`ಛತ್ರಿವಾಲಿ’ ಚಿತ್ರ ಅಟ್ಟರ್ ಫ್ಲಾಪ್ ಆದ ನಂತರ, ರಕುಲ್ ಬಾಲಿವುಡ್ ನಿಂದ ತನ್ನ ಹಾಸಿಗೆ ಸುತ್ತಿಕೊಂಡು, ದಕ್ಷಿಣದ ರೈಲು ಹತ್ತಿ ಹೊರಟೇಬಿಟ್ಟಳು. ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಈಕೆಗೆ ಮಣೆ ಹಾಕುವವರಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ `ಅಯ್ಲಾನ್’ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಹೇಗೂ ಬಾಲಿವುಡ್ ನ ಹಡಗು ಮುಳುಗುತ್ತಿದೆ, ಇನ್ನು ಇಲ್ಲಿದ್ದು ಏನು ಲಾಭ? ಇಲ್ಲಿನ ನಿರ್ಮಾಪಕರು ದಕ್ಷಿಣದವರಿಗೆ ಮೊರೆ ಹೋಗುತ್ತಿರುವಾಗ, ಡೈರೆಕ್ಟ್ ಆಗಿ ತಾನು ಅಲ್ಲೇ ನಟಿಸುವುದು ಒಳ್ಳೆಯದಲ್ಲವೇ ಎಂದು ನಿರ್ಧರಿಸಿದಂತಿದೆ. ಗಾಳಿ ಬಂದಾಗ ತೂರಿಕೋ, ಎನ್ನುವುದು ಇದನ್ನೇ ಅಲ್ಲವೇ?
ದೇಹ ತೂಕದ ಟ್ರೋಲ್ ಗೆ ಗುರಿಯಾದ ಹುಮಾ
`ಡಬಲ್ ಸ್ಟಾಂಡರ್ಡ್’ ಚಿತ್ರದ ನಂತರ ಹುಮಾ ಕುರೇಶಿ ಹೆಚ್ಚುತ್ತಿರುವ ತನ್ನ ದೇಹದ ಕುರಿತಾಗಿ ತುಸು ನಿರ್ಲಕ್ಷ್ಯಳಾಗಿದ್ದಾಳೆ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಹಾಗೇಂತ ಅವಳನ್ನು ಬಾಡಿ ಶೇಮಿಂಗ್ ಗೆ ಮತ್ತೆ ಮತ್ತೆ ಗುರಿ ಮಾಡುವುದೇ? ಇತ್ತೀಚೆಗೆ FBಇತ್ಯಾದಿಗಳಲ್ಲಿ ತಲೆಕೆಟ್ಟ ಟ್ರೋಲಿಗರು ಈಕೆಯನ್ನು ಕೀಳುವ ಪೋಸ್ಟಿಂಗ್ ನಿಂದ ಕೆಣಕಿದ್ದಾರೆ. ಹೀಗೆ ಮಾಡುವುದು ಖಂಡಿತಾ ತಪ್ಪು. ಈ ಕುರಿತಾಗಿ ಎಲ್ಲಾ ತಾಯಂದಿರೂ ಜಾಗೃತಿ ವಹಿಸಲೇಬೇಕು. ಯಾವ ಮಕ್ಕಳೂ ಇಂಥ ಕೀಳು ಕಮೆಂಟ್ ಮಾಡದಂತೆ ಅವರು ತರಬೇತಿ ನೀಡಬೇಕು. ಸೋಶಿಯಲ್ ಮೀಡಿಯಾದಲ್ಲಿನ ಸ್ವೈರತೆ ಹಾಗೂ ಉತ್ತಮ ಸಂಸ್ಕಾರಗಳಿಂದ ದೂರ ಉಳಿಯುತ್ತಿರುವ ಇಂದಿನ ಯುವಜನತೆ, ಸರಿತಪ್ಪುಗಳ ವ್ಯತ್ಯಾಸ ತಿಳಿಯದೆ ಮತಿಗೆಟ್ಟಿದೆ. ಮಕ್ಕಳು ಉತ್ತಮ ಸಂಸ್ಕಾರ ಪಡೆದಾಗ ಮಾತ್ರ ಇಂಥ ಅನಗತ್ಯ ಕೀಟಲೆಗಳಿಂದ ದೂರ ಉಳಿಯಲು ಸಾಧ್ಯ.
OTT ಟ್ರಯಲ್ ಗೆ ಹೊರಟ ಕಾಜೋಲ್
ಕಾಜೋಲ್ ದೇವಗನ್ ಇತ್ತೀಚೆಗೆ `ದಿ ಟ್ರಯಲ್’ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾಳೆ. ಇದರ ಟ್ರೇಲರ್ ಕಂಡ ಇವಳ ಫ್ಯಾನ್ಸ್, ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹಾಗೆ ನೋಡಿದರೆ ಕೋರ್ಟ್ ರೂಂ ಡ್ರಾಮಾ ಎಲ್ಲರಿಗೂ ಇಷ್ಟ. ಈ ಟ್ರೇಲರ್ ಕಂಡು ಹೊಳೆಯುವ ಒಂದು ವಿಶಿಷ್ಟ ವಿಚಾರವೆಂದರೆ, ಯಾವ ರೀತಿ ಒಬ್ಬ ಗೃಹಿಣಿ, ಅಗತ್ಯ ಬಿದ್ದಾಗ ತನ್ನ ಪತಿಗೆ ಸಾಥ್ ನೀಡಲು ಕಾನೂನಿನ ವಿರುದ್ಧ ಹೋರಾಡಬಲ್ಲಳು ಎಂಬುದು. ಹಾಗೆಯೇ ತನ್ನ ಪರಿವಾರ ಉಳಿಸಿಕೊಳ್ಳುವುದೂ ಅವಳಿಗೆ ಮುಖ್ಯ. ನಮ್ಮ ಸಮಾಜದಲ್ಲಿ ಗೃಹಿಣಿ ಎಂದರೆ ಇಂದಿಗೂ, ಕೇವಲ ಮಕ್ಕಳನ್ನು ಹೆರುವ, ಅಡುಗೆ ಮನೆಗಷ್ಟೇ ಸೀಮಿತ ಎಂದು ಕೀಳಾಗಿ ನೋಡುವ ದೃಷ್ಟಿಕೋನ ಬದಲಾಗಿಲ್ಲ.
ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!
ಈ ಗಾದೆ ಮಾತು ಬಾಲಿವುಡ್ ನಿರ್ಮಾಪಕರಿಗೆ ಅಕ್ಷರಶಃ ಅನ್ವಯಿಸುತ್ತದೆ. ಈಗಿನದು ಎಂಥ ಸೂಕ್ಷ್ಮ ಕಾಲ ಎಂದರೆ, ಬಿಸಿ ಹಾಲಿರಲಿ, ಅದರ ಮಜ್ಜಿಗೆಯನ್ನೂ ಜನ ಉಫ್ ಎಂದು ಊದಿ ಕುಡಿಯುವಂಥದ್ದು. ಹಾಗಿರುವಾಗ ಈ ಮಂದಿ ಮಾತ್ರ ಕುದಿವ ಹಾಲನ್ನು ಹಾಗೇ ಹೀರುತ್ತಿದ್ದಾರೆ. ಅರ್ಥಾತ್….. ಮುಂದಿನ ತಿಂಗಳಲ್ಲಿ ಅಕ್ಷಯ್ ನ `ಸನಿಯ `ಗದ್ದರ್,’ ರಣಬೀರ್ ಕಪೂರ್ ನ `ಅನಿಮಲ್’ ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣಲಿವೆ. 3 ಚಿತ್ರಗಳೂ ಮಹಾನ್ ಸ್ಟಾರ್ ಕಾಸ್ಟ್ ಹಾಗೂ ಹೈ ಬಜೆಟ್ ಚಿತ್ರಗಳೇ ಆಗಿವೆ. ಹಾಗಿರುವಾಗ ಈ 3 ಚಿತ್ರಗಳೂ ಥಿಯೇಟರ್ ಹಾಗೂ ಸ್ಕ್ರೀನ್ಸ್ ವಿಷಯಗಳಲ್ಲಿ ಹಂಚಿ ಹೋಗುವುದಿಲ್ಲವೇ? ಕೆಲವು ಕಾಲದ ಗ್ಯಾಪ್ ಇಟ್ಟುಕೊಂಡು ಇವನ್ನು ರಿಲೀಸ್ ಮಾಡಬಾರದಿತ್ತೇ? ಒಂದು ಪಕ್ಷ…. (ಅಲ್ಲ ಹೇಳಿದ್ದು….) 3 ಚಿತ್ರಗಳೂ ಸಕ್ಸೆಸ್ ಆದವು ಅಂತಿಟ್ಟುಕೊಂಡರೆ…. ಜನ ಹುಚ್ಚರಂತೆ ಈ ಮೂವರನ್ನೂ ಕ್ರಮವಾಗಿ ಒಂದಾದ ಮೇಲೊಂದರಂತೆ ನೋಡುತ್ತಾರೇನು? ಆಗ ನಷ್ಟ ಆಗುವುದು ವೀಕ್ಷಕರಿಗಲ್ಲ, ನಿರ್ಮಾಪಕರಿಗೆ!
ಶಾಶಾಗೆ ಕೋಪ ಬಂದಿದ್ದೇಕೆ?
ಇತ್ತೀಚೆಗೆ ಶಾಹೀದ್ ಕಪೂರ್ (ಶಾಶಾ)ನ `ಬ್ಲಡಿ ಡ್ಯಾಡಿ’ ಚಿತ್ರ ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿ ಕ್ಲಿಕ್ ಆಯ್ತು. ಆದರೆ ಇಲ್ಲಿ ವಿಷಯ ಅದಲ್ಲ, ಅದೇನಾಯ್ತೋ ಏನೋ, ಈ ಚಿತ್ರದ ಪ್ರಮೋಶನ್ ನಲ್ಲಿದ್ದ ಶಾಶಾಗೆ ಇದ್ದಕ್ಕಿದ್ದಂತೆ ಕೆಟ್ಟ ಕೋಪ ಕೆರಳಿತ್ತು. ನ್ಯಾಪೋಟಿಸಂ ಕುರಿತಾಗಿ ಈತನನ್ನು ಪ್ರಶ್ನಿಸಿದಾಗ, ಕೋಪಗೊಂಡ ಶಾಹಿದ್, ಇಂದು ನಾನು ಏನಾಗಿದ್ದೀನೋ ಅದು ಕೇವಲ ನನ್ನ ಸ್ವಯಂ ಪ್ರತಿಭೆಯಿಂದ! ನನ್ನ ತಂದೆ ಪಂಕಜ್ ಕಪೂರ್ ನನ್ನನ್ನು ಲಾಂಚ್ ಮಾಡಲು ತಾವಾಗಿ ಚಿತ್ರ ತಯಾರಿಸಲೂ ಇಲ್ಲ, ನನಗಾಗಿ ಇತರ ನಿರ್ಮಾಪಕರನ್ನು ಓಲೈಸಲೂ ಇಲ್ಲ. ನಾನು ಹಿಂದೆ ಬ್ಯಾಕ್ ಗ್ರೌಂಡ್ ಆರ್ಟಿಸ್ಟ್ ಸಹ ಆಗಿದ್ದಿ ಎಂಬುದನ್ನು ಮರೆಯಬೇಡಿ, ಎಂದು ಗುಡುಗಿದ. ಮೀಡಿಯಾದವರಂತೂ ಬೇಕೆಂದೇ ಇಂಥ ದುಃಖಿತರನ್ನು ಪೀಡಿಸುತ್ತಾರೆ.
ಮರಳಿ ಬರಲು ಕೊನೆಯ ಪ್ರಯತ್ನ
ಹಿರಿಯ ನಟ ಧರ್ಮೇಂದ್ರರ ಡಿಯೋಲ್ ಪರಿವಾರದಲ್ಲಿ ಬಾಬಿ ಡಿಯೋಲ್ ನ ದೋಣಿ ಹೇಗೋ ದಡ ಸೇರಿತು, ಆದರೆ ಸನಿ ತ್ರಿಶಂಕುವಾಗೇ ಹೋರಾಡುತ್ತಿದ್ದಾನೆ. `ಗದ್ದರ್’ ಚಿತ್ರದಿಂದ ಈತ ಬಾಲಿವುಡ್ ಗೆ ಮರಳಿ ಬಂದು ಗೆಲ್ಲುತ್ತಾನೆ ಎಂಬ ಭಾರಿ ನಿರೀಕ್ಷೆ ಇದೆ. ಈ ಚಿತ್ರದ ಟೀಸರ್ ನೋಡಿದ ನಂತರ `1-2′ ಚಿತ್ರಗಳಲ್ಲಿರುವ ಅಂತರ ಎಂದರೆ, ಸನಿ ಕೈಗಳಲ್ಲಿ ಹ್ಯಾಂಡ್ ಪಂಪ್ ಬದಲು, ಹೋರಾಟಕ್ಕೆ ಲಾರಿ ಟೈರುಗಳಿವೆ ಎಂಬುದು! ಟ್ರೇಲರ್ ಬಂದ ನಂತರ ಮತ್ತಷ್ಟು ಅಂತರಗಳು ಗೋಚರಿಸಬಹುದೇನೋ…. ಅಂತೂ ಇಂತೂ 2ನೇ ಸಲ ರಿಲೀಸ್ ಆದ `ಗದ್ದರ್’ ನಿರ್ಮಾಪಕರಿಗೆ ನಿರಾಸೆ ತರಲಿಲ್ಲ.
ಬರಲಿದ್ದಾಳೆ ರವೀನಾಳ ಮಗಳು ರಾಶಾ
ಮಸ್ತ್ ಮಸ್ತ್ ಗರ್ಲ್ (ಈಗ ಮದರ್) ರವೀನಾಳ ಮಗಳು ರಾಶಾ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾಳೆ. ಕಳೆದ ಹಲವಾರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇವಳು ಮಿಂಚಿದ್ದೇ ಮಿಂಚಿದ್ದು. ಅದನ್ನು ನೋಡಿಯೇ ಈಕೆ ಬೇಗ ಬೆಳ್ಳಿತೆರೆಗೆ ಬರುತ್ತಾಳೆ ಅಂತ ಎಲ್ಲರೂ ಊಹಿಸಿದರು. ಅದೇ ನಿಜವಾಯ್ತು. 18ರ ಹರೆಯದ ರಾಶಾ, ಅಜಯ್ ದೇವಗನ್ ನ ಸೋದರಳಿಯ ಅಮನ್ ದೇವಗನ್ ಗೆ ನಾಯಕಿ ಆಗುತ್ತಿದ್ದಾಳೆ. ರವೀನಾಳ ಹುಚ್ಚು ಅಭಿಮಾನಿಗಳ ತಲೆಯಿಂದ ಇನ್ನೂ ಇಳಿದಿಲ್ಲ, ಈಗ ಆಕೆಯ ಮಗಳು ಏನು ಮೋಡಿ ಮಾಡಲಿದ್ದಾಳೋ ನೋಡಬೇಕು!
ಏನಿದು ದಿ ಆರ್ಚೀಸ್?
ಆರ್ಚೀಸ್ ಕಾಮಿಕ್ಸ್ ಒಂದು ಕಾಮಿಕ್ಸ್ ಪ್ರಕಾಶನದ ಪ್ರಕಟಣೆಯಾಗಿದ್ದು, ಅಮೆರಿಕಾದ ನ್ಯೂಯಾರ್ಕ್ ಇದರ ತವರು. 1939ರಿಂದ ಖ್ಯಾತಿ ಗಳಿಸಿದ ಈ ಸಂಸ್ಥೆಯ ಪ್ರಮುಖ ಕಾಮಿಕ್ಸ್ ಅಂದ್ರೆ ಆರ್ಚಿ. ಇದನ್ನೇ ಆಧಾರವಾಗಿಸಿಕೊಂಡು ಜೋಯಾ ಅಖ್ತರ್, ಸ್ಟಾರ್ನಟರ ಪುತ್ರ ಪುತ್ರಿಯರನ್ನು ಮೆರೆಸಲು, `ದಿ ಆರ್ಚೀಸ್’ ಚಿತ್ರ ತಯಾರಿಸುತ್ತಿದ್ದಾರೆ, ಇದು ನೆಟ್ ಫ್ಲಿಕ್ಸ್ ನಲ್ಲಿ ಮಿಂಚಲಿದೆ. ಇದು ಬಿಲ್ ಕುಲ್ ಡಿಫರೆಂಟ್ ಕಾನ್ ಸೆಪ್ಟ್ ಅಂತೆ. ಇದು ಎಲ್ಲರಿಗೂ ಇಷ್ಟ ಆಗುತ್ತದೋ ಇಲ್ಲವೋ ಈಗಲೇ ಹೇಳಲಾಗದು. ಏನೇ ಇರಲಿ…. ಖುಷೀ ಕಪೂರ್, ಸುಹಾನಾ ಖಾನ್ ಮುಂತಾದ ಸ್ಟಾರ್ ಕಿಡ್ಸ್ ಅಂತೂ ಇಂತೂ ಹೀಗೆ ಬೆಳಕು ಕಾಣುವಂತಾಗಿದೆ.
ಆದರ್ಶ ಅತ್ತೆ ಸೊಸೆಯರನ್ನು ನಿವಾಳಿಸಿದ ಆನಂದಿ
`ಬಾಲಿಕಾ ವಧು’ ಖ್ಯಾತಿಯ ಅವಿಕಾ ಗೌರವ್ ಇತ್ತೀಚೆಗೆ ಅತ್ತೆ ಸೊಸೆಯರ ಧಾರಾವಾಹಿಗಳ ನಿರ್ಮಾಪಕರನ್ನು ಖಂಡಿಸುತ್ತಾ, ತನ್ನ `ಸಸುರಾಲ್ ಸಿಮರ್ ಕಾ’ ಧಾರಾವಾಹಿಯನ್ನು ಕಟುವಾಗಿ ಟೀಕಿಸಿದಳು. ಇಂಥ ಧಾರಾವಾಹಿಗಳನ್ನು ಹೇಗಾದರೂ ಉದ್ದಕ್ಕೆ ಎಳೆಯಲೇಬೇಕೆಂಬ ಹುನ್ನಾರದಲ್ಲಿ, ನಿರ್ಮಾಪಕರು ಇದನ್ನು ಅರ್ಥಹೀನ ಗೊಳಿಸುವುದಕ್ಕೂ ಹಿಂಜರಿಯುವುದಿಲ್ಲ ಅಂದಳು. ತನ್ನ ಪಾತ್ರವನ್ನು ಇದರಲ್ಲಿ 3 ಸಲ ಸಾಯಿಸಿ ಮತ್ತೆ ಬದುಕಿಸಲಾಯಿತು, ಅಂತಾಳೆ. 1-2 ಅಲ್ಲ, 7 ಸಲ ಮದುವೆ ಮಾಡಿಸಲಾಯಿತಂತೆ! ನಿಜ ಜೀವನದಲ್ಲಿ ಅತ್ತೆ ಸೊಸೆಯರ ಸಂಬಂಧ ಸಿಹಿಕಹಿ ತುಂಬಿಕೊಂಡಿರುವುದು ನಿಜವಾದರೂ, ಇಂಥ ಅತಿಯಾದ ಉತ್ಪ್ರೇಕ್ಷೆ ಹಿಂದೆ ಕಂಡಿಲ್ಲ, ಕೇಳಿಲ್ಲ ಎಂದು ಗುಡುಗಿದಳು. ಹೀಗಾಗಿಯೇ ಟಿವಿ ಧಾರಾವಾಹಿಗಳನ್ನು ಎಲ್ಲರೂ ಹಗುರವಾಗಿ ನೋಡುವಂತಾಗಿದೆ.
OTTಯಲ್ಲಿ ಡೆಬ್ಯೂ ಆಗಲಿದ್ದಾನಾ ಮನೀಶ್?
ಪ್ರಖ್ಯಾತ ಹೋಸ್ಟ್ ಕಾಮೆಡಿಯನ್ ಮನೀಶ್ ಪಾಲ್ ಇಷ್ಟರಲ್ಲೇ OTTಯಲ್ಲಿ ಡೆಬ್ಯೂ ಆಗಲಿದ್ದಾನೆ. ಈತನ ಥ್ರಿಲ್ಲರ್ ಶೋ `ರಪಚಕ್ಕರ್’ ಟ್ರೇಲರ್ ಕೂಡ ಬಂದಿದೆ. ಈ ಚಿತ್ರದಲ್ಲಿ ಮನೀಶ್ ಕಾನ್ ಮ್ಯಾನ್ ಅಂದ್ರೆ ಕಳ್ಳನ ಪಾತ್ರ ವಹಿಸುತ್ತಿದ್ದಾನೆ. ಅಂದಹಾಗೆ ಮನೀಶ್ ಬಹಳ ಕಾಲದ ನಂತರ ಕ್ಯಾಮೆರಾ ಎದುರಿಸುತ್ತಿದ್ದಾನೆ ಎಂದೇ ಹೇಳಬೇಕು. ಆದರೆ ಟ್ರೇಲರ್ ಗಮನಿಸಿದಾಗ ಹಾಗೇನೂ ಅನಿಸುವುದಿಲ್ಲ. ಟ್ರೇಲರ್ ನಲ್ಲೇ ಮನೀಶ್ ತನ್ನ ಪ್ರತಿಭೆ ಹೊರಹಾಕಿದ್ದಾನೆ.
ಮಲೈಕಾ ಪ್ರೆಗ್ನೆಂಟ್ ಅಲ್ಲ!
ಈ ಸೋಶಿಯಲ್ ಮೀಡಿಯಾದವರು ಹೇಗೆಲ್ಲ ಕಿಡಿ ಹೊತ್ತಿಸುತ್ತಾರೆ ಅಂದ್ರೆ, ಅದನ್ನು ನಂದಿಸಲು ಸ್ಟಾರ್ ಗಳು ಎಷ್ಟೋ ಬೆವರು ಸುರಿಸಬೇಕಾಗುತ್ತದೆ. `ಮಲೈಕಾ ಪ್ರೆಗ್ನೆಂಟ್ ಅಂತೆ’ ಎಂಬ ಸುದ್ದಿ ವೈರಲ್ ಆದಾಗಿನಿಂದ, ಸಹಜವಾಗಿಯೇ ಅವಳ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಟೆನ್ಶನ್ ಗೆ ಒಳಗಾದ. ಇತ್ತೀಚೆಗೆ ಬಿಡುವಾಗಿ ದೆಹಲಿಗೆ ಬಂದಿದ್ದ ಈತನನ್ನು ಈ ಬಗ್ಗೆ ಕೇಳಿದಾಗ, ಕಿಡಿಕಿಡಿಯಾದ ಅವನು, ಎಲ್ಲಿಂದ ತರ್ತೀರಿ ಕಣ್ರೀ ಇಂಥ ಸುದ್ದಿ? ಖಂಡಿತಾ ಮಲೈಕಾ ಪ್ರೆಗ್ನೆಂಟ್ ಅಲ್ಲ ಎಂದು ನಾನು ಕನ್ ಫರ್ಮ್ ಮಾಡ್ತಿದ್ದೀನಿ ಎಂದ. ಅದು ನಿಜವೇ ಆದ ಪಕ್ಷದಲ್ಲಿ ಈ ಇಬ್ಬರ ಜೋಡಿ ಯಾವ ದಿಕ್ಕಿನತ್ತ ಸಾಗುತ್ತಿದೆ? ಈ ಮಹಾನ್ ಜೋಡಿ ಮುಂದೆ ಮದುವೆ ಆದೀತಾ…..?