ತಾಯಿ ತಂದೆಯರ ದಾರಿಯಲ್ಲೇ ಮಕ್ಕಳು ನಡೆಯಬೇಕೆನ್ನುವುದು ಹಿರಿಯರ ಆಸೆಯಾಗಿರುತ್ತದೆ. ಆದರೆ ಎಲ್ಲಾ ಮಕ್ಕಳೂ ಹಾಗೆ ಇರದೆ ತಮ್ಮದೇ ವಿಭಿನ್ನ ಮಾರ್ಗಗಳನ್ನು ಆಯ್ದುಕೊಂಡು ಮುನ್ನಡೆಯುತ್ತಾರೆ. ಇನ್ನು ಕೆಲವರು ಮಾತ್ರ ತಾಯಿ ತಂದೆಯರ ಮಾರ್ಗದರ್ಶನದಲ್ಲಿ ಅವರ ದಾರಿಯಲ್ಲಿಯೇ ಸಾಗಿ ಯಶಸ್ಸು ಕಾಣುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಪುತ್ರಿ ಅನನ್ಯಾ ಕಾಸರವಳ್ಳಿ ಸಹ ಒಬ್ಬರು. ಕನ್ನಡ  ಚಿತ್ರ ಜಗತ್ತಿನಲ್ಲಿ  ಕೇಳಿಬರುತ್ತಿರುವ ಕೆಲವೇ ಕೆಲವು ಸಮರ್ಥ ಮಹಿಳಾ ನಿರ್ದೇಶಕಿಯರಲ್ಲಿ ಇವರೂ ಒಬ್ಬರಾಗಿದ್ದಾರೆ.

ಈ ಹಿಂದೆ `ದೇಸಿ,' `ನಾಯಿನೆರಳು' ಮುಂತಾದ ಚಿತ್ರಗಳು ಹಾಗೂ`ಗುಪ್ತ ಗಾಮಿನಿ,' `ಮುತ್ತಿನ ತೋರಣ' ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನನ್ಯಾ ಇದುವರೆಗೂ ನಾಲ್ಕೈದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಅವರು ನಿರ್ದೇಶಿಸಿದ್ದ `ಕಪ್ಪು ಕಲ್ಲಿನ ಸೈತಾನ' ಎಂಬ ಕಿರುಚಿತ್ರಕ್ಕೆ ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರಶಸ್ತಿ ಸಹ ಬಂದಿತ್ತು. ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ತಮ್ಮ ತಂದೆ ಗಿರೀಶ್‌ ಕಾಸರವಳ್ಳಿ ಅವರ ಚಿತ್ರಕ್ಕೂ ಸಹಾಯಕರಾಗಿ ದುಡಿದಿದ್ದರು.

ತಾಯಿ, ತಂದೆ, ಅಣ್ಣ ಹೀಗೆ ಮನೆಯವರೆಲ್ಲರೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕುಟುಂಬದಿಂದ ಬಂದ ಅನನ್ಯಾ ಇದೀಗ ತಾವು ಕೂಡ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಖ್ಯಾತ ನಿರ್ಮಾಪಕ ಬಸಂತ್‌ ಕುಮಾರ್‌ ಪಾಟೀಲರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಗೋಪಾಲಕೃಷ್ಣ ಪೈಗಳ ಕಥೆಯಾಧಾರಿತ ಚಿತ್ರ `ಹರಿಕಥಾ ಪ್ರಸಂಗ' ತೆರೆಗೆ ಬರಲು ಸಿದ್ಧವಾಗಿದೆ.

ಇಂತಹ ಪ್ರತಿಭಾನ್ವಿತ ಯುವ ನಿರ್ದೇಶಕಿಯನ್ನು `ಗೃಹಶೋಭಾ'  ಮಾತಿಗೆ ಅಹ್ವಾನಿಸಿದಾಗ ಅವರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಶನದ ಪ್ರಮುಖ ಸಾರಾಂಶ ಮುಂದಿನಂತಿದೆ :

ನಿಮ್ಮ ಬಾಲ್ಯದ ಕುರಿತು ತಿಳಿಸಿ.

ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿತ್ತು. ನಾವು ಮೊದಲು ಬೆಂಗಳೂರಿನ ರಾಜಾಜಿನಗರದಲ್ಲಿದೆ. ಎಲ್ಲಾ ಮಕ್ಕಳಂತೆಯೇ ನನ್ನ ಬಾಲ್ಯ ಆಟ, ನೋಟಗಳಿಂದ ಕೂಡಿ ಸುಂದರವಾಗಿತ್ತು. ನಾನು ಓದಿದ್ದು ಕಾರ್ಮೆಲ್ ‌ಕಾನ್ವೆಂಟ್‌ನಲ್ಲಿ. ನನ್ನ ಶಾಲಾ ದಿನಗಳಲ್ಲಿಯೇ ನಾನು ನೃತ್ಯಾಭ್ಯಾಸದಲ್ಲಿ ತೊಡಗಿದ್ದೆ. ಶಾಲಾ ವಿದ್ಯಾಭ್ಯಾಸದ ನಂತರ ಕ್ರೈಸ್ಟ್ ಕಾಲೇಜಿಗೆ ಸೇರಿದೆ. ಇದಾದ ನಂತರ ಚೆನ್ನೈನ ಎಲ್.ವಿ. ಪ್ರಸಾದ್‌ರ ಇನ್‌ಸ್ಟಿಟ್ಯೂಟ್‌ ಸೇರಿ ಸಿನಿಮಾ ಲೋಕದ ನಾನಾ ಪ್ರಕಾರಗಳ ಕುರಿತು ತರಬೇತಿ ಹೊಂದಿದೆ. ನಾನು ಕಾಲೇಜಿನಲ್ಲಿರುವಾಗಲೇ ಧಾರಾವಾಹಿ ಮತ್ತು ನಾಟಕಗಳಲ್ಲಿ ಅಭಿನಯಿಸತೊಡಗಿದ್ದೆ.

ನಿಮ್ಮ ತಂದೆ ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕ, ತಾಯಿ ಹೆಸರಾಂತ ಕಲಾವಿದೆಯಾಗಿದ್ದರು. ನಿಮ್ಮ ಬೆಳವಣಿಗೆಯಲ್ಲಿ ಅವರ ಸಹಾಯ, ಮಾರ್ಗದರ್ಶನ ಹೇಗಿತ್ತು?

ನನಗೆ ನನ್ನ ತಂದೆಯಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಇಂದು ನಾನು ಸ್ವತಂತ್ರವಾಗಿ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆಂದರೆ ಅದರ ಹಿಂದೆ ನನ್ನ ತಂದೆಯ ಪ್ರೋತ್ಸಾಹ, ಮಾರ್ಗದರ್ಶನ ಸಾಕಷ್ಟು ಇದೆ. ನನ್ನ ತಾಯಿ ಇದ್ದಾಗ ಅವರೂ ಸಹ ನನ್ನ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಅವರು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿಯೂ ನಾನು ಅಭಿನಯಿಸುತ್ತಿದ್ದ ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದರು. ನಾನು ಎಲ್ಲಿ ಚೆನ್ನಾಗಿ ಅಭಿನಯಿಸಿದ್ದೇನೆ, ಎಲ್ಲಿ ಇನ್ನೂ ಚೆನ್ನಾಗಿ ಅಭಿನಯಿಸಲು ಅವಕಾಶಗಳಿದ್ದವು ಎನ್ನುವುದನ್ನು ಸ್ಪಷ್ಟ ತಿಳಿಸಿ ಹೇಳುತ್ತಿದ್ದರು. ನಾನೂ ಸಹ ಚಲನಚಿತ್ರ ನಿರ್ದೇಶಕಿ ಆಗಬೇಕೆನ್ನುವುದು ಅಮ್ಮನ ಕನಸಾಗಿತ್ತು. ಆ ನಿಟ್ಟಿನಲ್ಲಿ ಅವರು ನನಗೆ ಸಾಕಷ್ಟು ವಿಚಾರ ತಿಳಿಸುತ್ತಿದ್ದರು. ಅವರು ಅಭಿನಯಿಸುತ್ತಿದ್ದ ಚಿತ್ರಗಳು, ನಿರ್ದೇಶಿಸಿದ್ದ ಧಾರಾವಾಹಿಗಳ ಸೆಟ್‌ಗಳಿಗೆ ನಾನೂ ಭೇಟಿ ನೀಡುತ್ತಿದ್ದೆ. ಅವರ ಪ್ರಮುಖ ಜನಪ್ರಿಯ ಧಾರಾವಾಹಿ `ಮೂಡಲ ಮನೆ' ಚಿತ್ರೀಕರಣದ ವೇಳೆ ನಾನೂ ಅಲ್ಲಿದ್ದೆ. ಅವರಿಂದ ಬೇಕಾದಷ್ಟು ಕಲಿತಿದ್ದೇನೆ. ಒಮ್ಮೆ ನನ್ನ ತಾಯಿ `ನೂರೊಂದು ಬಾಗಿಲು' ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾಗ, ನಾನು ಅಲ್ಲಿಗೆ ಹೋಗಿದ್ದೆ. ಆಗ ಅಮ್ಮ ನನ್ನನ್ನು ಕರೆದು ಒಂದು ಶಾಟ್‌ ನೀನೇ ನಿರ್ದೇಶನ ಮಾಡುವ ಎಂದು ಹೇಳುವುದರೊಡನೆ ನನಗೆ ಸ್ವತಂತ್ರವಾಗಿ ನಿರ್ದೇಶನದ ಕೆಲಸ ಮಾಡಲು ಅವಕಾಶ ನೀಡಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ