– ರಾಘವೇಂದ್ರ ಅಡಿಗ ಎಚ್ಚೆನ್.
ಲವ್ ಕೇಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜೈಶ್ ನಿರ್ದೇಶನದ ಈ ಚಿತ್ರವನ್ನ ಎಂ.ಬಿ ಕ್ರಿಯೇಷನ್ಸ್ ಮೋಹನ್ ಬಾಬು ನಿರ್ಮಾಣ ಮಾಡ್ತಿದ್ದಾರೆ. ಸೆಟ್ಟೇರಿದಾಗ್ಲೇ ದೊಡ್ಡದಾಗಿ ಸದ್ದು ಸುದ್ದಿಯಾಗಿದ್ದ ಈ ಚಿತ್ರದ ಕೊನೆಯ ದಿನದ ಚಿತ್ರೀಕರಣ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಕ್ತಾಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಹೊಡೆದು ಚಿತ್ರೀಕರಣಕ್ಕೆ ಶುಭಂ ಹಾಡಿದೆ.

ಶ್ರೀನಗರ ಕಿಟ್ಟಿ, ಪ್ರಮೋದ್ ಶೆಟ್ಟಿ, ಸುಧಾರಾಣಿ ನಾಗಭೋಷಣ್ ,ಮಹಾನಟಿ ಖ್ಯಾತಿಯ ವಂಶಿ, ಸ.ಹಿ.ಪ್ರಾ. ಶಾಲೆ ಕಾಸರಗೂಡು ಹಾಗೂ ಕಾಂತಾರ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿ ಹರಿಕೃಷ್ಣ ಸಂಗೀತ , ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ , ಅನುಕೃಷ್ಣ ಸಂಕಲನವಿರೋ ಈ ಚಿತ್ರದ ಹಲವು ವಿಶೇಷ ವಿಚಾರಗಳಿಂದ ಕೂಡಿದ್ದು, ಚಿತ್ರತಂಡ ಅತೀ ಶೀಘ್ರದಲ್ಲೇ ತೆರೆಗೆ ತರೋ ಸನ್ನಾಹದಲ್ಲಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದ್ದು, ಸದ್ಯದಲ್ಲೇ ಟೀಸರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡೋ ಆಲೋಚನೆಯಲ್ಲಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





