- ರಾಘವೇಂದ್ರ ಅಡಿಗ ಎಚ್ಚೆನ್.

2022, ಜೂನ್​ 10. ಸಿನಿಪ್ರಿಯರಿಗೆ 'ಚಾರ್ಲಿ' ಪರಿಚಯವಾದ ದಿನ. ತಮ್ಮ ಅಮೋಘ ಅಭಿನಯದ ಮೂಲಕ ರಕ್ಷಿತ್​ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರ ಎದೆಯಾಳ ತಲುಪಿದ ದಿನ. ಕಿರಣ್​ ರಾಜ್​ ಅವರಂತಹ ಅದ್ಭುತ ನಿರ್ದೇಶಕ ಚಂದನವನಕ್ಕೆ ತಮ್ಮ ಪ್ರತಿಭೆ ಪ್ರದರ್ಶಿಸಿದ ದಿನ. ಒಂದೊಳ್ಳೆ ಸಿನಿಮಾ ಇಂದು ಮೂರನೇ ವರ್ಷದ ಸಂಭ್ರಮದಲ್ಲಿದೆ.2022ರ ಇದೇ ದಿನದಂದು ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ರಿಲೀಸ್​​ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರ 'ಚಾರ್ಲಿ 777' ಇಂದು ಮೂರು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆ, ನಾಯಕ ನಟ ರಕ್ಷಿತ್​ ಶೆಟ್ಟಿ ವಿಶೇಷ ಪೋಸ್ಟ್​​ ಶೇರ್​ ಮಾಡಿದ್ದಾರೆ.

24347648_thumbna

ರಕ್ಷಿತ್​ ಶೆಟ್ಟಿ ಪೋಸ್ಟ್​: ''777 ಚಾರ್ಲಿ ಕೇವಲ ಒಂದು ಸಿನಿಮಾವಲ್ಲ, ಅದಕ್ಕೂ ಹೆಚ್ಚಿನದು. ಅದೊಂದು ಬಾಂಧವ್ಯ, ಒಂದು ಅನುಭವ. ಇಂದಿಗೆ 3 ವರ್ಷಗಳಾಗಿದ್ದು, ನನ್ನ ಹೃದಯವು ಈ ಚಿತ್ರ ನಮ್ಮ ಜೀವನದಲ್ಲಿ ತಂದ ಪ್ರತೀ ಕ್ಷಣ ಮತ್ತು ಪ್ರತೀ ಪ್ರೀತಿಯ ನೆನಪುಗಳಿಗೆ ಮರಳುತ್ತದೆ! ಕೃತಜ್ಞ'' ಎಂದು ಬರೆದುಕೊಂಡಿದ್ದಾರೆ.

777 ಚಾರ್ಲಿ ಮನುಷ್ಯ ಹಾಗೂ ಶ್ವಾನದ ನಡುವಿನ ಸುಂದರ ಬಾಂಧವ್ಯವನ್ನು ಚಿತ್ರಿಸಿದೆ. ಭಾವನಾತ್ಮಕ ಕಥೆಯನ್ನು ಕಿರಣ್​ ರಾಜ್​ ಅದ್ಭುತವಾಗಿ ಕಟ್ಟಿಕೊಟ್ಟಿದ್ದರೆ, ನಾಯಕ ನಟ ರಕ್ಷಿತ್​​ ಶೆಟ್ಟಿ ಕಥೆಗೆ ಜೀವ ತುಂಬಿದ್ದಾರೆ. ಪರಿಪೂರ್ಣತೆಯೊಂದಿಗೆ ಒಂದೊಳ್ಳೆ ಕಥಾಹಂದರವನ್ನು ತೆರೆಮೇಲೆ ಪ್ರಸ್ತುತಪಡಿಸುವಲ್ಲಿ ರಕ್ಷಿತ್​ ಶೆಟ್ಟಿ ತಂಡ​ ಯಶಸ್ವಿಯಾಗಿತ್ತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿದ ಈ ಚಿತ್ರ ಬಾಕ್ಸ್​​ ಆಫೀಸ್​​​ನಲ್ಲೂ ಯಶ ಕಂಡಿದೆ. ಅತಿ ಕಡಿಮೆ ಬಜೆಟ್​ನಲ್ಲಿ ಚಿತ್ರೀಕರಣಗೊಂಡ ಈ ಚಿತ್ರ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಸದ್ದು ಮಾಡಿತ್ತು. ಅಲ್ಲದೇ ಸಾಲು ಸಾಲು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.  ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ 69ನೇ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. 2023ರ ಅಕ್ಟೋಬರ್ 17ರಂದು ನಟ ರಕ್ಷಿತ್​ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್​ ರಾಜ್​ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ