- ರಾಘವೇಂದ್ರ ಅಡಿಗ ಎಚ್ಚೆನ್.

ಸಂಭ್ರಮ ಸಡಗರದ ನಡುವೆ ಸೂತಕ ಸೇರಿಕೊಂಡಿದೆ. ಆರ್.ಸಿ.ಬಿ. ಕಪ್ ಗೆದ್ದ ಬೆನ್ನಲ್ಲೇ ಕಾಲ್ತುಳಿತಕ್ಕೆ ಸಿಲುಕಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ.

ಇಂದು ಸಂಜೆ ಆರ್.ಸಿ.ಬಿ ತಂಡ ಬೆಂಗಳೂರು ಸೇರಬೇಕಿತ್ತು ಆದರೆ ಇಷ್ಟೊಂದು ತರಾತುರಿಯಲ್ಲಿ ತಂಡವನ್ನು ಕರೆಸಿಕೊಳ್ಳುವ ಅವಶ್ಯಕತೆ ಏನಿತ್ತು ? ಇನ್ನು ತಯಾರಿ ಸಂಪೂರ್ಣ ಅಗಿಲ್ಲ ಅಂತಾದರೆ ತಂಡದ ಮ್ಯಾನೇಜ್ಮೆಂಟ್ ಬಳಿ ಒಂದೆರೆಡು ದಿನದ ಕಾಲಾವಕಾಶ ಕೇಳಬಹುದಿತ್ತು. ಇದೆಲ್ಲೋ  ಕೆಲ ರಾಜಕಾರಾಣಿಗಳು ಕ್ರೆಡಿಟ್ ತೆಗೆದುಕೊಳ್ಳಲೆಂದೆ ವಿಧಾನಸೌದ ದಲ್ಲಿ ಕಾರ್ಯಕ್ರಮ ಆಯೋಜಿಸಿದಂತಿದೆ.  ಅದೆಷ್ಟೊಂದು ನಿರ್ಲಕ್ಷದಿಂದ ಕಾರ್ಯಗಳನ್ನು ಆಯೋಜಿಸಿದ್ದರು ಎಂಬುದಕ್ಕೆ ನಮ್ಮ ಕಣ್ಣೆದುರೆ ಉದಾಹಾರಣೆಗಳಿವೆ. ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಇಳಿಯುವುದಂತೆ ಅಲ್ಲಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್ ಅಂತೆ‌ ಅಲ್ಲಿಂದ ವಿಧಾನಸೌದ ಮತ್ತೆ ಚಿನ್ನಸ್ವಾಮಿ. ಇದೇನು ಮೂರ್ಖತನ?

18 ವರ್ಷಗಳ ಬಳಿಕ ಆರ್.ಸಿ.ಬಿ. ತಂಡ ಗೆದ್ದಿದೆ ಅಂತಾದ ಮೇಲೆ ಲಕ್ಷಗಟ್ಟಲೆ ಜನ ಒಟ್ಟು ಸೇರುತ್ತಾರೆ. ಕ್ರೀಡಾಭಿಮಾನಿಗಳು ಎಂದಮೇಲೆ ಆಟಗಾರರನ್ನು ನೋಡುವ ಹುಚ್ಚು ಇದ್ದೇ ಇರುತ್ತೆ ಎಂಬುದು ಗೊತ್ತಿರಬೇಕಿತ್ತು. ಈ ಸಂದರ್ಭದಲ್ಲಿ ವಿಕ್ಟರಿ ಮಾರ್ಚ್ ಮಾಡಬೇಕೊ ಬೇಡವೊ ಎಂಬ ಚರ್ಚೆ ಆಗಿತ್ತೆ?

ಕಾರ್ಯಕ್ರಮದ ಸಂದರ್ಭದಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳು:-

ಕಾರ್ಯಕ್ರಮದ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳನ್ನು ಓಡಿಸಲಾಗಿಲ್ಲ.

ಕಾರ್ಯಕ್ರಮದ ವಿವರಗಳನ್ನು ಸಾರ್ವಜನಿಕರಿಗೆ ಸರಿಯಾಗಿ ಹಂಚಿಕೊಳ್ಳಲಾಗಿರಲಿಲ್ಲ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಟಿಕೆಟ್ ನೀಡಲಾಗಿದೆ ಎಂದು ತಿಳಿಸಲಾಗಿತ್ತು, ಆದರೆ ಯಾವುದೇ ಸೂಕ್ತ ವ್ಯವಸ್ಥೆ ಅಲ್ಲಲ್ಲಿ ಕಾಣಿಸಲಿಲ್ಲ.

ಹೆಚ್ಚಿನ ಜನಸ್ತೋಮ ನಿರೀಕ್ಷೆಯಲ್ಲಿದ್ದರೂ ಹೆಚ್ಚುವರಿ ಪೊಲೀಸರ ನಿಯೋಜನೆ ಇರಲಿಲ್ಲ.

ಟ್ರಾಫಿಕ್ ವ್ಯವಸ್ಥೆಯನ್ನು ಸಮಯಕ್ಕೆ ತಕ್ಕಂತೆ ನಿರ್ವಹಿಸಲಾಗಿಲ್ಲ. ಕೆಲ ಅಭಿಮಾನಿಗಳು ಸ್ಥಳದ ಭಾರೀ ಜನಸಂದಣಿಯಿಂದ ಕಿಕ್ಕೆರಿದರು. ವಾಪಸ್ ಹೋಗಬೇಕೆಂದು ನಿರ್ಧರಿಸಿದವರಿಗಾಗಿ ಅಲ್ಲಿ ಆಟೋ, ಬಸ್ ಅಥವಾ ಯಾವುದೇ ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲ್ಪಟ್ಟಿರಲಿಲ್ಲ.

ವಿಕ್ಟರಿ ಪರೇಡ್‌ನಲ್ಲಿ ಆಟಗಾರರನ್ನು ವಿಧಾನಸಭೆಯಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ತೆರೆದ ವಾಹನಗಳಲ್ಲಿ ತರಲಾಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.

ಆದರೆ ಪರೇಡ್ ಯಾವ ಮಾರ್ಗದಲ್ಲಿ ನಡೆಯುತ್ತದೆ ಎಂಬ ನಿಖರ ಮಾಹಿತಿ ನೀಡಲಾಗದ ಕಾರಣ ಜನರಲ್ಲಿ ಗೊಂದಲ ಉಂಟಾಯಿತು. ಈ ಕಾರಣದಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೆಚ್ಚಿನ ಜನರು ಜಮಾಯಿಸಿದರು.

ಮುಂಬೈ ಅಲ್ಲಿ ಕಳೆದ ಬಾರಿ ವಿಶ್ವ ಕಪ್ ಗೆದ್ದಾಗ ವಿಕ್ಟರಿ ಮಾರ್ಚ್ ಮಾಡಲಾಗಿತ್ತು ಆದರೆ ಅದರ ಪೂರ್ವ ತಯಾರಿಯೂ ಅಷ್ಟೆ ಕ್ರಮಬದ್ದವಾಗಿತ್ತು. ಬೆಂಗಳೂರಿನಲ್ಲಿ ಪೋಲಿಸರ ಸಿದ್ದತೆಗಳು ಏನಿದ್ದವು ಒಮ್ಮೆ ಯೋಚಿಸಿ. ಕಡೆಪಕ್ಷ ವಿಧಾನಸೌದದ ಎದುರಿನ ಬಸ್ ರೂಟ್ ಕೂಡ ಬದಲಾವಣೆ ಮಾಡಿರಲಿಲ್ಲ ಜನಗಳು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದರೆ ಇತ್ತ ಬಸ್ ಗಳು ಸಂಚರಿಸಲಾಗದೆ ಒದ್ದಾಡುತ್ತಿದ್ದವು.  ಅದಲ್ಲದೆ ಎಚ್.ಎ.ಎಲ್., ಏರ್ಪೋರ್ಟ್, ತಾಜ್ ವೆಸ್ಟ್ ಎಂಡ್, ವಿದಾನಸೌದ, ಚಿನ್ನಸ್ವಾಮಿ ಸ್ಟೇಡಿಯಂ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಪೋಲಿಸರು ಕೂಡ ಸೆಕ್ಯುರಿಟಿ ಕೊಡುವಲ್ಲಿ ಗಲಿಬಿಲಿಯಿಂದಿದ್ದರು ಎಂಬುದು ತಿಳಿಯುತ್ತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ