ಸರಸ್ವತಿ*

ಇನ್ನೇನು ಬಿಡುಗಡೆ ಹಂತದಲ್ಲಿರುವ ಸುಧೀರ್ ಅತ್ತಾವರ್ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮ "ಕೊರಗಜ್ಜ"‌ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ 'ಪ್ಯಾನ್ ಇಂಡಿಯಾ'ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ಹಾಗೂ ಶ್ರೀ ಕೊರಗಜ್ಜ ದೈವದ ಅದ್ದೂರಿ ಕೋಲ ಸೇವೆ ನವೆಂಬರ್ 11ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ದೆಹಲಿ,‌ಮುಂಬಾಯಿ, ಹೈದರಾಬಾದ್, ಕೊಚ್ಚಿ ಬೆಂಗಳೂರು, ಮಂಗಳೂರು ಹೀಗೆ ದೇಶದ ನಾನಾ ಭಾಗದ ಪ್ರತಿಷ್ಟಿತ ಮಾಧ್ಯಮ ಮಿತ್ರರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿ ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ನಡೆಸಲಿದೆ.

*ಸುಧೀಂದ್ರ ವೆಂಕಟೇಶ್ ಚಿತ್ರದ ಅಧಿಕ್ರತ ಪಿ ಆರ್ ಒ*

------------------------------------

ನಮ್ಮ ಚಿತ್ರದ ಆರಂಭದಿಂದಲೂ ಸುಧೀಂದ್ರ ವೆಂಕಟೇಶ್ ಅವರೆ ಪಿ.ಆರ್.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆ ಚಿತ್ರದ ಕುರಿತು ಎಲ್ಲಾ ಮಾಹಿತಿಗಳನ್ನು ಪತ್ರಿಕಾ, ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ಕಳುಹಿಸುತ್ತಾರೆ.‌ ನಮ್ಮ ಚಿತ್ರಕ್ಕೆ ಬೇರೆ ಪಿ.ಆರ್.ಓ ಇರುವುದಿಲ್ಲ .

ಆದರೆ ಕಿಡಿಗೇಡಿಗಳು, ತಾವು ಪಿ ಆರ್ ಒ ಎಂದು ಹೇಳಿಕೊಳ್ಳುತ್ತಾ ತಪ್ಪು ಮಾಹಿತಿಗಳನ್ನು ಮಾಧ್ಯಮದವರಿಗೆ ಹಂಚುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪಿ ಆರ್ ಒ ವೆಂಕಟೇಶ್ ಅಲ್ಲದೆ ಬೇರೆ ಯಾರ ಮಾಹಿತಿಗಳನ್ನು ಮಾಧ್ಯಮದವರು ಪರಿಗಣಿಸಬಾರದು ಎಂದು "ಕೊರಗಜ್ಜ" ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ