ಶರತ್ ಚಂದ್ರ

ನಿನ್ನೆ ಕೊನೆಗೂ ಹಲವು ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ನಮ್ಮ RCB ಫೈನಲ್ ನಲ್ಲಿ ಕಪ್ ಗೆದ್ದಿದೆ.

ಕನ್ನಡ ಚಿತ್ರರಂಗ ಕ್ಕೂ ಕ್ರಿಕೆಟ್ ಗೂ ಅವಿನಾಭಾವ ಸಂಬಂಧ. ವಿಷ್ಣುವರ್ಧನ್ ಹುಟ್ಟುಹಾಕಿದ ಸ್ನೇಹ ಲೋಕ ದಿಂದ ಆರಂಭ ವಾದ ಈ ಸಂಪ್ರದಾಯ ಸುದೀಪ್ ನಾಯಕತ್ವದ CCL ತನಕ ಮುಂದುವರಿದಿದೆ. RCB ಯ ಕೋಟ್ಯಂತರ ಅಭಿಮಾನಿಗಳಲ್ಲಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಹಾಗೂ ತಂತ್ರಜ್ಞರು ಸೋಶಿಯಲ್ ಮೀಡಿಯಾದಲ್ಲಿ ಕಪ್ ಗೆದ್ದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

1000552743

ಕಿಚ್ಚ ಸುದೀಪ್ ಗೆ ಕ್ರಿಕೆಟ್ ಬಗ್ಗೆ ಇರುವ ಒಲವು ಎಲ್ಲರಿಗೆ ಗೊತ್ತು. ಬಹುದಿನಗಳ ಕಾಯುವಿಕೆ ಕೊನೆಯಾಗಿದೆ,RCB ಫ್ಯಾನ್ ಗಳಿಗೆ ಮರೆಯಲಾಗದ ಕ್ಷಣ ಎಂದುತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸ್ಪೋರ್ಟ್ಸ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ ನಿನ್ನೆ ಯ ಪಂದ್ಯ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್, ಯುವರಾಜ್ ಕುಮಾರ್ ಸೇರಿದಂತೆ ಹಲವು ನಾಯಕ ನಟರು, ತಮ್ಮ X ಖಾತೆಯಲ್ಲಿ ಗೆಲುವಿನ ಖುಷಿ ಯನ್ನು ಹಂಚಿಕೊಂಡಿದ್ದಾರೆ.

1000552715

ಹಲವು ವರ್ಷ ಗಳಿಂದ RCB ಬ್ರಾಂಡ್ ಅಂಬಾ ಸಿಡರ್ ಆಗಿದ್ದ ನಟಿ ರಮ್ಯಾ ಕೂಡ ಕಪ್ ಗೆದ್ದ ಬಗ್ಗೆ ಹರ್ಷ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ

1000552689

ಕನ್ನಡ ಜನತೆ ಈ ಸಂದರ್ಭದಲ್ಲಿ ಅಪ್ಪುನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪುನೀತ್  ಬದುಕಿದ್ದಾಗ RCB ಬ್ರಾಂಡ್ ಅಂಬಾ ಸಿಡರ್ ಆಗಿದ್ದಾಗ ಸ್ಟೇಡಿಯಂ ನಲ್ಲಿ RCB ಗೆ ಚೀರ್ ಮಾಡುತ್ತಿದ್ದ ಫೋಟೋಗಳನ್ನು ಅಭಿಮಾನಿ ಗಳು ಪೋಸ್ಟ್ ಮಾಡಿ ಪುನೀತ್ ಅವರನ್ನು ಸ್ಮರಿಸಿ ಕೊಂಡಿದ್ದಾರೆ.

1000552972

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ RCB ಕಪ್ ಗೆದ್ದ ಸಂಭ್ರಮ ಮುಗಿಲು ಮುಟ್ಟಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ