ಜಿಕೆವಿಕೆ ಆವರಣದಲ್ಲಿ ಗುಂಡು ತೋಪಿನಲ್ಲಿ ಶನಿವಾರ ನಡೆದ ರೈತ ಸಂತೆಯನ್ನು ವಿಭಿನ್ನವಾಗಿ ಆಯೋಜಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ರೈತ ಸಂತೆಯಲ್ಲಿ ನೇರಳೆ ಜ್ಯೂಸ್ ಶಾಟ್ಸ್‌, ಸ್ವೀಟ್‌ ಕಾರ್ನ್‌ ಸುಲಿಯುವ ಯಂತ್ರ, ಆಯುರ್ವೇದಿಕ್‌ ಹೇರ್‌ ಡೈ, ಬೆಟ್ಟದ ನೆಲ್ಲಿಕಾಯಿ, ಮಾವು, ಹಲಸು, ಮುಳ್ಳು ಬದನೆಕಾಯಿ, ನಾಟಿ ಸೌತೆಕಾಯಿ ಹಾಗೂ ಇತರೆ ಉತ್ಪನ್ನಗಳು ಗ್ರಾಹಕರ ಮನಸ್ಸನ್ನು ಆಕರ್ಷಿಸಿದವು.ನೇರಳೆ ಹಣ್ಣುಗಳಿಂದ ತಯಾರಿಸಲಾದ ಆರೋಗ್ಯ ಪೂರ್ಣ ಪಾನೀಯವು ನೈಸರ್ಗಿಕ ರುಚಿ ಮತ್ತು ತಾಜಾತನದಿಂದ ಜನರ ಬಾಯಲ್ಲಿ ನೀರೂರಿಸಿತು. ಇದು ಬೇಸಿಗಗ ಉತ್ತಮ ಪಾನೀಯವಾಗಿದೆ.

ಸ್ವೀಟ್ ಕಾರ್ನ್‌ ಸುಲಿಯುವ ಯಂತ್ರವು ಎಲ್ಲರ ಗಮನ ಸೆಳೆಯಿತು. ಸಾರ್ವಜನಿಕರು ಇದರ ಕಾರ್ಯ ವೈಖರಿಯನ್ನು ಆಸಕ್ತಿಯಿಂದ ವೀಕ್ಷಿಸಿದರು.ರಾಸಾಯನಿಕ ಮುಕ್ತ ಹೇರ್‌ ಡೈ, ಸಿರಿಧಾನ್ಯಗಳ ಮಿಲೆಟ್ಸ್‌ ಮಿಶ್ರಣ, ಬೆಟ್ಟದ ನೆಲ್ಲಿಕಾಯಿ, ಮಾವು, ಹಲಸು, ಮುಳ್ಳು ಬದನೆಕಾಯಿ, ನಾಟಿ ಸೌತೆಕಾಯಿ, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ, ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು. ಅಲಂಕಾರಿಕ ಮೀನುಗಳು, ಎತ್ತಿನ ಬಂಡಿ ಸವಾರಿಯೂ ಗಮನ ಸೆಳೆಯಿತು.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿದ್ದ “ಕೃಷಿ ಪರಿಸರದೆಡೆಗೆ – ನಮ್ಮ ನಡಿಗೆ” ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಸಹ ನಗರ ವಾಸಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ 6 ಕಿ.ಮೀ. ನಡಿಗೆಯಲ್ಲಿ ಪಾಲ್ಗೊಂಡು ಕೃಷಿ ಸಂಬಂಧಿತ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ