕ್ಕೆ ನಮ್ಮ ಕಣ್ಣೆದುರೆ ಉದಾಹಾರಣೆಗಳಿವೆ. ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಇಳಿಯುವುದಂತೆ ಅಲ್ಲಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್ ಅಂತೆ ಅಲ್ಲಿಂದ ವಿಧಾನಸೌದ ಮತ್ತೆ ಚಿನ್ನಸ್ವಾಮಿ. ಇದೇನು ಮೂರ್ಖತನ?
18 ವರ್ಷಗಳ ಬಳಿಕ ಆರ್.ಸಿ.ಬಿ. ತಂಡ ಗೆದ್ದಿದೆ ಅಂತಾದ ಮೇಲೆ ಲಕ್ಷಗಟ್ಟಲೆ ಜನ ಒಟ್ಟು ಸೇರುತ್ತಾರೆ. ಕ್ರೀಡಾಭಿಮಾನಿಗಳು ಎಂದಮೇಲೆ ಆಟಗಾರರನ್ನು ನೋಡುವ ಹುಚ್ಚು ಇದ್ದೇ ಇರುತ್ತೆ ಎಂಬುದು ಗೊತ್ತಿರಬೇಕಿತ್ತು. ಈ ಸಂದರ್ಭದಲ್ಲಿ ವಿಕ್ಟರಿ ಮಾರ್ಚ್ ಮಾಡಬೇಕೊ ಬೇಡವೊ ಎಂಬ ಚರ್ಚೆ ಆಗಿತ್ತೆ?
ಕಾರ್ಯಕ್ರಮದ ಸಂದರ್ಭದಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳು:-
ಕಾರ್ಯಕ್ರಮದ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳನ್ನು ಓಡಿಸಲಾಗಿಲ್ಲ.
ಕಾರ್ಯಕ್ರಮದ ವಿವರಗಳನ್ನು ಸಾರ್ವಜನಿಕರಿಗೆ ಸರಿಯಾಗಿ ಹಂಚಿಕೊಳ್ಳಲಾಗಿರಲಿಲ್ಲ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಟಿಕೆಟ್ ನೀಡಲಾಗಿದೆ ಎಂದು ತಿಳಿಸಲಾಗಿತ್ತು, ಆದರೆ ಯಾವುದೇ ಸೂಕ್ತ ವ್ಯವಸ್ಥೆ ಅಲ್ಲಲ್ಲಿ ಕಾಣಿಸಲಿಲ್ಲ.
ಹೆಚ್ಚಿನ ಜನಸ್ತೋಮ ನಿರೀಕ್ಷೆಯಲ್ಲಿದ್ದರೂ ಹೆಚ್ಚುವರಿ ಪೊಲೀಸರ ನಿಯೋಜನೆ ಇರಲಿಲ್ಲ.
ಟ್ರಾಫಿಕ್ ವ್ಯವಸ್ಥೆಯನ್ನು ಸಮಯಕ್ಕೆ ತಕ್ಕಂತೆ ನಿರ್ವಹಿಸಲಾಗಿಲ್ಲ. ಕೆಲ ಅಭಿಮಾನಿಗಳು ಸ್ಥಳದ ಭಾರೀ ಜನಸಂದಣಿಯಿಂದ ಕಿಕ್ಕೆರಿದರು. ವಾಪಸ್ ಹೋಗಬೇಕೆಂದು ನಿರ್ಧರಿಸಿದವರಿಗಾಗಿ ಅಲ್ಲಿ ಆಟೋ, ಬಸ್ ಅಥವಾ ಯಾವುದೇ ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲ್ಪಟ್ಟಿರಲಿಲ್ಲ.
ವಿಕ್ಟರಿ ಪರೇಡ್ನಲ್ಲಿ ಆಟಗಾರರನ್ನು ವಿಧಾನಸಭೆಯಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ತೆರೆದ ವಾಹನಗಳಲ್ಲಿ ತರಲಾಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.
ಆದರೆ ಪರೇಡ್ ಯಾವ ಮಾರ್ಗದಲ್ಲಿ ನಡೆಯುತ್ತದೆ ಎಂಬ ನಿಖರ ಮಾಹಿತಿ ನೀಡಲಾಗದ ಕಾರಣ ಜನರಲ್ಲಿ ಗೊಂದಲ ಉಂಟಾಯಿತು. ಈ ಕಾರಣದಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೆಚ್ಚಿನ ಜನರು ಜಮಾಯಿಸಿದರು.
ಮುಂಬೈ ಅಲ್ಲಿ ಕಳೆದ ಬಾರಿ ವಿಶ್ವ ಕಪ್ ಗೆದ್ದಾಗ ವಿಕ್ಟರಿ ಮಾರ್ಚ್ ಮಾಡಲಾಗಿತ್ತು ಆದರೆ ಅದರ ಪೂರ್ವ ತಯಾರಿಯೂ ಅಷ್ಟೆ ಕ್ರಮಬದ್ದವಾಗಿತ್ತು. ಬೆಂಗಳೂರಿನಲ್ಲಿ ಪೋಲಿಸರ ಸಿದ್ದತೆಗಳು ಏನಿದ್ದವು ಒಮ್ಮೆ ಯೋಚಿಸಿ. ಕಡೆಪಕ್ಷ ವಿಧಾನಸೌದದ ಎದುರಿನ ಬಸ್ ರೂಟ್ ಕೂಡ ಬದಲಾವಣೆ ಮಾಡಿರಲಿಲ್ಲ ಜನಗಳು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದರೆ ಇತ್ತ ಬಸ್ ಗಳು ಸಂಚರಿಸಲಾಗದೆ ಒದ್ದಾಡುತ್ತಿದ್ದವು. ಅದಲ್ಲದೆ ಎಚ್.ಎ.ಎಲ್., ಏರ್ಪೋರ್ಟ್, ತಾಜ್ ವೆಸ್ಟ್ ಎಂಡ್, ವಿದಾನಸೌದ, ಚಿನ್ನಸ್ವಾಮಿ ಸ್ಟೇಡಿಯಂ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಪೋಲಿಸರು ಕೂಡ ಸೆಕ್ಯುರಿಟಿ ಕೊಡುವಲ್ಲಿ ಗಲಿಬಿಲಿಯಿಂದಿದ್ದರು ಎಂಬುದು ತಿಳಿಯುತ್ತೆ.
ಹಾಗೂ ಸರಕಾರ ಮತ್ತು ಮಾದ್ಬೆಯಮ ಬೆಳಗ್ಗೆಯಿಂದ ಇಂದು ಮದ್ಯಾನ ಸನ್ಮಾನ ಮೆರವಣಿಗೆ ಎಂದು ಹೇಳಬಾರದಿತ್ತು. ಮತ್ತು ಗೇಟ್ ಗಳನ್ನ ಮೊದಲೇ ಒಪನ್ ಮಾಡಬಹುದಿತ್ತು. ಒಮ್ಮೆಗೆ ಮಧ್ಯಾಹ್ನ ತೆರೆದಾಗ ಎಲ್ಲರೂ ಒಮ್ಮೆಗೆ ನುಗ್ಗಿ ನೂಕು ನುಗ್ಗಲು ಹೆಚ್ಚಾಗುತ್ತದೆ. ಇನ್ನು
ಸರ್ಕಾರದ ಭದ್ರತಾ ವೈಫಲ್ಯ, ಹುಚ್ಚು ಅಭಿಮಾನ, 11 ಮಂದಿ ಬಲಿ ಇದೆಲ್ಲಾ ಒಂದು ಕಡೆಯಾದರೆ, ಸಾವಿನ ಸುದ್ದಿ ತಿಳಿದ ಬಳಿಕವೂ, ಸಂಭ್ರಮಾಚರಣೆ ಮಾಡುತ್ತಾರಲ್ಲ, ಇವರು ಮನುಷ್ಯರಾ? ಸೂತಕದ ನಡುವೆಯೂ ಇವರ ಸಂಭ್ರಮಾಚರಣೆ. ಜನಸಾಮಾನ್ಯರದ್ದೂ ಪ್ರಾಣ ಅವರಿಗೂ ಒಂದು ಬದುಕಿದೆ, ಅದ್ಯಾವುರ ಅರಿವು ಇವರಿಗಿಲ್ಲ. ಇವರಿಗೆ, ದೊಡ್ಡವರ ಸಾವು ಮಾತ್ರ ಸಾವು. ಉಳಿದವರ ಬದುಕು, ಸಾವು ಯಾವುದೂ ಲೆಕ್ಕಕ್ಕಿಲ್ಲ. ಇಂಥವರ ಮೇಲಿನ ಅಭಿಮಾನಕ್ಕಾಗಿ ಅಲ್ಲಿಗೆ ಹೋಗಿ, ಅಮಾಯಕರು ಬಲಿಯಾದರು. ಡಿ.ಕೆ ಶಿವಕುಮಾರ್ ಬಿಡಿ, ಕನಿಷ್ಠ ಆಟಗಾರರಾದರೂ, ಆ ಸಂಭ್ರಮಾಚರಣೆ ನಿರಾಕರಿಸಬಹುದಿತ್ತು. ಒಟ್ಟಿನಲ್ಲಿ ಹದಿನೆಂಟು ವರ್ಷಗಳಿಂದ ಕಾದಿದ್ದ ಸಂಭ್ರಮಾಚರಣೆ, ಒಂದೇ ದಿನದಲ್ಲಿ ಶೋಕಾಚರಣೆ ಆಗುವಂತಾಯಿತು. ಇದು ಸಹಜವಾಗಿ ಸಂಭವಿಸಿದ ಘಟನೆಯಲ್ಲ, ಇದು ವ್ಯವಸ್ಥೆಯ ವಿಫಲತೆ. ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಯಾವುದೇ ಪ್ರಣಾಳಿಕೆಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ಅಧಿಕಾರಿಗಳಿಗೆ, ವಿಐಪಿಗಳಿಗೆ ಆದ ಸೌಲಭ್ಯ, ಪ್ರಾಮುಖ್ಯತೆ — ಮತ್ತು ಸಾರ್ವಜನಿಕರ ಪ್ರಾಣದ ಕಡೆಗಿನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ.ಈ ವೇಳೆ ಗೃಹ ಸಚಿವರು ಎಲ್ಲಿ ಇದ್ದರು? ಏಕೆ ಕೊರೋನಾ ನಿರ್ಬಂಧ ಅಥವಾ
ಸುರಕ್ಷತಾ ವ್ಯವಸ್ಥೆಗಳು ಅಲ್ಲಿರಲಿಲ್ಲ? ಇದು ದುರಂತವಲ್ಲ, ಇದು ಸರ್ಕಾರದ ನಿರ್ಲಕ್ಷ್ಯದಿಂದಾದ ಅಪರಾಧ. ಇದಕ್ಕೆ ಪರಿಹಾರ ಅಂತ 10 ಲಕ್ಷ ಕೊಡಲು ಸಿದ್ಧವಿರುವ ಸಿದ್ದರಾಮಯ್ಯ ಅವರೇ ಕೇರಳದಲ್ಲಿ ಆನೆ ತುಳಿತಕ್ಕೆ ಸತ್ತವರಿಗೆ ನಿಮ್ಮ ಕಾಂಗ್ರೆಸ್ ಸರ್ಕಾರ 15 ಲಕ್ಷ ಕೊಟ್ಟಿತ್ತು! ಇಂದು ಸತ್ತವರಿಗೆ 10 ಲಕ್ಷ! ಸಾಕು!! ಇನ್ನು ಜಿಲ್ಲಾಧಿಕಾರಿಯ ತನಿಖೆಯಂತೆ,, ಜಿಲ್ಲಾಧಿಕಾರಿ ಯಾರು ಸರ್ಕಾರದ ಕೈಗೋಂಬೆ ತಾನೇ,,,
ನಾನು ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತೇನೆ. ಅವರ ನೋವು ತುಂಬಲು ಸಾಧ್ಯವಿಲ್ಲ, ಆದರೆ ನ್ಯಾಯ ಸಿಗಬೇಕು ಎಂಬುದರಲ್ಲಿ ನಾವು ಬದ್ಧವಿರಬೇಕು.ಈಗಾದರೂ ಸರಕಾರ ಜವಾಬ್ದಾರಿ ಹೊರುತ್ತದೆಯೇ?